Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, March 5, 2016

1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 58/2016 ಕಲಂ: 143, 147, 341, 323, 324, 326, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ:-05-03-2016 ರಂದು ಬೆಳಗಿನ ಜಾವ 00-40 ಗಂಟೆಗೆ ಪಿರ್ಯಾದಿದಾರರಾದ ಶ್ರಿ ಅಯ್ಯಪ್ಪ ತಂದಿ ಶಿವಪ್ಪ ಪುಲ್ಲಾರ ವಯಾ-28 ವರ್ಷ, ಜಾ. ಕುರಬರು ಸಾ. ನಂದಿಹಳ್ಳಿ ತಾ. ಗಂಗಾವತಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು ಸದರಿ ದೂರಿನ ಸಾರಾಂಶವೆನಂದರೆ ನಂದಿಹಳ್ಳಿ ಗ್ರಾಮದ ಶ್ರೀ ಆಂಜನೆಯ ದೇವಸ್ಥಾನ ಕಟ್ಟುವ ಸಲುವಾಗಿ ದೇವಸ್ಥಾನದ ಕಮೀಟಿಯವರು ನಂದಿಹಳ್ಳಿ ಪಕ್ಕದಲ್ಲಿರುವ ತುಂಗಭದ್ರ ನದಿಯ ಮರಳನ್ನು ಸಾಗಾಣಿಕೆ ಮಾಡಲು ಬೇರೆ ಬೇರೆ ಊರಿನ ಟ್ರ್ಯಾಕ್ಟರ್ ಗಳು ಸರಕಾರದಿಂದ ಡಿ.ಡಿಯನ್ನು ಪಡೆದುಕೊಂಡು ಬಂದು ನಂದಿಹಳ್ಳಿ ಮುಖಾಂತರ ಮರಳನ್ನು ಸಾಗಾಣಿಕೆ ಮಾಡುವ ಟ್ರ್ಯಾಕ್ಟರ್ ಗಳಿಗೆ ದೇವಸ್ಥಾನದ ದೇಣಿಗೆ ಎತ್ತುವ ಸಲುವಾಗಿ ದೇವಸ್ಥಾನದ ಕಮೀಟಿಯವರು ಪಿರ್ಯಾದಿದಾರರಿಗೆ ನೇಮಕ ಮಾಡಿದ ಪ್ರಕಾರ ಪಿರ್ಯಾದಿದಾರರು ಮೂರು ತಿಂಗಳಿನಿಂದ ದೇವಸ್ಥಾನದ ದೇಣಿಗೆ ಎತ್ತುತ್ತಿದ್ದು ದೇಣಿಗೆ ಎತ್ತುವ ವಿಷಯವಾಗಿ ದಿನಾಂಕ:-04-03-2016 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಆರೋಪಿತರು ತಮ್ಮ ಮನೆಯ ಮುಂದೆ ಕುಳಿತ್ತಿದ್ದಾಗ್ಗೆ ಆರೋಫಿತರಾದ ತೋಟಪ್ಪ ತಂದಿ ಅಯ್ಯಪ್ಪ , ಪ್ರಕಾಶ ತಂದಿ ತೋಟಪ್ಪ, ಅಯ್ಯಪ್ಪ ತಂದಿ ಸಣ್ಣ ಅಯ್ಯಪ್ಪ, ಶರಣಪ್ಪ ತಂದಿ ತೋಟಪ್ಪ, ಶೇಖರಪ್ಪ ತಂದಿ ರುದ್ರಪ್ಪ ಇತರೆ 8-10 ಜನರು ಇವರು ಅಕ್ರಮ ಕೂಟ ಕಟ್ಟಿಕೊಂಡು ಬಂದು ಪಿರ್ಯಾದಿದಾರರಿಗೆ ಮತ್ತು ಪಿರ್ಯಾದಿ ತಂದೆ ತಮ್ಮನಿಗೆ ಹೊಡೆ ಬಡೆ ಮಾಡುತ್ತಿದ್ದಾಗ್ಗೆ ಬಿಡಿಸಿಕೊಳ್ಳಲು ಬಂದ ಹೊನ್ನೂರಪ್ಪನಿಗೆ ಕಟ್ಟಿಗೆಯನ್ನು ತೆಗೆದುಕೊಂಡು ತಲೆಗೆ ಹೊಡೆದು ತಿವ್ರವಾದ ಗಾಯಗೊಳಿಸಿದ್ದು , ಎಲ್ಲರು ಕೈಯಿಂದ ಹೊಡೆದು , ಕಾಲಿನಿಂದ ಒದ್ದು ಜೀವ ಬೆದರಿಕೆ ಹಾಕಿ ಹೋಗಿದ್ದು  ನಂತರ ಚಿಕಿತ್ಸೆ ಕುರಿತು ಕಾರಟಗಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಮಾಡಿಸಿಕೊಂಡು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 59/2016 ಕಲಂ: 143, 147, 341, 323, 324, 326, 504, 506 ಸಹಿತ 149 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ 1989:.
ದಿನಾಂಕ : 05-03-2016 ರಂದು 01-30 ಎ.ಎಮ್. ಕ್ಕೆ ಗಾಯಾಳು ಪ್ರಕಾಶ ತಂದಿ ತೋಟಪ್ಪ  ನಾಯಕ ವಯಾ-29 ವರ್ಷ ಜಾ- ನಾಯಕ –ಉ- ಒಕ್ಕಲುತನ ಸಾ- ನಂದಿಹಳ್ಳಿ ಇವರು ಠಾಣೆಗೆ ಹಾಜರಾಗಿದ್ದರಿಂದ ಆತನಿಗೆ ಮೊದಲು ಚಿಕಿತ್ಸೆಗಾಗಿ ಆತನಿಗೆ ಚಿಕಿತ್ಸೆಗಾಗಿ ಕಾರಟಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟು ನಂತರ ಚಿಕಿತ್ಸೆ ಪಡೆದುಕೊಂಡು ವಾಪಾಸ್ 03-00 ಎ.ಎಮ್. ಕ್ಕೆ ಠಾಣೆಗೆ ಬಂದು ಪ್ರಕಾಶ ಇತನು ಫಿರ್ಯಾದಿ ನೀಡಿದ್ದು ಅದರ ಸಾರಾಂಶವೆನೆಂದರೆ,  ನಾನು ಒಕ್ಕಲುತನ ಮಾಡಿಕೊಂಡು ಉಪ ಜೀವನ ಮಾಡುತ್ತಿದ್ದೇನೆ ನಮ್ಮೂರ ಪಕ್ಕದಲ್ಲಿ ತುಂಗಭದ್ರ ನದಿ ಇದ್ದು ನದಿಯಲ್ಲಿ ಟ್ರ್ಯಾಕ್ಟರಗಳ ಮೂಲಕ  ಉಸುಕನ್ನು ಏರುತ್ತಿದ್ದು,  ಸದರಿ ಟ್ರ್ಯಾಕ್ಟರ್ ಗಳಿಂದ ಉಸಕು ಏರಿಕೊಂಡು ಹೊಗುವದರಿಂದ  ನಮ್ಮೂರ ಆಂಜನೇಯ ದೇವಸ್ಥಾನಕ್ಕೆ ದೇಣಿಕೆ ಹಣ ತೆಗೆದುಕೊಳ್ಳು ಅಯ್ಯಪ್ಪ ತಂದೆ ಶಿವಪ್ಪ ವಯಾ- 28 ವರ್ಷ ಜಾ- ಕುರಬರ ಸಾ- ನಂದಿಹಳ್ಳಿ  ಈತನಿಗೆ ನೇಮಕ ಮಾಡಿರುತ್ತಾರೆ. ಸದರಿ ಅಯ್ಯಪ್ಪ ಇತನು  ಬೆಳಗ್ಗೆ 6-00 ಗಂಟೆಯಿಂದ ಸಾಯಂಕಾಲ 6-00 ಗಂಟೆಯವರೆಗೆ ಮಾತ್ರ ಟ್ರ್ಯಾಕ್ಟರಗಳಲ್ಲಿ  ಉಸುಕು ತುಂಬಿಸಲು ಹೇಳಿದ್ದರು. ಆದರೆ ಅಯ್ಯಪ್ಪ  ಈತನು ಸಾಯಂಕಾಲ 6-00 ಗಂಟೆ ಮೇಲ್ಪಟ್ಟು ಟ್ರ್ಯಾಕ್ಟರಗಳಿಗೆ ಉಸುಕನ್ನು ಏರಿಸುತ್ತಿದ್ದರು ಆಗ ನಾನು ಈ ರೀತಿ ರಾತ್ರಿಯಾಗುವವರೆಗೆ ಉಸಕನ್ನು  ಏರಿದರೆ ಹೇಗೆ ಅಂತಾ ಹೇಳಿ  ಉಸುಕನ್ನು ಏರುವದನ್ನು ನಿಲ್ಲಿಸಿ ಬಂದೆನು ನಂತರ ರಾತ್ರಿ ಊಟ ಮಾಡಿ ನಮ್ಮ ಮನೆಯ ಮುಂದೆ ನಾನು ಮತ್ತು ನನ್ನ ತಂದೆ  ತೋಟಪ್ಪ ಕೂಡಿ ಮಾತನಾಡುತ್ತಾ ನಿಂತುಕೊಂಡಿದ್ದಾಗ್ಗೆ ರಾತ್ರಿ 8-30 ರಿಂದಾ 9-00 ಗಂಟೆಯ ಅವದಿಯಲ್ಲಿ  ಅಯ್ಯಪ್ಪ ತಂದಿ ಶಿವಪ್ಪ , ಹೊನ್ನೂರಪ್ಪ ತಂದಿ ಸಿದ್ದಪ್ಪ, ಹನಮಂತಪ್ಪ ತಂದಿ ಲಕ್ಷ್ಮಪ್ಪ, ಶಿವಪ್ಪ ತಂದಿ ಅಯ್ಯಪ್ಪ ಎಲ್ಲರೂ ಸಾ- ನಂದಿಹಳ್ಳಿ ಹಾಗೂ ಇತರರನ್ನು  ಕರೆದುಕೊಂಡು ಏನಲೇ ಪರಿಕ್ಯಾ ಬ್ಯಾಡ ಸೂಳೇಮಗನೆ ನೀನು ಉಸಕು ಏರಲು ನಿಲ್ಲಿಸಲು ನಿನ್ನದೇನು  ಅಧೀಕಾರ ಅದೆಲೆ ನೀನು  ಉಸಿಕಿನ ತಂಟೆಗೆ  ಬಂದರೆ ನಿನ್ನ ಜೀವ ಸಹಿತ ತೆಗೆಯುತ್ತೇವೆ ಅಂತಾ ಬೈದಾಡ ಹತ್ತಿದರು. ಆಗ ನಾನು ನನ್ನ ತಂದೆ ನೀವು ನಮ್ಮ ಮನಿತನಕ ಬಂದು ಈ ರೀತಿ ನಾಯಕರ ಸೂಳೇ ಮಕ್ಕಳೆ ಅಂತಾ ಬೈದಾಡಿದರೆ ಹೇಗೆ ಅಂತಾ ಕೇಳಿದ್ದಕ್ಕೆ ಅವರೆಲ್ಲರು ನನಗೆ ತಡೆದು ನಿಲ್ಲಿಸಿ ಈ ನಾಯಕ ಸೂಳೇಮಗ ಗ್ರಾ.ಪಂ. ಮೆಂಬರ್ ಆದಾಗಿನಿಂದ  ಬಹಳ ದಿಮಾಕ  ಗಿದೆ ಅಂತಾ ಅಂದವರೆ ಎಲ್ಲರೂ ಕೈಯಿಂದ  ಹೊಡೆ ಬಡಿ ಮಾಡಿ ಶಿವಪ್ಪ ತಂದೆ ಅಯ್ಯಪ್ಪ ಇತನು ಅಲ್ಲೆ ಬಿದ್ದಿದ್ದ ಹಿಡಿ ಗಾತ್ರದ ಕಲ್ಲನ್ನು ತೆಗೆದುಕೊಂಡು ಜೋರಾಗಿ ತಲೆಗೆ ಹೊಗೆದು ಭಾರಿ ಗಾಯಗೊಳಿಸಿನು ನಾನು ಅಳುವದು ಮತ್ತು ಚೀರಾಡುವದು ಮಾಡಿದ್ದರಿಂದ  ನನ್ನ ತಂದೆ ತೋಟಪ್ಪ ಹಾಗೂ ನಮ್ಮ ತಾಯಿ  ರಂಗಮ್ಮ ನನ್ನ ಹೆಂಡತಿ ನೇತ್ರಾವತಿ  ಹಾಗೂ ಹನಮೇಶ ಹಾಗೂ ನಮ್ಮ ಚಿಕ್ಕಪ್ಪನಾದ ಅಯ್ಯಪ್ಪ ಇವರು ಬಿಡಿಸಿಕೊಂಡರು ಅವರು ಅಷ್ಟಕ್ಕೆ ಸುಮ್ಮನೆ ಹೊಗದೆ ಈ ನಾಯಕ ಸೂಳೇ ಮಗನನ್ನು ಎಂದಾದರು ಒಂದು ದಿನ ಪ್ರಾಣ ತೆಗೆಯುತ್ತೇವೆ ಅಂತಾ ಜೀವ ಭಯ ಹಾಕಿ ಹೊದರು. ಈ ಘಟನೆಯು  ನಾನು ಅಯ್ಯಪ್ಪ ಇತನಿಗೆ ರಾತ್ರಿ ವೇಳೆಯಲ್ಲಿ ಉಸಕು ಏರಿಸಬೇಡ  ಅಂತಾ ಅಂದಿದ್ದಕ್ಕೆ  ಈ ಘಟನೆ ಜರುಗಿದ್ದು ಇರುತ್ತದೆ. ಈ ಘಟನೆಯು  ನಮ್ಮ ಮನೆಯ ಹತ್ತಿರ  ಲೈಟಿನ ಬೆಳಕಿನಲ್ಲಿ ಜರುಗಿದ್ದು ಇರುತ್ತದೆ. ಈ ರೀತಿ  ನನ್ನ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಅಯ್ಯಪ್ಪ ತಂದಿ ಶಿವಪ್ಪ ಹಾಗೂ ಇತರೆ 8-10 ಜನರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ. ನಾನು ಜಾತಿಯಿಂದ ನಾಯಕ ಜನಾಂಗದವನು ಅಂತಾ ಗೊತ್ತೀದ್ದರೂ ಸಹ ಉದ್ದೇಶಪೂರ್ವಕವಾಗಿ  ನನ್ನ ಮೇಲೆ ಹಲ್ಲೆ ಮಾಡಿ  ಜಾತಿ ನಿಂದನೆ ಮಾಡಿದವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ  ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 50/2016 ಕಲಂ: 78(1)(ಎ)(6) Karnataka Police Act.

ದಿನಾಂಕ 03-03-2016 ರಂದು 22-30 ಗಂಟೆಗೆ ಶ್ರೀ ಈ. ಕಾಳಿಕೃಷ್ಣ  ಪಿ ಐ  ನಗರ ಪೊಲೀಸ್ ಠಾಣೆ ಗಂಗಾವತಿ ರವರು ಮೂಲ ಪಂಚನಾಮೆ ಮತ್ತು ಕ್ರೀಕೇಟ್ ಜೂಜಾಟದಲ್ಲಿ ತೊಡಗಿದ ಒಬ್ಬ ವ್ಯಕ್ತಿ, ಮುದ್ದೇಮಾಲಿನೊಂದಿಗೆ ಕ್ರಿಕೇಟ್ ಬೆಟ್ಟಿಂಗ್ ದಲ್ಲಿ ತೊಡಗಿದವನ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ನೀಡಿದ್ದು ಅದರ ಸಾರಂಶವೇನೆಂದರೆ,  ದಿನಾಂಕ: 03-03-2016 ರಂದು ಏಷ್ಯಾಕಪ್ ಟಿ-20 ಕ್ರಿಕೇಟನ ಇಂಡಿಯಾ & ಯು.ಎ.ಇ ದೇಶಗಳ ನಡುವೆ ನಡೆಯುತ್ತಿರುವ ಪಂದ್ಯದ ಮೇಲೆ ಗಂಗಾವತಿ ನಗರದ ಹೊಸಳ್ಳಿ ರಸ್ತೆಯಲ್ಲಿರುವ ಎಲ್.ಐ.ಸಿ ಆಫೀಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪಂಚರ ಸಮಕ್ಷಮ ರಾತ್ರಿ 21-00 ಗಂಟೆಗೆ ಜೂಜಾಟದಲ್ಲಿ ತೊಡಗಿದ್ದ ಆರೋಪಿತನಾದ ಶಿವಕುಮಾರ ತಂದೆ ಪಂಪಾಪತಿ, ಸಾ: ಚಿಕ್ಕಜಂತಕಲ್ ತಾ: ಗಂಗಾವತಿ, ಇವನ ಮೇಲೆ ದಾಳಿ ಮಾಡಿ ಹಿಡಿಯಲಾಗಿ ಸದರಿಯವನು ಏಷ್ಯಾಕಪ್ ಟಿ-20 ಕ್ರಿಕೇಟನ ಇಂಡಿಯಾ & ಯು.ಎ.ಇ ದೇಶಗಳ ನಡುವೆ ನಡೆಯುತ್ತಿರುವ ಪಂದ್ಯದ ಮೇಲೆ ಮೊಬೈಲ್ ಕರೆಯ ಮುಖಾಂತರ ಕ್ರಿಕೆಟ್ ಬೆಟ್ಟಿಂಗ್ ದಲ್ಲಿ ತೊಡಗಿರುವದು ಕಂಡು ಬಂದಿದ್ದರಿಂದ ಅವನಿಂದ ಕ್ರಿಕೇಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ ರೂ 7,480-00 ಜೂಜಾಟ ಆಡಲು ಬಳಸಿದ ಲಾವಾ ಕಂಪನಿಯ ಮೋಬೈಲ್ ದೊರೆತಿದ್ದು, ವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಜೂಜಾಟದಲ್ಲಿ ತೊಡಗಿದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008