ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂ. 260/2015 ಕಲಂ. 341, 323, 354, 504, 506 ಸಹಿತ 149 ಐ.ಪಿ.ಸಿ:
ದಿನಾಂಕ:- 17-08-2015 ರಂದು ಬೆಳಿಗ್ಗೆ 11:00 ಗಂಟೆಗೆ ಮಾನ್ಯ
ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಲಯ ಗಂಗಾವತಿರವರಿಂದ ಪತ್ರ ನಂ: 1877/015 ದಿ:- 12-08-2015 ರನ್ವಯ ಖಾಸಗಿ ದೂರು
ಸಂಖ್ಯೆ: 175/2015 ನೇದ್ದು
ಪ್ರಕರಣ ದಾಖಲಿಸುವ ಕುರಿತು ಸ್ವೀಕೃತವಾಗಿದ್ದು, ಸದರಿ ದೂರನ್ನು ಶ್ರೀಮತಿ ಪಾರ್ವತಮ್ಮ ಗಂಡ ವೀರಭದ್ರಪ್ಪ 60 ವರ್ಷ, ಉ: ಮನೆಗೆಲಸ ಮತ್ತು
ಕೃಷಿ ಸಾ: ಹಣವಾಳ ಇವರು ಸಲ್ಲಿಸಿದ್ದು,
ಅದರ ಸಾರಾಂಶ ಈ ಪ್ರಕಾರ ಇದೆ." ದಿ:- 16-07-2015 ರಂದು ರಾತ್ರಿ 7:00 ಗಂಟೆಯ ಸುಮಾರಿಗೆ
ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಆರೋಪಿತರ ಮೇಲೆ ಗುನ್ನೆ ನಂ: 219/2015 ದಾಖಲಿಸಿದ್ದಕ್ಕಾಗಿ ಅದಕ್ಕೆ ಸಿಟ್ಟುಕೊಂಡ
ಆರೋಪಿತರಾದ ಪಂಪಾಪತಿ ತಂದೆ ಹಂಪಣ್ಣ ಗ್ರಾ.ಪಂ. ಸದಸ್ಯರು ಹಾಗೂ ಇತರೆ 5 ಜನರು ಕೂಡಿಕೊಂಡು
ದಿನಾಂಕ:- 17-07-2015 ರಂದು
ಬೆಳಿಗ್ಗೆ 09:00 ಗಂಟೆಯ
ಸುಮಾರಿಗೆ ಫಿರ್ಯಾದಿಯ ಮನೆಯ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ಕೂಗಾಡುತ್ತಾ ಲೇ ಸೂಳೇ, ನಿನ್ನ ತಮ್ಮನ
ಕಡೆಯಿಂದ ನಮ್ಮ ಮೇಲೆ ಕೇಸ್ ಮಾಡಿಸುತ್ತೀ ಏನಲೇ ಹೊರಗ ಬಾ ಬೋಸುಡಿ" ಎಂದು ಅಡುಗೆ
ಮನೆಯಲ್ಲಿದ್ದ ಫಿರ್ಯಾದಿಯ ಕೂದಲನ್ನು ಎಳೆದುಕೊಮಡು ಬಂದ 1ನೇ ಆರೋಪಿತನು ಮನೆಯ ಮುಂದಿನ ಬೀದಿಗೆ ಬೀಸಾಕಿ ಕೈಯಿಂದ ಹೊಡೆದು ಬಡೆದು
ಒದ್ದು ಅವಮಾನ ಮಾಡಿ ದು:ಖಪತಗೊಳಿಸಿರುತ್ತಾನೆ. ಉಳಿದ ಆರೋಪಿತರು ಸಹ ಫಿರ್ಯಾದಿಯನ್ನು
ಹಿಡಿದು ಎಳೆದಾಡಿ ಸೀರೆ ಜಗ್ಗಿ,
ಜಂಪರ್ ಹರಿದು ಹಾಕಿರುತ್ತಾರೆ. ಮತ್ತು ಕೈಯಿಂದ ಹಾಗೂ ಕಾಲಿನಿಂದ ಬಡಿ-ಬಡಿ ಮಾಡಿ
ಗಾಯಗೊಳಿಸಿರುತ್ತಾರೆ." ಕಾರಣ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ"
ಅಂತಾ ಮುಂತಾಗಿ ಇದ್ದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ
ಕೈಗೊಂಡಿದ್ದು ಇರುತ್ತದೆ.
2) ಗಂಗಾವತಿ ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂ. 261/2015 ಕಲಂ. 341, 323, 324, 504, 506 ಸಹಿತ 149 ಐ.ಪಿ.ಸಿ:
ದಿನಾಂಕ:- 17-08-2015 ರಂದು ಮಧ್ಯಾಹ್ನ 12:00 ಗಂಟೆಗೆ ಮಾನ್ಯ
ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಲಯ ಗಂಗಾವತಿರವರಿಂದ ಪತ್ರ ನಂ: 1877/015 ದಿ:- 12-08-2015 ರನ್ವಯ ಖಾಸಗಿ ದೂರು
ಸಂಖ್ಯೆ: 176/2015 ನೇದ್ದು
ಪ್ರಕರಣ ದಾಖಲಿಸುವ ಕುರಿತು ಸ್ವೀಕೃತವಾಗಿದ್ದು, ಸದರಿ ದೂರನ್ನು ಶ್ರೀ ಭೀಮನಗೌಡ ತಂದೆ ಪಂಪಣ್ಣ ಪತ್ತಾರ, ವಯಸ್ಸು 39 ವರ್ಷ, ಉ: ಕೃಷಿ ಸಾ:
ಹಣವಾಳ ಇವರು ಸಲ್ಲಿಸಿದ್ದು,
ಅದರ ಸಾರಾಂಶ ಈ ಪ್ರಕಾರ ಇದೆ." ದಿ:- 17-07-2015 ರಂದು ಫಿರ್ಯಾದಿದಾರನು ತನ್ನ ಅಕ್ಕಳನ್ನು ಆರೋಪಿತರ ವಿರುದ್ಧ ದೂರು ದಾಖಲಿಸಲೆಂದು
ಗಂಗಾವತಿ ಗ್ರಾಮೀಣ ಠಾಣೆಗೆ
ಕಳುಹಿಸಿಕೊಟ್ಟಿದ್ದಕ್ಕಾಗಿ ಏಕಾಏಕಿ ಸಿಟ್ಟುಗೊಂಡ ಆರೋಪಿತರಾದ ಪಂಪಾಪತಿ ತಂದೆ ಹಂಪಣ್ಣ
ಗ್ರಾ.ಪಂ. ಸದಸ್ಯರು ಹಾಗೂ ಇತರೆ 5
ಜನರು ಕೂಡಿಕೊಂಡು ದಿನಾಂಕ:- 17-07-2015
ರಂದು ಬೆಳಿಗ್ಗೆ 11:00
ಗಂಟೆಯ ಸುಮಾರಿಗೆ ಫಿರ್ಯಾದಿಯ ಮನೆಯ ಒಳಗೆ ನುಗ್ಗಿ “ ಲೇ ಸೂಳೇಮಗನೆ ನಿಮ್ಮ ಅಕ್ಕ ಪಾರ್ವತೆಮ್ಮ ಎಂಬ ಸೂಳೆಯನ್ನು ಈಗಾಗಲೇ ಜಜ್ಜಿದ್ದು,
ಸಾಕಾಗಿಲ್ಲವೇ ಆಕೆಯನ್ನು ಪುನ: ಪೊಲೀಸ್ ಠಾಣೆಗೆ ನಮ್ಮ ಮೇಲೆ ಕೇಸ್ ಮಾಡಲು ಕಳಿಸುತ್ತೀ ಏನ್ ಲೇ, ನಿನ್ನದು
ಬಹಳ ಆಗಿದೆ ನಿನ್ನನ್ನು ಯಾರು ತಡೆಯುತ್ತಾರೆ ನೋಡುತ್ತೇವೆ. ಈ ದಿನವೇ ನಿನ್ನ ಜೀವನದ ಕಡೆ ದಿನವಾಗುತ್ತದೆ
” ಎಂದು ಅವಾಚ್ಯ ಶಬ್ದಗಳಿಂದ ಬೈದು
ಬೆದರಿಕೆ ಹಾಕಿ ಹೊಡಿ-ಬಡಿ ಮಾಡಿರುತ್ತಾರೆ. ಕಾರಣ ಅವರ
ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ" ಅಂತಾ ಮುಂತಾಗಿ ಇದ್ದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ
ಕೈಗೊಂಡಿದ್ದು ಇರುತ್ತದೆ.
0 comments:
Post a Comment