Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, November 14, 2017

1] ಕುಕನೂರ  ಪೊಲೀಸ್  ಠಾಣೆ  ಗುನ್ನೆ ನಂ. 159/2017  ಕಲಂ. 279, 304(ಎ) ಐ.ಪಿ.ಸಿ:.
ಪಿರ್ಯಾದಿದಾರ ಮತ್ತು ಈಶಪ್ಪ, ನಾಗರಾಜ ಇವರೆಲ್ಲರನ್ನೂ ಕುಡ್ರಿಸಿಕೊಂಡು ಸದರಿ ತಾನು ನಡೆಸುತ್ತಿದ್ದ ಕೃಷರ ವಾಹನ ನಂ. ಕೆಎ-29/ಎಂ-2338 ನೇದ್ದನ್ನು ಹಲಗೇರಿ ದಾಟಿ ಭಾನಾಪುರ ಕಡೆಗೆ ತನ್ನ ವಾಹನವನ್ನು ಎನ್ ಹೆಚ್-63 ರಸ್ತೆಯಲ್ಲಿ ಹೋಗಿ ಬರುವ ವಾಹನಗಳನ್ನು ಗಮನಿಸದೇ ಅಡ್ಡಾದಿಡ್ಡಿಯಾಗಿ ಅತಿವೇಗ & ಅಲಕ್ಷತನದಿಂದ ಚಲಾಯಿಸಿಕೊಂಡು ಬಂದಿದ್ದು ಅದೇರೀತಿ ಆರೋಪಿ ನಂ. 02 ನೇದವನು ತಾನು ಚಲಾಯಿಸುತಿದ್ದ ಕಾರ್ ನಂ. ಕೆಎ-35/ಎನ್-6287 ನೇದ್ದರಲ್ಲಿ ತನ್ನ ತಂದೆ ಜಂಬುನಾಥ, ಸೊಸೆ ಉಷಾಶ್ರೀ, ಸಂಬಂಧಿ ಸುಮಾ ಎಲ್ಲರನ್ನೂ ಕರೆದುಕೊಂಡು ಹುಬ್ಬಳ್ಳಿಯಿಂದ ಕೊಪ್ಪಳ ಕಡೆಗೆ ಅತಿವೇಗ & ಅಲಕ್ಷತನದಿಂದ ಚಲಾಯಿಸುತ್ತಾ ಬಂದಿದ್ದು, ಹೀಗೆ ಎರಡು ವಾಹನಗಳ ಚಾಲಕರು ಒಬ್ಬರಿಗೊಬ್ಬರು ಸೈಡ್ ಕೊಡದೆ ಇಬ್ಬರೂ ವಾಹನಗಳಿಂದ ಮುಖಾಮುಖಿಯಾಗಿ ಬಲವಾಗಿ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದರಿಂದ ಸದರಿ ಅಪಘಾತದಲ್ಲಿ ಪಿರ್ಯಾದಿದಾರನಿಗೆ, ನಾಗರಾಜ, ಈಶಪ್ಪ, ಉಷಾಶ್ರೀ, ಸುಮಾ ಹಾಗೂ ಆರೋಪಿ ನಂ. 01 ನೇದವನಿಗೆ ಭಾರಿ ಸ್ವರೂಪದ ಗಾಯಗಳಾಗಿದ್ದು, ಆರೋಪಿ ನಂ. 02 ನೇದವನು ಮತ್ತು ಆತನ ತಂದೆಯಾದ ಜಂಬುನಾಥ ಇಬ್ಬರೂ ಮೃತಪಟ್ಟಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ, 
2] ಕೊಪ್ಪಳ ಗ್ರಾಮೀಣ ಪೊಲೀಸ್  ಠಾಣೆ  ಗುನ್ನೆ ನಂ. 252/2017  ಕಲಂ. 279, 338  ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:13-11-2017 ರಂದು ಮದ್ಯಾಹ್ನ 12-30 ಗಂಟೆಗೆ ಗಾಯಾಳು ಹನುಮಂತ ಇವರು ತಮ್ಮ ಹೊಸ ಟಿವಿಎಸ್ ಮೋಟಾರ ಸೈಕಲ್ ನೇದ್ದನ್ನು ಓಡಿಸಿಕೊಂಡು ಕುಷ್ಟಗಿ ಕಡೆಯಿಂದ ಕೊಪ್ಪಳದ ಕಡೆಗೆ ಬರುವಾಗ ಅದೇ ಸಮಯಕ್ಕೆ ಕೊಪ್ಪಳದ ಕಡೆಯಿಂದ ಕಾರ್ ನಂ; ಕೆಎ:-13/ಬಿ-8591 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸುತ್ತಾ ರಾಂಗ್ ಸೈಡ ಬಂದವನೇ ಗಾಯಾಳುವಿನ ಮೋಟಾರ ಸೈಕಲ್ ‍ಗೆ ಟಕ್ಕರ ಕೊಟ್ಟು ಅಪಘಾತ ಮಾಡಿ ವಾಹನ ನಿಲ್ಲಿಸದೇ ಹೋಗಿದ್ದು ಇರುತ್ತದೆ. ಈ ಅಪಘಾತದಲ್ಲಿ ಗಾಯಾಳುವಿಗೆ ಭಾರಿ ಪೆಟ್ಟುಗಳಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ. 263/2017  ಕಲಂ. 78(3) Karnataka Police Act.
ದಿನಾಂಕ:-13-11-2017 ರಂದು ಮದ್ಯಾಹ್ನ 12-45 ಗಂಟೆಗೆ  ನಮೂದು  ಮಾಡಿದ ಆರೋಪಿ ನಂ.1 ನೇದ್ದವನು ಗಂಗಾವತಿ-ಸಿಂಧನೂರ ರಸ್ತೆಯ ಸಿದ್ದಾಪೂರ ಬಸ್ ನಿಲ್ದಾಣದ ಎದುರಿಗೆ ದರ್ಗಾದ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ, ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನು  ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದವನ  ಕಡೆಯಿಂದ 1540=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ. 264/2017  ಕಲಂ. 78(3) Karnataka Police Act.

ದಿನಾಂಕ:-13-11-2017 ರಂದು ಮದ್ಯಾಹ್ನ 02-05 ಗಂಟೆಗೆ  ನಮೂದು  ಮಾಡಿದ ಆರೋಪಿ ನಂ.1 ನೇದ್ದವನು ಗಂಗಾವತಿ-ಸಿಂಧನೂರ ರಸ್ತೆಯ ಸಿದ್ದಾಪೂರ ಬಸ್ ನಿಲ್ದಾಣದ ಎದುರಿಗೆ ದರ್ಗಾದ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ, ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನು  ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದವನ  ಕಡೆಯಿಂದ 530=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008