Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, January 19, 2018

1] ಕೊಪ್ಪಳ ಗ್ರಾಮೀಣ  ಪೊಲೀಸ್ ಠಾಣೆ  ಗುನ್ನೆ ನಂ.  06/2018  ಕಲಂ. 34 Karnataka Excise Act.
ದಿ:18-01-2018 ರಂದು ಮದ್ಯಾಹ್ನ 2-30 ಗಂಟೆಗೆ ಠಾಣಾ ವ್ಯಾಪ್ತಿಯ ಹೂವಿನಾಳ ಗ್ರಾಮದ ಕೊಪ್ಪಳ-ಕುಣಿಕೇರಿ ರಸ್ತೆಯ ಬಾಜು ಇರುವ ಸಿಬಿರಕಟ್ಟೆ ಹತ್ತಿರ ಓರ್ವ ವ್ಯಕ್ತಿ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದರಿಂದ, ಪಿ.ಎಸ್.ಐ. ರವರು ಸಿಪಿಐ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಸಂಗಡ ಕರೆದುಕೊಂಡು ಮದ್ಯಾಹ್ನ 3-00 ಗಂಟೆಗೆ ದಾಳಿ ಮಾಡಿ ಆರೋಪಿತನಿಗೆ ವಶಕ್ಕೆ ತೆಗೆದುಕೊಂಡು, ಹೆವಾರ್ಡ್ಸ ಚೀಯರ್ಸ ವಿಸ್ಕಿ. 90 ಎಮ್.ಎಲ್. ಅಳತೆಯ ಒಂದು ಟೆಟ್ರಾಪಾಕೇಟ್ ಅಂ.ಕಿ. 28=13. ರೂ. ಹೀಗೆ ಒಟ್ಟು 58 ಟೆಟ್ರಾಪಾಕೇಟಗಳು. ಅಂ.ಕಿ. 1,631=54. ರೂ. ಬೆಲೆಬಾಳುವವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಕೊಪ್ಪಳ ಗ್ರಾಮೀಣ  ಪೊಲೀಸ್ ಠಾಣೆ  ಗುನ್ನೆ ನಂ.  07/2018  ಕಲಂ. 15(ಎ) 32(3) Karnataka Excise Act.
ದಿ:18-01-2018 ರಂದು ಸಂಜೆ 6-30 ಗಂಟೆಗೆ ಠಾಣಾ ವ್ಯಾಪ್ತಿಯ ಗಿಣಿಗೇರಿ ಗ್ರಾಮದಲ್ಲಿ ಆರೋಪಿ ವಿನೋದ ಹಲಿಗೇರಿ ಇತನು ತನ್ನ ಪಾನಶಾಪ್ ಮುಂದೆ ವಿಸ್ಕಿ ತುಂಬಿದ ಮದ್ಯದ ಟೆಟ್ರಾಪಾಕೇಟಗಳನ್ನು ಪಾನಶಾಪ್ ಗೆ ಬರುವ ಗ್ರಾಹಕರಿಗೆ ಮದ್ಯ ಸೇವಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ ಫಿರ್ಯಾದಿದಾರರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಗೆ ವಶಕ್ಕೆ ತೆಗೆದುಕೊಂಡು, ಪಾನಶಾಪ್ ಮುಂದೆ ಕುಡಿಯಲು ಇಟ್ಟಿದ್ದ, 1] ಹಾಯವಾರ್ಡ್ಸ ಚೀಯರ್ಸ ವಿಸ್ಕಿ. 90 ಎಮ್.ಎಲ್. ಅಳತೆಯ ಒಂದು ಟೆಟ್ರಾಪಾಕೇಟ್ ಅಂ.ಕಿ. 28=13 ರೂ. ಹೀಗೆ ಒಟ್ಟು 02 ಟೆಟ್ರಾಪಾಕೇಟಗಳು. ಅಂಕಿ. 56.26  ರೂ. ಬೆಲೆಬಾಳುವವುಗಳಿದ್ದು ಅದರಲ್ಲಿ ಅಲ್ಪಸ್ವಲ್ಪ ಮದ್ಯವಿದ್ದರಿಂದ ಸ್ಥಳದಲ್ಲಿ ಬಿಸಾಕಿದ್ದು  ಇರುತ್ತದೆ. ಪ್ರಕರಣವನ್ನು ದಾಖಲಿಸಿ ತಪಾಸಣೆ ಕೈಗೊಂಡಿದ್ದು ಅದೆ.
3] ಮುನಿರಾಬಾದ  ಪೊಲೀಸ್ ಠಾಣೆ  ಗುನ್ನೆ ನಂ.  07/2018  ಕಲಂ. 78(3) Karnataka Police Act.
ದಿನಾಂಕ: 18-01-2018 ರಂದು  4-50 ಪಿ.ಎಂ. ಸುಮಾರಿಗೆ ಹುಲಗಿ ಬನ್ನಿಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಪಿರ್ಯಾದಿದಾರರಾದ ಶ್ರೀ ಕೆ.ಜಯಪ್ರಕಾಶ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದುಕೊಂಡು ಅವರಿಂದ 1130-00 ರೂ. ಮಟಕಾ ಜೂಜಾಟದ ನಗದು ಹಣ ಮತ್ತು ಒಂದು ಬಾಲ ಪೆನ್ ಹಾಗೂ ಒಂದು ಮಟಕಾ ಚೀಟಿಯನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.    
4] ಅಳವಂಡಿ ಪೊಲೀಸ್ ಠಾಣೆ  ಗುನ್ನೆ ನಂ.  05/2018  ಕಲಂ. 87 Karnataka Police Act.
ದಿನಾಂಕ: 18-01-2018 ರಂದು ಫಿರ್ಯಾಧಿದಾರರಾದ ಶ್ರೀ ಶಂಕರಪ್ಪ ಎಲ್. ಪಿ.ಎಸ್. ಅಳವಂಡಿ ಪೊಲೀಸ್ ಠಾಣೆ ರವರು, ಹಾಗೂ ಸಿಬ್ಬಂದಿ, ಪಂಚರು ಕೂಡಿಕೊಂಡು ಠಾಣಾ ವ್ಯಾಪ್ತಿಯ ಅಳವಂಡಿ ಗ್ರಾಮದ ವಿರುಪಾಕ್ಷಗೌಡ ಎಂಬುವರ ಮನೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಹಣವನ್ನು ಕಟ್ಟಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟವನ್ನು ಆಡುತ್ತಿರುವಾಗ ದಾಳಿ ಮಾಡಿದ್ದು, 09 ಜನ ಆರೋಪಿತರು ಸಿಕ್ಕಿದ್ದು, ಸಿಕ್ಕ ಆರೋಪಿತರಿಂದ ಜೂಜಾಟಕ್ಕೆ ಬಳಸಿದ ನಗದು ಹಣ ರೂ. 9,020=00, 52 ಇಸ್ಪೇಟ್ ಎಲೆ, ಹಾಗೂ ಒಂದು ಪ್ಲಾಸ್ಟಿಕ್ ಬರಕಾ ಜಪ್ತ ಮಾಡಿ ಸ್ಥಳದಲ್ಲಿ ಪಂಚನಾಮೆಯನ್ನು ತಯಾರಿಸಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
5] ಗಂಗಾವತಿ ಗ್ರಾಮೀಣ  ಪೊಲೀಸ್ ಠಾಣೆ  ಗುನ್ನೆ ನಂ.  15/2018  ಕಲಂ. 78(3) Karnataka Police Act.
ದಿನಾಂಕ:- 18-01-2018 ರಂದು ಸಾಯಂಕಾಲ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ ಠಾಣೆಯಲ್ಲಿರುವಾಗ ವೆಂಕಟಗಿರಿ ಗ್ರಾಮದ ವೆಂಕಟೇಶ್ವರ ದೇವಸ್ಥಾದನ ಅಗಸಿ ಬಾಗಿಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ದಾಳಿ ಮಾಡಲು ಠಾಣೆಯಲ್ಲಿ ಹಾಜರಿದ್ದ ಅಧಿಕಾರಿ/ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದವನ ಮೇಲೆ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕವನ  ಹೆಸರು ವಿಚಾರಿಸಲು ಮಹ್ಮದ್ ರಫಿ ತಂದೆ ಸಣ್ಣ ಅಮೀನಸಾಬ ವಯಾ 35, ಜಾ. ಮುಸ್ಲಿಂ. ಉ. ಕೂಲಿ ಸಾ. ವೆಂಕಟಗಿರಿ ಅಂತಾ ತಿಳಿಸಿದನು. ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ 1,900-00 ರೂಪಾಯಿ, ಒಂದು ಮಟಕಾ ಪಟ್ಟಿ, ಹಾಗೂ ಒಂದು ಬಾಲ ಪೆನ್ನು ದೊರೆತಿದ್ದು, ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀಯಾ ಅಂತಾ ವಿಚಾರಿಸಲು ಅವರು ಮಟಕಾ ಪಟ್ಟಿಯನ್ನು ಗಂಗಾವತಿಯ ಹಸನಸಾಬ ತಂದೆ ಸತ್ತಾರಸಾಬ ಸಾ: ಲಕ್ಷ್ಮೀಕ್ಯಾಂಪ ಗಂಗಾವತಿ. ಈತನಿಗೆ ಕೊಡುವದಾಗಿ ತಿಳಿಸಿದನು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  
6] ಹನುಮಸಾಗರ ಪೊಲೀಸ್ ಠಾಣೆ  ಗುನ್ನೆ ನಂ. 06/2018  ಕಲಂ. 78(3) Karnataka Police Act.
ಪಿ.ಎಸ್.. ಹಾಗೂ ಸಿಬ್ಬಂದಿಯವರು ಇಂದು ಸಾಯಾಂಕಾಲ 16-50 ಗಂಟೆಗೆ ಠಾಣೆಯಲ್ಲಿದ್ದಾಗ ಮನ್ನೇರಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1] ಮಂಜುನಾಥ ತಂದೆ ಬಸವಂತಪ್ಪ ಶಿರೋಳ, ಸಾ: ಹನಮಸಾಗರ 2] ಚಂದಪ್ಪ ತಂದೆ ಗುರುಲಿಂಗಪ್ಪ ಆಡೂರ, ಸಾ: ಮನ್ನೇರಾಳ ರವರೊಂದಿಗೆ ಸರಕಾರಿ ಜೀಪ್ ನಂ: ಕೆ.-37/ಜಿ-777 ನೇದ್ದರಲ್ಲಿ ಹೊರಟು ಸಾಯಾಂಕಾಲ 5-25 ಗಂಟೆಗೆ ದಾಳಿ ಮಾಡಲಾಗಿ ಮಟಕಾ ನಂಬರ ಬರೆದುಕೊಂಡು ಹಣ ಪಡೆದುಕೊಳ್ಳುವವನು ಸಿಕ್ಕಿಬಿದಿದ್ದು ಅವರ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಬಸವರಾಜ ತಂದೆ ಚಂದಪ್ಪ ಬೆಣ್ಣಿ ವಯಾ: 45 ವರ್ಷ, ಜಾತಿ: ಗಾಣಿಗ, : ಒಕ್ಕಲುತನ, ಸಾ: ಮನ್ನೇರಾಳ, ತಾ: ಕುಷ್ಟಗಿ, ಅಂತಾ ತಿಳಿಸಿದ್ದು ಅವನ ಹತ್ತಿರ ಮಟಕಾ ಚೀಟಿ, 750=00 ರೂಪಾಯಿ ನಗದು ಹಣ ಹಾಗೂ ಒಂದು ಬಾಲಪೆನ್ನ ಜಪ್ತಮಾಡಿಕೊಂಡಿದ್ದು ನಂತರ ಸದರಿ ಆರೋಪಿ ಬಸವರಾಜನಿಗೆ ಈ ಮಟಕಾ ಚೀಟಿಯನ್ನು ಯಾರಿಗೆ ಕೊಡುವದಾಗಿ ಕೇಳಿದಾಗ ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
7] ಗಂಗಾವತಿ ನಗರ ಪೊಲೀಸ್ ಠಾಣೆ  ಗುನ್ನೆ ನಂ. 13/2018  ಕಲಂ. 78(3) Karnataka Police Act.
ದಿನಾಂಕ 18-01-2018 ರಂದು 19-30 ಗಂಟೆಗೆ ಆರೋಪಿತನಾದ ಯಮನೂರಪ್ಪ ತಂದೆ ಸಾರಪ್ಪ ಜೋಗೆರ್ ವಯಾ: 32 ವರ್ಷ ಜಾ:ಜೋಗೆರ್ ಉ: ಡ್ರೈವರ್  ಸಾ:ಜೋಗೆರ್ ಓಣಿ ಗಂಗಾವತಿ  ಈತನು ಗಂಗಾವತಿ ನಗರದ ಓ.ಎಸ್.ಬಿ ರಸ್ತೆಯ ಜೋಗೆರ ಓಣಿಯ ಯಲ್ಲಮ್ಮ ದೇವಸ್ಥಾನದ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಅವರಿಗೆ ಮಟಕಾ ನಂಬರ ಬರೆದ ಚೀಟಿ ಬರೆದುಕೊಡುತ್ತಿರುವಾಗ ಸದರಿ ವ್ಯಕ್ತಿಯ ಮೇಲೆ ಪಿ.ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 520-00. (02) ಮಟಕಾ ನಂಬರ ಬರೆದ 2 ಚೀಟಿ. (03) ಒಂದು ಬಾಲ್ ಪೆನ್ನು ದೊರೆತಿರುತ್ತದೆ. ಸದರಿ ಆರೋಪಿತನ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರತ್ಯೇಕವಾಗಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ. ಸದರಿ ಮಟಕಾ ಪಟ್ಟಿಯನ್ನು ಬಕ್ಕಿಯಾದ (02) ಹಮೀದ್ (03) ಆಟೋ ಶಂಕರ್  ಇಬ್ಬರೂ ಸಾ; ಮೆಹಬೂಬ ನಗರ ಗಂಗಾವತಿ ಇವರಿಗೆ ಕೊಡುವುದಾಗಿ ತಿಳಿಸಿದ್ದು ಕಾರಣ ಸದರಿಯವರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.        
8] ಕುಷ್ಟಗಿ ಪೊಲೀಸ್ ಠಾಣೆ  ಗುನ್ನೆ ನಂ: 13/2018 ಕಲಂ: 279, 304(ಎ) ಐ.ಪಿ.ಸಿ:

ಮುಂಜಾನೆ 08-00 ಗಂಟೆಯ ಸುಮಾರಿಗೆ  ಶಿವಪ್ಪ ತಂದೆ ಚೆನ್ನಸಂಗಪ್ಪ ಪಟ್ಟಣಶೆಟ್ಟಿ ಸಾ : ಹಿರೇಸಿಂಗನಗುತ್ತಿ ತಾ : ಹುನಗುಂದ ರವರ ಮಗ ಪ್ರಭು ಈತನು ಊರಿಗೆ ಬಂದು ನನಗೆ ತಾನು ಒಂದು ಹೊಸ ಮೋಟಾರ ಸೈಕಲನ್ನು ಖರೀಧಿ ಮಾಡುವುದಾಗಿ ಹೇಳಿ ನನಗೂ ಬಾ ಅಂತಾ ಹೇಳಿ ಆಗ ನಾನು ಮತ್ತು ನನ್ನ ಮಗ ಪ್ರಭುನನ್ನ ಮಗನ ಸ್ನೇಹಿತರಾದ ನಮ್ಮೂರಿನ ಶರಣಪ್ಪ ಬಿಳಗಿ, ಬಸವರಾಜ ಮುಖಾಷಿ ರವರು ನಾವು ಎಲ್ಲರೂ ಕೂಡಿಕೊಂಡು ನನ್ನ ಮಗನಿಗೆ ಹೊಸ ಮೋಟಾರ ಸೈಕಲ್ Kಕೊಂಡು ಬರಲು ಎರಡು ಮೋಟಾರ ಸೈಕಲ ಮೇಲೆ  ಕುಷ್ಟಗಿಗೆ ಹೊರಟು ಕುಷ್ಟಗಿಗೆ ಬಂದು ಕುಷ್ಟಗಿಯಲ್ಲಿ ಇರುವ ಹಿರೋ ಜನತಾ ಮೋಟರ್ಸ ಶೋ ರೂಮಿನಲ್ಲಿ ಒಂದು ಬ್ಲಾಕ್ ಬಣ್ಣದ ಹಿರೋ ಕಂಪನಿಯ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ಟೆಂಪರವರಿ ಪಾಸಿಂಗ್ ನಂ : K.A-37-TZ009407 ಇದ್ದು ಇದರ ಇಂಜನ ನಂ : HA10AGHHME5726, ಚೆಸ್ಸಿ ನಂ : MBLHARO71HHM73730 ನೇದ್ದನ್ನು ಖರೀದಿ ಮಾಡಿಕೊಂಡು ವಾಪಸ ನಮ್ಮೂರಿಗೆ ಕುಷ್ಟಗಿ ಹುನಗುಂದ ಎನ್.ಹೆಚ್-50 ರಸ್ತೆಯ ಮೇಲೆ ವಣಗೇರಿ ಟೋಲನಾಕ ದಾಟಿ ಬೋದೂರ ಕ್ರಾಸ ಹತ್ತಿರ ರೋಡ ಹಮ್ಸ್ ಗೆ ನನ್ನ ಮಗ ಪ್ರಭು ಹೊಸ ಮೋಟಾರ ಸೈಕಲ್ ತೆಗೆದುಕೊಂಡು ಒಬ್ಬನೇ ಮುಂದೆ ಹೊರಟಿದ್ದು ನಾವು ನಮ್ಮ ನಮ್ಮ ಗಾಡಿಯ ಮೇಲೆ ಹಿಂದೆ ಹಿಂದೆ ಹೋಗುತ್ತಿದ್ದೇವು. ಸದರಿ ರೋಡ್ಸ ಹಮ್ಸ್ ಹತ್ತಿರ ನಿಧಾನವಾಗಿ ಇಂದು ಮದ್ಯಾಹ್ನ 01-15 ಗಂಟೆಯ ಸುಮಾರಿಗೆ ಹೋಗುತ್ತಿದ್ದಾಗ ಹಿಂದಿನಿಂದ ಲಾರಿಯ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದವನೇ ಹಿಂದಿನಿಂದ ಟಕ್ಕರಕೊಟ್ಟು ಅಪಘಾತ ಪಡಿಸಿದ್ದು ಅಪಘಾತದಿಂದ ಬಲಗಡೆ ಬಿದ್ದು ಮೋಟಾರ ಸೈಕಲ್ ಸಮೇತ ಗೀಚಿಕೊಂಡು ಹೋಗಿದ್ದು ಇರುತ್ತದೆ. ನಾವು ಕೂಡಲೇ ನಮ್ಮ ವಾಹನಗಳನ್ನು ರೋಡಿನ ಎಡಬಾಜು ನಿಲ್ಲಿಸಿ ಕೆಳಗೆ ಇಳಿದು ನೋಡಲು ನನ್ನ ಮಗನಿಗೆ ಹೊಟ್ಟೆಯ ಪೂರ್ತಿ ಬಾಗ, ಬಲಗಡೆಯ ತೊಡೆಯ ಬಾಗ ಪೂರ್ತಿ ಭಾರಿ ತೆರಚಿದಗಾಯವಾಗಿದ್ದು ಹಾಗೂ ಗುಪ್ತಾಂಗಕ್ಕೆ ಭಾರಿ ಒಳ ಪೆಟ್ಟಾದಂತೆ ಕಂಡು ಬಂದಿದ್ದು ನಂತರ ಲಾರಿಯ ನಂಬರ ನೋಡಲು RJ-13-G-8342 ಅಂತಾ ಇದ್ದು ಸದರಿ ಚಾಲಕನ ಹೆಸರು ವಿಚಾರಿಸಲು ತನ್ನ ರಣಜಿತಸಿಂಗ್ ತಂದೆ ಬಹದ್ದೂರಸಿಂಗ್ ವಯಾ 45 ವರ್ಷ ಜಾ : ಸಿಂಗ್ ಸಾ : ನೋನೆ ತಾ :ಜಿ : ತರನತಾರನ್  ರಾಜ್ಯ : ಪಂಜಾಬ ಅಂತಾ ಹೇಳಿದನು. ನಂತರ ವಣಗೇರಿ ಟೋಲನಾಕದ ಹೈವೆಯ ಅಂಬುಲೆನ್ಸ ಎನ್.ಹೆಚ್..ಐ ವಾಹನದಲ್ಲಿ ಚಿಕಿತ್ಸೆ ಕುರಿತು ನಾವೆಲ್ಲರೂ ಪ್ರಭುನನ್ನು ಹಾಕಿಕೊಂಡು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ನಂತರ ಮದ್ಯಾಹ್ನ 01-45 ಗಂಟೆಯ ಸುಮಾರಿಗೆ ಚಿಕಿತ್ಸೆ ಫಲಿಸದೇ ನನ್ನ ಮಗನು ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008