ದಿನಾಂಕ 10.02.2016 ರಂದು
ರಾತ್ರಿ 9-15 ಗಂಟೆಗೆ ಮಾನ್ಯ ಶ್ರಿಕಾಂತ ಕಟ್ಟಿಮನಿ ಡಿ.ಎಸ್.ಪಿ ಸಾಹೇಬರು ಕೊಪ್ಪಳ ರವರು ಠಾಣೆಗೆ
ಹಾಜರಾಗಿ ಒಂದು ಜ್ಷಾಪನಾ ಪತ್ರ ಮತ್ತು ಜಪ್ತಿ ಪಂಚನಾಮೆ, ಮುದ್ದೇಮಾಲು ಹಾಗೂ ಓರ್ವ ಆರೋಪಿತನಿಗೆ ಹಾಜರು
ಪಡಿಸಿದ್ದು ಅದರ ಸಾರಾಂಶ ವೇನೆಂದರೆ ಇಂದು ದಿನಾಂಕ 10.02.2016 ರಂದು ಸಂಜೆ 7-15 ಗಂಟೆಗೆ ಕೊಪ್ಪಳ
ನಗರದ ದಿವಟರ್ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದ್ದ ಬಗ್ಗೆ ಮಾಹಿತಿ
ಬಂದಿದ್ದು ಕೂಡಲೇ ಕಾರ್ಯಾಲಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳನ್ನು ಮತ್ತು ಪಂಚರನ್ನು ಕರೆದುಕೊಂಡು
ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ನೋಡಲಾಗಿ ದಿವಟರ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು
ಮಟಕಾ ಜೂಜಾಟದಲ್ಲಿ ತೊಡಗಿ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ಪಟ್ಟಿಯನ್ನು ಬರೆದುಕೊಟ್ಟು
ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾಗ ಪಂಚರ ಸಮಕ್ಷಮ ದಾಳಿ ಮಾಡಿದ್ದು, ದಾಳಿ ಕಾಲಕ್ಕೆ ಆರೋಪಿ 1ನೇದ್ದವನು
ಸಿಕ್ಕಿದ್ದು, 2ನೇ ಆರೋಪಿತನು ಪರಾರಿಯಾಗಿರುತ್ತಾನೆ. ಸಿಕ್ಕ ಆರೋಪಿ ಗವಿಸಿದ್ದಪ್ಪ ಈತನಿಂದ ಮಟಕಾ
ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 2995=00 ರೂ, ಮಟಕಾ ಜೂಜಾಟದ ಪಟ್ಟಿ, ಒಂದು ಬಾಲ್ ಪೆನ್ ಇವುಗಳನ್ನು
ವಶಪಡಿಸಿಕೊಂಡಿದ್ದು ಇರುತ್ತದೆ. 2ನೇ ಆರೋಪಿ ಸುಧಾಕರ ಹೊಸಮನಿ ಇತನು ಮಟಕಾ ಪಟ್ಟಿ ತೆಗೆದುಕೊಳ್ಳುವ
ಬುಕ್ಕಿಯಾಗಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಜ್ಞಾಪನ ಪತ್ರದ ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 24/2016 ಕಲಂ: 78(3) Karnataka Police Act & 420 ಐ.ಪಿ.ಸಿ.
ದಿನಾಂಕ 10.02.2016 ರಂದು
ಸಂಜೆ 9-30 ಗಂಟೆಗೆ ಫಿರ್ಯಾದಿ ಶ್ರೀ ಸತೀಶ ಪಾಟೀಲ ಪಿ.ಐ. ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ
ದೂರಿನ ಸಾರಾಂಶವೇನೆಂದರೆ, ಇಂದು ದಿನಾಂಕ 10.02.2016 ರಂದು ಸಂಜೆ 7-30 ಗಂಟೆಗೆ ಕೊಪ್ಪಳ ನಗರದ ಸಿದ್ದೇಶ್ವರ
ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದ್ದ ಬಗ್ಗೆ ಮಾಹಿತಿ ಬಂದಿದ್ದು
ಕೂಡಲೇ ಸಿಬ್ಬಂದಿಗಳನ್ನು ಮತ್ತು ಪಂಚರನ್ನು ಕರೆದುಕೊಂಡು ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ನೋಡಲಾಗಿ
ಸಿದ್ದೇಶ್ವರ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿ ಜನರಿಂದ
ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ಪಟ್ಟಿಯನ್ನು ಬರೆದುಕೊಟ್ಟು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾಗ
ರಾತ್ರಿ 8-00 ಗಂಟೆಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ದಸ್ತಗಿರಿ ಮಾಢಿ ಆತನಿಂದ ಜೂಜಾಟಕ್ಕೆ
ಉಪಯೋಗಿಸಿದ ನಗದು ಹಣ 1010=00 ರೂ, ಮಟಕಾ ಜೂಜಾಟದ ಪಟ್ಟಿ, ಒಂದು ಬಾಲ್ ಪೆನ್ ಇವುಗಳನ್ನು ವಶಪಡಿಸಿಕೊಂಡಿದ್ದು,
ಸದರಿ ಆರೋಪಿತನಿಗೆ ವಶಕ್ಕೆ ಪಡೆದು ಹಾಜರುಪಡಿಸಿದ್ದು ಸದರಿ ಆರೋಪಿತನ ಮೇಲೆ ಮುಂದಿನ ಕ್ರಮಕ್ಕಾಗಿ
ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ
ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment