Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, August 31, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 203/2015 ಕಲಂ. 102 (ಬಿ), 302 ಸಹಿತ 149 ಐ.ಪಿ.ಸಿ:.
ದಿನಾಂಕ 30-08-2015 ರಂದು 20-30 ಗಂಟೆಗೆ ಹಯತಪೀರ್ ತಂದೆ ಶಕ್ಷಾವಲಿ ವಯಸ್ಸು 29 ವರ್ಷ ಜಾ: ಮುಸ್ಲಿಂ ಉ: ಟ್ರ್ಯಾಕ್ಟರ್ ಡ್ರೈವರ್ ಸಾ: ಸ.ಹಿ.ಪ್ರಾ.ಶಾಲೆ ಹಿಂಭಾಗ ಹೆಬ್ಬಾಳ  ತಾ: ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಕೊಲೆಯಾದ ಮಹ್ಮದಸಾಬ ಇತನ ತಂಗಿ ಶ್ರೀಮತಿ ಮುಬೀನಾಬೇಗಂ ಗಂಡ ದಿ: ಮೌಲಾಲಿ ಇವರು ತನ್ನ ಪಾಲಿಗೆ ಬರಬೇಕಾಗಿರುವ ಆಸ್ತಿಯನ್ನು ಕೊಡುವಂತೆ ಆರೋಪಿತರಾದ ತನ್ನ ಅತ್ತೆ ಮತ್ತು ಮೈದುನರಿಗೆ ಕೇಳಿದ್ದು ಸದರಿಯವರು ಆಸ್ತಿ ಕೊಡುವುದಿಲ್ಲವೆಂದು ಹೇಳಿದ್ದಕ್ಕೆ ಮಹ್ಮದಸಾಬನು ತನ್ನ ತಂಗಿಗೆ ಆಸ್ತಿ ಕೊಡಿಸುವ ವಿಷಯವಾಗಿ ವಕೀಲರ ಮುಖಾಂತರ ಆರೋಪಿತರಿಗೆ ನೋಟಿಸ್ ನೀಡಿದ್ದು ಮತ್ತು ಪಂಚಾಯತಿ ಮಾಡಿಸಿದ್ದು ಇಷ್ಟಾದರೂ ಸಹ ಆರೋಪಿತರು ಆಸ್ತಿ ಕೊಡುವುದಿಲ್ಲವೆಂದು ಹೇಳಿದ್ದು, ಮಹ್ಮದಸಾಬನು ತನ್ನ ತಂಗಿಗೆ ಆಸ್ತಿ ಕೊಡಿಸುವ ಸಲುವಾಗಿ ತಂಗಿಯೊಂದಿಗೆ ತಿರುಗಾಡುತ್ತಿರುವುದರಿಂದ ಆರೋಪಿತರು ಮುಬೀನಾಬೇಗಂ ಇಕೆಗೆ  ಆಸ್ತಿ ಕೊಡಬಾರದೆಂದು ಮಹ್ಮದಸಾಬನಿಗೆ ಕೊಲೆ ಮಾಡುವ ಸಲುವಾಗಿ ಒಳಸಂಚು ನಡೆಸಿ ಇಂದು ದಿನಾಂಕ 30-08-2015 ರಂದು ಸಾಯಂಕಾಲ 6-30 ಗಂಟೆಯ ಸುಮಾರಿಗೆ ಮಹ್ಮದಸಾಬನು ಅಮರ ಟಾಕೀಜ್ ಹತ್ತಿರದ ಚಿನಿವಾಲ ಆಸ್ಪತ್ರೆ ಕ್ರಾಸ್ ಹತ್ತಿರ ಹೋಗುತ್ತಿರುವಾಗ ಆರೋಪಿ ಹುಸೇನಬಾಷಾ ಇವನು ಮಚ್ಚು ನಿಂದ ಮಹ್ಮದಸಾಬ ಇವನ ಮೇಲೆ ಹಲ್ಲೆ ಮಾಡಿ ಕುತ್ತಿಗೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿರುತ್ತಾನೆ. ಒಳಸಂಚು ನಡೆಸಿ ಮಹ್ಮದಸಾಬ ಇತನಿಗೆ ಕೊಲೆ ಮಾಡಿದ (01) ಹುಸೇನಬಾಷಾ (02) ರಾಜಾಭಕ್ಷಿ ಮತ್ತು ಇವರ ತಾಯಿ (03) ಜಾಫರಬೀ ಹಾಗೂ ಇವರ ಅಕ್ಕಂದಿರಾದ (04) ದಾದಾಬೀ. (05) ಅನಾರ್ಕಲಿ ಮತ್ತು (06) ಅಪ್ಸರ ಎಲ್ಲರೂ ಹಿರೇಜಂತಕಲ್, ಗಂಗಾವತಿ ಇವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2)  ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 115/2015 ಕಲಂ.  87 Karnataka Police Act.
ದಿನಾಂಕ: 30-08-2015 ರಂದು 6-00 ಪಿಎಂಕ್ಕೆ ಪಿ.ಎಸ್.. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 9 ಜನ ಆರೋಪಿತರನ್ನು ಹಾಜರಪಡಿಸಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಮಾಹಿತಿ ಬಂದ ಪ್ರಕಾರ ತಾವು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 4-00 ಪಿಎಂಕ್ಕೆ ಯರೇಹಂಚಿನಾಳ ಗ್ರಾಮದ ಕಳಕಪ್ಪ ದೇವರ ಗುಡಿಯ ಹತ್ತಿರದ ಬಯಲು ಜಾಗೆಯಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ, ಸದರಿಯವರನ್ನು ವಶಕ್ಕೆ ಪಡೆದುಕೊಂಡು ಸದರಿಯವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಪ್ಲಾಸ್ಟಿಕ್ ಚೀಲ, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 1900-00 ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3)  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 185/2015 ಕಲಂ.  279, 337 ಐ.ಪಿ.ಸಿ:.

ದಿನಾಂಕ. 30-08-2015 ರಂದು 11-30 ಎ.ಎಂ.ಕ್ಕೆ ಫಿರ್ಯಾದಿದಾರರು ಹಾಗೂ ಭರತರಾಜ ಇವರು ಒಂದು ಟಿ.ವಿ.ಎಸ್. ಎಕ್.ಎಲ್ ಮೋ.ಸೈ. ನಂ. ಸಿ.ಟಿ.ಆರ್.7137 ನೇದ್ದರಲ್ಲಿ ಹಾಗೂ ಶಿವಣ್ಣ ಮತ್ತು ಶಾಹುಲ್ ಹಮೀದ ಇವರು ಒಂದು ಟಿ.ವಿ.ಎಸ್. ಎಕ್ಸ.ಎಲ್ ಮೋ.ಸೈ. ನಂ. ಕೆ.ಎ.35/ಎಕ್ಸ.8533 ನೇದ್ದರಲ್ಲಿ ಕೂಡಿಕೊಂಡು ಬೂದೇಶ್ವರ ದೇವಸ್ಥಾನಕ್ಕೆ ಹೋಗುತ್ತಿರುವಾಗ ಎನ್.ಹೆಚ್. 13 ರಸ್ತೆಯಿಂದ ದೇವಸ್ಥಾನಕ್ಕೆ ಹೋಗುವ ರಸ್ತೆಯ ಮೇಲೆ ಶಾಹುಲ್ ಹಮೀದ ಈತನು ಮೋ.ಸೈ. ನ್ನು ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮುಂದೆ ಹೊರಟ ಫೀರ್ಯಾದಿ ಮೋ.ಸೈ.ಗೆ ಠಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ನಾಲ್ಕು ಜನರಿಗೆ ಗಾಯ ಒಳಪೆಟ್ಟಗಳಾಗಿರುತ್ತವೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008