Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, January 19, 2016

1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 16/2016 ಕಲಂ. 87 Karnataka Police Act.
ದಿನಾಂಕ:-18-01-2016 ರಂದು ಸಂಜೆ 6:00 ಗಂಟೆಗೆ ಶ್ರೀ ಹನುಮರಡ್ಡೆಪ್ಪ, ಪಿ.ಎಸ್.. ರವರು ಮೂಲ ವರದಿಯೊಂದಿಗೆ ಮೂಲ ಪಂಚನಾಮೆ, ಇಸ್ಪೀಟ್ ಜೂಜಾಟಕ್ಕೆ ಸಂಭಂದಿಸಿದಂತಹ ಮುದ್ದೆಮಾಲು ಹಾಗೂ ಇಬ್ಬರೂ ಆರೋಪಿತರನ್ನು ಹಾಜರಪಡಿಸಿದ್ದು ಅದರ ಸಾರಾಂಶ ಪ್ರಕಾರ ಇದೆಇಂದು ದಿನಾಂಕ: 18-01-2016 ರಂದು ಮಧ್ಯಾಹ್ನ ಠಾಣೆಯಲ್ಲಿರುವಾಗ ಠಾಣೆ ವ್ಯಾಪ್ತಿಯ ತಿರುಮಲಾಪೂರ ಸೀಮಾ ಗುಡ್ಡದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಬಾತ್ಮಿ ಮೇರೆಗೆ ನಾನು ಸಿಬ್ಬಂದಿಯವರಾದ ಪಿ.ಸಿ. 131, 97, 110, 429, 180, 323 ಹಾಗೂ ಸರಕಾರಿ ಜೀಪ ನಂ ಕೆ.-37/ಜಿ-307 ನೇದ್ದರ ಜೀಪ ಚಾಲಕ .ಪಿ.ಸಿ. 77 ರವರೊಂದಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪಿ ಹಾಗೂ ಸಿಬ್ಬಂದಿಯವರ ವೈಯಕ್ತಿಕ ಮೋಟಾರ ಸೈಕಲನಲ್ಲಿ ಗಂಗಾವತಿಯಿಂದ ಮಧ್ಯಾಹ್ನ 3:30 ಗಂಟೆಗೆ ಠಾಣೆಯಿಂದ ತಿರುಮಲಾಪೂರ ಕಡೆಗೆ ಹೊರಟೆವು. ತಿರುಮಲಾಪೂರ ಗ್ರಾಮ ಸಮೀಪ ಸ್ವಲ್ಪ ದೂರದಲ್ಲಿ ಜೀಪ ಹಾಗೂ ಮೋಟಾರ ಸೈಕಲಗಳನ್ನು ನಿಲ್ಲಿಸಿ ಎಲ್ಲರೂ ಇಳಿದು ಗುಡ್ಡದ ಕಡೆಗೆ ನಡೆದುಕೊಂಡು ಹೋಗಿ ಗುಡ್ಡದ ಮರೆಯಲ್ಲಿ ನಿಂತು ನೋಡಲಾಗಿ ಕಲ್ಲುಬಂಡೆಗಳ ಕೆಳಗಡೆ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಂಜೆ 4:15 ಗಂಟೆಯಾಗಿದ್ದು ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ ಇಬ್ಬರೂ ಸಿಕ್ಕಿ ಬಿದ್ದಿದ್ದು ಉಳಿದ ಜನರು ಓಡಿ ಹೋಗಿದ್ದು, ಸಿಕ್ಕವರ ಹೆಸರನ್ನು ವಿಚಾರಿಸಲು 1] ರಮೇಶ ತಂದೆ ಶಾಂತಪ್ಪ ಆಗೋಲಿ ವಯಸ್ಸು: 30 ವರ್ಷ ಜಾತಿ: ಉಪ್ಪಾರ, : ವ್ಯವಸಾಯ, ಸಾ: ನಾರಾಯಣಪೇಟೆ, (ಬಾಬಿ ರೇಸಾರ್ಟ ಹತ್ತಿರ) ತಾ: ಕೊಪ್ಪಳ 2] ನಾಗರಾಜ ತಂದೆ ಸಿದ್ದಪ್ಪ ಬಿಸನಳ್ಳಿ ವಯಸ್ಸು: 26 ವರ್ಷ ಜಾತಿ: ಲಿಂಗಾಯತ, : ಚಾಲಕ ಸಾ: ಅಗಳಕೇರಾ ತಾ: ಕೊಪ್ಪಳ ಅಂತಾ ತಿಳಿಸಿದ್ದು ಅವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ 2300/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಟವಲ್ ಸಿಕ್ಕಿದ್ದು ನಂತರ ಓಡಿ ಹೋದವರ ಹೆಸರನ್ನು ವಿಚಾರಿಸಲು ಹೆಸರು ಗೊತ್ತಿಲ್ಲಾ ಅಂತಾ ತಿಳಿಸಿದ್ದು, ಸಿಕ್ಕವರ ಮತ್ತು ಸ್ಥಳದಿಂದ ಓಡಿ ಹೋದವರ ಒಟ್ಟು 8 ಮೋಟಾರ ಸೈಕಲ್ಗಳು  ಸಿಕ್ಕಿದ್ದು, ಅವುಗಳನ್ನು ಹಾಜರಿದ್ದ ಪಂಚರ ಸಮಕ್ಷಮ ಬಗ್ಗೆ ಸಂಜೆ 4:15 ರಿಂದ 5:15 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ಹಾಗೂ ವಾಹನಗಳೊಂದಿಗೆ ಸಂಜೆ 6:00 ಗಂಟೆಗೆ ಠಾಣೆಗೆ ವಾಪಸ್ ಬಂದು ಸದರಿ ಆರೋಪಿತರ ವಿರುದ್ಧ ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆ. ಅಂತಾ ಸರಾಂಶ ಇದ್ದು, ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಸಂಜೆ 6:30 ಗಂಟೆಗೆ ಗಂಗಾವತಿ ಗ್ರಾಮೀಣ ಠಾಣೆ ಗುನ್ನೆ ನಂ: 16/2016 ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
2) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 12/2016 ಕಲಂ. 78(3) Karnataka Police Act.
ದಿನಾಂಕ: 18-01-2016 ರಂದು ರಾತ್ರಿ 9-00 ಗಂಟೆಗೆ ಶ್ರೀ ಇ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ನಗರ ಪೊಲೀಸ್ ಠಾಣೆ ಗಂಗಾವತಿ ರವರು ಮಟಕ ಜೂಜಾಟದಲ್ಲಿ ತೊಡಗಿದ ಬಾಬುಸಾಬ ಎಂಬ ವ್ಯಕ್ತಿಯನ್ನು ಮಟಕ ದಾಳಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ತಮ್ಮದೊಂದು ವರದಿಯೊಂದಿಗೆ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ,  ಇಂದು ದಿನಾಂಕ 18-01-2016 ರಂದು ಸಂಜೆ 7-30 ಗಂಟೆಯ ಸುಮಾರಿಗೆ ಆರೋಪಿತನಾದ ಬಾಬುಸಾಬ ಖಾಜಾಹುಸೇನಸಾಬ ಮುಂಡಾಸ ವಯ 60 ವರ್ಷ ಜಾ: ಮುಸ್ಲಿಂ ಉ: ಓ.ಸಿ. ಬರೆದುಕೊಳ್ಲುವುದು ಸಾ: ಲಿಂಗರಾಜ ಕ್ಯಾಂಪ್, ಗಂಗಾವತಿ ನಗರದ ಲಿಂಗರಾಜ ಕ್ಯಾಂಪಿನಲ್ಲಿ 05 ನೇ ಲೈನದಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರನ್ನು ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ನಗದು ಹಣ ರೂ. 1,750-00 [02] ಒಂದೂ ಸೆಲ್ ಕಾನ ಕಂಪನಿಯ ಮೊಬೈಲ್ [03] ಒಂದು ಬಾಲ್ ಪೆನ್  ಮತ್ತು [04] ಎರಡು ಮಟ್ಕಾ ನಂಬರ ಬರೆದ ಚೀಟಿಗಳು ದೊರೆತಿರುತ್ತವೆ, ಹಾಗೂ ಮತ್ತೊಬ್ಬ ಆರೋಪಿ ಅನ್ವರ @ ಹೊನ್ನೂರಸಾಬ ಗ್ರ್ಯಾಜುವೇಟ್ ಪಾನಶಾಪ ಗಂಗಾವತಿ ಇವನು ಮಟ್ಕಾ ಜೂಜಾಟದ ಪಟ್ಟಿಗಳನ್ನು ತೆಗೆದುಕೊಳ್ಳುವವನಾಗಿರುತ್ತಾನೆ. ಆರೋಪಿ ಬಾಬುಸಾಬ ಇವನಿಂದ ಜಪ್ತಿ ಪಡಿಸಿದ ಮುದ್ದೆಮಾಲನ್ನು ಪಂಚರ ಸಮಕ್ಷಮ 7-30 ಪಿ.ಎಂ. ದಿಂದ 8-30 ಪಿ.ಎಂ. ದ ವರೆಗೆ ಜಪ್ತಿ ಪಡಿಸಿಕೊಂಡು ಪ್ರತ್ಯೇಕವಾಗಿ ಪಂಚನಾಮೆಯನ್ನು ಬರೆದುಕೊಂಡಿದ್ದು,  ಮಟಕ ಜೂಜಾಟದಲ್ಲಿ ತೊಡಗಿರುವವರ ಮೇಲೆ ಕಲಂ 78 (iii) ಕೆ.ಪಿ.ಆ್ಯಕ್ಟ್  ಅಡಿಯಲ್ಲಿ ಕ್ರಮ ಜರುಗಿಸುವಂತೆ ವರದಿ ಸಾರಾಂಶವು ಎನ್ ಸಿ ಸ್ವರೂಪದ್ದಾಗಿದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 13/2016 ಕಲಂ. 78(3) Karnataka Police Act.
ದಿನಾಂಕ: 18-01-2016 ರಾತ್ರಿ 10-00 ಗಂಟೆಗೆ ಶ್ರೀ ಆಂಜನೇಯ ಡಿ. ಎಸ್. ಪೊಲೀಸ್ ಸಬ್ ಇನ್ಸಪೆಕ್ಟರ್ ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ರವರು ಮಟಕಾ ಜೂಜಾಟದಲ್ಲಿ ತೊಡಗಿದ್ದ ಒಬ್ಬ ವ್ಯಕ್ತಿ ಹಾಗೂ ಮುದ್ದೇಮಾಲನ್ನು ಹಾಜರುಪಡಿಸಿ ಅವರ ಮೇಲೆ  ಕ್ರಮ ಜರುಗಿಸಲು ಒಂದು ವರದಿ ನೀಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 18-01-2016 ರಂದು ಮಾನ್ಯ ಡಿ.ಎಸ್.ಪಿ. ಸಾಹೇಬರು, ಗಂಗಾವತಿ ರವರ  ಮಾರ್ಗದರ್ಶನದಲ್ಲಿ ಆರೋಪಿತನಾದ ಖಾಸಿಂ ಅಲಿ ತಂದೆ ಬುಡನಸಾಬ, 45 ವರ್ಷ, ಜಾ: ಮುಸ್ಲಿಂ, ಉ: ತೌಡ್ ತುಂಬುವುದು, ಸಾ: ವಾರ್ಡ ನಂ. 23, ಗುಂಡಮ್ಮ ಕ್ಯಾಂಪ್, ಗಂಗಾವತಿ ಈತನು ಗಂಗಾವತಿ ನಗರದ ಗುಂಡಮ್ಮ ಕ್ಯಾಂಪಿನ ದುರುಗಮ್ಮನ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ಅಂಕಿಗಳನ್ನು ಚೀಟಿಯಲ್ಲಿ ಬರೆದುಕೊಡುತ್ತಿರುವಾಗ ಸದರಿಯವನ ಮೇಲೆ ಪಂಚರ ಸಮಕ್ಷಮ ರಾತ್ರಿ 8-00 ಗಂಟೆಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ 1] ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 6,282-00- 2]  35 ಮಟಕ ನಂಬರ ಬರೆದ ಚೀಟಿ. 3] 2 ಸ್ಕೆಚ್ ಪೆನ್ ಇವುಗಳನ್ನು ಪಂಚರ ಸಮಕ್ಷಮ ರಾತ್ರಿ 8-00 ಗಂಟೆಯಿಂದ 9-00 ಗಂಟೆಯವರೆಗೆ ಜಪ್ತಿ ಪಡಿಸಿಕೊಂಡು ಈ ಬಗ್ಗೆ ಜಪ್ತಿ ಪಂಚನಾಮೆ ಬರೆದುಕೊಂಡಿದ್ದು ಇರುತ್ತದೆ. ಹಾಗೂ ಸದರಿ ವ್ಯಕ್ತಿಯು ಮಟಕಾ ಪಟ್ಟಿಗಳನ್ನು ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿರುತ್ತಾನೆ ಅಂತಾ ಮುಂತಾಗಿ ನೀಡಿದ ವರದಿ ನೀಡಿದ್ದು,  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 17/2016 ಕಲಂ. 279, 338 ಐ.ಪಿ.ಸಿ:.

ದಿನಾಂಕ:- 18-01-2016 ರಂದು ರಾತ್ರಿ 8:00 ಗಂಟೆಗ ಶ್ರೀ ಓಂ ಸಾಯಿ ಆರ್ಥೋಪೆಡಿಕ್ ಆಸ್ಪತ್ರೆ ಗಂಗಾವತಿಯಿಂದ ಎಂ.ಎಲ್.ಸಿ. ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀ ತಿಪ್ಪೇರುದ್ರಸ್ವಾಮಿ ತಂದೆ ನಾಗಯ್ಯಸ್ವಾಮಿ ವಯಸ್ಸು 55 ವರ್ಷ, ಜಾತಿ: ಜಂಗಮರು ಉ: ವಕೀಲ ವೃತ್ತಿ ಹಾಗೂ ಒಕ್ಕಲುತನ ಸಾ: ಸರೋಜ ನಗರ ಗಂಗಾವತಿ ಇವರ ನುಡಿ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಿನ್ನೆ ದಿನಾಂಕ:- 17-01-2016 ರಂದು ರಾತ್ರಿ 9:50 ಗಂಟೆಗೆ ಸಾಯಿನಗರ ಸೀಮಾದಲ್ಲಿ ಗಂಗಾವತಿ-ಆನೇಗುಂದಿ ಮುಖ್ಯ ರಸ್ತೆಯಲ್ಲಿ ವಾಯು ವಿಹಾರ ಮಾಡಿಕೊಂಡು ವಾಪಸ್ ಗಂಗಾವತಿ ಕಡೆಗೆ ಬರುತ್ತಿರುವಾಗ ಹಿಂದುಗಡೆ ಸಂಗಾಪೂರು ಕಡೆಯಿಂದ ನಾಗಯ್ಯ ಸ್ವಾಮಿ ಸಾ: ಆಚಾರ ನರಸಾಪೂರು ಎಂಬಾತನು ಹಿರೋಹೋಂಡಾ ಸ್ಪ್ಲೆಂಡರ್ ಮೋಟಾರ ಸೈಕಲ್ ನಂಬರ್: ಕೆ.ಎ-37/ ಕೆ-0687 ನೇದ್ದನ್ನು ಅತೀ ವೇಗವಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನನ್ನ ಬಲಗಾಲ ಪಾದದ ಹತ್ತಿರ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದು, ಇದರಿಂದ ನಾನು ಕೆಳಗೆ ಬಿದ್ದು ಬಲಗಾಲು ಪಾದ ಹತ್ತಿರ ಮತ್ತು ಬಲಗಡೆ ಪಕ್ಕೆಯ ಹತ್ತಿರ ಒಳಪೆಟ್ಟಾಯಿತು. ನಂತರ ಮೋ.ಸೈ. ಚಾಲಕನು ನನ್ನನ್ನು ಮನೆಗೆ ಕರೆದುಕೊಂಡು ಬಂದು ಬಿಟ್ಟಿದ್ದು, ರವಿವಾರ ಇದ್ದುದರಿಂದ ಯಾರೂ ವೈದ್ಯರು ಇಲ್ಲದ ಕಾರಣ ಇಂದು ಆಸ್ಪತ್ರೆಗೆ ಬಂದು ದಾಖಲಾಗಿದ್ದು, ವೈದ್ಯರು ತೀವ್ರ ಒಳಪೆಟ್ಟಾಗಿದೆ ಅಂತಾ ತಿಳಿಸಿದ್ದರಿಂದ ತಡವಾಗಿ ಹೇಳಿಕೆ ಫಿರ್ಯಾದಿ ನೀಡಿರುತ್ತೇನೆ. ಕಾರಣ ಮೋ.ಸೈ. ಚಾಲಕ ನಾಗಯ್ಯಸ್ವಾಮಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ" ಅಂತಾ ನೀಡಿದ ಹೇಳಿಕೆ ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008