Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, September 2, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕನಕಗಿರ ಪೊಲೀಸ್ ಠಾಣಾ ಗುನ್ನೆ ನಂ. 139/2015  ಕಲಂ 78(3) Karnataka Police Act.
ದಿನಾಂಕ 01-09-2015 ರಂದು ರಾತ್ರಿ 10-15 ಗಂಟೆಗೆ ಶ್ರೀ ಆಂಜನೇಯ ಡಿ.ಎಸ್. ಗಂಗಾವತಿ ಸಂಚಾರಿ ಠಾಣೆ ರವರು ಠಾಣೆಗೆ ಬಂದು ವರದಿ, ಹಾಗೂ ಪಂಚನಾಮೆ ಹಾಗೂ ಆರೋಪಿ ಮತ್ತು ಮಟಕಾ ಸಂಬಂಧಿಸಿದ ಸಾಮಾಗ್ರಿಗಳನ್ನು ಹಾಜರಪಡಿಸಿದ್ದು, ಸದರ ವರದಿಯ ಸಾರಾಂಶವೇನೆಂದರೆ, ದಿನಾಂಕ 01-09-21015 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಭಟ್ಟರ ನರಸಾಪೂರ ಗ್ರಾಮದ ರಾಮಣ್ಣ ಈಳಿಗೇರ್ ರವರ ಚಹಾ ಹೊಟೆಲ್ ಹತ್ತಿರ ಆರೋಪಿತರು ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ 1 ರೂಪಾಯಿಗೆ 80 ರೂಪಾಯಿ ಬರುತ್ತದೇ ನಸೀಬ ಜೂಜಾಟದ ಅಂತಾ ಕೂಗುತ್ತಾ ಸಾರ್ವಜನಿಕರನ್ನು ಬರ ಮಾಡಿಕೊಂಡು ಅವರಿಂದ ಹಣ ಪಡೆದು ಅವರಿಗೆ ಓ.ಸಿ. ನಂಬರಗಳನ್ನು ಬರೆದು ಕೊಡುತ್ತಿದ್ದಾಗ ಪಂಚರೊಂದಿಗೆ ದಾಳಿ ಮಾಡಲು ಆರೋಪಿ ನಂ.1 ಈತನು ಸಿಕ್ಕಿದ್ದು, ಆರೋಪಿ ನಂ.2 ಈತನು ಓಡಿ ಹೋಗಿದ್ದು, ಆರೋಪಿ ನಂ.1 ಈತನಿಂದ 03 ಮಟಕಾ ಬರೆದ ಪಟ್ಟಿ, 1 ಬಾಲ್ ಪೆನ್ನು ಹಾಗೂ 01 ಮಟಕಾದ ರೂಟ್ ಚಾರ್ಟ ಸಿಕ್ಕಿದ್ದು,  ಓಡಿ ಹೋದ ಆರೋಪಿತನು ಬೀಸಾಕಿದ ಮಟಕಾ ಜೂಜಾಟದ ನಗದು ಹಣ ರೂ.6315=00 ಸಿಕ್ಕಿದ್ದು, ಮಟಾಕ ಸಾಮಾಗ್ರಿಗಳನ್ನು ಮತ್ತು ನಗದು ಹಣವನ್ನು ಪಂಚರ ಸಮಕ್ಷಮ ಜಪ್ತ ಮಾಡಿ, ಪಂಚನಾಮೆಯನ್ನು ಮಾಡಿದ್ದು ಆರೋಪಿ ನಂ.2 ಈತನು ಮಟಕಾ ಬುಕ್ಕಿ ಇರುತ್ತಾನೆ ಅಂತಾ ಮುಂತಾಗಿ ನೀಡಿದ ವರದಿಯ ಸಾರಾಂಶದ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008