Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, November 19, 2015

1) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 236/2015 ಕಲಂ. 78(3) Karnataka Police Act.
ದಿನಾಂಕ 18-11-2015 ರಂದು ಸಂಜೆ 05-30 ಗಂಟೆ ಸುಮಾರಿಗೆ ಮುನಿರಾಬಾದ ಠಾಣಾ ವ್ಯಾಪ್ತಿಯ ಹಿಟ್ನಾಳ ಗ್ರಾಮದ ಗ್ರಾಮಪಂಚಾಯತಿ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ  ಜೂಜಾಟ ನಡೆದ ಬಗ್ಗೆ ಖಚಿತ ಮಾಹಿತಿ ಬಂದ  ಮೇರೆಗೆ ಶ್ರೀ. ಜಯಪ್ರಕಾಶ ಪಿ.ಎಸ್.ಐ ಮುನಿರಾಬಾದ ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಹಿಡಿದು ಒಬ್ಬನು ಆರೋಪಿಯು ಸಿಕ್ಕಿದು ಅವರಿಂದ ಜೂಜಾಟದ ಸಾಮಾಗ್ರಿಗಳಾದ ಮಟಕಾ ಪಟ್ಟಿ ,ಒಂದು ಬಾಲ ಪೆನ್ನು ಜೂಜಾಟದ ನಗದು ಹಣ 1500-00 ರೂ.ಗಳನ್ನು ಜಪ್ತು ಮಾಡಿ ಮೂಲ ಪಂಚನಮೆ ಹಾಗೂ ಪಿರ್ಯದಿ ನೀಡಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 237/2015 ಕಲಂ. 78(3) Karnataka Police Act.
ದಿನಾಂಕ 18-11-2015 ರಂದು ಸಂಜೆ 07-30 ಗಂಟೆ ಸುಮಾರಿಗೆ ಮುನಿರಾಬಾದ ಠಾಣಾ ವ್ಯಾಪ್ತಿಯ ಹಿಟ್ನಾಳ ಗ್ರಾಮದ ಗ್ರಾಮಪಂಚಾಯತಿ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ  ಜೂಜಾಟ ನಡೆದ ಬಗ್ಗೆ ಖಚಿತ ಮಾಹಿತಿ ಬಂದ  ಮೇರೆಗೆ ಶ್ರೀ. ಜಯಪ್ರಕಾಶ ಪಿ.ಎಸ್.ಐ ಮುನಿರಾಬಾದ ಸಿಬ್ಬಂದಿಯವರೊಂದಿಗೆ ಹೋಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಹಿಡಿದು ಒಬ್ಬನು ಆರೋಪಿಯು ಸಿಕ್ಕಿದು ಅವರಿಂದ ಜೂಜಾಟದ ಸಾಮಾಗ್ರಿಗಳಾದ ಮಟಕಾ ಪಟ್ಟಿ, ಒಂದು ಬಾಲ ಪೆನ್ನು ಜೂಜಾಟದ ನಗದು ಹಣ 1500-00 ರೂ.ಗಳನ್ನು ಜಪ್ತು ಮಾಡಿ ಮೂಲ ಪಂಚನಮೆ ಹಾಗೂ ಪಿರ್ಯದಿ ನೀಡಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 271/2015 ಕಲಂ. 78(3) Karnataka Police Act.
ದಿನಾಂಕ: 18-11-2015 ರಂದು ರಾತ್ರಿ 7-00 ಗಂಟೆಗೆ ಶ್ರೀ ಚಿತ್ತರಂಜನ್. ಡಿ. ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಮಟಕಾ ಜೂಜಾಟದ ದಾಳಿ ಮಾಡಿ ವರದಿಯನ್ನು ಹಾಜರಪಡಿಸಿದ್ದು, ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಮಾನ್ಯ ಘನ ನ್ಯಾಯಾಲಯದಿಂದಾ ಅನುಮತಿ ಪಡೆದುಕೊಂಡಿದ್ದು, ಸದರಿ ದೂರಿನ ಸಾರಾಂಶವೇನೆಂದರೇ, ಇಂದು ದಿ:18-11-2015 ರಂದು ಸಾಯಂಕಾಲ 5-30 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಲಾಚನಕೇರಿ ಗ್ರಾಮದಲ್ಲಿ ಆರೋಪಿ ಸಿದ್ದಯ್ಯ ಹಿರೇಮಠ ತನು ತನ್ನ ಪಾನ ಶಾಪ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ  ಆರೋಪಿತನು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಕೂಗುತ್ತಾ ಮಟಕಾ ನಶೀಬದ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ ಹಾಗೂ ಸಿಬ್ಬಂದಿಗಳು ಕೂಡಿಕೊಂಡು ದಾಳಿ ಮಾಡಿ ಆರೋಪಿ ಸಿದ್ದಯ್ಯ ಇವನಿಂದ ನಗದು ಹಣ ರೂ 1,120=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು, ಸದರಿ ಆರೋಪಿತನು ತಾನು ಬರೆದ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ರಾತ್ರಿ 7-45 ಗಂಟೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.  
4) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 271/2015 ಕಲಂ. 78(3) Karnataka Police Act.
ದಿನಾಂಕ: 18-11-2015 ರಂದು ರಾತ್ರಿ 10-00 ಗಂಟೆಗೆ ಶ್ರೀ ರಾಜಾಸಾಬ. ಎಮ್ಮಿ. ಸಿ.ಹೆಚ್.ಸಿ-90  ರವರು ಠಾಣೆಗೆ ಹಾಜರಾಗಿ ಮಟಕಾ ಜೂಜಾಟದ ದಾಳಿ ಮಾಡಿ ವರದಿಯನ್ನು ಹಾಜರಪಡಿಸಿದ್ದು, ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಮಾನ್ಯ ಘನ ನ್ಯಾಯಾಲಯದಿಂದಾ ಅನುಮತಿ ಪಡೆದುಕೊಂಡಿದ್ದು, ಸದರಿ ದೂರಿನ ಸಾರಾಂಶವೇನೆಂದರೇ, ಇಂದು ದಿ:18-11-2015 ರಂದು ರಾತ್ರಿ 7-20 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಾಳ ಗ್ರಾಮದ ಶ್ರೀಶ್ಐಲ ಟಾಕೀಜ ಮುಂದೆ ಸಾರ್ವಜನಿಕ ಸ್ಥಳದಲ್ಲಿ  ಆರೋಪಿ ನಂ: 01 ವೆಂಕಟೇಶ ಇತನು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಕೂಗುತ್ತಾ ಮಟಕಾ ನಶೀಬದ ಜೂಜಾಟದಲ್ಲಿ ತೊಡಗಿದ್ದಾಗ ಸಿ.ಹೆಚ್.ಸಿ-90 ರವರು ಹಾಗೂ ಸಿಬ್ಬಂದಿಗಳು ಕೂಡಿಕೊಂಡು ದಾಳಿ ಮಾಡಿ ಆರೋಪಿ ನಂ: 01 ಇವರಿಂದ ನಗದು ಹಣ ರೂ 640=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು, ಸದರಿ ಆರೋಪಿತನು ತಾನು ಬರೆದ ಪಟ್ಟಿಯನ್ನು ಆರೋಪಿ ನಂ: 02 ಶ್ರೀಶೈಲ್ ಹೀರಾಳ ಸಾ: ಕಿನ್ನಾಳ ಇವರಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
5) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ.  106/2015 ಕಲಂ. 78(3) Karnataka Police Act.
ದಿನಾಂಕ: 18-11-2015 ರಂದು ಸಂಜೆ 6-30 ಗಂಟೆ ಸುಮಾರಿಗೆ ಠಾಣೆಯ ಸಿಬ್ಬಂದಿಯವರೊಂದಿಗೆ ಮಟಕಾ ಜೂಜಾಟದ ದಾಳಿ ಮಾಡಿ, ವಾಪಸ್ ಠಾಣೆಗೆ ಬಂದು ಒಂದು ವರದಿ ಮತ್ತು ಮುದ್ದೇಮಾಲು ಹಾಗೂ ಒಬ್ಬ ಆರೋಪಿತನನ್ನು ಮುಂದಿನ ಕ್ರಮ ಕುರಿತು ಒಪ್ಪಿಸಿದ್ದು, ಸದರಿ ವರದಿಯನ್ನು ಪಡೆದುಕೊಂಡು ಪರಿಶೀಲನೆ ಮಾಡಿ ನೋಡಲಾಗಿ, ಅದರ ಸಾರಾಂಶವೆನೆಂದರೆ, ಇಂದು ದಿನಾಂಕ: 18-11-2015 ರಂದು ಸಂಜೆ 6-45 ಗಂಟೆಗೆ ಆರೋಪಿತನಾದ ಶಿವಣ್ಣ ತಂದೆ ಹನಮಪ್ಪ ದ್ಯಾಂಪೂರ, ವಯ: 49 ವರ್ಷ, ಜಾ: ಲಿಂಗಾಯತ, ಸಾ: ಕವಲೂರು ಇವನು ಕವಲೂರು ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರ ಚಟುವಟಿಕೆಯಾದ ಮಟಕಾ ಜೂಜಾಟದಲ್ಲಿ ನಿರತನಾಗಿದ್ದಾಗ ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ನಿರತನಾಗಿದ್ದ ಆರೋಪಿತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಹಾಗೂ ನಗದು ಹಣ 605=00 ರೂ.ಗಳನ್ನು ಜಪ್ತ ಮಾಡಿಕೊಂಡು ಪಂಚನಾಮೆಯನ್ನು ಪೂರೈಸಿಕೊಂಡು  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
6) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 235/2015 ಕಲಂ. 279, 337, 338 ಐ.ಪಿ.ಸಿ:.
ದಿನಾಂಕ 18-11-2015 ರಂದು 5-00 ಪಿ.ಎಮ್ ಕ್ಕೆ ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ಹೇಳಿ ಬರೆಸಿದ್ದು ಸಾರಾಂಶ ವೆನೆಂದರೆ, ದಿನಾಂಕ 6/11/2015 ರಂದು 4-45 ಪಿ.ಎಮ್.ಕ್ಕೆ  ಆರೋಪಿ ಉಮೇಶ ಕಾತರಕಿ ಸಾ: ಗೊಂಡಬಾಳ ಈತನು ತನ್ನ ಆಟೋ  ಪ್ಯಾಸೆಂಜರ ವಾಹನ ನಂ. ಕೆಎ-37/ 4151 ನೇದ್ದರಲ್ಲಿ ಫಿರ್ಯಾದಿದಾರರಿಗೆ ಮತ್ತು ಶಾಶಿಂಬಿ, ಆಸ್ಪನ್ ಹಾಗೂ ಅಕ್ಬರಸಾಬ ಮತ್ತು ಮಾಬುಸಾಬ ಇವರೆಲ್ಲರನ್ನು ಕೂಡ್ರಿಸಿಕೊಂಡು ಹುಲಿಗೆಮ್ಮ ದೇವಸ್ಥಾನಕ್ಕೆ ಹೋಗಿ ವಾಪಾಸ್ ತಮ್ಮೂರಿಗೆ ಹೊಗಲು ಹೊಸಳ್ಳಿ-ಹಿರೇಬಗನಾಳ  ರಸ್ತೆಯ ಮೇಲೆ, ಕಾಸನಕಂಡಿ ಸೀಮಾದಲ್ಲಿರುವ ಬಸವಣ್ಣನ ದೇವಸ್ಥಾನದ ಹತ್ತಿರ ತನ್ನ ಆಟೋರಿಕ್ಷಾವನ್ನು ಅತಿ ವೇಗ ಹಾಗೂ ಅಲಕ್ಷತ ನದಿಂದ ಚಲಾಯಿಸಿಕೊಂಡು ಹೊಗಿ ವೇಗದಲ್ಲಿರುವ ವಾಹನಕ್ಕೆ ಒಮ್ಮೆಲೆ ಬ್ರೆಕ್ ಹಾಕಿದ್ದರಿಂದ ಸದರ ವಾಹನ ರಸ್ತೆಯ ಬಲ ಮಗ್ಗುಲಾಗಿ ಪಲ್ಟಿಯಾಗಿದ್ದರಿಂದ ಸದರ ಆಟೋದಲ್ಲಿದ್ದ ಫಿರ್ಯಾದಿಗೆ & ಖಾಶಿಂಬಿಗೆ ಮತ್ತು ಮಗುವಿಗೆ ಸಾದಾ ಮತ್ತು ಭಾರಿ ಸ್ವರೂಪದ  ಗಾಯ ಪೆಟ್ಟುಗಳಾಗಿ ರುತ್ತವೆ ಕಾರಣ ಸದರಿ ಆರೋಪಿತನ ಮೇಲೆ ಕಾನೂನ ಪ್ರಕಾರ ಕ್ರಮ ಜರುಗಿಸಲು ವಿನಂತಿ. ತಾವು ದಾರವಾಡ ಎಸ್ ಡಿ ಎಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಬಿಡುಗಡೆಯಾಗಿ ತಮ್ಮಲ್ಲಿ ಬಂದು ದೂರು ನೀಡಿರುತ್ತೇನೆ  ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶ ಮೇಲಿಂದ  ಪ್ರಕರಣ ದಾಖಲಿಸಿದ್ದು  ಇರುತ್ತದೆ.
7) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 200/2015 ಕಲಂ. 279, 337, 338 ಐ.ಪಿ.ಸಿ:.

ದಿನಾಂಕ:18-11-2015 ರಂದು ಬೆಳಿಗ್ಗೆ 11-30 ಗಂಟೆಗೆ ಸರಕಾರಿ ಆಸ್ಪತ್ರೆ ಕುಷ್ಟಗಿಯಿಂದ ಎಂ.ಎಲ್.ಸಿ ಮಾಹಿತಿ ಬಂದಿದ್ದು , ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳಯವಿನ ಅಜ್ಜಿಯಾದ ಶ್ರೀಮತಿ ಹನುಮಮ್ಮ ಗಂಡ ಹನುಮಪ್ಪ ಗದ್ದೇರ ಸಾ: ನೆರೆಬೆಂಚಿ ರವರ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ಸದರ ಹೇಳಿಕೆ ಪಿರ್ಯಾದಿಯ ಸಾರಾಂಶವೆನೆಂದರೆ ಇಂದು ದಿನಾಂಕ:18-11-2015 ರಂದು ಮುಂಜಾನೆ 10-30 ಗಂಟೆಯ ಸುಮಾರಿಗೆ ಪಿರ್ಯಾದಿಯು ತನ್ನ ಮಗಳ ಮಗಳಾದ ಕರಿಯಮ್ಮ ವಯಾ 4 ವರ್ಷ ಮೊಮ್ಮಗಳನ್ನು ಕುಷ್ಟಗಿ-ಕೊಪ್ಪಳ ರಸ್ತೆಯ ಮೇಲೆ ನೆರೆಬೆಂಚಿ ಸೀಮಾದಲ್ಲಿ ರಾಜಪ್ಪ ಅಕ್ಕಸಾಲಿಗ ರವರ ಹೊಲದ ಹತ್ತಿರ ರಸ್ತೆ ದಾಟುತ್ತಿದ್ದಾಗ ಮುಂದೆ ಮುಂದೆ ಪಿರ್ಯಾದಿ ಹೋಗುತ್ತಿದ್ದು ಹಿಂದಿನಿಂದ ಕರಿಯಮ್ಮ ಈಕೆಯು ಬರುತ್ತಿದ್ದು ಈಕೆಗೆ ಬಸ್ ನಂ: ಕೆ.ಎ-37 ಎಫ್.0359 ನೇದ್ದರ ಚಾಲಕನಾದ ಬಸಪ್ಪ ತಂದೆ ಸಿದ್ದಪ್ಪ ಜಿವೋಜಿ ಸಾ: ಮುಧೋಳ ಈತನು ತಾನು ನಡೆಸುತ್ತಿದ್ದ ಬಸ್ ನ್ನು ಕೊಪ್ಪಳ ಕಡೆಯಿಂದ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಟಕ್ಕರಕೊಟ್ಟು ಅಪಘಾತ ಪಡಿಸಿದ್ದು ಅಪಘಾತದಲ್ಲಿ ಕರಿಯಮ್ಮ ಈಕೆಗೆ ಮುಂದೆಲೆಗೆ ಭಾರಿ ರಕ್ತಗಾಯವಾಗಿದ್ದು, ಎಡಕಪಾಳ ಹತ್ತಿರ ತೆರೆಚಿದ ಗಾಯವಾಗಿದ್ದು ಇರುತ್ತದೆ. ಸದರಿ ಬಸ್ಸನ ಕಂಡ್ಕಟರ ನಾದ ದಸ್ಗಗಿರಿಸಾಬ ಸಾ: ಗಜೇಂದ್ರಗಡಾ ಅಂತಾ ಗೊತ್ತಾಯಿತು. ನಂತರ ಕುಷ್ಟಗಿ ಕಡೆಗೆ ಹೋಗುವ ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.  

0 comments:

 
Will Smith Visitors
Since 01/02/2008