ದಿನಾಂಕ 03-03-2016 ರಂದು ರಾತ್ರಿ 10-45 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ರೇಣವ್ವ ಗಂಡ ಶೇಖರಪ್ಪ ಡೋಳ್ಳಿನ
ಸಾ: ಕವಲೂರ ಓಣಿ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿಯೊಂದಿಗೆ ಒಬ್ಬ
ಆರೋಪಿತನನ್ನು ಹಾಜರಪಡಿಸಿದ್ದು, ಸದರ ಫಿರ್ಯಾದಿಯ ಸಾರಾಂಶ ಏನೆಂದರೆ, ದಿನಾಂಕ: 03-03-2016 ರಂದು ರಾತ್ರಿ 9-15 ಗಂಟೆ ಸುಮಾರಿಗೆ ತಾನು ಕೆ.ಸಿ ಸರ್ಕಲ್ ಹತ್ತಿರ ತನ್ನ ಮನೆಗೆ
ನಡೆದುಕೊಂಡು ಹೋಗುತ್ತಿದಾಗ ಶಿವರಾಜ ಮೋಡಿಕೇರ ಇತನು ಹಿಂದಿನಿಂದ ಬಂದು ತನ್ನ ಕುತ್ತಿಗೆಗೆ ಕೈ
ಹಾಕಿ ಕೋರಳಲ್ಲಿದ್ದ ಮಾಂಗಲ್ಯ ಸರವನ್ನು ಬಲವಂತವಾಗಿ ಕಿತ್ತುಕೊಂಡು ಅಲ್ಲಿಯ ಓಣಿಯ ಒಳಗೆ ಓಡಿ
ಹೋದನು, ಅಷ್ಟರಲ್ಲಿ ತಾನು ಕಳ್ಳ ಕಳ್ಳ ಅಂತಾ ಜೋರಾಗಿ ಕೂಗಿದಾಗ
ಸುತ್ತಮುತ್ತಲಿನ ಮನೆಯವರು ಬಂದಿದ್ದು, ಆಗ ಅವರು ವಿಚಾರಿಸಿದಾಗ ಈ ವಿಷಯವನ್ನು ತಿಳಿಸಿದೇನು. ಆಗ ಜನರು ಅವನು
ಓಡಿ ಹೋದ ದಾರಿಗೆ ಹೋಗಿ ನೋಡಿದಾಗ ಅವನು ಒಂದು ಓಣಿಯ ಸಂದಿಯ ಕತ್ತಲಲ್ಲಿ ಅವಿತುಕೊಂಡಾಗ ಜನರು
ಅವನನ್ನು ಹಿಡಿದುಕೊಂಡು ವಿಚಾರಿಸಿದಾಗ ಅವನು ತನ್ನ ಹೆಸರು ಶಿವರಾಜ ತಂದೆ ಹನುಮಂತಪ್ಪ ಮೋಡಿಕರ
ವಯಾ: 19 ವರ್ಷ ಜಾ: ಕುಂಚಿಕೋರವರ ಉ: ಪುಟ್ಟಿ ಮಾರುವುದು ಸಾ: ಗಾಂಧಿನಗರ
ಕೊಪ್ಪಳ ಅಂತಾ ಹೇಳಿದ್ದು, ಅವನನ್ನು ಚೆಕ್ ಮಾಡಿದಾಗ ಅವನ ಪ್ಯಾಂಟಿನ ಜೇಬಿನಲ್ಲಿ ತನ್ನ ಮಾಂಗಲ್ಯ
ಸರದಲ್ಲಿ ಅರ್ಧ ಸರ ಅವನ ಹತ್ತಿರ ಸಿಕ್ಕಿದ್ದು, ಉಳಿದ ಸರದ ಬಗ್ಗೆ
ಕೆಳಿದಾಗ ಅವನು ತನಗೆ ಇಷ್ಟೇ ಸಿಕ್ಕಿರುತ್ತದೆ ಅಂತಾ ಹೇಳಿದನು. ಅವನನ್ನು ಓಣಿಯ ಜನರೊಂದಿಗೆ
ಠಾಣೆಗೆ ಕರೆದುಕೊಂಡು ಬಂದು ಹಾಜರು ಪಡಿಸಿದ್ದು ಅದೆ. ದಿನಾಂಕ: 03-03-2016 ರಂದು ರಾತ್ರಿ 9-15 ಗಂಟೆಗೆ ಶಿವರಾಜ ಇತನು ನನ್ನ ಕೊರಳಲ್ಲಿದ್ದ ಮಾಂಗಲ್ಯ ಸರ ಅಂದಾಜು ತೂಕ
7.5 ತೊಲೆ (ಮಾಂಗಲ್ಯ ಸೇರಿ) ಒಟ್ಟು ಅಂ.ಕಿ.ರೂ: 18,750=00 ಬೆಲೆ ಬಾಳುವುದನ್ನು ಬಲವಂತವಾಗಿ ಕಿತ್ತುಕೊಂಡು ಹೋದ ಶಿವರಾಜ ಇತನ ಮೇಲೆ ಸೂಕ್ತ ಕಾನೂನು
ಕ್ರಮ ಜರುಗಿಸಲು ವಿನಂತಿ. ಈ ವಿಷಯವನ್ನು ನನ್ನ ಮನೆಯವರೊಂದಿಗೆ ಚಚರ್ಿಸಿ ಫಿರ್ಯಾದಿ
ಸಲ್ಲಿಸಿದ್ದು ಇರುತ್ತದೆ. ಅಂತಾ ಮುಂತಾಗಿ ಇರುವ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
Our Commitment For Safe And Secure Society
This post is in Kannada language.
Visit to our new website which is launched on 15-02-2018 www.koppalpolice.in & www.koppalpolice.in/kan
Friday, March 4, 2016
Subscribe to:
Post Comments (Atom)
0 comments:
Post a Comment