ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಠಾಣೆ ಗುನ್ನೆ
ನಂ. 191/2015 ಕಲಂ 78(3)
Karnataka Police Act.
ದಿನಾಂಕ: 20-08-2015 ರಂದು ರಾತ್ರಿ 8-30 ಗಂಟೆಗೆ ಶ್ರೀ ರಾಮಣ್ಣ ನಾಯ್ಕ್ ಪಿ.ಎಸ್.ಐ ಅಪರಾಧ ವಿಭಾಗ ನಗರ ಪೊಲೀಸ್ ಠಾಣೆ ಗಂಗಾವತಿ. ಇವರು ಒಬ್ಬ ಆರೋಪಿತನೊಂದಿಗೆ ಮೂಲ ಪಂಚನಾಮೆ, ಮುದ್ದೆಮಾಲು ಹಾಗೂ ವರದಿಯನ್ನು ಸಲ್ಲಿಸಿದ್ದು ಸದರಿ ವರದಿಯ
ಸಾರಂಶವೇನೆಂದರೆ, ದಿನಾಂಕ 20-08-2015 ರಂದು 19-00 ಗಂಟೆಗೆ ಆರೋಪಿತನಾದ (01) ಹುಸೇನ್ ತಂದೆ
ಅಲಿಸಾಬ್ ಮತ್ತು (02) ಶಾಮೀದ್ ಇವರು ಗಂಗಾವತಿ ನಗರದ ಬಸವಣ್ಣ ಸರ್ಕಲ್ ದ ಕಾಳಮ್ಮ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರನ್ನು
ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ತನ್ನ ಮೋಬೈಲ್ ದಲ್ಲಿ ಮೆಸೇಜ್
ಮುಖಾಂತರ ಮಟಕಾ ಜೂಜಾಟವನ್ನು ಆಡುತ್ತಿರುವಾಗ ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿ ಹುಸೇನ್ ಇವರಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 720-00. (02) ಒಂದು ನೋಕಿಯಾ ಕಂಪನಿಯ ಮೊಬೈಲ್ ದೊರೆತಿರುತ್ತದೆ. ಸದರಿ ಮುದ್ದೇಮಾಲನ್ನು ಜಪ್ತಿ
ಪಡಿಸಿದ ಬಗ್ಗೆ 7-00 ಪಿ.ಎಂ. ದಿಂದ 8-00 ಪಿ.ಎಂ.ದ ವರೆಗೆ ಪಂಚನಾಮೆಯನ್ನು ಬರೆದುಕೊಂಡಿದ್ದು
ಇರುತ್ತದೆ. ಆರೋಪಿ ಸಂ 2 ನೇದವನಾದ ಶಾಮೀದ ಈತನು ಅಲ್ಲಿಂದ ಓಡಿ
ಹೋಗಿದ್ದು ಕಾರಣ ಸದರಿಯವರ ಮೇಲೆ ಕ್ರಮ ಜರುಗಿಸಬೇಕೆಂದು ನೀಡಿದ ವರದಿ ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 212/2015 ಕಲಂ 78(3) Karnataka
Police Act.
ದಿನಾಂಕ: 20-07-2015 ರಂದು
ಸಾಯಂಕಾಲ 5-45
ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಗಿಣಿಗೇರಾ
ಗ್ರಾಮದ ಗಂಗಾವತಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ದೇವೇಂದ್ರ ಇತನು ಬರ ಹೋಗುವ ಸಾರ್ವಜನಿಕರಿಗೆ
ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು
ಕೊಡುತ್ತೇನೆ ಅಂತಾ ಕೂಗುತ್ತಾ ಮಟಕಾ ನಶಿಬದ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ ಸಾಹೇಬರು ಹಾಗೂ
ಸಿಬ್ಬಂದಿಗಳು ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ 3250=00 ರೂ, ಒಂದು ಮಟಕಾ
ನಂಬರ ಬರೆದ ಚೀಟಿ,
ಒಂದು ಬಾಲ್ ಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಬಂದು ನೀಡಿದ ವರದಿ ಸಾರಂಶದ
ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
3) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 85/2015
ಕಲಂ 78(3) Karnataka Police Act.
ದಿನಾಂಕ: 20-08-2015
ರಂದು ರಾತ್ರಿ 10-00 ಗಂಟೆಗೆ ಶ್ರೀಮತಿ ನಾಗರತ್ನಾ ಆರ್ ಪಿ.ಎಸ್.ಐ. ತಾವರಗೇರಾ ರವರು ಠಾಣೆಗೆ ಹಾಜರಾಗಿ ತಮ್ಮ ಒಂದು ವರದಿ, ಹಾಗು ಮಟಕಾ ದಾಳಿ ಪಂಚನಾಮೆ,ಮಟಕಾ ಜೂಜಾಟದ ಹಣ 490-00 ರೂಪಾಯಿ,ಒಂದು ಮಟಕ ಪಟ್ಟಿ,ಒಂದು ಬಾಲ್ ಪೆನ್ ಹಾಗು ಒಬ್ಬ ಆರೋಪಿ ಮರಿಸ್ವಾಮಿ ತಾಯಿ ಸುಂಕಮ್ಮ ಉರಿಜಾಳ ವ:-37 ವರ್ಷ,ಜಾ:-ಮಾದರ್,ಉ:-ಒಕ್ಕಲುತನ ಸಾ:-ಹರಿಜನ ವಾಡ ತಾವರಗೇರಾ ಈತನನ್ನು ತಂದು ಹಾಜರ ಪಡಿಸಿದ್ದು ಸಾರಾಂಶವೆನೆಣದರೆ ತಾವು ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಮೇರೆಗೆ ಪಂಚರಾದ (1) ನಾರಾಯಣಸಿಂಗ್ ತಂದೆ ವೆಮಕಟಸಿಂಗ್ ಗುಡಿಸಲಿ ಜಾ:-ರಜಪುತ ಉ:- ಕೂಲಿ ಸಾ:- ತಾವರಗೇರಾ ರವರನ್ನು ಹಾಗು 2)ಕನಾಲಪ್ಪ ತಂದೆ ಹಿರೇಶಾಮಣ್ಣ ಗುಳೇದರ್ ವಯ: 28 ವರ್ಷ, ಜಾತಿ: ವಾಲ್ಮೀಕಿ ಉ: ಕೂಲಿ ಕೆಲಸ ಸಾ.ಮೆಣೇದಾಳ ರವರುಗಳನ್ನು ಪಂಚರು ಅಂತಾ ಬರ ಮಾಡಿಕೊಂಡು, ಪಂಚರಿಗೆ ಮತ್ತು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಪಿ.ಸಿ-179,394,194,ಎ.ಪಿ.ಸಿ-74 ರವರುಗಳಿಗೆ ಬಾತ್ಮಿ ಬಂದ ವಿಷಯ ತಿಳಿಸಿ, ಪಂಚರನ್ನು ಹಾಗೂ ಸಿಬ್ಬಂದಿಯವರನ್ನು ಠಾಣೆಯ ಸರಕಾರಿ ಜೀಪಿನಲ್ಲಿ ಹೋಗಿ ತಾವರಗೇರಾ ಗ್ರಾಮದ ಮರಿಯಮ್ಮನ ಗುಡಿಯ ಹತ್ತಿರ ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಬೀದಿ ದೀಪದ ಕೆಳಗೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರ್ಗಳನ್ನು ಬರುದುಕೊಡುತ್ತಿದ್ದು, ಮಟ್ಕಾ ನಂಬರ್ ಬಂದಲ್ಲಿ ಒಂದು ರೂಪಾಯಿಗೆ 80-00 ರೂಪಾಯಿ ಕೊಡುತ್ತೆನೆ ಅಂತಾ ಕೂಗೂತ್ತಾ ಮಟ್ಕಾ ನಂಬರ್ಗಳನ್ನು ಬರೆದುಕೊಳ್ಳುತ್ತಿರುವ ಕಾಲಕ್ಕೆ ನಾನು ಹಾಗೂ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ರಾತ್ರಿ 08-15 ಗಂಟೆಗೆ ದಾಳಿ ಮಾಡಲು ಮಟ್ಕಾ ನಂಬರ್ ಬರೆಸುತ್ತಿದ್ದವರು ಓಡಿ ಹೋಗಿದ್ದು, ಮಟ್ಕಾ ನಂಬರ್ಗಳನ್ನು ಬರದುಕೊಡುತ್ತಿದ್ದನು ಸಿಕ್ಕಿ ಬಿದ್ದಿದ್ದು, ಸಿಕ್ಕಿ ಬಿದ್ದವನಿಗೆ ವಿಚಾರಿಸಲು ಆತನು ತನ್ನ ಹೆಸರು ಮರಿಸ್ವಾಮಿ ತಾಯಿ ಸುಂಕಮ್ಮ ಉರಿಜಾಳ ವಯ: 37 ವರ್ಷ, ಜಾತಿ; ಮಾದರ್ ಉ:ಒಕ್ಕಲುತನ, ಸಾ: ತಾವರಗೇರಾ ಅಂತಾ ತಿಳಿಸಿದ್ದು, ಅವನ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ ಒಂದು ಮಟ್ಕಾ ನಂಬರ್ ಬರೆದ ಚೀಟಿ, ಒಂದು ಬಾಲ್ ಪೆನ್ನು, ಹಾಗೂ ಜೂಜಾಟದ ನಗದು ಹಣ 490=00 ರೂ. ಗಳು ಸಿಕ್ಕಿದ್ದು, ಸದರಿಯವನ ಹತ್ತಿರ ಸಿಕ್ಕ ವಸ್ತುಗಳಾದ ಒಂದು ಮಟ್ಕಾ ಚೀಟಿ, ಒಂದು ಬಾಲ್ ಪೆನ್ನು, ಹಾಗೂ ಜೂಜಾಟದ ನಗದು ಹಣ ರೂ. 490-00 ಗಳನ್ನು ಪಂಚರ ಸಮಕ್ಷಮದಲ್ಲಿ ವಿವರವಾದ ಪಂಚನಾಮೆ ಮೂಲಕ ಜಪ್ತ ಮಾಡಿಕೊಂಡಿದ್ದು, ನಂತರ ಸಿಕ್ಕಿ ಬಿದ್ದ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡಿದ್ದು ಇರುತ್ತದೆ.ಸದರಿಯವನು ಜನರಿಂದ ಹಣ ಪಡೆದು ಮೋಸ ಮಾಡುವ ಪ್ರವರತ್ತಿಯವನು ಇರುತ್ತಾನೆ. ಪಂಚನಾಮೆ ಮೂಲಕ ಜಪ್ತಿ ಮಾಡಿದ ವಸ್ತು ಮತ್ತು ಪಂಚನಾಮೆಯೊಂದಿಗೆ, ಸಿಕ್ಕಿ ಬಿದ್ದ ಆರೋಪಿತನನ್ನು ಕರೆದುಕೊಂಡು ವಾಪಸ್ ಠಾಣೆಗೆ ರಾತ್ರಿ 10-00 ಗಂಟೆಗೆ ಬಂದು ದೂರು ನೀಡಿದ್ದು, ಸಿಕ್ಕಿಬಿದ್ದ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಲು ಅಂತಾ ಮುಂತಾಗಿ ಫಿರ್ಯಾಧಿಯ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದೆ.
0 comments:
Post a Comment