Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, September 7, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 199/2015  ಕಲಂ 87 Karnataka Police Act:.
ದಿನಾಂಕ- 06-09-2015 ರಂದು ಸಾಯಂಕಾಲ 4-20 ಗಂಟೆಯ ಸುಮಾರಿಗೆ ಪಿ.ಎಸ್.ಐ ಸಾಹೇಬರು ಇಸ್ಪೀಟ್ ಜೂಜಾಟದ ಮೂಲ ಪಂಚನಾಮೆ ಒಂದು ವರದಿಯನ್ನು ಹಾಜರುಪಡಿಸಿದ್ದು ಸಾರಾಂಶವೆನಂದರೆ ಇಂದು ದಿನಾಂಕಃ- 06-09-2015 ರಂದು ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ಕಾರಟಗಿ ಠಾಣಾ ವ್ಯಾಫ್ತಿಯ ಕಾರಟಗಿಯ ಪನ್ನಾಪೂರ ಕ್ರಾಸ್ ಹತ್ತಿರ ಕೇನಾಲ್ ದಂಡೆಯ ಮೇಲೆ ಸಜ್ಜನರವರ ಹೊಲದ ಹತ್ತಿರ  ಸಾರ್ವಜನಿಕರ ಸ್ಥಳದಲ್ಲಿ ಆರೋಪಿತ ರು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಿ.ಎಸ್.ಐ.ಸಾಹೇಬರು ಸಿಬ್ಬಂದಿಗಳು ಜೊತೆಯಲ್ಲಿದ್ದ ಪಂಚರ ಸಮಕ್ಷದಲ್ಲಿ ದಾಳಿ ಮಾಡಲು 7 ಜನ ಆರೋಪಿತನ್ನು ಮತ್ತು ಅವರ ಕಡೆಯಿಂದ ಒಟ್ಟು ನಗದು ಹಣ ರೂ.11100/- ಮತ್ತು 52 ಇಸ್ಪೀಟ್ ಎಲೆಗಳು  ಒಂದು ಹಳೆ ಬರಕಾವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡ ಬಗ್ಗೆ ಮುಂತಾಗಿ ಇದ್ದ ವರದಿಯ ಮೇಲಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2)  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 200/2015  ಕಲಂ 87 Karnataka Police Act:.
ದಿನಾಂಕ- 06-09-2015 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಪಿ.ಎಸ್.ಐ ಸಾಹೇಬರು ಇಸ್ಪೀಟ್ ಜೂಜಾಟದ ಮೂಲ ಪಂಚನಾಮೆ ಒಂದು ವರದಿಯನ್ನು ಹಾಜರುಪಡಿಸಿದ್ದು ಸಾರಾಂಶವೆನಂದರೆ ಇಂದು ದಿನಾಂಕಃ- 06-09-2015 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ಕಾರಟಗಿ ಠಾಣಾ ವ್ಯಾಫ್ತಿಯ ಹಗೇದಾಳ ಗ್ರಾಮದ ಬಸವರಾಜ ದೇಸಾಯಿ ಇವರ ಗೋಡಾನ್ ಹಿಂದೆ ಸಾರ್ವಜನಿಕರ ಸ್ಥಳದಲ್ಲಿ ಆರೋಪಿತರು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಿ.ಎಸ್.ಐ.ಸಾಹೇಬರು ಸಿಬ್ಬಂದಿಗಳು ಜೊತೆಯಲ್ಲಿದ್ದ ಪಂಚರ ಸಮಕ್ಷದಲ್ಲಿ ದಾಳಿ ಮಾಡಲು 9 ಜನ ಆರೋಪಿತನ್ನು ಮತ್ತು ಅವರ ಕಡೆಯಿಂದ ಒಟ್ಟು ನಗದು ಹಣ ರೂ.3700/- ಮತ್ತು 52 ಇಸ್ಪೀಟ್ ಎಲೆಗಳು ಒಂದು ಹಳೆ ಬರಕಾವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡ ಬಗ್ಗೆ ಮುಂತಾಗಿ ಇದ್ದ ವರದಿಯ ಮೇಲಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.    
3ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 233/2015  ಕಲಂ 279, 337, 338 ಐ.ಪಿ.ಸಿ:.

ದಿ:06-09-2015 ರಂದು ರಾತ್ರಿ 7-20 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ ಗಾಯಗೊಂಡವರು ಚಿಕಿತ್ಸೆ ಕುರಿತು ಸೇರಿಕೆಯಾಗಿರುವ ಬಗ್ಗೆ ಎಮ್.ಎಲ್.ಸಿ ಸ್ವೀಕೃತವಾಗಿದ್ದು ಆಸ್ಪತ್ರೆ ಗೆ ಭೇಟಿ ನೀಡಿ ಗಾಯಾಳು ಬಸಯ್ಯ ಬ್ಯಾಳಿ ಸಾ: ಹುಲಿಗಿ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸದರಿ ದೂರಿನ ಸಾರಾಂಶವೇನೆಂದರೇ, ಇಂದು ದಿ:06-09-15 ರಂದು ಬೆಳಿಗ್ಗೆ ನಾನು ನಮ್ಮ ತಮ್ಮ ಶಿವಯ್ಯ ಲಗ್ನಕ್ಕೆ ಬಟ್ಟೆಗಳನ್ನು ತರಲು ಅಂತಾ ನಮ್ಮ ತಾಯಿ ಮತ್ತು  ಸಂಬಂಧಿಕರನ್ನು ಕರೆದುಕೊಂಢು ನಮ್ಮೂರಿನ ಶರಣಪ್ಪ ಕವಲೂರ ಇವರ ಆಟೋ ನಂ: ಕೆಎ-37/9337 ನೇದ್ದಲ್ಲಿ ಕುಳಿತು ಕುಕನೂರಿಗೆ ಹೋದೆವು. ನಂತರ ಮದ್ಯಾಹ್ನ ಬಟ್ಟೆಗಳನ್ನು ಖರೀದಿಸಿ ಊಟ ಮಾಡಿಕೊಂಡು ವಾಪಾಸ್ ಅದೇ ಆಟೋದಲ್ಲಿ ಎಲ್ಲರೂ ಕುಳಿತು ಊರಿಗೆ ಬರುವಾಗ ಕಾಮನೂರ ದಾಟಿ ಭೀಮನೂರ ರಸ್ತೆಯಲ್ಲಿ ಸಾಯಂಕಾಲ 5-00 ಗಂಟೆಯ ಸುಮಾರಿಗೆ ನಮ್ಮ ಆಟೋ ಚಾಲಕನು ತನ್ನ ಆಟೋವನ್ನು ರಸ್ತೆಯ ಎಡಬಾಜು ಓಡಿಸಿಕೊಂಡು ಗಿಣಿಗೇರಿ ಕಡೆಗೆ ಬರುತ್ತಿದ್ದಾಗ ಅದೇವೇಳೆಗೆ ಎದುರುಗಡೆಯಿಂದ ಒಂದು ಓಮಿನಿ ಕಾರ್ ನಂ: ಕೆಎ-28/ಎಮ್-6578 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಓಡಿಸುತ್ತಾ ಬಂದವನೇ ನಮ್ಮ ಆಟೋ ಕ್ಕೆ ಟಕ್ಕರ ಕೊಟ್ಟು ಅಪಘಾತ ಮಾಡಿದನು. ಈ ಅಪಘಾತದಲ್ಲಿ ನನಗೆ ತೆರೆಚಿದ ಗಾಯಗಳಾಗಿದ್ದು, ನಮ್ಮ ಚಾಲಕ ಶರಣಪ್ಪನಿಗೆ ತಲೆಗೆ ಎಡಕಣ್ಣಿನ ಹತ್ತಿರ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ಆಟೋದಲ್ಲಿದ್ದ ನಮ್ಮ ತಾಯಿ ಈರಮ್ಮಳಿಗೆ ತಲೆಗೆ ಭಾರಿ ರಕ್ತಗಾಯವಾಗಿದೆ, ಸಿದ್ದಲಿಂಗಯ್ಯ ಇತನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಂಗಮ್ಮ ಮತ್ತು ಲಲಿತಮ್ಮ ಇವರಿಗೆ ಭಾರಿ ಗಾಯಗಳಾಗಿವೆ. ಗೌರಮ್ಮ ಮತ್ತು ಕಳಕಯ್ಯ ಇವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಮತ್ತು ಅಪಘಾತ ಮಾಡಿದ ಕಾರ ಚಾಲಕ ಆನಂದಗೌಡ ಗೌಡ್ರ ಹಾಗೂ ಕಾರಿನಲ್ಲಿದ್ದ ಶಿವಕುಮಾರ ಮತ್ತು ಹುಲಿಗೆಮ್ಮ ಇವರಿಗೆ ಭಾರಿ ಗಾಯಗಳಾಗಿರುತ್ತವೆ. ಮತ್ತು ಕಾರಿನಲ್ಲಿದ್ದ ಶಿಲ್ಪಾ, ಕನಕನಗೌಡ [ಮಗು] ಇವರಿಗೆ ಸಾದಾ ಸ್ವೂಪದ ಗಾಯಗಳಾಗಿದ್ದು ಅದೆ. ಕಾರಣ ಸದರಿ ಕಾರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಪಡೆದುಕೊಂಡು, ವಾಪಾಸ್ ಠಾಣೆಗೆ ರಾತ್ರಿ 9-00 ಗಂಟೆಗೆ ಬಂದು ಸದರಿ ದೂರಿನ ಮೇಲಿಂದ  ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008