Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, February 18, 2018

1] ಮುನಿರಾಬಾದ ಪೊಲೀಸ್ ಠಾಣೆ  ಗುನ್ನೆ ನಂ. 28/2018 ಕಲಂ 279, 337, 304(ಎ) ಐ.ಪಿ.ಸಿ.ಮತ್ತು 187 ಐ.ಎಂ.ವಿ ಆಕ್ಟ
ದಿನಾಂಕ: 18-02-2018 ರಂದು ರಾತ್ರಿ 12-00 ಗಂಟೆ ಸುಮಾರಿಗೆ ಬೂದಗುಂಪಾ ಕ್ರಾಸನಲ್ಲಿ ರಸ್ತೆ ಅಪಗಾತವಾಗಿರುತ್ತದೆ ಎಂದು ಠಾಣೆಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ಅಲ್ಲಿ ಗಾಯಾಳು ಮಂಜಪ್ಪ ಇವರ ಹೇಳಿಕೆ ಪಡೆದಿದ್ದು ಸಾರಾಂಶವೆನೆಂದರೆ,ದಿನಾಂಕ 17-02-2018 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಪಿರ್ಯಾದಿ ಮಂಜಪ್ಪ ತಂದೆ ಬಾಲಪ್ಪ ಇವರು ಕೊಪ್ಪಳ –ಗಂಗಾವತಿ ರಸ್ತೆಯ ಮೇಲೆ ತಮ್ಮ ಮೋ.ಸೈ.ನಂ.ಕೆ.ಎ.37/ಯು.7384 ಹೊಲಕ್ಕೆ ಹೋಗುತ್ತಿರುವಾಗ ಅವರ ಸಂಬಂದಿಕರಾದ ಮಂಜಪ್ಪ ತಂದೆ ಬೀರಪ್ಪ ಇವರಿಗೆ ಮಾತನಾಡಿಸುತ್ತಾ ನಿಂತಿರುವಾಗ ಅದೆ ರಸ್ತೆಯ ಮೇಲೆ ನಡೆದುಕೊಂಡು ಮಹೇಶ ತಂದೆ ರಾಮಲಾಲ್ ಸಾ: ಉತ್ತರ ಪ್ರದೇಶ ಹಾ;ವ: ಬೂದಗುಂಪಾ ಕ್ರಾಸ್ ಇವರು ಹೋಗುತ್ತಿರುವಾಗ ಕೊಪ್ಪಳದ ಕಡೆಯಿಂದ ಯಾವುದೋ ಒಂದು ಲಾರಿಯ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮಹೇಶನಿಗೆ ಮತ್ತು ನಮಗೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದರಿಂದ ಮಹೇಶ ಇವನು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಪಿರ್ಯಾದುದಾರಿಗೆ ಮತ್ತು ಮಂಜಪ್ಪನಿಗೆ ಗಾಯ ಪೆಟ್ಟುಗಳಾಗಿರುತ್ತವೆ,ಮತ್ತು ಲಾರಿ ಚಾಲಕನು ಡಿಕ್ಕಿಪಡಿಸಿ ಲಾರಿಯನ್ನು ನಿಲ್ಲಿಸದೇ ಹೋಗಿರುತ್ತಾನೆ ಆದ್ದರಿಂದ ಲಾರಿಯ ನಂಬರ್ ಮತ್ತು ಚಾಲಕನ ವಿಳಾಸ ತಿಳಿದಿರುವದಿಲ್ಲಾ. ಎಂದು ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 28/2018 ಕಲಂ 279, 337, 304(ಎ) ಐ.ಪಿ.ಸಿ.ಮತ್ತು 187 ಐ.ಎಂ.ವಿ ಆಕ್ಟ ರಿತ್ಯ ಪ್ರಕರಣ ದಾಖಲಿಸಿಕೊಂಡಿರುತ್ತದೆ.
2] ಕೂಕನೂರು ಪೊಲೀಸ್ ಠಾಣೆ  ಗುನ್ನೆ ನಂ.  38/2018  ಕಲಂ: 32, 34, K.E. Act 
ದಿನಾಂಕ: 17-02-2018 ರಂದು ರಾತ್ರಿ 7:30 ಗಂಟೆ ಸುಮಾರಿಗೆ ಬಟಪನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಿಬ್ಬರೂ ಒಂದು  ಚೀಲದಲ್ಲಿ ಮದ್ಯದ ಟ್ರೆಟ್ರಾ ಪ್ಯಾಕಗಳನ್ನು ಇಟ್ಟುಕೊಂಡು ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತ ಮದ್ಯ ಮಾರಾಟ ಮಾಡುತಿದ್ದಾಗ ಪಿ.ಎಸ್.ಐ.ರವರು ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರಿಂದ  2531/-ರೂ. ಮೌಲ್ಯದ 90 M.L.HAYWARDS CHEERS WHISKY ಕಂಪನಿಯ ಒಟ್ಟು 90  ಮದ್ಯದ ಟೇಟ್ರಾ ಪ್ಯಾಕ್(ಪಾಕೇಟ್)ಗಳನ್ನು ಹಾಗೂ ಮದ್ಯ ಮಾರಾಟದ ನಗದು ಹಣ 200 /- ರೂ. ಗಳನ್ನು ಜಪ್ತ ಮಾಡಿಕೊಂಡು ಮದ್ಯ ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಆರೋಪಿತರು & ಮುದ್ದೆಮಾಲನ್ನು ಹಾಜರಪಡಿಸಿ ಆರೋಪಿತರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ದೂರು ನೀಡಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 38/2018  ಕಲಂ: 32, 34, K.E. Act  ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ  ಗುನ್ನೆ ನಂ. 32/2018  ಕಲಂ. 279, 304 (A) IPC  & 187 IMV Act.
ದಿನಾಂಕ:-18-02-2018 ರಂದು ಬೆಳಗಿನ ಜಾವ 00-25 ಗಂಟೆಗೆ ಪಿರ್ಯಾದಿದಾರರಾದ ದೇವೇಂದ್ರಗೌಡ ತಂದೆ ಭೀಮನಗೌಡ ಮಾಲೀಗೌಡ್ರ ವಯ 32 ವರ್ಷ ಜಾತಿ ಲಿಂಗಾಯತ ಉ. ಹೊಟೆಲ್ ಕೆಲಸ ಸಾ. ರಾಜೀವ್ ಗಾಂಧಿ ನಗರ ಕಾರಟಗಿ ತಾ. ಗಂಗಾವತಿ. ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಕೊಟ್ಟಿದ್ದು ಸದ್ರಿ ದೂರಿನ ಸಾರಾಂಶದಲ್ಲಿ ಪಿರ್ಯಾದಿದಾರರ ತಂಗಿಯ ಗಂಡನಾದ ವಿರೇಶ ತಂದೆ ಶಿವಪ್ಪ ಸೂಳೇಕಲ್ ವಯ 27 ವರ್ಷ ಈತನು  ದಿನಾಂಕ:17-02-2018 ರಂದು ರಾತ್ರಿ 7-00 ಗಂಟೆಯಿಂದ 7-30 ಗಂಟೆ ಅವಧಿಯಲ್ಲಿ ಕಾರಟಗಿ ಚಳ್ಳೂರು ರಸ್ತೆಯ ಮೇಲೆ ಕಾರಟಗಿಯ ಕಾಮಗುಂಡಮ್ಮ ಕ್ಯಾಂಪ್ ದ 31 ನೇ ಕೇನಾಲ್ ಹತ್ತಿರ ತನ್ನ ಕೆಲಸದ ನಿಮಿತ್ಯ ಹೋಗಿದ್ದಾಗ ಯಾವುದೋ ವಾಹನದ ಚಾಲಕನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ವಿರೇಶ ಈತನಿಗೆ ಠಕ್ಕರ್ ಮಾಡಿ ಅಪಘಾತಪಡಿಸಿದ್ದರಿಂದ ಆತನ ತಲೆಗೆ ಮತ್ತು ಬಲಗೈಗೆ ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಈ ಬಗ್ಗೆ ನಾನು ನನ್ನ ಅಳಿಯನ ತಾಯಿ ಮತ್ತು ನನ್ನ ತಂಗಿಗೆ ಹಾಗೂ ಊರಿನ ಹಿರಿಯರಿಗೆ ವಿಷಯ ತಿಳಿಸಿ ವಿರೇಶ ಈತನ ಶವವನ್ನು ಕಾರಟಗಿ ಸರಕಾರಿ ಆಸ್ಪತ್ರೆಯ ಶವಾಗಾರದ ಕೊಣೆಯಲ್ಲಿ ಹಾಕಿ ಈಗ ಬಂದು ದೂರು ಸಲ್ಲಿಸಿದ್ದುಸದರಿ  ನನ್ನ ಅಳಿಯನಿಗೆ ಠಕ್ಕರ್ ಕೊಟ್ಟು ಅಪಘಾತಪಡಿಸಿದ ಯಾವುದೋ ವಾಹನ ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008