Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, July 10, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 210/2015  ಕಲಂ 87 Karnataka Police Act.
ದಿನಾಂಕ: 09-07-2015 ರಂದು ಸಂಜೆ 6:00 ಗಂಟೆಗೆ ಶ್ರೀ ಪ್ರಭಾಕರ ಎಸ್. ರ್ಮಟ್ಟಿ ಸಿಪಿಐ ಗಂಗಾವತಿ ಗ್ರಾಮೀಣ ವೃತ್ತ ರವರು ಠಾಣೆಗೆ ಹಾಜರಾಗಿ ಮೂಲ ಪಂಚನಾಮೆ, 10 ಜನ ಆರೋಪಿತರೊಂದಿಗೆ ವರದಿಯನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ:- 09-07-2015 ರಂದು ಮಧ್ಯಾಹ್ನ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಆರಾಳ ಗ್ರಾಮ ಸೀಮಾ ಹನುಮಂತ ದೇವರ ಗುಡಿ ಹಿಂಭಾಗದ ಗುಡ್ಡದಲ್ಲಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಹಾರ್ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರನ್ನು ಮತ್ತು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆ.ಎ-37/ ಜಿ-336 ಮತ್ತು ವೈಯಕ್ತಿಕ ಮೋಟಾರ್ ಸೈಕಲಗಳಲ್ಲಿ ಠಾಣೆಯಿಂದ ಸಾಯಂಕಾಲ 4:00 ಗಂಟೆಗೆ ಹೊರಟು ಆರಾಳ ಗ್ರಾಮ ಸೀಮಾ ಮಲಕನಮರಡಿ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೊರಟು ನೋಡಲಾಗಿ ಅಲ್ಲಿ ಹನುಮಂತ ದೇವರ ಗುಡಿ ಹಿಂಭಾಗದ ಗುಡ್ಡದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಾಯಂಕಾಲ 4:30 ಗಂಟೆಯಾಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ 10 ಜನರು ಸಿಕ್ಕಿಬಿದ್ದಿದ್ದು ಸಿಕ್ಕವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ವಿರೇಶ ತಂದೆ ಚಂದ್ರಶೇಖರ ವಯಸ್ಸು: 40 ವರ್ಷ ಜಾತಿ ಲಿಂಗಾಯತ, ಉ: ಒಕ್ಕಲತನ ಸಾ: ಆರಾಳ (2) ಖಾಜಾಹುಸೇನ ತಂದೆ ದೊರೆಸಾಬ ವಯಸ್ಸು: 40 ವರ್ಷ ಜಾತಿ : ಮುಸ್ಲಿಂ, ಉ: ಕೂಲಿಕೆಲಸ ಸಾ: ಆರಾಳ (3) ಸಿದ್ದನಗೌಡ ತಂದೆ ವೀರನಗೌಡ ವಯಸ್ಸು: 35 ವರ್ಷ ಜಾತಿ: ಲಿಂಗಾಯತ, ಉ: ಒಕ್ಕಲತನ ಸಾ: ಆರಾಳ (4) ಭೀಮಣ್ಣ ತಂದೆ ನಾಗಲಿಂಗಪ್ಪ ವಯಸ್ಸು: 35 ವರ್ಷ ಜಾತಿ: ಈಡಿಗ, ಉ: ಒಕ್ಕಲತನ ಸಾ: ಆರಾಳ (5) ಗೋವಿಂದ ತಂದೆ ಹನುಮಂತಪ್ಪ ಭೋವಿ ವಯಸ್ಸು: 30 ವರ್ಷ ಜಾತಿ: ಭೋವಿ, ಉ: ಕೂಲಿಕೆಲಸ ಸಾ: ಆರಾಳ (6) ಬಸವರಾಜ ತಂದೆ ಚೆನ್ನಪ್ಪ ವಯಸ್ಸು: 35 ವರ್ಷ ಜಾತಿ: ಲಿಂಗಾಯತ, ಉ: ಒಕ್ಕಲತನ ಸಾ: ಆರಾಳ (7) ಸಿದ್ದಪ್ಪ ತಂದೆ ಸಣ್ಣ ದೊಡ್ಡಪ್ಪ ವಯಸ್ಸು: 44 ವರ್ಷ ಜಾತಿ: ಲಿಂಗಾಯತ, ಉ: ಒಕ್ಕಲತನ ಸಾ: ಆರಾಳ (8) ವಿರೇಶ ತಂದೆ ಹನುಮಂತಪ್ಪ ಭೋವಿ ವಯಸ್ಸು: 30 ವರ್ಷ ಜಾತಿ: ಭೋವಿ, ಉ: ಕೂಲಿಕೆಲಸ ಸಾ: ಆರಾಳ (9) ತಿಪ್ಪನಗೌಡ ತಂದೆ ಪಂಪನಗೌಡ ವಯಸ್ಸು: 65 ವರ್ಷ ಜಾತಿ: ಲಿಂಗಾಯತ, ಉ: ಒಕ್ಕಲತನ ಸಾ: ಆರಾಳ (10) ಫಕೀರಪ್ಪ ತಂದೆ ದೊಡ್ಡಬಸಪ್ಪ ವಯಸ್ಸು: 38 ವರ್ಷ ಜಾತಿ: ನಾಯಕ, ಉ: ಕೂಲಿಕೆಲಸ ಸಾ: ಆರಾಳ ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 3,120/- ಗಳು ಮತ್ತು 52 ಇಸ್ಪೇಟ್ ಎಲೆಗಳು ಮತ್ತು ಒಂದು ಪ್ಲಾಸ್ಟಿಕ್ ಬರಕಾ ಜಪ್ತು ಮಾಡಲಾಯಿತು. ಈ ಬಗ್ಗೆ  ಸಾಯಂಕಾಲ 4:30 ರಿಂದ 5:30 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ಸಂಜೆ 6:00 ಗಂಟೆಗೆ ಠಾಣೆಗೆ ವಾಪಸ್ ಬಂದು ವರದಿಯನ್ನು ತಯಾರಿಸಿ ಸದರಿ ಆರೋಪಿತರ ವಿರುದ್ಧ ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇದೆ ಅಂತಾ ಇದ್ದ ವರದಿ ಆಧಾರದ ಮೇಲಿಂದ ಪ್ರಕರಣವು ಅಸಂಜ್ಞಾ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಲಯದ ಅನುಮತಿ ಪಡೆದುಕೊಂಡು ಸಾಯಂಕಾಲ 6:30 ಗಂಟೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 210/2015 ಕಲಂ 87 ಕ.ಪೋ. ಕಾಯ್ದೆ ಆಡಿ ಪ್ರಕರಣವನ್ನು ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 146/2015 ಕಲಂ. ಕಲಂ 78(3) Karnataka Police Act.
ದಿನಾಂಕ 09-07-2015 ರಂದು ಪಿರ್ಯಾದುದಾರರು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಮಾಹಿತಿ ಇದ್ದ ಪ್ರಕಾರ ಬಸಾಪುರ ಗ್ರಾಮದಲ್ಲಿ ಹನಮಂತ ದೇವರ ಗುಡಿ ಹತ್ತಿರ ಹೋಗಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನನ್ನು ಪಂಚರೊಂದಿಗೆ ದಾಳಿಮಾಡಿ ಹಿಡಿದು ಆತನಿಂದ ಒಂದು ಬಾಲ ಪೆನ್ನು ,ಒಂದು ಮಟಕಾ ಪಟ್ಟಿ ಮತ್ತು ಜೂಜಾಟದ ನಗದು ಹಣ 1100-00 ರೂ ಗಳನ್ನು ಪಂಚರ ಸಮಕ್ಷಮ ಜಪ್ತು ಮಾಡಿದ್ದು ಸದರಿ ಜಪ್ತು ಮಾಡಿದ ಮುದ್ದೆಮಾಲು, ಆರೋಪಿತನಿಗೆ ಮತ್ತು ಮೂಲ ಪಂಚನಾಮೆಯನ್ನು ಹಾಜರು ಪಡಿಸಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
3) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 70/2015 ಕಲಂ. ಕಲಂ 78(3) Karnataka Police Act.
ದಿನಾಂಕ 09-07-2015 ರಂದು ಬೆಳಿಗ್ಗೆ 11-45 ಗಂಟೆಗೆ ಶ್ರೀ ಮತಿ ನಾಗರತ್ನ ಆರ್. ಪಿ.ಎಸ್.ಐ  ತಾವರಗೇರಾ ರವರು ಠಾಣೆಗೆ ಹಾಜರಾಗಿ ಗಣಕೀಕೃತ ವರದಿ ಮತ್ತು ಒಬ್ಬ ಆರೋಪಿ ಹಾಗೂ ಮುದ್ದೆಮಾಲನ್ನು ತಂದು ಹಾಜರುಪಡಿಸಿ ಇಂದು ದಿನಾಂಕ: 09-07-2015 ರಂದು ಬೆಳಿಗ್ಗೆ 10-00 ಗಂಟೆಗೆ ಠಾಣೆಯಲ್ಲಿದ್ದಾಗ ಪೋನ್ ಮುಖಾಂತರ ಮಾಹಿತಿ ಬಂದಿದ್ದು ತಾವರಗೇರಾ ಗ್ರಾಮದ ಕರಿಈರಣ್ಣ ಗುಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತವಾದ ಬಾತ್ಮಿ ಬಂದಿದ್ದು, ಸಿಬ್ಬಂದಿಯವರಾದ ಶ್ರೀ.ಮಂಜುನಾಥ ಪಿ.ಸಿ-30, ಶ್ರೀ.ತಿಮ್ಮಣ್ಣ ಪುಜಾರ ಪಿ.ಸಿ-179,ಶ್ರೀ.ವಿಜಯಕುಮಾರ ಪಿ.ಸಿ-32,ಶ್ರೀ.ಶಶಿಧರ ಎ.ಪಿ.ಸಿ-74 ರವರು ಠಾಣೆಯಲ್ಲಿ ಹಾಜರ ಇದ್ದು, ಇವರಲ್ಲಿ ಶ್ರೀ.ಮಂಜುನಾಥ ಪಿ.ಸಿ-30 ರವರಿಗೆ ಪಂಚರನ್ನು ಕರೆದುಕೊಂಡು ಬಾ ಅಂತಾ ಆದೇಶಿಸಿದ ಪ್ರಕಾರ ಸದರಿಯವರು ಪಂಚರನ್ನು ಕರೆದುಕೊಂಡು ಬಂದಿದ್ದು, ಪಂಚರಿಗೆ ಮತ್ತು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಿಗೆ ಬಾತ್ಮಿ ಬಂದ ವಿಷಯ ತಿಳಿಸಿ, ಪಂಚರನ್ನು ಹಾಗೂ ಸಿಬ್ಬಂದಿಯವರನ್ನು ಠಾಣೆಯ ಸರಕಾರಿ ಜೀಪ್ ನಂ-ಕೆ.ಎ.-37/ಜಿ-337 ನೇದ್ದರಲ್ಲಿ ಹೊರಟು ತಾವರಗೇರಾ  ಗ್ರಾಮದ ಬನಶಂಕರಿ ಮೆಡಿಕಲ್ಸ್ ಹತ್ತಿರ ಜೀಪನ್ನು ನಿಲ್ಲಿಸಿ, ನಡೆದುಕೊಂಡು ಹೋಗಿ ನೋಡಲಾಗಿ ಕರಿಈರಣ್ಣ ಗುಡಿಯ ಹತ್ತಿರ ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರ್ಗಳನ್ನು ಬರುದುಕೊಡುತ್ತಿದ್ದು, ಮಟ್ಕಾ ನಂಬರ್ ಬಂದಲ್ಲಿ ಒಂದು ರೂಪಾಯಿಗೆ 80-00 ರೂಪಾಯಿ ಕೊಡುತ್ತೆನೆ ಅಂತಾ ಕೂಗೂತ್ತಾ ಮಟ್ಕಾ ನಂಬರ್ಗಳನ್ನು ಬರೆದುಕೊಳ್ಳುತ್ತಿರುವ ಕಾಲಕ್ಕೆ ನಾನು ಹಾಗೂ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ಮುಂಜಾನೆ 10-30 ಗಂಟೆಗೆ ದಾಳಿ ಮಾಡಲು ಮಟ್ಕಾ ನಂಬರ್ ಬರೆಸುತ್ತಿದ್ದವರು ಓಡಿ ಹೋಗಿದ್ದು, ಮಟ್ಕಾ ನಂಬರ್ಗಳನ್ನು ಬರದುಕೊಡುತ್ತಿದ್ದನು ಸಿಕ್ಕಿ ಬಿದ್ದಿದ್ದು, ಸಿಕ್ಕಿ ಬಿದ್ದವನಿಗೆ ವಿಚಾರಿಸಲು ಆತನು ತನ್ನ ಹೆಸರು ಪ್ರಾಣೇಶರಾವ್ ತಂದೆ ಹನುಮಂತರಾವ್ ದೇಸಾಯಿ, ವಯಾ: 32 ವರ್ಷ, ಜಾತಿ: ಬ್ರಾಹ್ಮಣ, ಊ: ವ್ಯಾಪಾರ ಸಾ: ತಾವರಗೇರಾ  ಅಂತಾ ತಿಳಿಸಿದ್ದು, ಅವನ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ ಒಂದು ಮಟ್ಕಾ ನಂಬರ್ ಬರೆದ ಚೀಟಿ, ಒಂದು ಬಾಲ್ ಪೆನ್ನು, ಹಾಗೂ ಜೂಜಾಟದ ನಗದು ಹಣ 920=00 ರೂ. ಗಳು ಸಿಕ್ಕಿದ್ದು,  ಸದರಿಯವನ ಹತ್ತಿರ ಸಿಕ್ಕ ವಸ್ತುಗಳಾದ ಒಂದು ಮಟ್ಕಾ ಚೀಟಿ, ಒಂದು ಬಾಲ್ ಪೆನ್ನು, ಹಾಗೂ ಜೂಜಾಟದ ನಗದು ಹಣ ರೂ.920-00 ಗಳನ್ನು ಪಂಚರ ಸಮಕ್ಷಮದಲ್ಲಿ ವಿವರವಾದ ಪಂಚನಾಮೆ ಮೂಲಕ ಜಪ್ತ ಮಾಡಿಕೊಂಡಿದ್ದು, ನಂತರ ಸಿಕ್ಕಿ ಬಿದ್ದ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡಿದ್ದು ಇರುತ್ತದೆ .ನಂತರ ಸಿಕ್ಕಿ ಬಿದ್ದ ಆರೋಪಿತನಿಗೆ ಮಟ್ಕಾ ಪಟ್ಟಿಯನ್ನು ಮುಂದೆ ಯಾರಿಗೆ ಕೊಡುತ್ತಿ? ಎಂಬ ಬಗ್ಗೆ ವಿಚಾರಿಸಲು, ಸದರಿ ಆರೋಪಿತನು ದಶರಥಸಿಂಗ್ ತಂದೆ ಶಾಮಸಿಂಗ್ ರಜಪುತ ಸಾ:ತಾವರಗೇರಾ ಎಂಬಾತನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಪಂಚನಾಮೆ ಮೂಲಕ ಜಪ್ತಿ ಮಾಡಿದ ವಸ್ತು ಮತ್ತು ಪಂಚನಾಮೆಯೊಂದಿಗೆ, ಸಿಕ್ಕಿ ಬಿದ್ದ ಆರೋಪಿತನನ್ನು ಕರೆದುಕೊಂಡು ವಾಪಸ್ ಠಾಣೆಗೆ ಮುಂಜಾನೆ 11-45 ಗಂಟೆಗೆ ಬಂದು ದೂರು ನೀಡಿದ್ದು, ಸಿಕ್ಕಿಬಿದ್ದ ಆರೋಪಿತನ ವಿರುದ್ದ ಹಾಗೂ ಮಟ್ಕಾ ಪಟ್ಟಿಯನ್ನು ತೆಗೆದುಕೊಳ್ಳುವ ತಾವರಗೇರಾದ ದಶರಥಸಿಂಗ್ ರಜಪೂತ ಈತನ ವಿರುದ್ದ ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 70/2015 ಕಲಂ: 78 (3)  ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
4) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 145/2015 ಕಲಂ. ಕಲಂ 279, 304(ಎ) ಐ.ಪಿ.ಸಿ:


ದಿನಾಂಕ. 08-07-2015 ರಂದು 11-30 ಪಿ.ಎಂಕ್ಕೆ ಫಿಯರ್ಾದಿದಾರರ ಮೊಮ್ಮಗ ಶ್ರೀಕಾಂತ ಈತನು ಶ್ರೀಕೃಷ್ಣದೇವರಾಯ ಹ್ಯಾಚರಿಚ್ ಕೋಳಿ ಪಾರಂದಲ್ಲಿ ಕೆಲಸಕ್ಕೆ ಹೋದಾಗ ಕೋಳಿ ಪಾರ್ಮದಲ್ಲಿ ಸತ್ತ ಕೋಳಿಗಳನ್ನು ಟ್ರ್ಯಾಕ್ಟರ ನಂ. ಕೆ..7/5760 ಟ್ರೇಲರ ನಂ. ಎಂ.ವೈಆರ್.6987 ನೇದ್ದರಲ್ಲಿ ತೆಗೆದುಕೊಂಡು ಹೋಗಿ ಗುಡ್ಡದಲ್ಲಿ ಒಗೆದು ವಾಪಸ ಬರುವಾಗ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ಅತಿವೇಗವಾಗಿ ಹಾಗೂ ಅಲಕ್ಷತದನಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ತಗ್ಗಿನಲ್ಲಿ ಚಲಾಯಿಸಿದ್ದರಿಂದ ಟ್ರ್ಯಾಕ್ಟರ ಟ್ರೇಲರದಲ್ಲಿ ಹಿಂದೆ ನಿಂತಿದ್ದ ಶ್ರೀಕಾಂತ ಈತನು ಪುಟಿದು ತಲೆ ಕೆಳಗಾಗಿ ಬಿದ್ದು ತಲೆಗೆ ಭಾರಿ ಒಳೆಪೆಟ್ಟು ಬಿದ್ದು ಕಿವಿಯಿಂದ ಮೂಗಿನಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಫಿಯರ್ಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008