Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, November 28, 2015

ದಿನಾಂಕ:27-11-2015 ರಂದು 8-00 ಪಿ ಎಂಕ್ಕೆ ಪಿರ್ಯಾದಿದಾರ   ಯಮನಪ್ಪ ತಂದಿ ದುರಗಪ್ಪ ಪುಜಾರ್ ವಯಾ:35 ವರ್ಷ, ಜಾ: ಮಾದರ್, ಉ:ಕೂಲಿ ಸಾ:ವೀರಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಣ ಮಾಡಿದ ಪಿರ್ಯಾದಿಯನ್ನು ಹಾಜರಪಡಸಿದ್ದು, ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರನು ತನ್ನ ಹೆಂಡತಿ ದೇವಕ್ಕ ಹಾಗೂ ಮಗಳು ಈರಮ್ಮ ವ:6ವರ್ಷ, ಇವರೊಂದಿಗೆ ವೀರಾಪುರ ಗ್ರಾಮದಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದು ಇರುತ್ತದೆ.  ಪಿರ್ಯಾದಿದಾರನು ದಿನಾಂಕ:23-11-2015 ರಂದು ಮುಂಜಾನೆ 9-00 ಗಂಟೆಗೆ ಕೆಲಸಕ್ಕೆ ಕೊಪ್ಪಳಕ್ಕೆ ಹೋಗಿ ಸಾಯಂಕಾಲ 7-00 ಗಂಟೆಗೆ ವಾಪಸ್ ಮನೆಗೆ ಹೋಗಿದ್ದು, ಆದರೆ, ಮನೆಯಲ್ಲಿ ತನ್ನ ಹೆಂಡತಿ ಮತ್ತು ಮಗಳು ಮನೆಯಲ್ಲಿ ಇರದೇ ಇದ್ದುದರಿಂದ ಸುತ್ತಮುತ್ತಲಿನವರಿಗೆ ಹಾಗೂ ತನ್ನ ಸಂಬಂಧಿಕರಲ್ಲಿ ವಿಚಾರಿಸಿದ್ದು, ಆದರೆ, ಅವರ ಇರುವಿಕೆಯ ಬಗ್ಗೆ ಪತ್ತೆಯಾಗದೇ ದಿನಾಂಕ: 23-11-2015 ರಂದು  9-00 ಎಎಂ ದಿಂದ 7-00 ಪಿಎಂ ಅವಧಿಯಲ್ಲಿ ತನ್ನ ಹೆಂಡತಿ ಮಗಳು ಕಾಣೆಯಾಗಿದ್ದು, ಕಾರಣ, ಸದರಿಯವರನ್ನು ಹುಡುಕಿಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 124/2015  ಕಲಂ 107 ಸಿ.ಆರ್.ಪಿ.ಸಿ:.
ದಿನಾಂಕ: 27-11-2015 ರಂದು ಮದ್ಯಾಹ್ನ 12-00 ಗಂಟೆಗೆ ನಾನು ಗ್ರಾಮ ಭೇಟಿ ಕುರಿತು ಠಾಣೆಯಿಂದ ಹೋರಟು ಮುದೊಳ, ಕರಮೂಡಿ ಹೊಸಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ವಾಪಸ್ ಯಲಬುರ್ಗಾ ಪಟ್ಟಣದಲ್ಲಿ ಪೆಟ್ರೋಲಿಂಗ ಮಾಡುತ್ತಾ ಯಲಬುರ್ಗಾ ಠಾಣೆಯ ರೌಡಿ ಶೀಟ ದಾರರಾದ 01] ಮುತ್ತುರಾಜ ತಂದೆ ಬಾಳಪ್ಪ ಚಲುವಾದಿ ವಯ : 32 ವರ್ಷ ಜಾತಿ : ಚಲುವಾದಿ ಸಾ: ಮೀನಾಕ್ಷಿ ನಗರ ಯಲಬುರ್ಗಾ ಹಾಗೂ 02] ಬಸವರಾಜ ತಂದೆ ಕರಬಸಪ್ಪ ಹೊಸಳ್ಳಿ ವಯ : 29 ವರ್ಷ ಜಾತಿ : ಲಿಂಗಾಯತ  ಸಾ: ಯಲಬುರ್ಗಾ  ರವರ ಬಗ್ಗೆ ಸ್ಥಾನಿಕವಾಗಿ ವಿಚಾರಣೆ ಮಾಡಲಾಗಿ ಸದರಿಯವರು ಮುಂಬರುವ ವಿಧಾನ ಪರಿಷತ್ ಚುನಾವಣೆ ಇದ್ದು, ಸದರಿ ರೌಡಿಶೀಟ್ದಾರರು ಹಳೇ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕ ಶಾಂತತಾ ಭಂಗ ಮತ್ತು ಗಲಭೆ ಉಂಟು ಮಾಡುವ ಸಾಧ್ಯತೆ ಇರುತ್ತದೆ ಅಂತಾ ಖಚಿತವಾದ ಭಾತ್ಮಿ ಬಂದಿದ್ದು ಇರುತ್ತದೆ. ಸದರಿ ರೌಡಿ ಶೀಟ ದಾರರಲ್ಲಿ 01] ಮುತ್ತುರಾಜ ತಂದೆ ಬಾಳಪ್ಪ ಚಲುವಾದಿ ವಯ : 32 ವರ್ಷ ಜಾತಿ : ಚಲುವಾದಿ ಸಾ: ಮೀನಾಕ್ಷಿ ನಗರ ಯಲಬುರ್ಗಾ ಇತನ ವಿರುದ್ಧ ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 09/2012 ಕಲಂ  324,353,354,355,504,506 .ಪಿ.ಸಿ. ಹಾಗೂ 78/2013 ಕಲಂ 394 .ಪಿ.ಸಿ. ಪ್ರಕರಣ ಗಳು ಧಾಖಲಾಗಿದ್ದು ಹಾಗೂ 02] ಬಸವರಾಜ ತಂದೆ ಕರಬಸಪ್ಪ ಹೊಸಳ್ಳಿ ವಯ : 29 ವರ್ಷ ಜಾತಿ : ಲಿಂಗಾಯತ  ಸಾ: ಯಲಬುರ್ಗಾ ಈತನ ವಿರುದ್ಧ ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ 128/2014 ಕಲಂ 355,353,332,504 ಐ.ಪಿ.ಸಿ ಧಾಖಲಾಗಿದ್ದು ಇರುತ್ತದೆ.  ಸದರಿ ರೌಡಿಶೀಟ್ ದಾರರು ಹಳೇ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಚುನಾವಣೆ ಸಂದರ್ಭದಲ್ಲಿ ಯಾವುದಾದರೊಂದು ಪಕ್ಷದಲ್ಲಿದ್ದುಕೊಂಡು ಸಾರ್ವಜನಿಕ ಶಾಂತತಾ ಭಂಗ ಉಂಟು ಮಾಡಿ, ಗಲಭೆ ಉಂಟು ಮಾಡುವ ಸಾಧ್ಯತೆ ಕಂಡುಬಂದಿದ್ದರಿಂದ ಮತ್ತು ಖಚಿತವಾದ ಭಾತ್ಮಿ ಬಂದಿದ್ದರಿಂದ ಸದರಿಯವರ ಮೇಲೆ ಮುಂಜಾಗ್ರತೆ ಕ್ರಮ ಕುರಿತು ಕೈಕೊಂಡಿದ್ದು ಇರುತ್ತದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 227/2015  ಕಲಂ 107 ಸಿ.ಆರ್.ಪಿ.ಸಿ:.
ಚುನಾವಣಾ ಆಯೋಗ ವಿಧಾನ ಪರಿಷತ್ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದ್ದು ಈಗ ಚುನಾವಣಾ ನೀತಿ ಸಂಹಿತೆಯು ಜಿಲ್ಲೆಯಲ್ಲಿ ಮತ್ತು ನಗರದಲ್ಲಿ ಜಾರಿಯಲ್ಲಿರುತ್ತದೆ. ಈಗಾಗಲೇ ನಗರದಲ್ಲಿ ಅಬ್ಯಥರ್ಿಗಳು ಹಾಗೂ ಸ್ಥಳಿಯ ಮುಖಂಡರುಗಳು ತಮ್ಮ ತಮ್ಮ ಬೆಂಬಲಿಗರೊಂದಿಗೆ ಮತಯಾಚಿಸುತ್ತಿದ್ದು, ಅಲ್ಲದೆ ನಗರದಲ್ಲಿ ಸಂಭದಪಟ್ಟ ಮತದಾರರಲ್ಲಿ ಮತಯಾಚನೆಯ ಕಾರ್ಯಕ್ರಮ ಮಾಡುವದು ಸಾಮಾನ್ಯವಾಗಿದ್ದು ಇದರಿಂದಾಗಿ ಇಂತಹ ಸಂದರ್ಭಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖ್ಯಗಣ್ಯರು, ಮುಖಂಡರು ತಮ್ಮ ಬೆಂಬಲಿತ ಅಬ್ಯಥರ್ಿಗಳ ಪರ ಮತ ಕೇಳುವುದಕ್ಕೆ ಆಗಮಿಸಲಿದ್ದು ಇಂತಹ ಸಂದರ್ಭ ದಲ್ಲಿ ಕೊಪ್ಪಳ ನಗರದ ರೌಡಿ ಶೀಟ್ದಾರನಾದ ಮಹ್ಮದ ಹುಸೇನ್ @ ಗೋಲಿ ತಂದಿ ಅಬ್ದುಲ್ ರಹಿಮಾನ ಸಾಬ ಮಂಡಲಗೇರಿ ಸಾ: ಹಟಗಾರ ಪೇಟೆ ಕೊಪ್ಪಳ ಇವನು ತಮ್ಮ ರೌಡಿ ಚಟುವಟಿಕೆಯನ್ನು ಮುಂದುವರೆಸಿ ಮತಯಾಚನೆ ಸಂಧರ್ಬದಲ್ಲಿ ಬೇರೆ ಬೇರೆ ಅಬ್ಯಥರ್ಿಗಳಲ್ಲಿ ವೈಮನಸ್ಸನ್ನು ಉಂಟು ಮಾಡಿ ಯಾವುದೇ ರೂಪದಲ್ಲಿ ಅಹಿತಕರ ಘಟನೆ ಜರುಗುವಂತೆ ಮಾಡಿ ಅದರಿಂದ ನಗರದಲ್ಲಿ ಶಾಂತಿ ಕದಡಿ ಅಶಾಂತತೆ ನೆಲಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವಂತೆ ಮಾಡುವ ಸಂಭವ ಇರುತ್ತದೆ. ಕಾರಣ ಮುಂಬರುವ ವಿಧಾನಪರಿಷತ್ ಚುನಾವಣೆ ಶಾಂತಿಯುತವಾಗಿ ನೆಡೆಯುವ ಸಲುವಾಗಿ ಮತ್ತು ಸದರಿಯವನ ರೌಡಿ ಚಟುವಟಿಕೆಯ ನಿಯಂತ್ರಣಕ್ಕಾಗಿ ಸದರಿಯವನ ಮೇಲೆ ಮುಂಜಾಗ್ರತಾ ಕ್ರಮ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಬೇವೂರ ಪೊಲೀಸ್ ಠಾಣಾ ಗುನ್ನೆ ನಂ. 92/2015  ಕಲಂ 110 (ಇ) & (ಜಿ) ಸಿ.ಆರ್.ಪಿ.ಸಿ:.

1] ಶರಣಪ್ಪ ತಂದೆ ಅಮರಪ್ಪ ಚೌಹ್ಹಾನ್  ವಯ:28 ವರ್ಷ ಜಾತಿ ಲಮಾಣೀ ಉ:ಕೂಲಿಕೆಲಸ ಸಾ:ಹುಣಸಿಹಾಳ ತಾ: ಯಲಬುರ್ಗಾ 2]ಶರಣಪ್ಪ ತಂದೆ ನಿಂಗಪ್ಪ ಹುಳ್ಳಿ ವಯ: 41 ವ. ಜಾತಿ:  ಲಿಂಗಾಯತ ಉ: ಒಕ್ಕಲುತನ ಸಾ: ಕಟಗಿಹಳ್ಳಿ ಸದರಿ ಮೇಲ್ಕಂಡ ಆರೋಪಿತರು ಠಾಣೆಯ ರೌಡಿ ಶೀಟರದಾದ್ದು ಇಂದು ದಿ: 27.11.2015 ರಂದು ಮದ್ಯಾಹ್ನ 12:10 ಗಂಟೆಯಿಂದ 16:00 ಗಂಟೆ ಸುಮಾರಿಗೆ ಹುಣಸಿಹಾಳ ಮತ್ತು ಕಟಗಿಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರನ್ನು ಭೇಟಿ ಮಾಡಿದ್ದು ವಿಚಾರಿಸಲಾಗಿ ಸದರಿ ರೌಡಿಶೀಟರದಾರರು ಗ್ರಾಮದಲ್ಲಿ ಮುಂಬರುವ ವಿಧಾನಪರಿಷತ್ ಮತ್ತು ಜಿಲ್ಲಾ ಮತ್ತು ತಾಲೂಕಾ ಪಂಚಾಯತ್  ಚುನಾವಣೆ ಸಂಭಂದ ಒಂದೆ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಾ ಒದರಾಡುತ್ತಾ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಉಂಟಾಗುವಂತೆ  ಮಾಡುತ್ತಿರುವ ಬಗ್ಗೆ ತಿಳಿದು ಬಂದಿದ್ದು ಇರುತ್ತದೆ. ಮೇಲೆ ನಮೂದಿಸಿದ ಇಬ್ಬರು  ವ್ಯಕ್ತಗಳು ನಮ್ಮ ಪೊಲೀಸ್  ಠಾಣೆಯ ರೌಡಿಶಿಟದಾರರಿದ್ದು ಗ್ರಾಮದಲ್ಲಿ ಸಾರ್ವಜನಿಕರಿಗೆ ಬೈದಾಡುತ್ತಾ ತಮ್ಮ ದೇಹವನ್ನು ತೋರಿಸುತ್ತಾ ಇವರಿಂದ ಗ್ರಾಮದಲ್ಲಿ ಅಶಾಂತತೆ ಹಾಗೂ ಕಾನೂನು ಸುವ್ಯವ್ಸವಸ್ಥಿತ ಕದಡಿ ಸಾರ್ವಜನಿಕರ ನೆಮ್ಮದಿಗೆ ಭಂಗವುಂಟಾಗುವ ಸಾದ್ಯತೆ ಇರುತ್ತದೆ. ಕಾರಣ ಸದರಿ ರೌಡಿಶೀಟದಾರರಿಂದ ಗ್ರಾಮದಲ್ಲಿ ಮುಂದಾಗುವ ಅನಾಹುತವನ್ನು ತಪ್ಪಿಸುವ  ಉದ್ದೇಶದಿಂದ ಮುಂಜಾಗೃತ ಕ್ರಮವಾಗಿ ಸರಕಾರಿ ತರ್ಫೆಯಿಂದ ಪ್ರಕರಣದ ದಾಖಲಿಸಿಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008