1) ಸಂಚಾರಿ
ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 09/2016 ಕಲಂ: 279, 304(ಎ) ಐ.ಪಿ.ಸಿ
ದಿನಾಂಕ. 11-02-2016 ರಂದು
ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಬಸಪ್ಪ ತಂದೆ ನಿಂಗಪ್ಪ ಹಳ್ಳಿ ವಯ. 50 ಜಾತಿ.
ಕುರುಬರ ಉ: ಒಕ್ಕಲುತನ ಸಾ. ಹಾಲವರ್ತಿ ತಾ.ಜಿ. ಕೊಪ್ಪಳ ಇವರು ಠಾಣೆಗೆ
ಹಾಜರಾಗಿ ಲಿಖಿತ ಫಿರ್ಯಾದಿಯನ್ನು ನೀಡಿದ್ದು ಅವರು ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶವೆನೆಂದರೆ ಇಂದು
ದಿನಾಂಕ 11-02-2016 ರಂದು ಫಿರ್ಯಾದಿಯ ಸಂಬಂಧಿಕರ ಶ್ರಮವು ನೆಲೋಗಿಪುರ ಗ್ರಾಮದಲ್ಲಿದ್ದು, ಹಾಲವರ್ತಿ
ಗ್ರಾಮದಿಂದ ಅಲ್ಲಿಗೆ ಹೋಗಲು ಇಂದು ಬೆಳಿಗ್ಗೆ 10-15 ಗಂಟೆಗೆ ಫಿರ್ಯಾದಿಯ ಗ್ರಾಮದ ರಾಜಾಭಕ್ಷಿ ಪಟವಾರಿ
ಇವರ ಆಟೋ ನಂಬರ್ ಕೆ.ಎ 37 / 8957 ನೇದ್ದರಲ್ಲಿ ಫಿರ್ಯಾದಿಯ ಅಣ್ಣ ಹನುಮಪ್ಪ ಹಳ್ಳಿ ಹಾಗೂ ಹಾಲವರ್ತಿ
ಗ್ರಾಮದ ಯಮನಪ್ಪ ಗೊರವರ, ಹನುಮವ್ವ ಗೊರವರ, ಶಿವಮ್ಮ ಹಳ್ಳಿ, ಶಾರಮ್ಮ ಹಳ್ಳಿ, ಶಂಕ್ರಮ್ಮ ಮಾಲಿಗೌಡರ
ಎಲ್ಲರೂ ಕುಳಿತುಕೊಂಡು ನೆಲೋಗಿಪುರ ಗ್ರಾಮಕ್ಕೆ ಹೋಗುವಾಗ ಆಟೋ ಚಾಲಕನು ವಾಹನವನ್ನು
ಕೊಪ್ಪಳ – ಹಾಲವರ್ತಿ ರಸ್ತೆಯ ಮೇಲೆ ಗವಿಮಠದ ಗುಡ್ಡದ ಸಮೀಪ ವಾಹನವನ್ನು ನಿಲ್ಲಿಸಿದ್ದು, ಆಗ ಆಟೋದಲ್ಲಿದ್ದ
ಯಮನಪ್ಪ ಗೊರವರ ಈತನು ಮೂತ್ರ ವಿಸರ್ಜನೆ ಮಾಡಿ ಆಟೋದ ಹತ್ತಿರ ಬರುತ್ತಿರುವಾಗ ಆಟೋದಲ್ಲಿದ್ದ ಫಿರ್ಯಾದಿಯ
ಅಣ್ಣ ಹನುಮಪ್ಪ ಹಳ್ಳಿ ಆಟೋದಿಂದ ಕೆಳಗೆ ಇಳಿದು ಆಟೋ ಚಾಲಕನ ಜೊತೆಗೆ ಮಾತನಾಡುತ್ತಾ ಆಟೋದ ಪಕ್ಕದಲ್ಲಿ
ನಿಂತುಕೊಂಡಿರುವಾಗ ಕೊಪ್ಪಳದ ಕಡೆಯಿಂದ ಬಂದ ಪೊಲೀಸ್ ಇಲಾಖೆಯ ವಾಹನ ನಂಬರ್ ಕೆ.ಎ 37 / ಜಿ 293 ನೇದ್ದನ್ನು
ಅದರ ಚಾಲಕನು ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಆಟೋ ಪಕ್ಕದಲ್ಲಿ
ಮಾತನಾಡುತ್ತಾ ನಿಂತಿದ್ದ ಹನುಮಪ್ಪ ಹಳ್ಳಿ ಇತನಿಗೆ ಟಕ್ಕರ್ ಮಾಡಿ ಅಪಘಾತ ಮಾಡಿದ್ದರಿಂದ ಹನುಮಪ್ಪ
ಇತನು ಡಾಂಬರ್ ರಸ್ತೆಯ ಮೇಲೆ ರಭಸವಾಗಿ ಬಿದ್ದಿದ್ದರಿಂದ ತಲೆಗೆ ಮತ್ತು ಮುಖಕ್ಕೆ ಭಾರಿ ರಕ್ತಗಾಯವಾಗಿ
ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಇದ್ದ ಲಿಖಿತ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ
09/2016 ಕಲಂ. 279, 304 (ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
0 comments:
Post a Comment