ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಕನೂರ ಪೊಲೀಸ್ ಠಾಣೆ ಗುನ್ನೆ
ನಂ. 107/2015 ಕಲಂ 87 Karnataka Police
Act.
ದಿನಾಂಕ:22-08-2015 ರಂದು 4-45 ಪಿಎಂಕ್ಕೆ ಪಿ.ಎಸ್.ಐ. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು, ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 4 ಜನ ಆರೋಪಿತರನ್ನು ಹಾಜರಪಡಿಸಿ ದೂರು ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಇಸ್ಪೇಟ್ ಜೂಜಾಟದ ಖಚಿತ ಮಾಹಿತಿ ಬಂದ ಪ್ರಕಾರ ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 3-25 ಪಿಎಂಕ್ಕೆ ಕುಕನೂರಿನ ಎ.ಪಿ.ಎಂ.ಸಿ. ಯಲ್ಲಿ
ಸರಕಾರಿ ಗೋದಾಮಿನ ಮುಂದಿನ ಬಯಲು ಜಾಗೆಯಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ, ಸದರಿಯವರನ್ನು ವಶಕ್ಕೆ ಪಡೆದುಕೊಂಡು ಸದರಿಯವರಿಂದ ಹಾಗೂ
ಜೂಜಾಟದ ಕಣದಿಂದ ಒಂದು ಪ್ಲಾಸ್ಟಿಕ್ ಚಾಪೆ, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ
ನಗದು ಹಣ 2410-00 ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ
ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ:107/2015 ಕಲಂ:87 ಕೆ.ಪಿ. ಅಕ್ಟ್ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 147/2015 ಕಲಂ 78(3) Karnataka
Police Act & 420 IPC.
ದಿನಾಂಕ: 22-08-2015 ರಂದು 11-00 ಎ.ಎಂ.ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಟಗಿ ಪೊಲೀಸ್
ಠಾಣೆ ರವರು ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಇಂದು ಬೆಳಿಗ್ಗೆ 9-00 ಗಂಟೆಗೆ ಕುಷ್ಠಗಿ
ಪೊಲೀಸ್ ಠಾಣೆಯಲ್ಲಿದ್ದಾಗ ಕುಷ್ಟಗಿ ಪಟ್ಟಣದ ಕನಕದಾಸ ಸರ್ಕಲ್ ಹತ್ತಿರ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಂಚರಾದ 1) ಬಸವರಾಜ ತಂದೆ ರುದ್ರಪ್ಪ ಗುಗ್ಗರಿ ವಯಾ 44 ವರ್ಷ ಜಾ:ಹಿಂದೂ ಲಿಂಗಾಯತ ಉ : ಟೇಲರಿಂಗ್ ಕೆಲಸ ಸಾ: ಕೊರಡಕೇರಾ 2] ಅಕ್ಬರಸಾಬ ತಂದೆ ಯಮನೂರಸಾಬ ನದಾಫ ವಯಾ 30 ವರ್ಷ ಜಾ:
ಮುಸ್ಲಿಂ ಉ :ಕಿರಾಣಿ ಅಂಗಡಿ ಸಾ: ನೆರಬೆಂಚಿ ರವರನ್ನು ಠಾಣೆಗೆ ಬರಮಾಡಿಕೊಂಡು ವಿಷಯ
ತಿಳಿಸಿ ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ-108 ಹೀರಪ್ಪ, ಹೆಚ್.ಸಿ-63 ನೀಲಕಂಠಪ್ಪ, ಪಿ.ಸಿ-344 ಸಂಗಪ್ಪ ಪಿ.ಸಿ-116 ಸಂಗಮೇಶ, ಪಿ.ಸಿ.109 ಅಮರೇಶ, ಪಿಸಿ-24 ಬಸವರಾಜ, ಪಿಸಿ-105
ಶರಣಪ್ಪ ಮತ್ತು ಸರಕಾರಿ ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ ಎಲ್ಲರೂ
ಕೂಡಿ ಸರಕಾರಿ ಜೀಪನಲ್ಲಿ ಠಾಣೆಯಿಂದ 09-15 ಎ.ಎಂ ಗೆ ಹೊರಟು ಕನಕದಾಸ ಸರ್ಕಲ್ ಹತ್ತಿರ ಜೀಪ್ ನಿಲ್ಲಿಸಿ ದೂರದಲ್ಲಿ ನಿಂತು ನೋಡಲು ಅಲ್ಲಿ ಒಬ್ಬ
ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ
ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ
ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನ್ನು ಹಿಡಿದು
ವಿಚಾರಿಸಿದಾಗ ಹೆಸರು ಮೋತಿಲಾಲ ತಂದೆ ಚಟ್ಟುಸಾ ಸಿಂಗ್ರಿ ವಯಾ 58 ವರ್ಷ ಜಾ: ಸಾವಜಿ ಉ: ಖಾನಾವಳಿ ಸಾ: ಕನಕದಾಸ ಸರ್ಕಲ್ ಹತ್ತಿರ ಕುಷ್ಟಗಿ ಅಂತಾ ಹೇಳಿದ್ದು ಹಾಗೂ ಸದರಿಯವನು ಜನರಿಂದ ಪಣವಾಗಿ ಹಣ
ಪಡೆದು ಅವರಿಗೆ ಹೆಚ್ಚಿನ ಹಣ ಕೊಡುವುದಾಗಿ ಹೇಳಿ ನಂಬಿಸಿ ಮೋಸ ಮಾಡುತ್ತಿದ್ದು, ಹಾಗೂ ತಾನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು.
ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 2,450=00 ರೂಪಾಯಿ ನಗದು ಹಣ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಚೀಟಿ ಹಾಗೂ ಒಂದು
ನೋಕಿಯೋ ಮೊಬೈಲ್ ಅಂ:ಕಿ:300=00 ರೂ:ಗಳಷ್ಟು ಆಗಬಹುದು ಇವುಗಳನ್ನು ಜಪ್ತ ಪಡಿಸಿದ್ದು ತಾನು ಬರೆದ ಮಟಕಾ ಪಟ್ಟಿಯನ್ನು ರಾಘು
ಸಿಂಗ್ರಿ ಸಾ.ಗಜೇಂದ್ರಗಡ ಇತನಿಗೆ ಕೊಡುವದಾಗಿ
ತಿಳಿಸಿದನು. ಸದರಿ ವರದಿ ಮತ್ತು ಪಂಚನಾಮೆಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡೇನು.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 148/2015 ಕಲಂ 78(3) Karnataka
Police Act.
ದಿನಾಂಕ: 22-08-2015 ರಂದು ಮದ್ಯಾಹ್ನ 1-45 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಟಗಿ ಪೊಲೀಸ್ ಠಾಣೆ
ರವರು ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಇಂದು ಬೆಳಿಗ್ಗೆ 11-30 ಗಂಟೆಗೆ ಕುಷ್ಠಗಿ
ಪೊಲೀಸ್ ಠಾಣೆಯಲ್ಲಿದ್ದಾಗ ಕುಷ್ಟಗಿ ಪಟ್ಟಣದ ಗಜೇಂದ್ರಗಡ ಕ್ರಾಸ್ ಹತ್ತಿರ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಂಚರಾದ 1) ಬಸವರಾಜ ತಂದೆ ರುದ್ರಪ್ಪ ಗುಗ್ಗರಿ ವಯಾ 44 ವರ್ಷ ಜಾ:ಹಿಂದೂ ಲಿಂಗಾಯತ ಉ : ಟೇಲರಿಂಗ್ ಕೆಲಸ ಸಾ: ಕೊರಡಕೇರಾ 2] ಅಕ್ಬರಸಾಬ ತಂದೆ ಯಮನೂರಸಾಬ ನದಾಫ ವಯಾ 30 ವರ್ಷ ಜಾ:
ಮುಸ್ಲಿಂ ಉ :ಕಿರಾಣಿ ಅಂಗಡಿ ಸಾ: ನೆರಬೆಂಚಿ ರವರನ್ನು ಠಾಣೆಗೆ ಬರಮಾಡಿಕೊಂಡು ವಿಷಯ
ತಿಳಿಸಿ ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ
ಪುಂಡಪ್ಪ ಎ.ಎಸ್.ಐ, ಹೆಚ್.ಸಿ-63 ನೀಲಕಂಠಪ್ಪ, ಪಿ.ಸಿ-344 ಸಂಗಪ್ಪ ಪಿ.ಸಿ.109 ಅಮರೇಶ, ಪಿಸಿ-24 ಬಸವರಾಜ ಪಿ.ಸಿ-116 ಸಂಗಮೇಶ, ,ಪಿಸಿ-105 ಶರಣಪ್ಪ ಮತ್ತು ಸರಕಾರಿ ಜೀಪ್
ಚಾಲಕ ಎ.ಪಿ.ಸಿ-38 ಶಿವಕುಮಾರ ಎಲ್ಲರೂ ಕೂಡಿ ಸರಕಾರಿ ಜೀಪನಲ್ಲಿ
ಠಾಣೆಯಿಂದ ಬೆಳಿಗ್ಗೆ 11-45 ಎ.ಎಂ ಗೆ ಹೊರಟು ಗಜೇಂದ್ರಗಡ ಕ್ರಾಸ್ ಹತ್ತಿರ ಜೀಪ್ ನಿಲ್ಲಿಸಿ ದೂರದಲ್ಲಿ ನಿಂತು ನೋಡಲು ಅಲ್ಲಿ ಒಬ್ಬ
ಜನರಿಗೆ ಮಟಕಾ ಬರೆಯಿಸಿರಿ ಒಂದು ರೂಪಾಯಿಗೆ 80-00 ರೂ. ಕೊಡುವದಾಗಿ ಹೇಳುತ್ತಿದ್ದ ಇನ್ನೊಬ್ಬ
ಜನರಿಗೆ ಮಟಕಾ ಚೀಟಿಗಳನ್ನು ಬರೆದು ಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು
ಪೊಲೀಸರನ್ನು ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯಿಸಿರಿ ಅಂತಾ ಹೇಳುತ್ತಿದ್ದವನು ಮತ್ತು ಬರೆದುಕೊಳ್ಳುವವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ
ಸದರಿಯವರನ್ನು ಹಿಡಿದು ವಿಚಾರಿಸಿದಾಗ ಬರೆಯಿಸಿರಿ ಅಂತಾ ಹೇಳುತ್ತಿದ್ದವನ ಹೆಸರು ಬಸವರಾಜ ತಂದೆ
ಶಂಕರಗೌಡ ಮಾಲಿ ಪಾಟೀಲ್ ವಯಾ 55 ವರ್ಷ ಜಾ: ಲಿಂಗಾಯತ ಉ:ಟೇಲರ್ ಕೆಲಸ ಸಾ: ಪಂಚಂ ಲೇ ಔಟ್ ಕುಷ್ಟಗಿ ಅಂತಾ ಹೇಳಿದ್ದು ಹಾಗೂ ಬರೆಯುವವನನ್ನು
ವಿಚಾರಿಸಲಾಗಿ ಅವನ ಹೆಸರು ನರಸಪ್ಪ ತಂದೆ ಶಿವಪ್ಪ ನೇಕಾರ ವ: 42 ವರ್ಷ ಜಾತಿ: ನೇಕಾರ :
ಬಿ.ಎಸ್.ಎನ್.ಎಲ್. ಆಫೀಸ್ ನಲ್ಲಿ ದಿನಗೂಲಿ ನೌಕರ ಸಾ: ಕಟ್ಟೆ ದುರಗಮ್ಮನ ಗುಡಿ ಹತ್ತಿರ ಕುಷ್ಟಗಿ
ಅಂತಾ ಹೇಳಿದ್ದು ಸದರಿಯವರು ಜನರಿಂದ ಪಣವಾಗಿ ಹಣ ಪಡೆದು ಅವರಿಗೆ ಹೆಚ್ಚಿನ ಹಣ ಕೊಡುವುದಾಗಿ ಹೇಳಿ
ನಂಬಿಸಿ ಮೋಸ ಮಾಡುತ್ತಿದ್ದು, ಹಾಗೂ ತಾವು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡರು. ಸದರಿಯವರನ್ನು ಅಂಗ ಜಡತಿ
ಮಾಡಿದಾಗ ಮಟಕಾ ಜೂಜಾಟದ ಹಣ 2,650=00 ರೂಪಾಯಿ ನಗದು ಹಣ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಚೀಟಿ ಹಾಗೂ ಎರಡು ನೋಕಿಯೋ ಮೊಬೈಲ್ ಅಂ:ಕಿ:900=00 ರೂ:ಗಳಷ್ಟು ಆಗಬಹುದು ಇವುಗಳನ್ನು ಜಪ್ತ ಪಡಿಸಿದ್ದು ತಾವು ಬರೆದ ಮಟಕಾ
ಪಟ್ಟಿಯನ್ನು ಮಲ್ಲಪ್ಪ ಮಡಿವಾಳರ ಸಾ: ಕುಷ್ಟಗಿ ಇತನಿಗೆ ಕೊಡುವದಾಗಿ ತಿಳಿಸಿದರು. ಸದರಿ ವರದಿ ಮತ್ತು ಪಂಚನಾಮೆಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
0 comments:
Post a Comment