Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, October 13, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 138/2015 ಕಲಂ. 87 Karntaka Police Act.
ದಿನಾಂಕ: 12-10-2015 ರಂದು 7-30 ಪಿಎಂಕ್ಕೆ ಪಿ.ಎಸ್.. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 5 ಜನ ಆರೋಪಿತರನ್ನು ಹಾಜರಪಡಿಸಿ ವರದಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಜೂಜಾಟದ ಮಾಹಿತಿ ಬಂದ ಪ್ರಕಾರ ತಾವು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 5-15 ಪಿಎಂಕ್ಕೆ ಕಕ್ಕಿಹಳ್ಳಿ ಗ್ರಾಮದ ಅಳಿಯ ಚೆನ್ನಬಸವೇಶ್ವರ ದೇವಸ್ಥಾನದ ಮುಂದಿನ ಸಾರ್ವಜನಿಕ ಬಯಲು ಜಾಗೆಯಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ, ಸದರಿಯವರನ್ನು ವಶಕ್ಕೆ ಪಡೆದುಕೊಂಡು ಸದರಿಯವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಪ್ಲಾಸ್ಟಿಕ್ ಚೀಲ, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 3400/- ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 102/2015  ಕಲಂ 87 Karnataka Police Act.
ದಿನಾಂಕ: 12-10-2015 ರಂದು ಮುಂಜಾನೆ 11 ಗಂಟೆಯ ಸುಮಾರಿಗೆ ಕಲ್ಲೂರು ಗ್ರಾಮದಲ್ಲಿರುವ ಅಲೈ ಮಸೀದಿ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 6 ಜನರು ಸಿಕ್ಕಿ ಬಿದ್ದಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 1,080=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು ಹಳೆ ಪ್ಲಾಸ್ಟೀಕ್ ಬರಕ ಅಂ.ಕಿ. ಇಲ್ಲ. ಇವುಗಳು ಸಿಕ್ಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.  
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 313/2015  ಕಲಂ.  78(3) Karnataka Police Act.
ದಿನಾಂಕ:- 12-10-2015 ರಂದು ರಾತ್ರಿ 8:30 ಗಂಟೆಗೆ ಶ್ರೀ ಹನುಮರಡ್ಡೆಪ್ಪ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ರವರು ಕನರ್ಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ:-12-10-2015 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ  ಶ್ರೀರಾಮನಗರ ಗ್ರಾಮದಲ್ಲಿ ಬಸ್ ನಿಲ್ದಾಣದ ಹತ್ತಿರ ಒಂದು ಪಾನ್ ಶಾಪ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಪಿ.ಸಿ. 180, 110, 323 ಎ.ಪಿ.ಸಿ. 77 ಇವರು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ನೇದ್ದರಲ್ಲಿ ಠಾಣೆಯಿಂದ ಸಂಜೆ 7:00 ಗಂಟೆಗೆ ಹೊರಟು ಶ್ರೀರಾಮನಗರದ ಊರ ಮುಂದೆ ಜೀಪ್ನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ಬಸ್ ನಿಲ್ದಾಣದ ಹತ್ತಿರ ಒಂದು ಪಾನ್ ಶಾಪ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಸೇರಿದ್ದು, ಅವರಲ್ಲಿ ಪಾನ್ ಶಾಪ್ನ ಲೈಟಿನ ಬೆಳಕಿನಲ್ಲಿ ಒಬ್ಬ ವ್ಯಕ್ತಿಯು ಕುಳಿತುಕೊಂಡು ಜನರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ, ಅದೃಷ್ಟದ ಮಟಕಾ ನಂಬರ್ಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಮೋಸದ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ರಾತ್ರಿ 7:30 ಗಂಟೆಯಾಗಿದ್ದು ಕೂಡಲೇ ಅವರ ದಾಳಿ ಮಾಡಲಾಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದವನು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕಿಬಿದ್ದವನನ್ನು ವಿಚಾರಿಸಲಾಗಿ ಅವನು ತನ್ನ ಹೆಸರು ವೀರಬಸಯ್ಯ ತಂದೆ ಸಂಗಯ್ಯ ವಯಸ್ಸು 32 ವರ್ಷ, ಜಾತಿ: ಜಂಗಮರು ಉ: ಪಾನ್ ಶಾಪ್ ಸಾ: 2ನೇ ವಾರ್ಡ-ಶ್ರೀರಾಮನಗರ. ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 1,300/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆತಿದ್ದು ಇದೆ. ನಂತರ ಅವನಿಗೆ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀಯಾ ? ಅಂತಾ ವಿಚಾರಿಸಲು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದನು. ಈ ಬಗ್ಗೆ ರಾತ್ರಿ 7:30 ರಿಂದ 8:00 ಗಂಟೆಯವರೆಗೆ ಸ್ಥಳದಲ್ಲಿಯೇ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತನೊಂದಿಗೆ ಠಾಣೆಗೆ ವಾಪಸ್ ಬಂದಿದ್ದು, ನಂತರ ಸದರಿ ಆರೋಪಿತನ ವಿರುದ್ಧ ಕಲಂ 78() ಕೆ.ಪಿ. ಆ್ಯಕ್ಟ್ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆ. ಅಂತಾ ಸಾರಾಂಶ ಇದ್ದು, ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದು, ಕಾರಣ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ರಾತ್ರಿ 9:00 ಗಂಟೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 313/2015 ಕಲಂ 78(3) ಕೆ.ಪಿ. ಆ್ಯಕ್ಟ್ ಅಡಿ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.
4) ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 34/2015  ಕಲಂ.  279, 304(ಎ) ಐ.ಪಿ.ಸಿ:.

ದಿನಾಂಕ 12-10-2015 ರಂದು ರಾತ್ರಿ 11-15 ಗಂಟೆ ಸುಮಾರಿಗೆ ಫಿರ್ಯಾಧಿದಾರರದ ಹುಲಿಗೆಮ್ಮ ಗಂಡ ಯಂಕೊಬ ಸಾ:ಲಕ್ಷ್ಮೀಕ್ಯಾಂಪ್ ಗಂಗಾವತಿ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ಇಂದು ದಿನಾಂಕ 12-10-2015 ರಂದು ಸಂಜೆ 07-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಅಕ್ಕನ 2ನೇ ಮಗಳಾದ ಅರ್ಚನ : 03 ವರ್ಷ ಇಬ್ಬರು ಸೇರಿಕೊಂಡು ಲಕ್ಷ್ಮೀಕ್ಯಾಂಪ್ನ ಆಂಜನೇಯ ಗುಡಿ ಹತ್ತಿರ ಇರುವ ಕಿರಾಣಿ ಅಂಗಡಿಗೆ ಹೋಗಿ ವಾಪಸ್ ಜಯರಾಜ ರವರ ಮನೆಯ ಮುಂದೆ ನಡೆದುಕೊಂಡು ಬರುತ್ತಿರುವಾಗ ನನ್ನ ಮುಂದುಗಡೆಯಿಂದ ಅಂದರೆ ಲಕ್ಷ್ಮೀಕ್ಯಾಂಪ್ನ ದಕ್ಷಿಣದ ರಸ್ತೆ ಕಡೆಯಿಂದ ಒಬ್ಬ ಕಾರು ಚಾಲಕ [ಕೆಎ48 ಎಂ4289] ನೇದ್ದನ್ನು ಮುಸ್ಸೂಚನೆ ಕೊಡದೇ ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಎಡಕ್ಕೆ [ಪಶ್ಚಿಮಕ್ಕೆ] ತಿರುಗಿಸಿ ಅರ್ಚನಳಿಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು ಅರ್ಚನಳ ಹಣೆಗೆ ಪೆಟ್ಟಾಗಿ ರಕ್ತ ಬರುತ್ತಿದ್ದು  ನಾನು ಮತ್ತು ಮಲ್ಲಪ್ಪ ಕುರಿ ಹಾಗೂ ಅಪಘಾತ ಮಾಡಿದ ಕಾರು ಚಾಲಕ ಸೇರಿಕೊಂಡು ಅಪಘಾತ ಮಾಡಿದ ಕಾರಿನಲ್ಲಿಯೇ ಆರ್ಚನಳನ್ನು ಇಲಾಜು ಕುರಿತು ಗಂಗಾವತಿ ಸಕರ್ಾರಿ ಆಸ್ಪತ್ರೆಗೆ ಕರದುಕೊಂಡು ಬರುವಷ್ಟರಲ್ಲಿ ಅರ್ಚನ ಇವಳು ಮಾರ್ಗಮದ್ಯದಲ್ಲಿ ಮೃತಪಟ್ಟಿರುತ್ತಾಳೆ ವಿಷಯ ತಿಳಿದ ಚಾಲಕ ನಮ್ಮನ್ನು ಸರಕಾರಿ ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾಗಿರುತ್ತನೆ ನಂತರ ನಾನು ಚಾಲಕನ ಹೆಸರನ್ನು ಮಲಪ್ಪ ಕುರಿ ಈತನಿಗೆ ಕೇಳಲಾಗಿ ಚಾಲಕ ನನಗೆ ಗೊತ್ತಿದ್ದು ಆತನ ಹೆಸರು ದುರಗೇಶ ಅಕ್ಕಿರೊಟ್ಟಿ ಸಾ:ಲಕ್ಷ್ಮೀಕ್ಯಾಂಪ್ ಗಂಗಾವತಿ ಅಂತಾ ತಿಳಿಸಿದನು ನಾನು ಆತನನ್ನು ನೋಡಿದರೆ ಗುರುತಿಸುತ್ತೆನೆ ಅರ್ಚನಳು ಇಂದು ದಿನಾಂಕ 12-10-2015 ಸಂಜೆ 7-40 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ನಂತರ ನಮ್ಮ ಮಾವನಾದ ವಿರೇಶನಿಗೆ ಅಂದರೆ ಅರ್ಚನಳ ತಂದೆ ರವರಿಗೆ ಪೊನ್ ಮುಖಾಂತರ ವಿಷಯ ತಿಳಿಸಿದೆವು ಇವರು ಬಂದ ನಂತರ ಪಿರ್ಯಾದಿಯನ್ನು ಕೊಡೋಣ ಅಂತಾ ನಾನು ಠಾಣೆಗೆ ಬಂದು ಪಿರ್ಯಾದಿಯನ್ನು ಕೊಟ್ಟಿರುವುದಿಲ್ಲಾ ನಂತರ ರಾತ್ರಿ 10-30 ಗಂಟೆಗೆ ನನ್ನ ಮಾವನಾದ ವಿರೇಶ ಇವರು ಊರಿಂದ ಗಂಗಾವತಿಗೆ ಬಂದಾಗ ಅವರೊಂದಿಗೆ ವಿಚಾರಿಸಿ ವಿಷಯ ತಿಳಿಸಿ ತಡವಾಗಿ ಠಾಣೆಗೆ ಬಂದು ಪಿರ್ಯಾದಿಯನ್ನು ಕೊಟ್ಟಿರುತ್ತೇನೆಕಾರಣ ಅಪಘಾತ ಮಾಡಿದ ಇಂಡಿಕಾ ವಿಸ್ಟಾ  ನಂ ಕೆ..48-ಎಂ 4289 ನೇದ್ದರ ಚಾಲಕ ದುರಗೇಶ ಅಕ್ಕಿರೊಟ್ಟಿ  ಸಾ:ಲಕ್ಷ್ಮೀಕ್ಯಾಂಪ್ ಗಂಗಾವತಿ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ.

0 comments:

 
Will Smith Visitors
Since 01/02/2008