Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, September 26, 2017

1]  ಗಂಗಾವತಿ ಗ್ರಾಮೀಣ ಪೊಲೀಸ್  ಠಾಣೆ  ಗುನ್ನೆ ನಂ. 285/2017 ಕಲಂ.  87 Karnataka Police Act.
ದಿನಾಂಕ:- 25-09-2017 ರಂದು 6-00 ಪಿ.ಎಂ.ಕ್ಕೆ. ಪಿ.ಎಸ್.ಐ ಶ್ರೀ ಪ್ರಕಾಶ ಮಾಳಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ತಮ್ಮ ವ್ಯಾಪ್ತಿಯ ಸಂಗಾಪೂರ ಸೀಮಾದ ನರೇಶ ಇವರ ತೋಟದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಠಾಣೆಯ ಸಿಬ್ಬಂದಿಯವರಾದ, ಪಿ.ಸಿ , 358, 363, 328, 43 ರವರೊಂದಿಗೆ ಸರಕಾರಿ ಜೀಪ್ ನಂಬರ್: ಕೆ.ಎ-37/ ಜಿ-307  ನೇದ್ದರಲ್ಲಿ 6-15 ಪಿ.ಎಮ್ ಕ್ಕೆ ಹೊರಟು ಸಂಗಾಪೂರ ದಾಟಿ ಊರ ಹೊರಗೆ ಹೊಗಿ ರಸ್ತೆಯ ಮೇಲೆ ಜೀಪು ನಿಲ್ಲಿಸಿ ಸಂಗಾಪೂರ ಗ್ರಾಮದಿಂದ ಇಬ್ಬರು ಪಂಚರಾದ ರಾಮಕೃಷ್ಣ ತಂದಿ ತಿಮ್ಮಣ್ಣ  ಬೋವಿ  ವಯಾ- 32 ವರ್ಷ  ಸಾ- ಸಂಗಾಪೂರ 2) ವಿರೇಶ ತಂದಿ ವೀರಯ್ಯಸ್ವಾಮಿ  ಅಜ್ಜನಮಠ  ವಯಾ- 30 ವರ್ಷ ಸಾ- ಸಂಗಾಪೂರ ಇವರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿ ತಿಳಿಸಿ ಎಲ್ಲರೂ ನಡೆದುಕೊಂಡು ಹೋಗಿ ಭಾತ್ಮೀ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಸಂಗಾಪೂರ ಸೀಮಾದ  ನರೇಶ ಇವರ ತೋಟದ ಹತ್ತಿರ  ಇರವು ಟವರ್ ಕಂಬದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಆಗ ಸಮಯ 6-45 ಪಿ.ಎಮ್. ಆಗಿತ್ತು. ಗಂಟೆಯಾಗಿತ್ತು. ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 9 ಜನರು ಸಿಕ್ಕಿ ಬಿದ್ದಿದ್ದುವಿಚಾರಿಸಲು ಅವರು ತಮ್ಮ ಹೆಸರುಗಳು  1)  ವಿರೇಶ ತಂದಿ ಸಂಗಪ್ಪ ವಯಾ- 28 ವರ್ಷ ಜಾ- ಲಿಂಗಾಯತ ಉ- ವ್ಯಾಪಾರ ಸಾ- ಮರ್ಲಾನಹಳ್ಳಿ ತಾ- ಗಂಗಾವತಿ 2) ಗಂಗಣ್ಣ @ ಗಂಗಾಧರ ತಂದಿ ಹುಸೇನಪ್ಪ ವಯಾ- 32 ವರ್ಷ  ಉ- ವ್ಯಾಪಾರ ಸಾ- ನೀಲಕಂಠೇಶ್ವರ ಕ್ಯಾಂಪ್ ಗಂಗಾವತಿ 3)  ಜಿಲಾನ ತಂದಿ  ಸೈಯ್ಯದಹುಸೇನ  ವಯಾ- 30 ವರ್ಷ ಜಾ- ಮುಸ್ಲಿಂ ಉ- ವ್ಯಾಪಾರ ಸಾ- ಗುಂಡಮ್ಮ ಕ್ಯಾಂಪ್  ತಾ- ಗಂಗಾವತಿ 4)  ರಾಮಣ್ಣ ತಂದಿ ಭೀರಪ್ಪ  ಲಿಂಗಾಯತ  ಉ-ವ್ಯಾಪಾರ ಸಾ- ಹಿರೆಜಂತಗಲ್ಲ 5) ಶರಣಪ್ಪ ತಂದಿ ರೇಣುಕಪ್ಪ  ಕುರಬರ ವಯಾ- 38 ವರ್ಷ ಜಾ- ಕುರಬರ ಸಾ- ಹಿರೇಜಂತಗಲ್ಲ ತಾ- ಗಂಗಾವತಿ 6)  ನಾಗರಾಜ ತಂದಿ  ಬಸವರಾಜ ಕುರಬರ ವಯಾ- 46 ವರ್ಷ ಉ- ವ್ಯಾಪಾರ ಸಾ- ಹಿರೆಜಂತಗಲ್ಲ ತಾ- ಗಂಗಾವತಿ  7) ರಾಮಣ್ಣ ತಂದಿ ಸಿದ್ದಪ್ಪ ಹಳೆಮನಿ ವಯಾ- 32 ವರ್ಷ ಜಾ-ಕುರಬರ ಉ- ಒಕ್ಕಲುತನ ಸಾ- ಯರಡೋಣಾ  8) ಈರಣ್ಣ ತಂದಿ ಸೋಮಪ್ಪ  ವಯಾ- 35 ವರ್ಷ ಜಾ-ಲಿಂಗಾಯತ ಉ- ವ್ಯಾಪಾರ ಸಾ- ಹಿರೇಜಂತಗಲ್ಲ ತಾ- ಗಂಗಾವತಿ  9) ನರಹರಿ @ ಹರಿ ತಂದಿ ಪ್ರಭಾಕರ  ವಯಾ- 40 ವರ್ಷ ಜಾ- ವೈಶ‍್ಯ  ಉ- ವ್ಯಾಪಾರ ಸಾ- ರಾಯರ ಓಣಿ ಗಂಗಾವತಿ. . ಸದರಿ ದಾಳಿಯಲ್ಲಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 15,005/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಹಳೆಯ ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು ವಾಪಾಸ್ ಠಾಣೆಗೆ ಬಂದು ಸದರಿಯವರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಕುಷ್ಟಗಿ ಪೊಲೀಸ್  ಠಾಣೆ  ಗುನ್ನೆ ನಂ. 266/2017 ಕಲಂ: : 306  ಐ.ಪಿ.ಸಿ.
ದಿನಾಂಕ: 26-09-2017 ರಂದು 00-30  ಗಂಟೆಗೆ ಫಿರ್ಯಾಧಿದಾರರಾದ ಹುಲಿಗೇಮ್ಮ ಗಂಡ ಹನುಮಪ್ಪ ಈಳಿಗೇರ, ವಯಾ 38 ವರ್ಷ, ಜಾತಿ: ಈಳಿಗೇರ, : ಕೂಲಿ ಕೆಲಸ, ಸಾ: ಹನುಮಗೇರಿ. ತಾ: ಕುಷ್ಟಗಿ. ಇವರು ಠಾಣೆಗೆ ಹಾಜರಾಗಿ ಗಣಕೀಕರಿಸಿದ ದೂರನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ, ನನ್ನ ಗಂಡನಿಗೆ ಹಣದ ಅಡಚಣೆ ಇದ್ದಾಗ ಪಕ್ಕದ ಹೊಲದ ರಾಮಣ್ಣ ಜಾಧವ್ ಇತನ ಕಡೆಯಿಂದ ಹಣವನ್ನು ಪಡೆದುಕೊಂಡು ನಂತರ ಮರಳಿ ಕೊಡುತ್ತಿದ್ದು ನನ್ನ ಗಂಡನು ಮನೆಗೆ ಬಂದಾಗ ರಾಮಣ್ಣ ಜಾಧವ್ ಇತನು ನನಗೆ ಹಣವನ್ನು ಕೊಡುವಂತೆ ತೊಂದರೆಯನ್ನು ಕೊಡುತ್ತಿದ್ದಾನೆ ಅಂತಾ ಪೇಚಾಡುತ್ತಿದ್ದನು, ನಾನು ನನ್ನ ಗಂಡನಿಗೆ ಎಷ್ಟು ಹಣವನ್ನು ಪಡೆದುಕೊಂಡಿರುವಿ ಅಂತಾ ವಿಚಾರಿಸಿದ್ದಕ್ಕೆ ನನ್ನ ಗಂಡನು ನನಗೇನು ಹೇಳಲಿಲ್ಲಾ ನಾನು ನನ್ನ ಗಂಡನಿಗೆ ಟ್ರಾಕ್ಟರಿಯನ್ನು ಮಾರಿ ಅವರ ಹಣವನ್ನು ಕೊಡು ಅಂತಾ ಅನ್ನೂತ್ತಿರಲು ಅದಕ್ಕೆ ನನ್ನ ಗಂಡನು ಸುಮ್ಮನಾಗುತ್ತಿದ್ದನು. ನನ್ನ ಗಂಡನು ದಿನಾಲೂ ಮಧ್ಯಪಾನವನ್ನು ಮಾಡುತ್ತಿದ್ದನು ರಾಮಣ್ಣನು ನನ್ನ ಗಂಡನಿಗೆ ಮನವೊಲಿಸಿ ನಮ್ಮ ಹೊಲವನ್ನು ಖರೀದಿಮಾಡಬೇಕೆನ್ನುವ ಉದ್ದೇಶದಿಂದ ನನ್ನ ಗಂಡನಿಗೆ ಸಾಲವನ್ನು ಕೊಟ್ಟಿದ್ದು ಹಣವನ್ನು ಮರಳಿ ಕೊಡಲಾರದ್ದರಿಂದ ನಮ್ಮ ಮಾವನವರ ಹೊಲವನ್ನು ಖರೀದಿ ಮಾಡಿದಂತೆ ನಮ್ಮ ಹೊಲವನ್ನು ಸಹ ಖರೀದಿ ಮಾಡಿಕೊಳ್ಳತ್ತೇನೆಂದು ಹೇಳುತ್ತಿದ್ದನುನಿನ್ನೆ ದಿನಾಂಕ: 25-09-2017 ರಂದು ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ನಾನು ಆಡುಮರಿಯನ್ನು ಹೊಲದಲ್ಲಿ  ಮೇಯಿಸುತ್ತಿರುವಾಗ ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ನಮ್ಮ ತಮ್ಮನಾದ ಪರಶುರಾಮ ಇತನು ನಮ್ಮ ಹೊಲಕ್ಕೆ ಬಂದು ಮಾವನು ಮನೆಯಲ್ಲಿ ಔಷದಿಯನ್ನು ಕುಡಿದು ಮೃತ ಪಟ್ಟಿರುತ್ತಾನೆಂದು ತಿಳಿಸಲು ನಾನು ಗಾಭರಿಗೊಂಡು ಮನೆಗೆ ಬಂದು ನೋಡಲು ಸಂಗತಿಯು ನಿಜವಿದ್ದು ನನ್ನ ಗಂಡನು ಸತ್ತಿದ್ದು ಅತನ ಮೂಗಿನಿಂದ ಬಿಳಿಯ ಬುರುಗು ಬರುತ್ತಿತ್ತು. ನನ್ನ ಗಂಡನಿಗೆ ರಾಮಣ್ಣ ಜಾಧವ್ ಈತನು ಹಣವನ್ನು ಕೊಡುವಂತೆ ತೊಂದರೆಯನ್ನು ಕೊಡುತ್ತಿದ್ದರಿಂದ ಆತನ ಕಿರುಕುಳವನ್ನು ತಾಳಲಾರದೆ ನನ್ನ ಗಂಡನು ಇಂದು ಮನೆಯಲ್ಲಿ ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ಹೊಲಕ್ಕೆ ಹೊಡೆಯುವ ಯಾವುದೋ ಕ್ರಿಮಿನಾಷಕ ಔಷದಿಯನ್ನು ಸೇವಿಸಿ ಮೃತಪಟ್ಟಿದ್ದು ನನ್ನ ಗಂಡನ ಸಾವಿಗೆ ರಾಮಣ್ಣ ಜಾದವ್ ಈತನೇ ಕಾರಣನಿರುತ್ತಾನೆ ಆತನ ವಿರುದ್ದ ಕಾನೂನು ರೀತಿಯ ಕ್ರಮವನ್ನು ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008