Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, November 24, 2015

1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 223/2015 ಕಲಂ. 78(3) Karnataka Police Act.
ದಿನಾಂಕ: 23-11-2015 ರಂದು ಶ್ರೀ ಸತೀಶ ಪಾಟೀಲ ಪಿ.ಐ. ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶದಲ್ಲಿ ದಿನಾಂಕ 23.11.2015 ರಂದು ಸಾಯಂಕಾಲ 7:30 ಗಂಟೆಗೆ ಕೊಪ್ಪಳ ನಗರದ ಬಸ್ ನಿಲ್ದಾಣದ ಹತ್ತಿರ ವರ್ಣೇಕರ್ ಕಾಂಪ್ಲೆಕ್ಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1] ವಿರೇಶ ಹಿರೇಮಠ, 2] ಶಂಕ್ರಪ್ಪ ಜಲ್ಲಿ ಇವರು ಕೂಡಿಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುತ್ತೇವೆ ಇದು ನಶೀಬದ ಆಟ ಅಂತಾ ಸಾರ್ವಜನಿಕರನ್ನು ಕೂಗಿ ಕರೆಯುತ್ತಾ ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೇದ ಚೀಟಿಯನ್ನು ಬರೇದುಕೊಡುತ್ತಿದ್ದಾಗ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿತರಿಂದ ನಗದು ಹಣ 870=00 ರೂ, ಮಟಕಾ ನಂಬರ ಬರೇದ ಚೀಟಿ, ಒಂದು ಬಾಲ್ ಪೆನ್ ವಶಪಡಿಸಿಕೊಂಡಿದ್ದು ಇರುತ್ತದೆ. ಆರೋಪಿ ನಂ 02 ಇತನು ಮಟಕಾ ನಂಬರ ಪಟ್ಟಿಯನ್ನು ತೆಗೆದುಕೊಳ್ಳುತ್ಯಿದ್ದು ಇರುತ್ತದೆ. ಸದರಿ ಆರೋಪಿತರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ಫಿರ್ಯಾದಿಯು ಅಂಸಜ್ಞಯ ಅಪರಾಧ ವಾಗಿದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 239/2015 ಕಲಂ. 87 Karnataka Police Act.
ದಿನಾಂಕ. 23-11-2015 ರಂದು 04-30 ಪಿ.ಎಂ.ಕ್ಕೆ ಮುನಿರಾಬಾಧ ತುಂಗಭದ್ರ ನದಿಯ ಹಿನ್ನಿರಿನ ಬಯಲುಜಾಗೆಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ಆಡುತ್ತಿರುವಾಗ ಕಾಲಕ್ಕೆ ಫಿರ್ಯಾದಿದಾರರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಢಿ ಇಸ್ಪೇಟ ಜೂಜಾಟ ಆಡುತ್ತಿರುವ ಆರೋಪಿತರಿಂದ ಒಂದು ಬರಕಾ, 52 ಇಸ್ಪೇಟ ಎಲೆಗಳು ಮತ್ತು ಜೂಜಾಟದ ನಗದು ಹಣ 3500=00 ರೂ. ಗಳನ್ನು ಜಪ್ತ ಮಾಡಿಕೊಂಡು ಠಾಣೆಗೆ ಬಂದು ಫಿರ್ಯಾದಿ ನೀಡಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
3) ಕನಕಗಿರಿ ಪೊಲೀಸ್ ಠಾಣಾ ಗುನ್ನೆ ನಂ. 179/2015 ಕಲಂ. 166, 167, 171 (ಬಿ), 182, 189, 190, 219, 409, 420, 421 ಐ.ಪಿ.ಸಿ.  
ದಿನಾಂಕ 23-11-2015 ರಂದು ರಾತ್ರಿ 9-15 ಗಂಟೆಗೆ ಮಾನ್ಯ ಜೆ.ಎಂ.ಎಪ್.ಸಿ. ಕೋರ್ಟ ಗಂಗಾವತಿ ನ್ಯಾಯಾಲಯದಿಂದ ಕೋರ್ಟ ರವರ ಮೂಲಕ ನ್ಯಾಯಾಲಯದ ಖಾಸಗಿ ಫಿರ್ಯಾಧಿ ನಂ.217/2015 ನೇದ್ದು ವಸೂಲಾಗಿದ್ದು, ಅದರ ಸಾರಾಂಶವೇನೆಂದರೆ, ಫಿರ್ಯಾಧಿದಾರನು ತನ್ನ ಮನೆಯ ಕಟ್ಟಡಗೊಸ್ಕರ ಸಾಲವನ್ನು ಪಡೆಯಲು ಮೂಲ ದಾಖಲೆಗಳನ್ನು ಪ್ರಗತಿ ಕೃಷ್ಟಾ ಬ್ಯಾಂಕಿನಲ್ಲಿ ನೀಡಿ ಮ್ಯಾನೇಜರ ರವರು ರೂ.5,00,000/-ಗಳನ್ನು ಕಟ್ಟಡ ಕಟ್ಟಲು ಮಂಜೂರು ಮಾಡಿದ್ದು, ಸದ್ರಿ ಹಣವನ್ನು 5 ಕಂತಿನಂತೆ ಪ್ರತಿ ಕಂತಿಗೆ ರೂ.1,00,000/- ಗಳನ್ನು ಕೊಡುವುದಾಗಿ ತಿಳಿಸಿ 2 ಖಾಲಿ ಬಾಂಡಿನ ಮೇಲೆ & ಖಾಲಿ ಮುದ್ರಿತ ಫಾರ್ಮಗಳ ಮೇಲೆ ಸಹಿ ಮಾಡಿಸಿಕೊಂಡು ಅಂದೇ ಸಾಲವನ್ನು ಕೊಡುವುದಾಗಿ ತಿಳಿಸಿ   ರೂ.5000/- ಗಳನ್ನು ಸಾಲ ಮಂಜೂರು ಮಾಡಿದ ಖರ್ಚು ಎಂದು ಹಣ ಪಡೆದಿದ್ದು, ದಿನಾಂಕ 23-02-2015 ರಂದು ಮೊದಲನೇ ಕಂತಿನ ಹಣ ರೂ.1,00,000/- ಗಳನ್ನು ಕೊಡುವ ಬದಲಾಗಿ ನನಗೆ ಹೆದರಿ ಖಾಲಿ ಮುದ್ರಿತ ಪೇಪರ್ ಮತ್ತು ರಸೀದಿ ಮೇಲೆ ಸಹಿ ಮಾಡಿಸಿಕೊಂಡು ರೂ.40,000/- ಗಳನ್ನು ಕೊಟ್ಟಿರುತ್ತಾರೆ. ಇದರ ಬಗ್ಗೆ ಮ್ಯಾನೇಜರಿಗೆ ಕೇಳಿದಾಗ ನನಗೆ ವಂಚಿಸುವ ದೃಷ್ಟಿಯಿಂದ ನನಗೆ ಮಂಜೂರಾದ ರೂ.5,00,000/- ಗಳಲ್ಲಿ ರೂ.40,000/- ಗಳನ್ನು ನೀಡಿ ಉಳಿದ ಹಣವನ್ನು ನನಗೆ ತಇಳಿಸದೇ ನನಗೆ ಪರವಾನಗಿ ಪಡೆಯದೇ ಇನ್ನೊಬ್ಬರ ಹೆಸರಿನಲ್ಲಿರುವ ಹೇರೂರ ಪ್ರಗತಿ ಕೃಷ್ಟಾ ಬ್ಯಾಂಕಿನ ಯಾರ ಖಾತೆಯಲ್ಲಿ 4,50,000/- ಗಳನ್ನು ವರ್ಗಾವಣೆ ಮಾಡಿರುತ್ತಾರೆ. ದಿನಾಂಕ 28-10-2015 ರಂದು ಪುನ : ನಾನು ಬ್ಯಾಂಕಿನಲ್ಲಿ ಹೋಗಿ ಸಾಲದ ಬಗ್ಗೆ ವಿಚಾರಿಸಲು ಆರೋಪಿತನು ನನ್ನನ್ನು ಬ್ಯಾಂಕಿನಿಂದ ಹೊರಗೆ ಹಾಕಿ ನೀನು ಬ್ಯಾಂಕಿನ ಒಳಗೆ ಬಂದರೆ ನಿನ್ನ ವಿರುದ್ದ ಕ್ರಿಮಿನಲ್ ಕೇಸ್ ಮಾಡಿ ಒಳಗೆ ಹಾಕಿಸುತ್ತೇನೆ ನೀನು ಮಾಡಿದ ಸಾಲಕ್ಕೆ ಬಡ್ಡಿಗೆ ಬಡ್ಡಿ ಸೇರಿಸಿ ನೀನು ಕೊಟ್ಟ ಖಾಲಿ ಭಾಂಡಿನಲ್ಲಿ ಮತ್ತು ಖಾಲಿ ಮುದ್ರಿತ ಕಾಗದಗಳ ಮೇಲೆ ಸಹಿ ಮಾಡಿದ್ದು ಅದನ್ನು ತುಮಬಿ ನಿನ್ನ ವಿರುದ್ದ ಹಣ ವಸೂಲತೆಗಾಗಿ ಕ್ರಮ ಕೈಕೊಂಡು ನಿನ್ನ ಮನೆಯನ್ನು ಹರಾಜು ಮಾಡಿ ನಿನಗೆ ಹಾಗೂ ನಿನ್ನ ಕುಟುಂಬಕ್ಕೆ ಬೀದಿ ಪಾಲು ಮಾಡುತ್ತೇನೆ ಅಂತಾ ಹೇಳಿರುತ್ತಾನೆ ಅಂತಾ ಮುಂತಾಗಿ ನೀಡಿದ ಖಾಸಗಿ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4)ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ. 155/2015 ಕಲಂ. 279, 337, 338, 304(ಎ) ಐ.ಪಿ.ಸಿ:
ದಿನಾಂಕ:23-11-2015 ರಂದು 8-00 ಪಿಎಂಕ್ಕೆ ಫೋನ್ ಮುಖಾಂತರ ಸಾರ್ವಜನಿಕರು ತಳಕಲ್ ಹತ್ತಿರ ಎನ್.ಹೆಚ್. ರಸ್ತೆಯ ಮೇಲೆ ರಸ್ತೆ ಅಪಘಾತವಾದ ಬಗ್ಗೆ ಮಾಹಿತಿ ತಿಳಿಸಿದ ಮೇರೆಗೆ ಘಟನಾ ಸ್ಥಳಕ್ಕೆ ಹೋಗಿ, ಪರಿಶೀಲಿಸಿ, ಗಾಯಾಳುಗಳನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದ ಬಗ್ಗೆ ತಿಳಿದು ಆಸ್ಪತ್ರೆಗೆ ಭೇಟಿ, ಅಲ್ಲಿ ಗಾಯಾಳು ಪಿರ್ಯಾದಿದಾರನ ಹೇಳಿಕೆ ಪಿರ್ಯಾದಿಯನ್ನು 9-30 ಪಿಎಂದಿಂದ 10-30 ಪಿಎಂದವರೆಗೆ ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ, ಇಂದು ರಾತ್ರಿ 7-45 ಗಂಟೆಯ ಸುಮಾರು ನಾಗರಾಜ ಗಡಾದ ಈತನು ಚಲಾಯಿಸುತ್ತಿದ್ದ  ಹೋಂಡಾ ಸ್ಕೂಟಿ ನಂ:ಕೆಎ-37 ಎಕ್ಸ್-4298 ರಲ್ಲಿ ಹಿಂದೆ ಕುಳಿತು ಪಿರ್ಯಾದಿದಾರನು ಕೆಲಸ ಕುರಿತು ತಳಕಲ್ ಕಡೆಯಿಂದ ಬಾನಾಪುರ ಕಡೆಗೆ ಹೊರಟಾಗ ನಾಗರಾಜ ಈತನು ತನ್ನ ಮೋ.ಸೈ.ನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೊರಟಿದ್ದು, ಅದೇ ವೇಳೆಗೆ ಎದುರುಗಡೆಯಿಂದ ಸುನೀಲ್ ರಾಯರೆಡ್ಡಿ ಇವನು ಮೋ.ಸೈ. ನಂ:ಕೆಎ-37 ಅರ್-1171 ನೇದ್ದನ್ನು ಬಾನಾಪುರ ಕಡೆಯಿಂದ ತಳಕಲ್ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದು, ಎರಡು ಮೋ.ಸೈ.ಗಳ ಸವಾರರು ಪರಸ್ಪರ ಮುಖಾಮುಖಿ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ ಪಿರ್ಯಾದಿದಾರನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು, ನಾಗರಾಜ ಮತ್ತು ಸುನಿಲ್ ಇವರಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದು, ಘಟನೆ ನೋಡಿದ ಮಲ್ಲಿಕಾರ್ಜುನ ಮತ್ತು ಇತರರು ಸದರಿ ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಹೊರಟಾಗ ಸುನಿಲ್ ಇವನು ಮಾರ್ಗ ಮಧ್ಯೆ ಮೃತಪಟ್ಟಿದ್ದು, ಘಟನೆಗೆ ಎರಡು ವಾಹನಗಳ ಸವಾರರ ಅತೀವೇಗ ಮತ್ತು ಅಲಕ್ಷ್ಯತನದ ಚಾಲನೆಯೇ ಕಾರಣ ಅಂತಾ ಮುಂತಾಗಿ ಇದ್ದ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008