Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, August 2, 2017

1]  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 239/2017 ಕಲಂ. 87 Karnataka Police Act.
ದಿನಾಂಕ:- 01-08-2017 ರಂದು ಮಧ್ಯಾಹ್ನ ನಾನು ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮುಷ್ಟೂರು ಸೀಮಾ ಗಾಳೆಮ್ಮ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ರವರು ಇಬ್ಬರು ಪಂಚರು ಸಿಬ್ಬಂದಿ ಸಮೇತ ಹೋಗಿ ಗಾಳೆಮ್ಮ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 6 ಜನರು ಸಿಕ್ಕಿ ಬಿದ್ದಿದ್ದುಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 15,340/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಹಳೆಯ ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು ಇರುತ್ತವೆ. ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
2] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 138/2017 ಕಲಂ. 78(3) Karnataka Police Act.
ದಿನಾಂಕ: 01-08-2017 ರಂದು ಸಾಯಾಂಕಾಲ 5 ಗಂಟೆಯ ಸುಮಾರಿಗೆ ಆರೋಪಿತನು ಕವಲೂರ ಗ್ರಾಮದಲ್ಲಿ ಬರುವ ಹಳೆಯ ಗ್ರಾಮ ಪಂಚಾಯತಿ ಹತ್ತಿರ ಇರುವ ಮಸೀದಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ನಿರತನಾಗಿದ್ದಾಗ, ಪಿರ್ಯಾದಿದಾರರು ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ಮಟಕಾ ಜೂಜಾಟದ ದಾಳಿ ಮಾಡಿ, ಮಟಕಾ ಜೂಜಾಟದಲ್ಲಿ ನಿರತನಾಗಿದ್ದ ಆರೋಪಿತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಹಾಗೂ ನಗದು ಹಣ 620=00 ರೂ.ಗಳನ್ನು ಜಪ್ತ ಮಾಡಿಕೊಂಡು ಪಂಚನಾಮೆಯನ್ನು ಪೂರೈಸಿಕೊಂಡು, ನಂತರ ಸಾಯಾಂಕಾಲ 6-30 ಗಂಟೆಗೆ ಠಾಣೆಗೆ ಬಂದು ಆರೋಪಿತನ ಮೇಲೆ ಕ್ರಮ ಜರುಗಿಸುವ ಕುರಿತು ಒಂದು ವರದಿ ಮತ್ತು ಆರೋಪಿತನನ್ನು ಹಾಜರಪಡಿಸಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.   
3] ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 21/2017 ಕಲಂ. 279, 336 ಐ.ಪಿ.ಸಿ:
ದಿನಾಂಕ 01-08-2017 ರಂದು ಬೆಳಗ್ಗೆ 9-00 ಗಂಟೆಯಿಂದ ಸಂಚಾರಿ ನಿಯಂತ್ರಣ ಪಾಯಿಂಟ್ ಕರ್ತವ್ಯ ಕುರಿತು ಪಿಎಸ್ಐ ರವರು ಪೆಟ್ರೊಲಿಂಗ್ ಮಾಡುತ್ತಿರುವಾಗ , ಪೆಟ್ರೊಲಿಂಗ್ ಮಾಡುತ್ತಾ ಜಯನಗರದ ಮೂಲಕ ಬೈಪಾಸ್ ರಸ್ತೆಯಲ್ಲಿ ಮದ್ಯಾನ್ನ 12-00 ಗಂಟೆ ಸುಮಾರು ಹರಿಹಂತ ಕಾಲೋನಿ ಹತ್ತಿರ ಸರಕಾರಿ ಜೀಪನಲ್ಲಿ  ಹೊರಟಿರುವಾಗ ಜಯನಗರ ಕಡೆಯಿಂದ ಒಂದು ಟ್ರಾಕ್ಟರ , ಟ್ರಾಲಿ ಚಾಲಕ ತನ್ನ ಟ್ರಾಕ್ಟರನಲ್ಲಿ ಉಸುಕುಲೋಡ್ ತುಂಬಿಕೊಂಡು ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಬಂದವನೇ ಒಮ್ಮೆಲೆ ಕ್ರಾಸನ್ನು ಕಟ್ ಮಾಡಿದ್ದರಿಂದ ಎದುರುಗೆ ಬರುತ್ತಿರುವ ವಾಹನಗಳಿಗೆ ಅಪಘಾತ ವಾಗುವ ರೀತಿಯಲ್ಲಿ ಚಾಲನೆ ಮಾಡಿಕೊಂಡು ಬಂದಿದ್ದರಿಂದ  ಪಿಎಸ್ಐ ಮತ್ತು ಜೀಪ್ ಚಾಲಕ ಪ್ರಭುಗೌಡ ಎಪಿಸಿ. ಜೀಪ ದಿಂದ ಇಳಿದು ಸದರ ಟ್ರಾಕ್ಟರನ್ನು ನಿಲ್ಲಿಸಿ ಟ್ರಾಕ್ಟರ ನಂಬರ ನೋಡಲಾಗಿ ಕೆ.ಎ.35-ಟಿಎ 4989 ಅಂತಾ ಇದ್ದು ಟ್ರೈಲರ ನಂಬರ ನೋಡಲಾಗಿ ನಂಬರ ಇರುವುದಿಲ್ಲಾ ಸದರ ಟ್ರೈಲರನಲ್ಲಿ ಉಸುಕು ಲೋಡ್ ಮಾಡಿಕೊಂಡು ಅದರ ಮೇಲೆ ಬರಕಾ ಹಾಕಿಕೊಂಡು ಬಂದಿದ್ದು ಇರುತ್ತದೆ. ಟ್ರಾಕ್ಟರ್, ಟ್ರಾಲಿ ಚಾಲಕನ ಹೆಸರು ಕೇಳಲಾಗಿ ರುದ್ರಪ್ಪ ತಂದೆ ಈರಪ್ಪ ವಯಸ್ಸು 40 ಜಾ: ಗಂಗಾಮತ ಸಾ: ಉಳೆನೂರು ತಾ: ಗಂಗಾವತಿ ಅಂತಾ ಹೇಳಿದನು.  ಸದರಿ ರುದ್ರಪ್ಪ ತಂದೆ ಈರಪ್ಪ ಸಾ:ಉಳೇನೂರು  ಇತನು ತನ್ನ  ಟ್ರಾಕ್ಟರ ನಂ ಕೆ.ಎ.35-ಟಿಎ 4989 ಹಾಗೂ ನಂಬರ ಇಲ್ಲದ ಟ್ರೈಲರ್ ನೇದ್ದನ್ನು  ಜಯನಗರ  ಕಡೆಯಿಂದ ಅತೀಜೋರಾಗಿ ಮತ್ತು ಅಲಕ್ಷತನದಿಂದ  ಮಾನವ ಜೀವಕ್ಕೆ ಅಪಾಯವಾಗುವಂತೆ ಮತ್ತು ಗಂಡಾಂತರವನ್ನುಂಟುವಾಡುವ ಹಾಗೆ ದುಡುಕಿನಿಂದ ಮತ್ತು ನಿರ್ಲಕ್ಷತನದಿಂದ ಟ್ರಾಕ್ಟರ, ಟ್ರೈಲರನ್ನು ಚಾಲನೆ ಮಾಡಿಕೊಂಡು ಬಂದಿರುತ್ತಾನೆ. ಕಾರಣ ಸದರಿಯವನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
4] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 99/2017 ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ:
ದಿನಾಂಕ: 01-08-2017 ರಂದು ಸಂಜೆ 4-30 ಗಂಟೆಗೆ ಪಿರ್ಯಾದಿದಾರರು ಹಂಚಿನಾಳ ಕ್ರಾಸ್ ನ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತ ಮದ್ಯ ಮಾರಾಟದಲ್ಲಿ ತೊಡಗಿದ್ದ ಆರೋಪಿ, ಮದ್ಯದ ಬಾಟಲಿಗಳನ್ನು ಮತ್ತು ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು ಅದರ ಸಾರಾಶವೇನೆಂದರೆ, ಇಂದು ದಿನಾಂಕ: 01-08-2017 ರಂದು ಮದ್ಯಾಹ್ನ 3-00 ಗಂಟೆಗೆ ಆರೋಪಿತನು ಹಂಚಿನಾಳ ಕ್ರಾಸ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದ ಭರಮಪ್ಪ ತಂದೆ ದುರುಗಪ್ಪ ಬಂಡಿ ಸಾ: ಹಂಚಿನಾಳ. ಇವನ ಮೇಲೆ  ಪಂಚರ ಸಮಕ್ಷಮ ದಾಳಿ ಮಾಡಿ ಅವನಿಂದ  ಅಂದಾಜು 1176=00 ರೂ  ಬೆಲೆ ಬಾಳುವ 90 ಎಂ.ಎಲ್. ಅಳತೆಯ ಓರಿಜಿನಲ್ ಚಾಯ್ಸ ಡಿಲಕ್ಸ್ ಮಿಸ್ಕಿ ಮದ್ಯದ 42 ಟೆಟ್ರಾ ಪ್ಯಾಕ್ ಗಳಿದ್ದು ಒಂದು ಪರೀಕ್ಷೆ ಕುರಿತು ಜಪ್ತಿ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
5] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 100/2017 ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ:

ದಿನಾಂಕ: 01-08-2017 ರಂದು ಸಂಜೆ 18-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ದೊಡ್ಡಪ್ಪ ಎ.ಎಸ್.ಐ, ರವರು ಠಾಣೆಗೆ ಹಾಜರಾಗಿ ಒಂದು ದೂರು, ಹಾಗೂ ಇಬ್ಬರೂ ಆರೋಪಿತರು ಅನಧೀಕೃತ, 80 ಅಕ್ರಮ ಮದ್ಯದ ಟೆಟ್ರಾ ಪ್ಯಾಕಗಳನ್ನು ಮತ್ತು ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು ಅದರ ಸಾರಾಶವೇನೆಂದರೆ, ಇಂದು ದಿನಾಂಕ: 01-08-2017 ರಂದು ಸಾಯಂಕಾಲ 17-00 ಗಂಟೆಗೆ ನಮೂದಿತ ಆರೋಪಿತರು ಜುಮಲಾಪುರ ಬಸ್ಸ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದ ಆರೋಪಿ ನಂ 1 ರವರಿಂದ 42 ಟೆಟ್ರಾ ಪ್ಯಾಕಗಳನ್ನು ಹಾಗೂ ಆರೋಪಿ ನಂ 2 ರವರಿಂದ 40 ಟೆಟ್ರಾ ಪ್ಯಾಕಗಳನ್ನು ಹಿಗೇ 82 ಪ್ಯಾಕೇಟಗಳನ್ನು ಒಟ್ಟು 2296-00 ಬೆಲೆ ಬಾಳುವವಗಳನ್ನು ಅಕ್ರಮ ದಾಳಿ ಕಾಲಕ್ಕೆ  ಪಂಚರ ಸಮಕ್ಷಮ ದಾಳಿ ಮಾಡಿ ಜಪ್ತಿಪಡಿಸಿಕೊಂಡಿದ್ದು ಇವುಗಳಲ್ಲಿ 2 ಪ್ಯಾಕೇಟಗಳನ್ನು ಪರೀಕ್ಷೆ ಕುರಿತು ಜಪ್ತಿಪಡಿಸಿದ್ದು ಇರುತ್ತದೆ. ಸದರಿಯವರು ಮದ್ಯದ ಪಾಕೇಟಗಳನ್ನು ಯಾವದೇ ಪರವಾನಿಗೆ ಲೈಸೆನ್ಸ ಪರವಾನಿಗೆ ಇಲ್ಲದೇ ಮಾರಾಟ ಮಾಡಲು ಹೊರಟಿದ್ದವುಗಳನ್ನು  ಜಪ್ತಿ ಪಡಿಸಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.   

0 comments:

 
Will Smith Visitors
Since 01/02/2008