Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, March 8, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 16/2015 ಕಲಂ. 279, 337  ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ. 07-03-2015 ರಂದು ರಾತ್ರಿ 9-30 ಗಂಟೆಗೆ ಫಿರ್ಯಾದಿದಾರರಾದ ಖಾಸಿಂಸಾಬ ತಂದೆ ಮಾರ್ದಾನಸಾಬ ಮುದ್ದಾಬಳ್ಳಿ ಸಾ. ಹೊಸಕನಾಪುರ ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ಫಿರ್ಯಾದಿಯನ್ನು ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ. 05-03-2015 ರಂದು ಫಿರ್ಯಾದಿ ಮತ್ತು ಅವರ ಸ್ನೇಹಿತ ಹುಸೇನಸಾಬ ಹೊಸಮನಿ ಇಬ್ಬರೂ ಕೆಲಸದ ನಿಮಿತ್ಯ ಮೋಟಾರ್ ಸೈಕಲ್ ನಂಬರ. KA-36/W-2799 ನೆದ್ದರಲ್ಲಿ ಕೊಪ್ಪಳಕ್ಕೆ ಬರುತ್ತಿರುವಾಗ ರಾತ್ರಿ 7-30 ಗಂಟೆಯ ಸುಮಾರಿಗೆ ಹುಸೇನಸಾಬ ಇತನು ಮೋಟಾರ್ ಸೈಕಲನ್ನು ಕೊಪ್ಪಳ ನಗರದ ಗದಗ-ಹೊಸಪೇಟೆ ಎನ್.ಹೆಚ್-63 ರಸ್ತೆಯ ಮೇಲೆ ಕುಟೀರ ಹೊಟೆಲ್ ಸಮೀಪ ತನ್ನ ಸೈಡಿನಲ್ಲಿ ಚಲಾಯಿಸಿಕೊಂಡು ಕೊಪ್ಪಳದ ಕಡೆಗೆ ಬರುತ್ತಿರುವಾಗ ಹಿಂದಿನಿಂದ ಕಾರ್ ನಂಬರ. KA-37/M-8562 ನೆದ್ದರ ಚಾಲಕ ಕಾರ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ್ ಸೈಕಲಗೆ  ಟಕ್ಕರಮಾಡಿ ಅಪಘಾತಮಾಡಿದ್ದರಿಂದ, ಫಿರ್ಯಾದಿಗೆ ಬಲಕಾಲ ಮೋಣಕಾಲಿಗೆ ಮತ್ತು ಎಡಗೈ ಮುಂಗೈಗೆ ಒಳಪೆಟ್ಟು ಹುಸೇನಸಾಬ ಇತನಿಗೆ ಎಡಗೈ ಮತ್ತು ಎಡಗಾಲಿಗೆ ತೆರಚಿದಗಾಯಗಳಾಗಿರುತ್ತವೆ ಅಂತಾ ಮುಂತಾಗಿದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.
2) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 32/2015 ಕಲಂ. 279, 337, 338 ಐ.ಪಿ.ಸಿ:
ದಿನಾಂಕ:07-03-2015 ರಂದು 9-30 ಪಿಎಂಕ್ಕೆ ಬನ್ನಿಕೊಪ್ಪದಿಂದ ಫೋನ್ ಮುಖಾಂತರ ರಸ್ತೆ ಅಪಘಾತದಲ್ಲಿ ಇಬ್ಬರೂ ಗಾಯಗೊಂಡಿದ್ದು, ಕೂಡಲೇ ಸ್ಥಳಕ್ಕೆ ಬರಲು ತಿಳಿಸಿದ ಮೇರೆಗೆ ನಾನು ಕೂಡಲೇ ಠಾಣೆಯಿಂದ ಹೊರಟು ಸ್ಥಳಕ್ಕೆ ಭೇಟಿಕೊಟ್ಟು ಗಾಯಾಳುಗಳಿಗೆ ಅವಲೋಕಿಸಿ, ಅವರು ಗಾಯಗಳ ನೋವಿನಲ್ಲಿ ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇರದ ಕಾರಣ, ಸ್ಥಳದಲ್ಲಿ ಹಾಜರಿದ್ದ ಪ್ರತ್ಯಕ್ಷ ಸಾಕ್ಷಿದಾರರಾದ ಹನುಮಂತಗೌಡ ಆದಾಪೂರ ಸಾ:ಬನ್ನಿಕೊಪ್ಪ ಇವರ ಹೇಳಿಕೆ ದೂರನ್ನು 10-15 ಪಿಎಂದಿಂದ 11-15 ಪಿಎಂದವರೆಗೆ ಸ್ಥಳದಲ್ಲಿಯೇ ಪಡೆದುಕೊಂಡಿದ್ದು, ಸಾರಾಂಶವೇನೆಂದರೆ, ದಿನಾಂಕ:07-03-2015 ರಂದು 9-15 ಪಿಎಂಕ್ಕೆ ಆರೋಪಿತ ಶಿವನೌಡ ಗೂಳಪ್ಪಗೌಡರ ಸಾ:ಬನ್ನಿಕೊಪ್ಪ ಇವನು ಮೋ.ಸೈ. ನಂ:ಕೆಎ-37 ಎಲ್-1691 ರಲ್ಲಿ ಹಿಂದೆ ಬನ್ನಿಕೊಪ್ಪ ಗ್ರಾಮದ ಬಸವರಾಜ ಮತ್ತೂರ ಇವನಿಗೆ ಕೂಡ್ರಿಸಿಕೊಂಡು ಬುತ್ತಿ ತೆಗೆದುಕೊಂಡು ಹೋಗಲು ಮನೆಗೆ ಗದಗ-ಕೊಪ್ಪಳ ಎನ್.ಹೆಚ್. 63 ರಸ್ತೆಯ ಮೇಲೆ ಬರುವಾಗ ಆರೋಪಿತನು ಸದರಿ ಮೋ.ಸೈ.ನ್ನು ನೇರವಾದ ಮತ್ತು ಇಳಿಜಾರಾದ ರಸ್ತೆಯಲ್ಲಿ ತಾನು ನಡೆಸುತ್ತಿದ್ದ ಬೈಕ್ ನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ಬನ್ನಿಕೊಪ್ಪ ಬಸ್ ನಿಲ್ದಾಣದ ಹತ್ತಿರ ಹಾಕಿರುವ ರೋಡ್ ಹಂಪ್ಸ್ ಗಳನ್ನು ನೋಡಿ ಬೈಕಿನ ವೇಗವನ್ನು ಕಡಿಮೆ ಮಾಡದೇ ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಸದರಿ ಬೈಕ್ ಸ್ಕಿಡ್ ಆಗಿ ಆರೋಪಿತನು ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದಾಗ ಬೈಕ್ ಹಿಂದೆ ಬಸರಾಜ ಇವನಿಗೆ ತಲೆಗೆ ಮತ್ತುಮುಖಕ್ಕೆ ಹಾಗೂ ಕೈಗಳಿಗೆ ಹಾಗೂ ಆರೋಪಿತನಿಗೆ ಎಡಗೈ ಮತ್ತು ಎಡಗಾಲಿಗೆ ಒಳಪೆಟ್ಟು ಗಾಯಗಳಾಗಿದ್ದು, ಆಗ, ಪಿರ್ಯಾದಿದಾರರು ಮತ್ತು ಬನ್ನಿಕೊಪ್ಪದ ಿತರರು ನೋಡಿ, ಅವರಿಗೆ ಉಪಚರಿಸಿ, ನಂತರ, 108 ವಾಹನಕ್ಕೆ ಫೋನ್ ಮಾಡಿ ಕರೆಯಿಸಿ, ಅದರಲ್ಲಿ ಗಾಯಾಳುಗಳಿಗೆ ಹಾಕಿ ಚಿಕಿತ್ಸೆ ಕುರಿತು ಗದಗ ಆಸ್ಪತ್ರೆಗೆ ಕಳಹಿಸಿಕೊಟ್ಟಿರುತ್ತೇವೆ. ಕಾರಣ, ಬೈಕ್ ಸವಾರನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ದಿನಾಂಕ:08-03-2015 ರಂದು 00-10 ಗಂಟೆಗೆ ಠಾಣೆಗೆ ಬಂದು ಕುಕನೂರ ಪೊಲೀಸ ಠಾಣಾ ಗುನ್ನೆ ನಂ:32/15 ಕಲಂ;279,337,338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 38/2015 ಕಲಂ. 279, 338 ಐ.ಪಿ.ಸಿ:
ಇಂದು  ದಿನಾಂಕ : 08-03-2015 ರಂದು 00=30  ಗಂಟೆಗೆ  ಫಿರ್ಯಾದಿದಾರರಾದ ಶ್ರೀ  ಬಸವರಾಜ ತಂದಿ ಶಂಕ್ರಪ್ಪ ಬಾವಿ ವಯಾ- 32 ವರ್ಷ ಜಾ- ಲಿಂಗಾಯತ ಉ- ಒಕ್ಕಲುತನ ಸಾ- ಸಿದ್ದಾಪೂರ ತಾ- ಗಂಗಾವತಿ ಜಿ- ಕೊಪ್ಪಳ ರವರು ಕಾರಟಗಿ ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ,  ದಿನಾಂಕ : 7-03-2015 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ  ಎಸ್. ಜಡೇಶಗೌಡ  ತಂದಿ ಸೋಮರಡ್ಡಿಗೌಡ ವಯಾ- 32 ವರ್ಷ ಜಾ- ಲಿಂಗಾಯತ   ಮೊಟಾರ್ ಸೈಕಲ್ ನಂ- ಕೆ.ಎ-34 / ಇ.ಬಿ-4956 ನೇದ್ದರ ಚಾಲಕ ಸಾ- ಉತ್ತನೂರ ತಾ- ಶಿರಗುಪ್ಪಾ ಜಿ- ಬಳ್ಳಾರಿ ಇತನು ತನ್ನ ಮೊಟಾರ್ ಸೈಕಲ್ಲನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ಕಾರಟಗಿ ಎ.ಪಿ.ಎಮ್.ಸಿ. ಹತ್ತಿರ ನಡೆಸಿಕೊಂಡು ಹೊಗಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿ ನಂ- ಕೆ.ಎ- 16 / ಎ- 7277 ನೇದ್ದರ  ಹಿಂದುಗಡೆಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿ ಮೊಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದರಿಂದ ಎಸ್. ಜಡೇಶಗೌಡ ಇತನಿಗೆ ತಲೆಗೆ ಹಾಗೂ ಎಡಗೈಗೆ ರಕ್ತಘಾಯ ಮತ್ತು ಭಾರೀ ಒಳಪೆಟ್ಟಾಗಿದ್ದು ಇರುತ್ತದೆ.  ಈ ಘಟನೆಗೆ  ಮೊಟಾರ್ ಸೈಕಲ್ ಚಾಲಕ ಎಸ್. ಜಡೇಶಗೌಡ ಇತನೇ ಕಾರಣನಾಗಿರುತ್ತಾನೆ  ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4)  ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 27/2015 ಕಲಂ. 307, 504 ಐ.ಪಿ.ಸಿ :  
¢£ÁAPÀ: 08-03-2015 gÀAzÀÄ ¨É¼ÀV£À eÁªÀ 01-00 UÀAmÉUÉ ¦ügÁå¢ü ¥ÁAqÀ¥Àà §rUÉÃgÀ ¸Á: ºÉÊzÀgÀ£ÀUÀgÀ EªÀgÀÄ oÁuÉUÉ ºÁdgÁV PÀ£ÀßqÀzÀ°è §gÉzÀ MAzÀÄ ¦ügÁå¢ü ºÁdgÀÄ ¥Àr¹zÀÄÝ CzÀgÀ ¸ÁgÁA±ÀªÉ£ÀAzÀgÉ, FUÉÎ ¸ÀĪÀiÁgÀÄ 4-5 ªÀµÀðUÀ¼À »AzÉ DgÉÆæ ¤AUÀ¥Àà @ ¤AUÀ ¨ÉÆøÉè ºÁUÀÆ DvÀ£À ºÉAqÀwAiÀiÁzÀ UÁAiÀiÁ¼ÀÄ VÃvÁ ¨ÉÆøÉè ªÀAiÀÄ: 28 ªÀµÀð EªÀgÀÄ ¦ügÁå¢üzÁgÀgÀ ªÀÄ£ÉAiÀÄ ¥ÀPÀÌ ¦ügÁå¢üzÁgÀgÀ eÁUÉAiÀÄ°è ¸ÉÃqï ºÁQPÉÆAqÀÄ ºÉÆ®ªÀÄ£É PÉ®¸À ªÀiÁrPÉÆAqÀÄ ªÁ¸ÀªÁVzÀÄÝ EgÀÄvÀÛzÉ. ¢£ÁAPÀ: 07-03-2015 gÀAzÀÄ gÁwæ 9-30 UÀAmÉUÉ ¦ügÁå¢üzÁgÀgÀÄ vÀªÀÄä ªÀÄ£ÉAiÀÄ ªÀÄÄAzÉ PÀĽvÀÄPÉÆArzÁÝUÀ DgÉÆævÀ£ÀÄ PÉÊAiÀÄ°è PÉÆqÀ°AiÀÄ£ÀÄß »rzÀÄPÉÆAqÀÄ §AzÀÄ ¦ügÁå¢üzÁgÀ¤UÉ ``K¯ÉÊ ¸ÀƼÉà ªÀÄUÀ£Éà ¥ÁAqÀå £À£Àß ¥ÉÆÃ£ï £ÀA§gÀ vÀÄUÉÆÃAzÀÄ ¥ÉưøÀjUÉ PÉÆqÀÄwÛÃ, ¤Ã£ÀÄ £ÀA§gÀ PÉÆnÖzÀÝjAzÀ ¥ÉưøÀÄæ £À£ÀUÉ §AzÀÄ »rzÀÄPÉÆAqÀÄ ºÉÆÃUÀÄvÁÛgÉ ºÁUÁV £Á£ÀÄ ¤£ÀߣÉßà ¸Á¬Ä¹©lÖgÉà £À£Àß £ÀA§gï AiÀiÁgÀÄ ¥ÉưøÀjUÉ PÉÆqÀĪÀ¢®è ¤£ÀߣÀÄß ¸Á¬Ä¹ ©qÀÄvÉÛÃ£É CAvÁ CAzÀªÀ£Éà PÉÊAiÀÄ°èzÀÝ PÉÆqÀ°¬ÄAzÀ ¦ügÁå¢üzÁgÀ¤UÉ ºÉÆqÉAiÀÄ®Ä ºÉÆÃzÁUÀ ¦ügÁå¢üzÁgÀ£ÀÄ vÀ¦à¹PÉÆArzÀÄÝ D PÉÆqÀ°AiÀÄ KlÄ C°èAiÉÄà EzÀÝ DgÉÆævÀ£À ºÉAqÀw VÃvÁ EªÀ¼À vÀ¯ÉAiÀÄ »A¢£À ¨sÁUÀPÉÌ ©zÀÄÝ ¨sÁj ¸ÀégÀÆ¥ÀzÀ gÀPÀÛUÁAiÀĪÁVzÀÄÝ EgÀÄvÀÛzÉ. PÁgÀt vÀ£ÀUÉ PÉÆqÀ°¬ÄAzÀ ºÉÆqÉzÀÄ PÉÆ¯É ªÀiÁqÀ®Ä ¥ÀæAiÀÄwß¹zÀ DgÉÆæ ¤AUÀ¥Àà @ ¤AUÀ ¨ÉÆøÉè EvÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV EzÀÝ ¦ügÁå¢üAiÀÄ ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA. 27/2015 PÀ®A. 307, 504 L.¦.¹. CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.
5) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 26/2015 ಕಲಂ. 379 ಐ.ಪಿ.ಸಿ :

ದಿನಾಂಕ 07-03-2015 ರಂದು ಮದ್ಯಾಹ್ನ 3-45 ಗಂಟೆಗೆ ಪಿರ್ಯಾದಿದಾರರಾದ ಫಕೀರಪ್ಪ ತಂದೆ ದೂಳಪ್ಪ ಸುಂಕದ ವಯ: 50 ಜಾ: ಕುರುಬರ : ಹೊಟೇಲ ಕೆಲಸ ಸಾ: ತೆಗ್ಗಿನ   ಓಣಿ ಕುಷ್ಟಗಿ  ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ಪಿರ್ಯಾದಿ ಸಲ್ಲಿಸಿದ್ದರ ಸಾರಾಂಶ ವೆನೆಂದರೆ ತಮ್ಮದು ಒಂದು ಹೊರೋ  ಸ್ಪ್ಲೆಂಡರ್ ಪ್ಲಸ್ ಕಂಪನಿಯ ಮೋ.ಸೈ ನಂ ಕೆಎ 37/ಎಕ್ಸ- 0246 ಮತ್ತು ಚೆಸ್ಸಿ ನಂ  ಎಂಬಿಎಲ್ ಹೆಚ್ ಎ10ಎಎಂಡಿಹೆಚ್  ಎಂ69145 ಮತ್ತು ಇಂಜಿನ ನಂ ಹೆಚ್ ಎ10ಇಜೆಡಿಹೆಚ್ ಎಂ 13843 ಇದ್ದು ಇದರ ಅಂ.ಕಿ 20,000=00 ರೂ ಬೆಲೆ ಬಾಳುವದು ಇದ್ದು ಇದನ್ನು ದಿನಾಲು ತಮ್ಮ ಮನೆಯ ಮುಂದೆ ನಿಲ್ಲಿಸಿ ಮಲಗುತ್ತಿದ್ದ ಅದರಂತೆ ದಿನಾಂಕ 18-10-2014 ರಂದು ರಾತ್ರಿ 10-00 ಗಂಟೆಗೆ ಮನೆಯ ಮುಂದೆ ನಿಲ್ಲಿಸಿ ಮಲಗಿದ್ದು ನಂತರ ಮರು ದಿವಸ ದಿನಾಂಕ 19-10-2014 ರಂದು ಬೆಳಿಗ್ಗೆ 6-00 ಗಂಟೆಗೆ ಎದ್ದು ನೋಡಿದಾಗ ಮನೆಯ ಮುಂದೆ ನಿಲ್ಲಿಸಿದ ತಮ್ಮ ಮೋ.ಸೈ ಇದ್ದಿರಲಿಲ್ಲಾ ನಂತರ ತಾನು ಎಲ್ಲಾ ಕಡಗೆ ಹುಡುಕಾಡಿ ಈಗ ತಡವಾಗಿ ಬಂದು ಪಿರ್ಯಾದಿ ಸಲ್ಲಿಸಿದ್ದು ಕಾರಣ ಸದರಿ ನನ್ನ ಮೋ.ಸೈ ನಂ ಕೆಎ 37/ಎಕ್ಸ್ 0246 ನೇದ್ದು ಅಂದಾಜು ಕಿಮ್ಮತ್ತು 20,000=00 ರೂ ಬೆಲೆ ಬಾಳುವದನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದನ್ನು  ಹುಡುಕಿ ಕೊಡಬೇಕು ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 26/2015 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.

0 comments:

 
Will Smith Visitors
Since 01/02/2008