Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, August 22, 2017

1] ಗಂಗಾವತಿ ಗ್ರಾಮೀಣ  ಪೊಲೀಸ್  ಠಾಣೆ ಗುನ್ನೆ ನಂ. 258/2017 ಕಲಂ: 279, 337, 338 ಐ.ಪಿ.ಸಿ:
ದಿನಾಂಕ. 20-08-2017 ರಂದು ಫಿರ್ಯಾದಿ ಅಣ್ಣ ಶರಣಪ್ಪ ಹಾಗಲೂರ ಮತ್ತು ಫಿರ್ಯಾದಿ ಸಂಬಂಧಿಕ ಶರಣಪ್ಪ ಶ್ಯಾವಿ ಇಬ್ಬರು ಕೂಡಿಕೊಂಡು ಹೊಸಪೇಟೆಯ ಶನಿಮಹಾತ್ಮ ದೇವಸ್ಥಾನಕ್ಕೆ ಹೋಗಿದ್ದು ದಿನಾಂಕ. 21-08-2017 ರಂದು ಬೆಳಿಗ್ಗೆ ಪೂಜೆ ಮಾಡಿಕೊಂಡು ಇಬ್ಬರು ಕೂಡಿಕೊಂಡು ಶರಣಪ್ಪ ಶ್ಯಾವಿ ಇವರ ಮೋಟಾರ ಸೈಕಲ್ ನಂ. ಕೆ.ಎ.37/ಎಸ್.731 ನೇದ್ದರಲ್ಲಿ ವಾಪಸ ಗಂಗಾವತಿಗೆ ಬರುತ್ತಿರುವಾಗ ಆನೆಗುಂದಿ ಗಂಗಾವತಿ ರಸ್ತೆಯ ಮೇಲೆ ಸಂಗಾಪುರ ದಾಟಿ ತ್ರಿಮೂರ್ತಿ ತೋಟದ ಹತ್ತಿರ ಮೋಟಾರ ಸೈಕಲ ಚಲಾಯಿಸುತ್ತಿದ್ದ ಶರಣಪ್ಪ ಶ್ಯಾವಿ ಈತನು ಮೋಟಾರ ಸೈಕಲನ್ನು ಅತಿವೇಗವಾಗಿ ತೀವ್ರ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಿಯಂತ್ರಣ ಮಾಡಲು ಆಗದೆ ರಸ್ತೆಯ ಪಕ್ಕದಲ್ಲಿರುವ ಸಣ್ಣ ಕಾಲುಗೆ ಬಿದ್ದು ಮೋಟಾರ ಸೈಕಲ ಚಲಾಯಿಸುತ್ತಿದ್ದು ಶರಣಪ್ಪ ಶ್ಯಾವಿ ಮತ್ತು ಹಿಂದೆ ಕುಳಿತ ಫಿರ್ಯಾದಿ ಅಣ್ಣ ಶರಣಪ್ಪ ಹಾಗಲೂರ ಇವರಿಗೆ ಗಾಯ ಪೆಟ್ಟುಗಳಾಗಿರುತ್ತವೆ. ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್  ಠಾಣೆ ಗುನ್ನೆ ನಂ. 185/2017 ಕಲಂ: 78(3) Karnataka Police Act.

ದಿನಾಂಕ:- 21-08-2017 ರಂದು ರಾತ್ರಿ 9-15 ಗಂಟೆಗೆ  ಶ್ರೀ ಎಂ.ಶಿವುಕುಮಾರ ಪಿ.ಎಸ್.ಐ ಕಾರಟಗಿ ರವರು ಠಾಣೆಗೆ ಹಾಜರಾಗಿ ಮಟ್ಕಾ ಜೂಜಾಟದ ವರದಿ ಮೂಲ ಪಂಚನಾಮೆ ಮತ್ತು ಮಾನ್ಯ ನ್ಯಾಯಾಲಯದ ಪರವಾನಿಗೆಯೊಂದಿಗೆ ಠಾಣೆಗೆ ಹಾಜರಾಗಿ ಕೊಟ್ಟ ವರದಿಯ ಸಾರಾಂಶದಲ್ಲಿ ಇಂದು ದಿನಾಂಕ:-21-08-2017 ರಂದು ರಾತ್ರಿ 7-40 ಗಂಟೆಯ ಸುಮಾರಿಗೆ ನಮೂದು  ಮಾಡಿದ ಆರೋಪಿ ನಂ 1 ನೇದ್ದವನು ಬೂದುಗುಂಪಾ ಗ್ರಾಮದ ಅಂಬೇಡ್ಕರ್ ಸರ್ಕಲ್ ಹತ್ತಿರು ಜುಮ್ಮಾ ಮಸೀದಿ ಹತ್ತಿರ  ಸಾರ್ವಜನಿಕರ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ ಆರೋಪಿತನ ಮೇಲೆ ದಾಳಿ ಮಾಡಲು ಆರೋಪಿ ನಂ 1 ಈತನು ಸಿಕ್ಕಿ ಬಿದ್ದದ್ದು ಸಿಕ್ಕಿಬಿದ್ದವನಿಂದ ರೂ.790=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008