Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, September 22, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 91/2015  ಕಲಂ 87 Karnataka Police Act.
ಇಂದು ದಿನಾಂಕ: 21-09-2015 ರಂದು ಮದ್ಯಾಹ್ನ 15-30 ಗಂಟೆಗೆ ಇಲಕಲ ಚೆಕ್ ಪೋಸ್ಟ ಹತ್ತಿರ ಪಿ.ಎಸ್.ಐ ರವರು ಪೆಟ್ರೋಲಿಂಗ್ದಲ್ಲಿದ್ದಾಗ ಹುಲಗೇರಿ ಗ್ರಾಮದಲ್ಲಿ ಹಳೆ ಬಸ್ ನಿಲ್ದಾಣದ ಹತ್ತಿರ ಸಾರ್ವಕನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹೆಚ್.ಸಿ-11, ಪಿ.ಸಿ-162, 168, 328 ರವರು ಹಾಗೂ ಇಬ್ಬರು ಪಂಚರಾದ 1] ಪ್ರಕಾಶ ಸಾ: ಕಲ್ಲಗೋನಾಳ 2] ಯಂಕನಗೌಡ ಸಾ: ಕಲಗೋನಾಳ ರವರೊಂದಿಗೆ ಹುಲಗೇರಿ ಗ್ರಾಮಹಳೆ ಬಸ್ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು, ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವರ ಪಂಚರ ಸಮಕ್ಷಮ ದಾಳಿ ಮಾಡಲು 5 ಜನ ಸಿಕ್ಕಿ ಬಿದಿದ್ದು ವಿಚಾರಿಸಲು, 1] ಪ್ರದೀಪ ಆತನ ಕೈಯಲ್ಲಿ 15 ಇಸ್ಪೀಟ್ ಎಲೆಗಳು ಹಾಗೂ 345/- ರೂ/- ಅಂಗಾತವಾಗಿ 17 ಎಲೆಗಳು ಮೇಲಿನ ಎಲೆ ಚೌಕ 9 ಇದ್ದು, ಇನ್ನೊಂದು ಬದಿಗೆ 20 ಎಲೆಗಳು ಅಂಗಾತವಾಗಿ ಬಿದ್ದಿದ್ದು, ಮೇಲಿನ ಎಲೆ ಇಸ್ಪಿಟ್ 6 ಇದ್ದು, ಅದರ ಪಕ್ಕದಲ್ಲಿ ಕಣಕ್ಕೆ ಹಚ್ಚಿದ 205/- ರೂ/- 2] ರವಿ ಆತನಿಗೆ ಸೇರಿದ 420/- ರೂ/-  3] ಮಂಜು ಆತನಿಗೆ ಸೇರಿದ 580/- ರೂ/- 4] ಅಂಬರೇಶ ಆತನಿಗೆ ಸೇರಿದ 505/- ರೂ/- 5] ರಮೇಶ ಆತನ ಸೇರಿದ 575/- ರೂ/- ಹೀಗೆ ಒಟ್ಟು 2630/- ರೂಪಾಯಿಗಳು ದೊರೆತಿದ್ದು ಇರುತ್ತದೆ. ಜಪ್ತ ಮಾಡಿಕೊಂಡು  ರೇಡ ಪಂಚನಾಮೆ ದಿನಾಂಕ: 21-09-2015 ರಂದು ಸಾಯಂಕಾಲ 16-15 ಗಂಟೆಯಿಂದ 17-15 ಗಂಟೆಯವರೆಗೆ ಸ್ಥಳದಲ್ಲಿಯೇ ನಿರ್ವಹಿಸಿ, 5 ಜನ ಆರೋಪಿತರನ್ನು ತಾಬಾಕ್ಕೆ ತೆಗೆದುಕೊಂಡು ವಾಪಾಸ್ ಠಾಣೆಗೆ ಬಂದು 5 ಜನ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿ ನೀಡಿದ್ದರ ಸಾರಾಂಸದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ.ನಂ. 295/2015  ಕಲಂ 498(ಎ), 306 ಐ.ಪಿ.ಸಿ:.  
ದಿನಾಂಕ: 21-09-2015 ರಂದು ರಂದು ಸಂಜೆ 6:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ವಿರೇಶಪ್ಪ ತಂದೆ ಹನುಮಂತಪ್ಪ ಭೋವಿ, ವಯಸ್ಸು: 49 ವರ್ಷ ಜಾತಿ: ಭೋವಿ, ಉ: ಗೌಂಡಿ ಕೆಲಸ ಸಾ: ಬಸವಣ್ಣ ಕ್ಯಾಂಪ್ ಸಿದ್ದರ ಓಣಿ ತಾವರಗೇರಾ ತಾ: ಕುಷ್ಟಗಿ ಇವರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ದೂರನ್ನು ಕೊಟ್ಟಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ನನ್ನ ಎರಡನೇಯ ಮಗಳಾದ ಶ್ರೀಮತಿ ಚೆನ್ನಮ್ಮ 24 ವರ್ಷ ಇವಳನ್ನು ಈಗ್ಗೆ ಸುಮಾರು 4 ವರ್ಷಗಳ ಹಿಂದೆ ಗಂಗಾವತಿ ತಾಲೂಕಿನ ಬಸಾಪಟ್ಟಣದ ಹನುಮಂತಪ್ಪ ಎಂಬುವರ ಮಗನಾದ ಯಮನೂರ 26 ವರ್ಷ ಎಂಬುವನೊಂದಿಗೆ ಉಡುಮಕಲ್ ಗ್ರಾಮದಲ್ಲಿ ಸಾಮೂಹಿಕ ಮದುವೆಯನ್ನು ಮಾಡಿದ್ದೆವು. ಮದುವೆಯಾದ ನಂತರ ನನ್ನ ಮಗಳು ಅಳಿಯ ಇಬ್ಬರೂ ಅನ್ಯೊನ್ಯವಾಗಿದ್ದು ಅವರಿಗೆ 1] ಮಹೇಶ 2 ವರ್ಷ 2] 1 ತಿಂಗಳ ಗಂಡು ಮಗು ಇದ್ದು ಮೊದಲನೇಯ ಮಗು ಜನಸಿದ ನಂತರ ಯಮನೂರ ಈತನು ವಿಪರೀತ ಕುಡಿತದ ಚೆಟಕ್ಕೆ ಬಿದ್ದು ದುಡಿಯಲಾರದೇ ಪ್ರತಿದಿವಸ ನನ್ನ ಮಗಳಿಗೆ ಹೊಡೆಬಡೆ ಮಾಡಿ ಮಾನಸಿಕ ಹಾಗೂ ದೈಹಿಕವಾಗಿ ತೊಂದರೆ ಕೊಡುತ್ತಿದ್ದನು. ಈ ಬಗ್ಗೆ ನನ್ನ ಮಗಳು ಅವನ ಕಿರುಕಳವನ್ನು ತಾಳಲಾರದೇ ನನ್ನ ಹತ್ತಿರ ತಿಳಿಸಿದ್ದರಿಂದ ಬಸಾಪಟ್ಟಣದ ಗುರುಹಿರಿಯರ ಸಮಕ್ಷಮದಲ್ಲಿ ಬಗೆಹರಿಸಿದ್ದು ಆದರೂ ಸಹ ತನ್ನ ಪ್ರವೃತ್ತಿಯನ್ನು ಮುಂದುವರಿಸಿದ್ದರಿಂದ ಈಗ್ಗೆ ಸುಮಾರು 6 ತಿಂಗಳ ಹಿಂದೆ ಸುಧಾರಿಸಬಹುದು ಅಂತಾ ತಿಳಿದುಕೊಂಡು ನನ್ನ ಮಗಳು ಮತ್ತು ಅಳಿಯ ಇಬ್ಬರನ್ನು ನಮ್ಮ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದೆವು. ದಿನಾಂಕ: 15-08-2015 ರಂದು ನನ್ನ ಮಗಳಿಗೆ ಎರಡನೇಯ ಗಂಡು ಮಗು ಹೆರಿಗೆಯಾದ ನಂತರ ಇಂದು ದಿನಾಂಕ: 21-09-2015 ರಂದು ಬೆಳಿಗ್ಗೆ 8:30 ಗಂಟೆಯ ಸುಮಾರಿಗೆ ನನ್ನ ಅಳಿಯನಾದ ಯಮನೂರ ತಂದೆ ಹನುಮಂತಪ್ಪ ಭೋವಿ 26 ವರ್ಷ ಈತನು ಆಸ್ಪತ್ರೆಗೆ ತೋರಿಸಲೆಂದು ಮಗಳನ್ನು ಮತ್ತು ಕೂಸನ್ನು ಕರೆದುಕೊಂಡು ಬಂದಿದ್ದನು. ನಂತರ ಮಧ್ಯಾಹ್ನ 2:30 ಗಂಟೆಯ ಸುಮಾರಿಗೆ ಬಸಾಪಟ್ಟಣ ಗ್ರಾಮದ ಅಳ್ಳಪ್ಪ ತಂದೆ ಸಣ್ಣೆಪ್ಪ 35 ವರ್ಷ ಇವರು ಪೋನ್ ಮುಖಾಂತರ ನನ್ನ ಮಗಳು ವಿಷ ಸೇವನೆ ಮಾಡಿದ್ದು ಅವಳನ್ನು ನಮ್ಮ ಗ್ರಾಮದ ರೇವಣೇಶ ತಂದೆ ರಾಮಸ್ವಾಮಿ 35 ವರ್ಷ ಹಾಗೂ ಆತನ ತಮ್ಮನಾದ ಭೀಮೇಶ 19 ವರ್ಷ ಇವರೊಂದಿಗೆ ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಕರೆದುಕೊಂಡು ಬಂದಿರುವದಾಗಿ ತಿಳಿಸಿದನು. ಕೂಡಲೇ ನಾನು ಮತ್ತು ನನ್ನ ಹೆಂಡತಿ ಶ್ರೀಮತಿ ಹುಲಿಗೆಮ್ಮ ಇಬ್ಬರೂ ಕೂಡಿ ಆಸ್ಪತ್ರೆಗೆ ಬಂದು ವಿಚಾರಿಸಲು ಅಳ್ಳಪ್ಪನನ್ನು ವಿಚಾರಿಸಲು ಆತನು ತಿಳಿಸಿದ್ದೇನಂದರೆ, ಇಂದು ಮುಂಜಾನೆ 11:00 ಗಂಟೆಯ ನಂತರ ಯಮನೂರ ಈತನು ತಾವರಗೇರಾದಿಂದ ತನ್ನ ಹೆಂಡತಿ ಮಗುವನ್ನು ಕರೆದುಕೊಂಡು ಬಂದು ಮನೆಯಲ್ಲಿ ಅವಳೊಂದಿಗೆ ಜಗಳ ಮಾಡಿದ್ದರಿಂದ ಅವನ ಕಿರುಕಳವನ್ನು ತಾಳಲಾರದೇ ಮನೆಯಲ್ಲಿ ಯಾವುದೋ ಕ್ರಿಮಿನಾಶಕ ಔಷಧ ಸೇವನೆ ಮಾಡಿದ್ದು ಆಗ ಪಕ್ಕದ ಮನೆಯವರು ಕೂಗಾಡಲು ವಿಷಯ ತಿಳಿದು ಎಲ್ಲರೂ ಕೂಡಿ ಒಂದು ಅಟೋದಲ್ಲಿ ಅವಳನ್ನು ಚಿಕಿತ್ಸೆ ಕುರಿತು ಆಸ್ಪತ್ರೆಗೆ ಕರೆತಂದಾಗ ವೈಧ್ಯರು ಮೃತಪಟ್ಟಿರುವದಾಗಿ  ತಿಳಿಸಿರುವ ಬಗ್ಗೆ ತಿಳಿಸಿದನು.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ.ನಂ. 296/2015  ಕಲಂ 279 ಐ.ಪಿ.ಸಿ 187 ಐ.ಎಂ.ವಿ. ಕಾಯ್ದೆ:. 

ದಿನಾಂಕ:- 21-09-2015 ರಂದು ರಾತ್ರಿ 8:00 ಗಂಟೆಗೆ ಶ್ರೀ ಕೆ. ವಂಶಿ ಚಂದ್ರಶೇಖರ, ಮ್ಯಾನೇಜರ್ ಹೆಚ್.ಆರ್. @ ಎಡ್ಮಿ ಮಿನಸ್ಟ್ರೇಟರ್ ಸಿಂಧನೂರ-ಗಂಗಾವತಿ ಟೋಲವೇ ಪ್ರೈ.ಲಿ. ವೆಂಕಟಗಿರಿ ಕ್ಯಾಂಪ್ ಇವರು ಠಾಣೆಗೆ ಹಾಜರಾಗಿ ಒಂದು ಇಂಗ್ಲಿಷನಲ್ಲಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ದಿನಾಂಕ: 21-09-2015 ರಂದು ಬೆಳಗಿನ ಜಾವ 00:20 ಗಂಟೆಯ ಸುಮಾರಿಗೆ ಮರಳಿ ಗ್ರಾಮ ಸೀಮಾದಲ್ಲಿ ನಿರ್ಮಾಣ ಹಂತಹದ ಟೋಲ್ ಗೇಟ್ ಸಿಬ್ಬಂದಿಯವರು ಪೋನ್ ಮಾಡಿ ತಿಳಿಸಿದ ಪ್ರಕಾರ ಸ್ಥಳಕ್ಕೆ ಹೋಗಿ ಪರಿಶೀಲಿಸಲು ಮರಳಿ ಹತ್ತಿರ ಗಂಗಾವತಿ-ಸಿಂಧನೂರ ಮುಖ್ಯ ರಸ್ತೆಯಲ್ಲಿ ಟೋಲ್ ಪ್ಲಾಜ ನಿರ್ಮಾಣ ಮಾಡುವ ಕಾಲಕ್ಕೆ ಶ್ರೀರಾಮನಗರ ಕಡೆಯಿಂದ ಒಬ್ಬ ಲಾರಿ ನಂ: ಎ.ಪಿ.-20/ಟಿಬಿ-3588 ನೇದ್ದರ ಚಾಲಕನು ತನ್ನ ಲಾರಿಯನ್ನು ವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಟೋಲ್ ಬೂತಗೆ ನೇರವಾಗಿ ಟಕ್ಕರು ಕೊಟ್ಟು ಅಪಘಾತ ಮಾಡಿದ್ದರಿಂದ ಟೋಲ್ ಬೂತ್ ಸಂಪೂರ್ಣವಾಗಿ ಡ್ಯಾಮೇಜ್ ಆಗಿದ್ದು ಇರುತ್ತದೆ.  ಕಾರಣ ಈ ಬಗ್ಗೆ ಸದರಿ ಲಾರಿ ನಂ: AP-20/TB-3588 ನೇದ್ದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಇಂಗ್ಲೀಷನಲ್ಲಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದರ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008