1] ಕಾರಟಗಿ
ಪೊಲೀಸ್ ಠಾಣೆ ಗುನ್ನೆ ನಂ. 159/2017 ಕಲಂ.
87 Karnataka Police Act.
ದಿನಾಂಕ 16-07-2017 ರಂದು ಮದ್ಯಾಹ್ನ 4-00 ಗಂಟೆಯ ಸುಮಾರಿಗೆ ಕೊಟ್ನೇಕಲ್
ಗ್ರಾಮದ ಚಂದ್ರೇಗೌಡ ಹಿರೇಬಸನಗೌಡ ರವರ ಮನೆಯ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಇಸ್ಪೇಟ್
ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ ಪಿ.ಎಸ್.ಐ. ಹಾಗೂ ಸಿಬ್ಬಂದಿಯವರು ಹಾಗೂ ಪಂಚರ
ಪಂಚರ ಸಮಕ್ಷದಲ್ಲಿ ದಾಳಿ ಮಾಡಿದಾಗ 11 ಜನ ಆರೋಪಿಗಳು ಸಿಕ್ಕಿಬಿದ್ದಿದ್ದು ಸದರ್
ಸಿಕ್ಕಿಬಿದ್ದಿರುವ ಆರೋಪಿತರ ವಶದಿಂದ ರೂ. 3740/- ಹಾಗೂ ಇಸ್ಪೇಟ್ ಜೂಜಾಟದ
ಸಾಮಾಗ್ರಿಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 166/2017 ಕಲಂ. 498(ಎ),
323, 504, 506 ಐ.ಪಿ.ಸಿ:
ದಿ:16-07-2017 ರಂದು ಮದ್ಯಾಹ್ನ 2-15 ಗಂಟೆಗೆ
ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ, ಫಿರ್ಯಾದಿದಾರರಿಗೆ ಕಳೆದ 14 ವರ್ಷಗಳಿಂದೆ
ಜುಮ್ಲಾಪೂರ ಗ್ರಾಮದ ಲಕ್ಷ್ಮಣ ಎಂಬುವವರೊಂದಿಗೆ ಮದುವೆಯಾಗಿದ್ದು, ಅವರಿಗೆ 03 ಜನ ಮಕ್ಕಳಿದ್ದಾರೆ,
ಮದುವೆಯಾದ 02 ವರ್ಷಗಳ ನಂತರ ತನ್ನ ಗಂಡನು ಹಿರೇಸೂಳಿಕೆರಿ ಗ್ರಾಮಕ್ಕೆ ಕರೆತಂದು ಕುಟುಂಬದೊಂದಿಗೆ
ವಾಸವಾಗಿದ್ದು, ನಂತರ ಕಳೆದ 02 ವರ್ಷಗಳಿಂದ ತನ್ನ ಗಂಡನು ತನಗೆ ಸರಿಯಾಗಿ ನೋಡಿಕೊಳ್ಳದೇ ಮತ್ತು ಕೆಲಸಕ್ಕೆ
ಸಹ ಸರಿಯಾಗಿ ಹೋಗದೇ ತನ್ನ ನಡತೆಯ ಮೇಲೆ ಸಂಶಯ ಮಾಡುತ್ತಾ ದೈಹಿಕ ಮಾನಸಿಕ ಕಿರುಕುಳ ನೀಡಿದ್ದು, ಅಲ್ಲದೇ
ದಿ:08-07-2017 ರಂದು ಬೆಳಿಗ್ಗೆ 10-00 ಗಂಟೆಗೆ ತನ್ನ ಗಂಡನು ಮನೆಯಲ್ಲಿ ಜಗಳ ತೆಗೆದು ಕೈಗಳಿಂದ
ಹೊಡೆದು ಜೀವದ ಬೆದರಿಕೆ ಹಾಕಿರುತ್ತಾನೆ. ಕಾರಣ ತನ್ನ ಗಂಡ ಲಕ್ಷ್ಮಣ ಆನೆಗುಂದಿ ಇತನ ಮೇಲೆ ಸೂಕ್ತ
ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ತಡವಾಗಿ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 102/2017 ಕಲಂ. 143, 147,
323, 504, 506, 341, ಸಹಿತ 149 ಐ.ಪಿ.ಸಿ:
ದಿನಾಂಕ:
16-07-2017 ರಂದು ಬೆಳಿಗ್ಗೆ 6-45 ಗಂಟೆಗೆ ಫಿರ್ಯಾದಿದಾರರಾದ ಸೈಯದ್ ನಾಸೀರ ತಂದೆ ಎಸ್.ಎಮ್. ಜೀಲಾನಿ
ಸಾ: ಕೊಪ್ಪಳರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪೀರ್ಯಾದಿದಾರರು ನಿನ್ನೆ
ದಿನಾಂಕ: 15-07-2017 ರಂದು ಮದ್ಯಾಹ್ನ 4-00 ಗಂಟೆಯ ಸುಮಾರಿಗೆ ತಾನು ತಮ್ಮ ಮನೆಯ ಮುಂದೆ ತನ್ನ ಸ್ನೇಹಿತನಾದ
ಆರೀಫ್ ನೊಂದಿಗೆ ಮತ್ತು ನಗರ ಸಭೆಯ ಆರ್.ಓ ಮತ್ತು ಆರ್.ಐ ರವರೊಂದಿಗೆ ಮಾತನಾಡುತ್ತಿದ್ದಾಗ ಈರಣ್ಣ
ಬಂಡಾನವರ ಮತ್ತು ಅವರ ಮಕ್ಕಳು ಹಾಗೂ ಅವರ ಹೆಂಡತಿಯರು ಬಂದು ಫಿರ್ಯಾದಿದಾರಿಗೆ ಏನ ಲೇ ಸೂಳೇಮಗನೆ ಅವರಿಗೆ
ಏನು ಮಾತನಾಡುತ್ತಿಯಾ ಎಂದು ಏಕ ವಚನದಲ್ಲಿ ಮಾತನಾಡುತ್ತಾ ಎಲ್ಲಾರು ಫಿರ್ಯಾದಿದಾರರ ಮೇಲೆ ಹಲ್ಲೆ ಮಾಡಿ
ಒಡಿ ಬಡಿದು ಅವಾಚ್ಯಶಬ್ದಗಳಿ ಬೈಯ್ದು ಮತ್ತು ಮಾಕೆ ಲೌಡೆ, ಮಾಕಿ ಚೂತ, ದಗಡಾಂಕೆ ನಿನಗೆ ನೋಡಿಕೊಳ್ಳುತ್ತೇನೆ
ನಿನ್ನ ಮನೆಗೆ ಬೆಂಕಿ ಹಚ್ಚುತ್ತೆನೆ, ಮತ್ತು ಅವನ ಮಗ ಚೆನ್ನವೀರ ಇತನು ನಿನಗೆ ಮರ್ಡರ್ ಮಾಡುತ್ತೆನೆ
ಅಂತಾ ಜೀವ ಬೇದರಿಕೆ ಹಾಕಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
0 comments:
Post a Comment