Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, November 25, 2015

1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 262/2015 ಕಲಂ. 78(3) Karnataka Police Act:.
ದಿನಾಂಕ: 24-11-2015 ರಂದು ರಾತ್ರಿ 7-30 ಗಂಟೆಗೆ ಶ್ರೀ ರಾಮಣ್ಣ ನಾಯ್ಕ, ಪಿ.ಎಸ್.ಐ.(ಅ.ವಿ) ಗಂಗಾವತಿ ನಗರ ಪೊಲೀಸ್ ಠಾಣೆ ರವರು ಮಟಕ ಜೂಜಾಟದಲ್ಲಿ ತೊಡಗಿದ ಆರೋಪಿತರಿಬ್ಬರೊಂದಿಗೆ ಮೂಲ ಪಂಚನಾಮೆ, ಮುದ್ದೆಮಾಲು ಹಾಗೂ ವರದಿಯನ್ನು ಸಲ್ಲಿಸಿದ್ದು  ಸದರಿ ವರದಿಯ ಸಾರಂಶವೇನೆಂದರೆ, ಇಂದು ದಿನಾಂಕ 24-11-2015 ರಂದು 18-00 ಗಂಟೆಗೆ ಆರೋಪಿತರಾದ (01) ಫಾರೂಕ ತಂದೆ ಹುಸೇನಪೀರಾ ಮತ್ತು (02) ಹಸೇನ ತಂದೆ ಖಾಲೇಸಾಬ ಸಾ: ಗಂಗಾವತಿ ರವರು ನಗರದ ಶಿವೆ ಟಾಕೀಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಅವರಿಗೆ ಮಟಕಾ ನಂಬರ ಬರೆದ ಚೀಟಿ ಬರೆದುಕೊಡುತ್ತಿರುವಾಗ ಸದರಿಯವರ ಮೇಲೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ರವರ ಮಾರ್ಗದರ್ಶನದಲ್ಲಿ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿತರಿಂದ  ಒಟ್ಟು ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 6,740-00. (02) ಮಟಕಾ ನಂಬರ ಬರೆದ ಮೂರು ಚೀಟಿಗಳು. (03) ಎರಡು ಬಾಲ್ ಪೆನ್ನು ಹಾಗೂ (04) ಒಂದು ನೋಕಿಯಾ ಕಂಪನಿಯ ಮೊಬೈಲ್ ಹಾಗೂ (05) ಒಂದು ಸ್ಯಾಮಸಂಗ್ ಕಂಪನಿಯ ಮೊಬೈಲ್ ದೊರೆತಿರುತ್ತದೆ. ಸದರಿ ಮುದ್ದೇಮಾಲನ್ನು ಜಪ್ತಿ ಪಡಿಸಿದ ಬಗ್ಗೆ 18-00 ಗಂಟೆಯಿಂದ 19-00 ಗಂಟೆಯವರೆಗೆ ಪಂಚನಾಮೆಯನ್ನು ಬರೆದುಕೊಂಡಿದ್ದು, ಹಾಗೂ ಸದರಿ ಮಟಕ ಪಟ್ಟಿಗಳನ್ನು ಮಾರ್ಕಂಡಯ್ಯ ಸಾ: ಗಂಗಾವತಿ ಇವನು ತೆಗೆದುಕೊಳ್ಳುವ ಬುಕ್ಕಿ ಆಗಿರುತ್ತಾನೆ. ಸದರಿಯವರ ಮೇಲೆ ಕ್ರಮ ಜರುಗಿಸಬೇಕೆಂದು ವರದಿ ನೀಡಿದ್ದು. ಸದರಿ ಕೃತ್ಯವು ಕಲಂ: 78 (3) ಕೆ.ಪಿ.ಆ್ಯಕ್ಟ್ ಅಡಿಯಲ್ಲಿ ಬರುತ್ತಿದ್ದು, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಈ ಬಗ್ಗೆ ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 246/2015 ಕಲಂ. 279, 337, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:
ದಿನಾಂಕ 24-11-2015 ರಂದು ಬೆಳಗ್ಗೆ 11-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ನೀರುಪಾದಿ ತಂದಿ ಹನಂತಪ್ಪ ನಾಯಕ ವಯಾ- 27 ವರ್ಷ ಜಾ- ನಾಯಕ - ಒಕ್ಕಲುತನ ಸಾ- ಗುಡದೂರ ತಾ- ಗಂಗಾವತಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ, ನಾನು ಒಕ್ಕಲುತನ ಮಾಡಿಕೊಂಡು ಉಪಜೀವನ ಮಾಡುತ್ತೇನೆ. ನನ್ನ ಹೆಂಡತಿ ತವರು ಮನೆ ಕಾರಟಗಿಯ ರಾಜೀವಗಾಂಧೀನಗರ ಇರುತ್ತದೆ. ನಿನ್ನೆ ದಿನಾಂಕ- 23-11-2015 ರಂದು ನಾನು ನನ್ನ ತಂದೆ ಹನಮಂತಪ್ಪ ಇಬ್ಬರೂ ಕೂಡಿಕೊಂಡು ನಮ್ಮ ಹಿರೋ ಹೊಂಡಾ ಸ್ಪ್ಲೆಂಡರ್ ಮೊಟಾರ್ ಸೈಕಲ್ ನಂಬರ್- ಕೆ.- 37 / ಎಲ್- 8773 ನೇದ್ದರ ಮೇಲೆ ನಮ್ಮೂ ಊರಿನಿಂದ ಕಲಗುಡಿಗೆ ಹೊಗಿ ಸಾಯಂಕಾಲ ವಾಪಾಸ್ ಕಾರಟಗಿಗೆ ಚಳ್ಳೂರ ಕ್ಯಾಂಪ್ ಹತ್ತಿರ ನನ್ನ ಮೊಟಾರ್ ಸೈಕಲ್ ನಂ- ಕೆ.- 37 / ಎಲ್- 8773 ನೇದ್ದನ್ನು ನಾನು ನಿಧಾನವಾಗಿ ನನ್ನ ತಂದೆಯನ್ನು ಮೊಟಾರ್ ಸೈಕಲ್ ಹಿಂದುಗಡೆ ಕೂಡ್ರಿಸಿಕೊಂಡು ರಸ್ತೆಯ ಎಡಬದಿಗೆ ಬರುತ್ತಿರುವಾಗ್ಗೆ ಎದುರುಗಡೆಯಿಂದ ಒಂದು ಹೊಸ ಕುಬೋಟಾ ಟ್ರ್ಯಾಕ್ಟರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಜೋರಾಗಿ ಬಂದು ನಮ್ಮ ಮೊಟಾರ್ ಸೈಕಲ್ಲಿಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿ ಟ್ರ್ಯಾಕ್ಟರ್ ಅಲ್ಲಿಯೇ ಬಿಟ್ಟು ಓಡಿಹೊದನು. ಅಪಘಾತದಿಂದ ನನ್ನ ಕೈಗೆ ಮತ್ತು ಕಾಲಿಗೆ ಗಂಭೀರ ಗಾಯವಾಗಿದ್ದು ಹಾಗೂ ನನ್ನ ತಂದೆ ಹನಮಂತಪ್ಪನಿಗೆ ಬಲಗಾಲಿಗೆ ಭಾರಿ ಘಾಯ ಹಾಗೂ ಮೂಳೆ ಮುರಿತವಾಗಿದ್ದು ಇರುತ್ತದೆ. ಅಪಘಾತವಾದಾಗ್ಗೆ ಸಾಯಂಕಾಲ 6-30 ಗಂಟೆಯಿಂದ 6-45 ಗಂಟೆ ಆಗಿತ್ತು. ನಮಗೆ ಅಪಘಾತಪಡಿಸಿದ ಟ್ರ್ಯಾಕ್ಟರ ನೋಡಲು ಕೆಂಪು ಬಣ್ಣದ ಕುಬೋಟ ಕಂಪನಿಯದಿದ್ದು ಅದರ ಚಾಸ್ಸಿಸ್ ನಂಬರ್ ನೋಡಲು --519827JG .ಇಂಜಿನ್- 7ES3383 ಅಂತಾ ಇದ್ದು ಗಾಯಗೊಂಡ ನಾವು ಕಾರಟಗಿ ಆಸ್ಪತ್ರೆಗೆ ಬಂದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಯ ಮಲ್ಲನಗೌಡ ಆಸ್ಪತ್ರೆಯಲ್ಲಿ ನಮ್ಮ ತಂದೆಗೆ ಸೇರಿಕೆ ಮಾಡಿ ನಾನು ಚಿಕಿತ್ಸೆ ಪಡೆದುಕೊಂಡು ನಂತರ ಈಗ ತಡವಾಗಿ ತಮ್ಮಲ್ಲಿಗೆ ಬಂದು ಫಿರ್ಯಾದಿ ನೀಡಿರುತ್ತೇನೆ. ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 121/2015  ಕಲಂ 224 ಐ.ಪಿ.ಸಿ:.

ದಿನಾಂಕ: 24-11-2015 ರಂದು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಪಿರ್ಯಾದಿದಾರ ಹಾಗೂ ಹೆಚ್.ಜಿ-1229 ಇವರಿಬ್ಬರೂ ಆರೋಪಿತ ಶರಣಪ್ಪನಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿ ನಂತರ ಸದರಿ ಆರೋಪಿತ ಶರಣಪ್ಪನಿಗೆ ಜಿಲ್ಲಾ ಕಾರಾಗೃಹ ಕೊಪ್ಪಳಕ್ಕೆ ಕರೆದುಕೊಂಡು ಹೋಗಲು ಯಲಬುರ್ಗಾದ ತಹಶೀಲ ಕಾರ್ಯಾಲಯ ಹತ್ತಿರ ಇರುವ ಮಂಜುನಾಥ ಹೊಟೇಲ್ ಮುಂದುಗಡೆ ಕರೆದುಕೊಂಡು ಹೋಗಿ ಬಸ್ಸಿಗಾಗಿ ಕಾಯುತ್ತಾ ನಿಂತುಕೊಂಡಿದ್ದು, ಆಗ ಯಾವುದೋ ಒಂದು ಖಾಸಗಿ ವಾಹನ ಕೊಪ್ಪಳ ಕಡೆಗೆ ಹೋರಟಿದ್ದು ಅದನ್ನು ಪಿರ್ಯಾದಿದಾರನು ನಿಲ್ಲಿಸುತಿದ್ದಾಗ ಆರೋಪಿತ ಶರಣಪ್ಪನು ಹೆಚ್.ಜಿ-1229 ರವರಿಂದ ಕೋಸರಿಕೊಂಡು ಕೊಪ್ಪಳ ಕಡೆಗೆ ಹೋಗುವ ರಸ್ತೆಯ ಮೇಲೆ ಓಡಿ ಹೋಗಿದ್ದು ಇರುತ್ತದೆ. ಆಗ ಪಿರ್ಯಾದಿದಾರ ಹಾಗೂ ಅವರ ಸಂಗಡ ಇದ್ದ ಹೆಚ್.ಜಿ-1229 ಇಬ್ಬರೂ ಕೂಡಿಕೊಂಢು ಆರೋಪಿತನಿಗೆ ಹಿಂಬಾಲಿಸಿಕೊಂಡು ಓಡಿ ಹೋಗಲು ಆರೋಪಿತನು ಬುದ್ದ ಬಸವ ಅಂಬೇಡ್ಕರ ಭವನದ ಹಿಂದುಗಡೆ ಜಾಲಿಯ ಕಡೆಗೆ ಓಡಿ ಹೋಗಿ ಮರೆಯಾಗಿ ತಪ್ಪಿಸಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008