Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, December 1, 2015

ದಿನಾಂಕ: 30-11-2015 ರಂದು ರಾತ್ರಿ 9-15 ಗಂಟೆಗೆ ಶ್ರೀ. ಶಂಕರಗೌಡ, ಎ.ಎಸ್.ಐ ಅಳವಂಡಿ ಪೊಲೀಸ್ ಠಾಣೆರವರು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಟಕಾ ಜೂಜಾಟದ ದಾಳಿ ಮಾಡಿ, ವಾಪಸ್ ಠಾಣೆಗೆ ಬಂದು ಒಂದು ವರದಿ ಮತ್ತು ಮುದ್ದೇಮಾಲು ಹಾಗೂ ಒಬ್ಬ ಆರೋಪಿತನನ್ನು ಮುಂದಿನ ಕ್ರಮ ಜರುಗಿಸುವ ಕುರಿತು ಒಪ್ಪಿಸಿದ್ದು, ಸದರಿ ವರದಿಯನ್ನು ಪಡೆದುಕೊಂಡು ಪರಿಶೀಲನೆ ಮಾಡಿ ನೋಡಲಾಗಿ, ಇಂದು ದಿನಾಂಕ: 30-11-2015 ರಂದು ಸಾಯಂಕಾಲ 7-45 ಗಂಟೆಗೆ ಆರೋಪಿತನಾದ ಮೌನೇಶ ತಂದೆ ಲೋಕಪ್ಪ ಈಳಿಗೇರ, ವಯಾ: 28 ವರ್ಷ, ಜಾ: ಈಳಿಗೇರ, ಉ: ಶ್ಯಾಮೀಯಾನ ಅಂಗಡಿ, ಸಾ: ಬೋಚನಹಳ್ಳಿ ಈತನು 2ನೇ ವಾಡರ್ಿನ ಹರಿಜನ ಕೇರಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರ ಚಟುವಟಿಕೆಯಾದ ಮಟಕಾ ಜೂಜಾಟದಲ್ಲಿ ನಿರತನಾಗಿದ್ದಾಗ  ಶ್ರೀ ಶಂಕರಗೌಡ, ಎ.ಎಸ್.ಐ ಅಳವಂಡಿರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ನಿರತನಾಗಿದ್ದ ಆರೋಪಿತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಹಾಗೂ ನಗದು ಹಣ 800=00 ರೂ.ಗಳನ್ನು ಜಪ್ತ ಮಾಡಿಕೊಂಡು ಪಂಚನಾಮೆಯನ್ನು ಪೂರೈಸಿಕೊಂಡು ವಾಪಸ್ ಠಾಣೆಗೆ ಬಂದು ಆರೋಪಿತನ ಮೇಲೆ ಕ್ರಮ ಕುರಿತು ಹಾಜರಪಡಿಸಿದ್ದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 11/2015  ಕಲಂ. 78(3) Karnataka Police Act.
ದಿನಾಂಕ: 30-11-2015 ರಂದು ರಾತ್ರಿ 11:30 ಗಂಟೆಗೆ ಪಿ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ಗಣಕೀಕೃತ ವರದಿ, ದಾಳಿ ಪಂಚನಾಮೆ, ಮುದ್ದೇಮಾಲು ಹಾಗೂ ಸಿಕ್ಕಿಬಿದ್ದ 13 ಜನ ಆರೋಪಿತರನ್ನು ಹಾಗೂ ಇಸ್ಟಿಟ್ ಜೂಜಾಟದ ಹಣ 17,100=00 ಗಳನ್ನು ಹಾಗೂ ಅದರ ಸಾಮಾಗ್ರಿಗಳನ್ನು ಹಾಜರಪಡಿಸಿದ್ದು, ಸಾರಾಂಶವೆನೆಂದರೆ ತಾವರಗೇರಾ ಗ್ರಾಮದ ಮೇನ್ ಬಜಾರ್ನ ಬಂಗಾಳಿ ಗಿಡದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ ಅಧಿಕಾರಿ ವ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿ ಹಿಡಿದು, ಸದರಿ ನಮೂದಿತ ಆರೋಪಿತರಿಂದ ಮೇಲ್ಕಂಡ ಇಸ್ಟಿಟ್ ಜೂಜಾಟದ ಹಣ, ಹಾಗೂ ಅದರ ಸಾಮಾಗ್ರಿಗಳನ್ನು ಆರೋಪಿತರನ್ನು ಹಾಜರುಪಡಿಸಿದ್ದರಿಂದ ಮೇಲಿಂದ  ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 278/2015  ಕಲಂ. 279, 338, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:30-11-2015 ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಾರುತಿ ತಂದೆ ಭೀಮಪ್ಪ ಚೆನ್ನದಾಸರ. ಸಾ: ಲಾಚನಕೇರಿ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ಇಂದು ದಿ:30-11-15 ರಂದು ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ನನ್ನ ತಮ್ಮ ಕೃಷ್ಣಪ್ಪ ಇತನು ನಮ್ಮೂರಿನ ಚಂದ್ರಶೇಖರ ಇವರ ಮೋಟಾರ ಸೈಕಲ್ ನಂ: ಕೆಎ-37/ಕೆ-8325 ನೇದ್ದರ ಹಿಂದೆ ಕುಳಿತುಕೊಂಡು ಕೊಪ್ಪಳದಿಂದಾ ನಮ್ಮೂರು ಲಾಚನಕೇರಿಗೆ ಅಂತಾ ಕೊಪ್ಪಳ-ಕುಣಿಕೇರಿ ರಸ್ತೆಯ ಹ್ಯಾಟಿ ಮುಂಡರಗಿ ಕ್ರಾಸ್ ಹತ್ತಿರ ಬರುತ್ತಿದ್ದಾಗ ಅದೇವೇಳೆಗೆ ಅವರ ಎದುರುಗಡೆಯಿಂದ ಟಾಟಾ ಎಸಿ ಮ್ಯಾಜಿಕ್ ನಂ: ಕೆಎ-37/9427 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದು ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿ ತನ್ನ ವಾಹನವನ್ನು ಬಿಟ್ಟು ಚಾಲಕನು ಓಡಿ ಹೋಗಿದ್ದು ಇರುತ್ತದೆ. ಈ ಅಪಘಾತದಲ್ಲಿ ನಮ್ಮ ತಮ್ಮ ಕೃಷ್ಣಪ್ಪ ಮತ್ತು ಮೋಟಾರ ಸೈಕಲ್ ಸವಾರ ಚಂದ್ರಶೇಖರ ಇವರಿಗೆ ಭಾರಿ ಸ್ವರೂಪದ ಗಾಯಗಳಾಗಿದ್ದು ನಂತರ 108 ಅಂಬುಲೆನ್ಸ ದಲ್ಲಿ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿದ್ದು ಇರುತ್ತದೆ. ನಂತರ ಮಧ್ಯಾಹ್ನ 3-40 ಗಂಟೆಗೆ ನನ್ನ ತಮ್ಮ ಕೃಷ್ಣಪ್ಪ ಮೃತಪಟ್ಟಿರುತ್ತಾರೆ. ಸದರಿ ಅಪಘಾತ ಮಾಡಿದ ಟಾಟಾ ಎಸಿ ನಂ:ಕೆಎ-37/9427 ನೇದ್ದರ  ಚಾಲಕನನ್ನು ಪತ್ತೆ ಮಾಡಿ ಆತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ.
4) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 279/2015  ಕಲಂ. 341, 354, 323, 504, 506 ಐ.ಪಿ.ಸಿ:.
ದಿ:30-11-2015 ರಂದು ರಾತ್ರಿ 7-30 ಗಂಟೆಗೆ ಫಿರ್ಯಾದಿದಾರಳಾದ ಬಸಮ್ಮ ತಂದೆ ದ್ಯಾಮಣ್ಣ ಬೇವೂರ. ಸಾ: ಗಂಗನಾಳ. ತಾ:ಜಿ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಫಿರ್ಯಾದಿ ಸಾರಾಂಶವೇನೆಂದರೇ, ಕೊಪ್ಪಳ ಗ್ರಾಮೀಣ ಠಾಣೆಯ ಗುನ್ನೆ ನಂ: 48/2015 ಕಲಂ: 376,419,504,506 ಸಹಿತ 34 ಐಪಿಸಿ ಪ್ರಕರಣದಲ್ಲಿ ಬಸಮ್ಮ ಇವರು ಫಿರ್ಯಾದಿದಾರಳಿದ್ದು ರೇಣುಕಪ್ಪ ಸೋಮನಾಳ ಹಾಗೂ ನೀಲಕಂಠ ಕಲ್ಲಭಾವಿ ಇಬ್ಬರು ಸಾ: ಸೋಮಸಾಗರ ಇವರ ವಿರುದ್ದ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣದಲ್ಲಿಯ ಆರೋಪಿತರೇ ನಿನ್ನೆ ದಿ:29-11-15 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಗಂಗನಾಳ ಗ್ರಾಮದಲ್ಲಿ ಫಿರ್ಯಾದಿದಾರಳು ಬಹಿರ್ದೇಶೆಗೆ ಹೊರಗಡೆ ಹೋಗುತ್ತಿದ್ದಾಗ ಹಿಂಬಾಲಿಸಿ ಯಾರು ಇಲ್ಲದ ಸಮಯ ನೋಡಿ ಅಡ್ಡನಿಲ್ಲಿಸಿ ಲೇ ಹೊಲಸು ಸೂಳೇ ಲೇ ಅಂತಾ ಮುಂತಾಗಿ ಅವಾಚ್ಯ ಶಬ್ದಗಳಿಂದ ಬೈಯ್ದು ಕೈ ಹಿಡಿದು ಎಳೆದಾಡಿ ಎರಡೇಟು ಹೊಡೆದು ನೀನೇನಾದರು ನ್ಯಾಯಾಲಯದ ಮುಂದೆ ಇದ್ದಕ್ಕಿದ್ದಂತೆ ಅಂದು ನಾವುಗಳು ನಿನ್ನನ್ನು ಕೊಲೆ ಮಾಡಿ ಬಿಸಾಕುತ್ತೇವೆ. ಅಂತಾ ಚಾಕುವನ್ನು ತೋರಿಸಿ ಹೆದರಿಸಿದ್ದು ಈಗಲಾದರು ಈ ವಿಷಯವನ್ನು ಇಷ್ಟಕ್ಕೆ ಬಿಟ್ಟುಬಿಡು ಬಿಡದಿದ್ದರೆ ನಿನಗೆ ಉಳಿಗಾಲವಿಲ್ಲ. ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಮತ್ತು ತಮ್ಮ ವಿರುದ್ದ ಕೊಟ್ಟ ಫಿರ್ಯಾದಿಯನ್ನು ಹಿಂಪಡೆಯಬೇಕು ಅಂತಾ ಹೆದರಿಸಿ ದೌರ್ಜನ್ಯ ಮಾಡಿರುತ್ತಾರೆ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.   


0 comments:

 
Will Smith Visitors
Since 01/02/2008