Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, March 3, 2016

1) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 21/2016 ಕಲಂ: 87 Karnataka Police Act:.
ದಿನಾಂಕ02-03-2016 ರಂದು 5-45 ಪಿಎಂಕ್ಕೆ ಪಿ.ಎಸ್.. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 5 ಜನ ಆರೋಪಿತರನ್ನು ಹಾಜರಪಡಿಸಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಮಾಹಿತಿ ಬಂದ ಪ್ರಕಾರ ತಾವು ಮಾನ್ಯ ಸಿಪಿಐ ಯಲಬುರ್ಗಾರವರ ಮಾರ್ಗದರ್ಶನದಲ್ಲಿ ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 4-30 ಪಿಎಂಕ್ಕೆ ಕುಕನೂರ ಚಳ್ಲೇಶ್ವರ ಗುಡಿಯ ಹತ್ತಿರದ ಬಯಲು ಜಾಗೆಯಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ, ಸದರಿಯವರನ್ನು ವಶಕ್ಕೆ ಪಡೆದುಕೊಂಡು ಸದರಿಯವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಟಾವಲ್,  52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 2360-00 ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು
2) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 48/2016 ಕಲಂ: 78(1)(ಎ)(6) Karnataka Police Act.
ದಿನಾಂಕ 02-03-2016 ರಂದು 22-00 ಗಂಟೆಗೆ ಶ್ರೀ ಈ. ಕಾಳಿಕೃಷ್ಣ  ಪಿ ಐ  ನಗರ ಪೊಲೀಸ್ ಠಾಣೆ ಗಂಗಾವತಿ  ರವರು ಕ್ರೀಕೇಟ್ ಜೂಜಾಟದಲ್ಲಿ ತೊಡಗಿದ  ಇಬ್ಬರೂ ವ್ಯಕ್ತಿಗಳನ್ನು ಹಾಜರಪಡಿಸಿ ಸದರಿಯವರ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಅದರ ಸಾರಂಶವೇನೆಂದರೆ,  ಇಂದು ದಿನಾಂಕ: 02-03-2016 ರಂದು ರಾತ್ರಿ 20-30 ಗಂಟೆಗೆ ಆರೋಪಿತರಾದ 1] ಸುಧೀಂದ್ರ ತಂದೆ ಕೇಶವ ವಾಲ್ಮೀಕಿ ಸಾ: ಇಂದಿರಾ ನಗರ ಗಂಗಾವತಿ , ಶಂಕರ ತಂದೆ ನಾಗರಾಜ ಎಮ್ ಸಾ: ಪೋಸ್ಟ್ ಆಪೀಸ್ ಹತ್ತಿರ ಕಂಪ್ಲಿ ಇವರು ಗಂಗಾವತಿ ನಗರದ ಮಟ್ಟಿ ಆಸ್ಪತ್ರೆಯ ರಸ್ತೆಯಲ್ಲಿರುವ ಶ್ರೀನಿಕೇತನ ಪೈನಾನ್ಸ ಪಕ್ಕದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಏಷ್ಯಾಕಪ್ ಟಿ-20 ಕ್ರಿಕೇಟನ ಪಾಕಿಸ್ತಾನ & ಬಾಂಗ್ಲಾದೇಶಗಳ ನಡುವೆ ನಡೆಯುತ್ತಿರುವ ಪಂದ್ಯದ ಮೇಲೆ ಮೊಬೈಲ್ ಮೇಸೇಜಗಳ  ಮೂಲಕ ಕ್ರಿಕೇಟ ಜೂಜಾಟದಲ್ಲಿ ತೊಡಗಿರುವದು ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವರಿಂದ ಕ್ರಿಕೇಟ ಜೂಜಾಟಕ್ಕೆ ಸಂಬಂಧಿಸಿದ ಒಟ್ಟು 10,930 ರೂ ನಗದು ಹಣ, ಜೂಜಾಟ ಆಡಲು ಬಳಸಿದ ಎರಡು  ಸ್ಯಾಮಸಂಗ್ ಮೊಬೈಲಗಳು ದೊರೆತಿದ್ದು, ಹಾಗೂ ಕ್ರಿಕೇಟ್ ಜೂಜಾಟ ಆಡಲು ಬಳಸಿದ ಆರೋಫಿ ಸಂ 02 ನೇದವನ ಹೊಂಡ್ ಶೈನ ಮೋಟಾರ ಸೈಕಲ ನಂ ಕೆ,ಎ 35 / ವಾಯ್ 4841  ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಆರೋಪಿತರು ಇಂದು ನಡೆದ ಏಷ್ಯಾಕಪ್ ಟಿ-20  ಕ್ರಿಕೇಟನ ಪಾಕಿಸ್ತಾನ & ಬಾಂಗ್ಲಾದೇಶಗಳ ನಡುವೆ ನಡೆಯುತ್ತಿರುವ ಪಂದ್ಯದ ಮೇಲೆ ಜೂಜಾಟದಲ್ಲಿ ತೊಡಗಿದ್ದರಿಂದ  ಸದರಿಯವರ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 52/2016 ಕಲಂ: 78(3) Karnataka Police Act.
ದಿನಾಂಕ. 02-03-2016 ರಂದು 7-00 ಪಿ.ಎಂ.ಕ್ಕೆ ಆರೋಪಿತರು ಹೊಸನಿಂಗಾಪುರ ಗ್ರಾಮದ ಬಸ್ ಸ್ಟ್ಯಾಂಡ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಇದ್ದ ಪ್ರಕಾರ ಫಿರ್ಯಾದಿದಾರರು ಹಾಗೂ ಮಾನ್ಯ ಸಿ.ಪಿ.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಡಿ ಮೂರು ಜನರ ಆರೋಪಿತರಾದ ರಿಯಾಜ, ಪಾಂಡು ಮತ್ತು ಅಬ್ಬಸ ಇವರಿಂದ ಮೂರು ಮಟಕಾ ನಂಬರ ಬರೆದ ಚೀಟಿಗಳು, ಮೂರು ಬಾಲ ಪೆನ್ನುಗಳು ಹಾಗೂ ಜೂಜಾಟದ ನಗದು ಹಣ. 6300-00 ರೂ.ಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ ಹಾಗೂ ಆರೋಪಿತನು ಮಟಕಾ ಪಟ್ಟಿಯನ್ನು ಆರೋಪಿ ಇಕ್ಬಾಲ ಹುಸೇನ ಇವರಿಗೆ ಕೊಡುತ್ತಾರೆ. ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
4) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 39/2016 ಕಲಂ: 78(3) Karnataka Police Act.
ದಿನಾಂಕ: 02-03-2016 ರಂದು ರಾತ್ರಿ 9-00 ಗಂಟೆಗೆ ಶ್ರೀ ಸತೀಶ ಪಾಟೀಲ ಪಿ.ಐ. ರವರು ನೀಡಿದ ದೂರಿನ ಸಾರಾಂಶದಲ್ಲಿ ಅಸಂಜ್ಞಯ ಅಪರಾಧ ಪ್ರಕರಣವಾಗಿದ್ದರಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದು, ಸದರಿ ದೂರಿನಲ್ಲಿ ದಿನಾಂಕ: 02-03-2016 ರಂದು ರಾತ್ರಿ 7-30 ಗಂಟೆಗೆ ಕೊಪ್ಪಳ ನಗರದ ಹಸನ್ ಕ್ರಾಸ್ ಹತ್ತಿರ ಸಂಗೀತಾ ಮೊಬೈಲ್ ಶಾಫ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ನಿಂತುಕೊಂಡು 1 ರೂ ಗೆ 80 ರೂ ಯಾರ ಅದೃಷ್ಟ ನಶೀಬದ ಆಟ ಹಚ್ಚಿರಿ ಅಂತಾ ಕೂಗುತ್ತಿದ್ದಾಗ ದಾಳಿಕಾಲಕ್ಕೆ ಆರೋಪಿ ಬಸವರಾಜ ಸಾಲಮನಿ ಮತ್ತು ಗವಿಸಿದ್ದಪ್ಪ ಸಂಗನಾಳ ಎಂಬ ಆರೋಪಿತರು ಸಿಕ್ಕಿದ್ದು ಸದರಿ ಆರೋಪಿತರಿಂದ ನಗದು ಹಣ ರೂ 1550=00, ಎರಡು ಮಟಕಾ ಚೀಟಿ, ಎರಡು ಬಾಲ್ ಪೆನ್ ಗಳನ್ನ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು, ನಂತರ ಒಂದನೇ ಆರೋಪಿತನಿಗೆ ಮಟಕಾ ಪಟ್ಟಿಯನ್ನು ಯಾರಿಗೆ ಕೋಡುತ್ತಿ ಅಂತಾ ವಿಚಾರಿಸಲು ಮಟಕಾ ಬುಕ್ಕಿ ಶಿವರೆಡ್ಡಿ ಸಾ: ಬೆಂಕಿನಗರ ಇತನಿಗೆ ಕೊಡುವುದಾಗಿ ತಿಳಿಸಿದ್ದು ಮತ್ತು ಎರಡನೇ ಆರೋಫಿತನಾದ ಗವಿಸಿದ್ದಪ್ಪ ಇತನನ್ನು ವಿಚಾರಿಸಲು ಇತನು ತನ್ನ ಮಟಕಾ ಪಟ್ಟಿಯನ್ನು ಮಟಕಾ ಬುಕ್ಕಿಯಾದ ಸುಧಾಕರ ಹೊಸಮನಿ ಸಾ: ಸಜ್ಜಿಹೋಲ ಇತನಿಗೆ ಕೊಡುವುದಾಗಿ ತಿಳಿಸಿದ್ದು, ಕಾರಣ ಸದರಿ ಆರೋಫಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಕುರಿತು ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲುಮಾಡಿಕೊಂಡು ತನಿಖೆಕೈಗೊಂಡಿದ್ದು ಅದೆ.
5) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 57/2016 ಕಲಂ: 279, 337, 338 ಐ.ಪಿ.ಸಿ:.

ದಿ-02.03.16 ರಂದು ಮಧ್ಯಾನ್ನ 03.00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ನಾಗರಾಜ ಕರಿಗಾರ ಸಾ: ಇರಕಲ್ಲಗಡಾ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಾಂಶವೆನೆಂದರೆ, ಒಂದು ವಾರದ ಹಿಂದೆ ಗೌಂಡಿ ಕೆಲಸಕ್ಕೆಂದು ಮರಿಯಮ್ಮನಹಳ್ಳಿಗೆ ಹೋಗಿ ನಿನ್ನೆ ದಿನಾಂಕ-01.03.2016 ರಂದು ಸಂಜೆ 4.00 ಗಂಟೆಗೆ ಮರಿಯಮ್ಮನಹಳ್ಳಿ ಯಿಂದ ವಾಪಸ್ ಇರಕಲ್ಲಗಡಾಕ್ಕೆಂದು ಟಿ.ಇ.ಎಸ್ ವಿಕ್ಟರ್ ಮೊ.ಸೈ ಚಿಸ್ಸಿ ನಂ-3210ಎಫ್250247 ನೇದ್ದರಲ್ಲಿ ಫಿರ್ಯಾದಿ ಮತ್ತು ಶಿವಪ್ಪ ಪಿನ್ನಿ ಇಬ್ಬರೂ ಹೊರಟಿದ್ದು, ಶಿವಪ್ಪ ಪಿನ್ನಿ ಈತ ಮೊ.ಸೈಕಲ್ ನಡೆಸುತ್ತಿದ್ದನು. ಗಿಣಗೇರಿ ದಾಟಿ ಗಿಣಗೇರಿ-ಭೀಮನೂರ ರಸ್ತೆಯಲ್ಲಿ ಶಿವಪ್ಪ ಪಿನ್ನಿ ಈತನು ಮೋ.ಸೈಕಲ್ ನ್ನು  ಸಂಜೆ 7.30 ಸುಮಾರಿಗೆ ಅತೀ ಜೋರಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಓಡಿಸಿದ್ದರಿಂದ ನಿಯಂತ್ರಣ ಸಾದಿಸದೇ ಮೊ.ಸೈಕಲ್ಲನ್ನು ಪಲ್ಟಿ ಮಾಡಿದ್ದರಿಂದ ಮೊ.ಸೈಕಲ್ ಸಮೇತ ಬಿದ್ದಿದ್ದು, ಇದರಿಂದ ಮೊ.ಸೈ ದಲ್ಲಿದ್ದ ಫಿರ್ಯಾದಿ ನಾಗರಾಜ ಮತ್ತು ಮೋ.ಸೈಕಲ್ ಓಡಿಸುತ್ತಿದ್ದ ಶಿವಪ್ಪ ಇವರಿಗೆ ಸಾದಾ ಮತ್ತು  ಭಾರಿ ಸ್ವರೂಪದ ಗಾಯಗಳಾಗಿದ್ದು, ಅಪಘಾತದ ನಂತರ ಚಿಕಿತ್ಸೆ ಪಡೆದು ಸ್ವಲ್ಪ ಗುಣಮುಖ ಹೊಂದಿ ಇಂದು ತಡವಾಗಿ ಫಿರ್ಯಾದಿ ನೀಡಿದ್ದು ಕಾರಣ ಅಪಘಾತ ಪಡಿಸಿದ ಮೊ.ಸೈಕಲ್ ಸವಾರನ  ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ  ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008