Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, September 3, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕಾರಟಗಿ ಪೊಲೀಸ್ ಠಾಣಾ ಗುನ್ನೆ ನಂ. 196/2015  ಕಲಂ 87 Karnataka Police Act.
ದಿನಾಂಕ- 02-09-2015 ರಂದು ಸಾಯಂಕಾಲ 5-30 ಗಂಟೆಯ ಸುಮಾರಿಗೆ ಕಾರಟಗಿ ಠಾಣಾ ವ್ಯಾಫ್ತಿಯ ಕಾರಟಗಿ- ಚಳ್ಳೂರು ರಸ್ತೆಯ ಪಕ್ಕದಲ್ಲಿರುವ ತಾಯಮ್ಮನ ಗುಡಿ ಹತ್ತಿರ 5 ಜನ ಆರೋಪಿತರು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಶ್ರೀ. ನಿಂಗಪ್ಪ ಪಿ.ಎಸ್.. ಕಾರಟಗಿರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಲು ಆರೋಪಿ ತರು ಸಿಕ್ಕಿಬಿದ್ದಿದ್ದು ಸಿಕ್ಕ ಆರೋಪಿತರ ಕಡೆಯಿಂದ ಒಟ್ಟು ನಗದು ಹಣ ರೂ. 4350=00 ಗಳನ್ನು ಮತ್ತು 52 ಇಸ್ಪೀಟ್ ಎಲೆಗಳು ಒಂದು ಹಳೆ ಬರಕಾವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಸಂಚಾರಿ  ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 30/2015 ಕಲಂ. 279, 337, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.

ಇಂದು ದಿನಾಂಕ 02-09-15 ರಂದು ಮದ್ಯಾಹ್ನ 13-00ಗಂಟೆಗೆ ಗಂಗಾವತಿ ಸರಕಾರಿ ಆಸ್ಪತ್ರೆಯಿಂದ  ಎಮ್ ಎಲ್ ಸಿ ಬಂದಿದ್ದು ಅದರಲ್ಲಿ ನರಸಪ್ಪ ಇತನು ಆರ್ ಟಿ ಎ ದಲ್ಲಿ ಗಾಯಗೊಂಡು ದಾಖಲಾದ ಬಗ್ಗೆ ಮಾಹಿತಿ ಇದ್ದು ಗಾಯಗೊಂಡ ನರಸಪ್ಪ ಇತನು ಗಾಭರಿಯಾಗಿದ್ದರಿಂದ ಮತ್ತು ಚಿಕಿತ್ಸೆ ಪಡೆಯುತ್ತಿದ್ದರಿಂದ ಪ್ರತ್ಯಕ್ಷದರ್ಶಿಯಾದ ವೆಂಕಟೇಶ ಇತನು ಫಿರ್ಯಾಧಿಯನ್ನು ಹಾಜರುಪಡಿಸಿದ್ದು ಸದರಿ ಫಿರ್ಯಾಧಿಯ ಸಾರಂಶವೇನೆಂದರೆ ಇಂದು ದಿನಾಂಕ 02-09-2015 ರಂದು ಬೆಳಗ್ಗೆ 10-30 ಗಂಟೆಗೆ ನಾನು ನಮ್ಮ ಮಾವನಾದ ನರಸಪ್ಪ ತಂದೆ ಯಮನಪ್ಪ ವಯಸ್ಸು 40 ಜಾ: ನಾಯಕ ಉ: ಒಕ್ಕಲುತನ ಸಾ: ಗಂಗಾವತಿ ಉಳ್ಳಿಡಗ್ಗಿಕ್ಯಾಂಪ್  ಇವರ ಮನೆಗೆ ಕೆಲಸ ನಿಮಿತ್ಯ ಹೋದೆನು ನಂತರ ನಾನು ಮತ್ತು ನರಸಪ್ಪ ಸೇರಿಕೊಂಡು ಉಳ್ಳಿಡಗ್ಗಿ ಕ್ಯಾಂಪ್ ದಿಂದ ಪ್ರಶಾಂತನಗರ ಕ್ರಾಸ್ ವರೆಗೆ ಬಂದು ಪ್ರಶಾಂತನಗರ ಕ್ರಾಸ್ ನಲ್ಲಿರುವ ಶರೀಫ ಇತನ ಹೊಟೆಲ್ನಲ್ಲಿ ಚಹ ಕುಡಿದೆವು  ನಂತರ ನರಸಪ್ಪ ಇತನು  ಮೂತ್ರ ಮಾಡಿ ಬರುತ್ತೇನೆಂದು ಹೇಳಿ ರಸ್ತಯನ್ನು ದಾಟಿ ಹೋದನು ನಾನು ಧನಲಕ್ಷ್ಮೀ ಹಾರ್ಡವೇರ್ ಅಂಗಡಿ ಮುಂದೆ ನಿಂತುಕೊಂಡಿದ್ದೆನು ನರಸಪ್ಪ ಇತನು ಮೂತ್ರ ಮಾಡಿ ವಾಪಸ್ಸು ನನ್ನ ಕಡೆಗೆ ಬರುವ ಕುರಿತು ರಸ್ತೆಯನ್ನು ದಾಟುತ್ತಿರುವಾಗ ಅದೇ ವೇಳೆಗೆ ವಡ್ಡರಹಟ್ಟಿ ಕಡೆಯಿಂದ ಒಂದು ಮೋಟಾರು ಸೈಕಲ್ಲ ಸವಾರನು ತನ್ನ ಮೋಟಾರು ಸೈಕಲ್ಲನ್ನು ಅತೀಜೋರಾಗಿ ಮತ್ತು ಅಲಕ್ಪ್ಷತನದಿಂದ ಚಾಲನೆ ಮಾಡಿಕೊಂಡು ಬಂದವನೇ ರಸ್ತೆಯನ್ನು ದಾಟುತ್ತಿರುವ ನರಸಪ್ಪ ಇತನಿಗೆ ಟಕ್ಕರ ಕೊಟ್ಟು ಅಪಘಾತ ಮಾಡಿದನು ಆಗ ನರಸಪ್ಪ ಇತನು  ರಸ್ತೆ ಮೇಲೆ ಬಿದ್ದಾಗ ಇದನ್ನು ನೋಡಿದ ನಾನು ಗಾಬರಿಯಾಗಿ ಕೂಡಲೇ ಓಡಿ ಹೋಗಿ ನರಸಪ್ಪನಿಗೆ  ಎಬ್ಬಿಸಿದಾಗ  ಸದರಿ ಮೋಟಾರು ಸೈಕಲ್ಲ ಸವಾರನು ನಿಲ್ಲಿಸದೇ ಹಾಗೇಯೇ ತನ್ನ ಮೋಟಾರು ಸೈಕಲ್ಲನ್ನು ಸಿ.ಬಿ ಸರ್ಕಲ್ ಕಡೆಗೆ ತಗೆದುಕೊಂಡು ಜೋರಾಗಿ ಹೋದನು ನಾನು ಗಾಬರಿಯಲ್ಲಿ  ಮೋಟಾರು ಸೈಕಲ್ಲ ನಂಬರನ್ನು ನೋಡಿರುವುದಿಲ್ಲಾ. ಅದು ಹೊಂಡಾ ಶೈನ್ ಬ್ಲಾಕ್ ಕಲರ ಇರುತ್ತದೆ. ಅಪಘಾತ ಮಾಡಿದ ವನಿಗೆ  ನೋಡಿದರೆ ಮತ್ತು ಮೋಟಾರು ಸೈಕಲ್ಲನ್ನು ನೋಡಿದರೆ  ನಾನು ಗುರುತಿಸುತ್ತೇನೆ. ಈ ಘಟನೆಯು ಬೆಳಗ್ಗೆ 11-30 ಎಎಂ ಸುಮಾರು ಪ್ರಶಾಂತನಗರ ಕ್ರಾಸ್ ಹತ್ತಿರದ ಧನಲಕ್ಷ್ಮೀ ಹಾರ್ಡವೇರ್ ಅಂಗಡಿ ಎದುರುಗಡೆ ಜರುಗಿರುತ್ತದೆ.  ಘಟನಾ ಸ್ಥಳದಲ್ಲಿ ಅಪಘಾತ ಮಾಡಿದ ಮೋಟಾರು ಸೈಕಲ್ಲನ ಮುಂದಿನ ನಂಬರ ಪ್ಲೇಟ್ ಮುರಿದ ತುಂಡು ಬಿದ್ದಿದ್ದು ಅದರ ಮೇಲೆ 227 ಅಂತಾ ಇರುತ್ತದೆ. ಸದರಿ ಮುರಿದ ನಂಬರ ಪೇಟ್ ತುಂಡು  ಘಟನಾ ಸ್ಥಳದಲ್ಲಿಯೇ ಇರುತ್ತದೆ.  ಈ ಘಟನೆಯನ್ನು ನೋಡಿದ ಇಬ್ಬರು ಓಡಿ ಬಂದು ನಮಗೆ ಸಹಾಯ ಮಾಡಿದರು. ನರಸಪ್ಪ ಇತನಿಗೆ ತಲೆಯ ಹಿಂದೆ ಬಲವಾದ ಒಳಪೆಟ್ಟು ಮತ್ತು ರಕ್ತ ಗಾಯ,ಹಾಗೂ ಬಲಗಾಲ ಮೀನಗಂಡದ ಹತ್ತಿರ ಒಳಪೆಟ್ಟು ಮತ್ತು ತೆರೆಚಿದಗಾಯಗಳಾಗಿದ್ದು ಇರುತ್ತದೆ.ಕಾರಣ  ಈ ಅಪಘಾತವನ್ನು ಮಾಡಿದ ಹೊಂಡಾ ಶೈನ್ ಬ್ಲಾಕ್ ಕಲರ ನೇದ್ದರ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಮೇಲಿಂದ  ಪ್ರಕರಣ ದಾಖಲಿಸಿ ತನಿಖೆಕೈಗೊಂಡೆನು.

0 comments:

 
Will Smith Visitors
Since 01/02/2008