1) ಗಂಗಾವತಿ
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 111/2016 ಕಲಂ. 279, 304(ಎ) ಐ.ಪಿ.ಸಿ:.
ದಿನಾಂಕ: 26-03-2016 ರಂದು ಮುಂಜಾನೆ
11:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಬೆಟ್ಟಪ್ಪ ತಂದೆ ಹನುಮಂತಪ್ಪ
ಬಳ್ಳಾರಿ, 32 ವರ್ಷ, ಜಾತಿ: ಕುರುಬರು ಉ: ಕೂಲಿ ಕೆಲಸ ಸಾ: ಚಿಕ್ಕಬೆಣಕಲ್ ಹಾಲಿವಸ್ತಿ: ಸಂಗಾಪೂರು.
ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ದೂರನ್ನು ನೀಡಿದ್ದು ಅದರ
ಸಾರಾಂಶ ಏನಂದರೆ, " ಇಂದು ದಿನಾಂಕ:- 26-03-2016 ರಂದು ಬೆಳಿಗ್ಗೆ 06:00 ಗಂಟೆಯ
ಸುಮಾರಿಗೆ ನನ್ನ ತಮ್ಮ ಉಮೇಶ ವಯಸ್ಸು 27 ವರ್ಷ ಇವನು ಗಂಗಾವತಿಯ ಬಿ. ಈಶ್ವರ ತಂದೆ ಬಂಗಾರಪ್ಪ ಸಾ:
ಗಂಗಾವತಿ ಇವರ ಟ್ರ್ಯಾಕ್ಟರ ನಲ್ಲಿ ಕಲ್ಲು ಲೋಡ್ ಮಾಡುವ ಕೂಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದನು.
ನಂತರ ಬೆಳಿಗ್ಗೆ 8:30 ಗಂಟೆಯ ಸುಮಾರಿಗೆ ಟ್ರ್ಯಾಕ್ಟರ ಚಾಲಕ ಬಸಯ್ಯ ತಂದೆ ಸಿದ್ದಯ್ಯ ಸಾ: ಸಂಗಾಪೂರು
ಈತನು ನನಗೆ ಫೋನ್ ಮಾಡಿ ಕಡೇಬಾಗಿಲು ಸೀಮಾದಲ್ಲಿ ಟ್ರ್ಯಾಕ್ಟರ್ ಟ್ರಾಲಿ ಕೊಂಡಿ ಕಳಚಿ ಬಿದ್ದು ಉಮೇಶನಿಗೆ
ತೀವ್ರ ಗಾಯಗಳಾಗಿವೆ ಅಂತಾ ತಿಳಿಸಿದನು. ಕೂಡಲೇ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಗಂಗಾವತಿ-ಆನೇಗುಂದಿ
ಮುಖ್ಯ ರಸ್ತೆಯ ಕಡೇಬಾಗಿಲು ಸೀಮಾದ ಹುಲಿಗೆಮ್ಮನ ಗುಡಿಯ ಹತ್ತಿರ ಅಪಘಾತವಾಗಿದ್ದು, ನನ್ನ ತಮ್ಮ ಉಮೇಶನಿಗೆ
ಬಲಗೈ ಮುಂಗೈ ಹತ್ತಿರ ತೀವ್ರ ರಕ್ತಗಾಯವಾಗಿ, ದೇಹದ ಬಲಭಾಗ ಭುಜದಿಂದ ಸೊಂಟದವರೆಗೆ ತೀವ್ರ ಸ್ವರೂಪದ
ರಕ್ತಗಾಯವಾಗಿತ್ತು. ಸ್ಥಳದಲ್ಲಿ ಟ್ರ್ಯಾಕ್ಟರ್ ನಂಬರ್: ಕೆ.ಎ-34/ ಟಿ.ಎ-2180 ಮತ್ತು ಸೈಜ್ ಕಲ್ಲು
ಲೋಡ್ ಇದ್ದ ಟ್ರ್ಯಾಲಿ ನಂಬರ್: ಕೆ.ಎ-37/ ಟಿ.ಬಿ-3247 ನೇದ್ದು ಕೊಂಡಿ ಕಳಚಿ ಬೇರೆ ಬೇರೆಯಾಗಿ ನಿಂತಿದ್ದು,
ರಸ್ತೆಯ ಡಾಂಬರ್ ಕಿತ್ತಿ ಹೋಗಿತ್ತು. ನಂತರ ಗಾಯಗೊಂಡಿದ್ದ ನನ್ನ ತಮ್ಮನನ್ನು ಯಾವುದೋ ಒಂದು ವಾಹನದಲ್ಲಿ
ಕರೆದುಕೊಂಡು ಬಂದು ಗಂಗಾವತಿಯ ಶ್ರೀ ಮಲ್ಲಿಕಾರ್ಜುನ ನರ್ಸಿಂಗ್ ಹೋಮ್ ನಲ್ಲಿ ಸೇರಿಕೆ ಮಾಡಲಾಯಿತು.
ಆದರೆ ವೈದ್ಯರು ಚಿಕಿತ್ಸೆ ಮಾಡುತ್ತಿರುವಾಗ ಗುಣವಾಗದೇ ಬೆಳಿಗ್ಗೆ 09:30 ಗಂಟೆಯ ಸುಮಾರಿಗೆ ಉಮೇಶನು
ಮೃತಪಟ್ಟನು. ನಂತರ ಶವವನ್ನು ಗಂಗಾವತಿ ಉಪವಿಭಾಗ ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ಬಂದು ಹಾಕಿದ್ದು
ಇರುತ್ತದೆ. ಚಾಲಕ ಬಸಯ್ಯನಿಗೆ ವಿಚಾರಿಸಲು ತಾವು ರಾಂಪೂರು ಗುಡ್ಡದಲ್ಲಿ ಟ್ರ್ಯಾಲಿಯಲ್ಲಿ ಸೈಜ್ ಕಲ್ಲುಗಳನ್ನು
ಲೋಡ್ ಮಾಡಿಕೊಂಡು ಬರುತ್ತಿರುವಾಗ ಬೆಳಿಗ್ಗೆ 8:15 ಗಂಟೆಯ ಸುಮಾರಿಗೆ ಟ್ರಾಲಿಯ ಕೊಂಡಿ ಕಳಚಿ ಟ್ರಾಲಿಯಲ್ಲಿ
ಕುಳಿತಿದ್ದ ಉಮೇಶನು ಕೆಳಗೆ ಬಿದ್ದು ಟ್ರಾಲಿಯ ಗಾಲಿಯು ದೇಹದ ಬಲಭಾಗದ ಮೇಲೆ ಹಾಯ್ದು ತೀವ್ರ ಗಾಯಗಳಾಗಿರುತ್ತವೆ
ಅಂತಾ ತಿಳಿಸಿದನು. ಟ್ರ್ಯಾಕ್ಟರ /ಟ್ರಾಲಿ ಚಾಲಕ ಬಸಯ್ಯ
ತಂದೆ ಸಿದ್ದಯ್ಯ ಸಾ: ಸಂಗಾಪೂರು ಈತನು ಟ್ರ್ಯಾಕ್ಟರ್/ಟ್ರಾಲಿಯನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ
ನಡೆಯಿಸಿಕೊಂಡು ಬಂದಿದ್ದರಿಂದ ಟ್ರಾಲಿಯ ಕೊಂಡಿ ಕಳಚಿ ಅದರ ಮೇಲೆ ಕುಳಿತಿದ್ದ ನನ್ನ ತಮ್ಮ ಉಮೇಶನು
ಕೆಳಗೆ ಪುಟಿದು ಬಿದ್ದು, ಟ್ರಾಲಿಯ ಗಾಲಿಯು ಮೇಲೆ ಹಾಯ್ದು ತೀವ್ರ ಗಾಯವಾಗಿ ಮೃತಪಟ್ಟಿರುತ್ತಾನೆ.
ಕಾರಣ ಈ ಅಪಘಾತಕ್ಕೆ ಕಾರಣನಾದ ಚಾಲಕ ಬಸಯ್ಯನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ.”
ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಗಂಗಾವತಿ ಗ್ರಾಮೀಣ
ಪೊಲೀಸ್ ಠಾಣೆ ಗುನ್ನೆ ನಂ: 111/2016 ಕಲಂ: 279, 304(ಎ) ಐಪಿಸಿ ಅಡಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇದೆ.
0 comments:
Post a Comment