1) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 55/2016 ಕಲಂ: 324,
504 ಸಹಿತ 34 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ:.
ದಿನಾಂಕ. 09-03-2016 ರಂದು 04-00
ಪಿ.ಎಂ.ಕ್ಕೆ ಫಿರ್ಯಾದಿದಾರರು ತಮ್ಮ ಮಾಲಿಕರಾದ ಮಹಾಂತೆಶ ಇವರು ತಿಳಿಸಿದಂತೆ ಡಿ. ಹೊಸಳ್ಳಿ
ಸೀಮಾದಲ್ಲಿ ತಮ್ಮ ಮಾಲಿಕರ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಮಾಲಿಕರ ತಮ್ಮಂದಿರಾದ ಗುರುಪಾದಪ್ಪ @ ಅಪ್ಪಣ್ಣ ಮತ್ತು ಆನಂದಪ್ಪ ಇವರು ಬಂದು ಫಿರ್ಯಾದಿದಾರಿಗೆ ಮಾದಿಗ ಸೂಳೆ ಮಗೆನೆ ಎಂದು ಜಾತಿ
ನಿಂಧನೆ ಮಾಡಿ ಅವಾಚ್ಯ ಬೈದು ಕೊಡ್ಕಿ ಕಾವಿನಿಂದ ಕಾಲಿಗೆ, ಕೈಗೆ ದುಬ್ಬಕ್ಕೆ ಹೊಡೆದಿರುತ್ತಾರೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2)
ಗಂಗಾವತಿ ನಗರ ಪೊಲೀಸ್
ಠಾಣೆ ಯು.ಡಿ.ಅರ್.ನಂ. 06/2016 ಕಲಂ: 174
ಸಿ.ಅರ್.ಪಿ.ಸಿ:.
ದಿನಾಂಕ 10-03-2016 ರಂದು 4-00 ಪಿ.ಎಂ. ಕ್ಕೆ ಮಹಿಬೂಬ ತಂದೆ ಮೈನೂದ್ದೀನ್ ವಯಾ 33 ವರ್ಷ, ಜಾತಿ: ಮುಸ್ಲಿಂ, ಉ:
ವೆಲ್ಡಿಂಗ್ ಕೆಲಸ, ಸಾ: ಗುಂಡಮ್ಮ ಕ್ಯಾಂಪ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ
ಸಾರಂಶವೇನೆಂದರೆ, ದಿನಾಂಕ 10-03-2016 ರಂದು 10-00 ಎ.ಎಂ. ದಿಂದ 11-30 .ಎಂ. ದ ಮಧ್ಯದ ಅವಧಿಯಲ್ಲಿ ಬಾಲಾಜಿ ಗ್ಯಾಸ ಕಂಪನಿಯ ಹತ್ತಿರವಿರುವ ಮಳಗಿಯ ಹತ್ತಿರ ಅಂ. 40 ರಿಂದ 45 ವರ್ಷದ ವಯಸ್ಸಿನ ಭಿಕ್ಷುಕ ಗಂಡು ಮನುಷ್ಯನು ತನಗಿದ್ದ ಯಾವುದೋ ರೋಗದಿಂದ ಬಳಲಿ ಮರಣ ಹೊಂದಿರುತ್ತಾನೆ. ಸದರಿಯವನ ಮರಣದಲ್ಲಿ ಯಾವುದೇ ರೀತಿಯ ಸಂಶಯ
ವಗೈರೆ ಇರುವುದಿಲ್ಲವೆಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
0 comments:
Post a Comment