Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, March 7, 2016

1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 42/2016 ಕಲಂ: 87 Karnataka Police Act.
ದಿನಾಂಕ 06-03-2016 ರಂದು 07-30 ಗಂಟೆಗೆ ಫಿರ್ಯಾದಿ ಶ್ರೀ ಶ್ರೀಕಾಂತ ಬಿ ಕಟ್ಟಿಮನಿ ಡಿ.ವೈ.ಎಸ್.ಪಿ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರನ್ನು ನೀಡಿದ್ದು ಸಾರಂಶವೇನೇಂದರೆ ದಿನಾಂಕ: 06-03-2016 ರಂದು ಸಂಜೆ 05-20 ಗಂಟೆಗೆ ಮೇಲ್ಕಂಡ ಈ 13 ಜನ ಆರೋಪಿತರು ನಗರದ ಕಿನ್ನಾಳ ರಸ್ತೆ ಶುಭಾ ಹೋಂ ಸ್ಟೇ ಹೊಟೆಲ್ ಪಕ್ಕದಲ್ಲಿ ಗಿಡದ ಕೆಳಗಡೆ ಸಾರ್ವಜನಿಕ ಸ್ಥಳದಲ್ಲಿ ನಗದು ಹಣ ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ದಾಳಿ ಮಾಡಿ ಮೇಲ್ಕಾಣಿಸಿದ ಮುದ್ದೇಮಾಲು ನಗದು ಹಣ 90800=00 ರೂ 52 ಇಸ್ಪೇಟ್ ಎಲೆ ಹಾಗೂ ಒಂದು ಬೂದು ಬಣ್ಣದ ಶಾಲ್ ಜಫ್ತು ಮಾಡಿಕೊಂಡು 13 ಜನ ಜೂಜುಕೋರರನ್ನು ವಶಕ್ಕೆ ತಗೆದುಕೊಂಡು ಹಾಗೂ ಪಂಚನಾಮೆಯನ್ನು ತೆಗೆದುಕೊಂಡು ಠಾಣೆಗೆ ಬಂದಿದ್ದು, ಸದರಿ ದೂರಿನ ತನಿಖೆ ಕೈಗೊಳ್ಳುವ ಕುರಿತು ಮಾನ್ಯ ನ್ಯಾಯಾಲಯದಿಂದ ಅಮತಿಪಡೆದುಕೊಂಡು  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 24/2016 ಕಲಂ: 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ: 06-03-2016 ರಂದು ರಾತ್ರಿ 10-00 ಗಂಟೆಗೆ ಶರಣಪ್ಪ ತಂದೆ ಗೂಳಪ್ಪ ಚಳಗೇರಿ  ವಯಾ: 65 ವರ್ಷ ಜಾತಿ: ಹಿಂದೂ ಬಣಜಿಗ  ಉ: ಒಕ್ಕಲುತನ   ಸಾ:ಹಿರೇನಂದಿಹಾಳ ರವರು ನೀಡಿದ ಲಿಖಿತ ಫಿರ್ಯಾದಿಯನ್ನು ಹಾಜರುಪಡಿದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 06-03-2016 ರಂದು ನನ್ನ ತಮ್ಮನಾದ ಕಳಕಪ್ಪ ಮತ್ತು ಆತನ ಹೆಂಡತಿ ಶಾಂತವ್ವ ರವರು ಕುಷ್ಟಗಿಯಲ್ಲಿ ಸಂತೆಯಲ್ಲಿ ತರಕಾರಿಯನ್ನು ಹರಾಜು ಮುಖಾಂತರ ತೆಗೆದುಕೊಂಡು ತರಕಾರಿಯನ್ನು ಮಾರಿ ತಮ್ಮ ಟಿ.ವಿ.ಎಸ್.ಎಕ್ಷ ಎಲ್ ಸೂಪರ್ ಮೋ.ಸೈ ನಂ: ಕೆ.ಎ-26/ಹೆಚ್-8855 ನೇದ್ದನ್ನು ತೆಗೆದುಕೊಂಡು ವಾಪಾಸ್ ಊರಿಗೆ ಸಾಯಂಕಾಲ 7-00 ಗಂಟೆಯ ಸುಮಾರಿಗೆ ಬರುತ್ತಿರುವಾಗ ಕುಷ್ಟಗಿ ಸೀಮಾದ ಪುರಸಭೆ ಕಮಾನಿನ ಹತ್ತಿರ ಅಪಘಾತವಾಗಿದೆ ಅಂತಾ ಸುದ್ದಿ ಕೇಳಿ ಕೂಡಲೇ ನಾನು ನನ್ನ ಮಗನಾದ ರಾಜಶೇಖರ ವಯಾ 32 ವರ್ಷ ಇಬ್ಬರೂ ಸ್ಥಳಕ್ಕೆ ಬಂದು ನೋಡಲಾಗಿ ಸದರ ಸ್ಥಳದಲ್ಲಿ ನನ್ನ ಸೊಸೆಯಾದ ಶಾಂತವ್ವಳನ್ನು ನೋಡಲು ಈಕೆಗೆ ತಲೆಗೆ ಭಾರಿ ಒಳಪೆಟ್ಟಾಗಿ ಬಾಯಿಯಿಂದ ಮತ್ತು ಮೂಗಿನಿಂದ ರಕ್ತಹೊರಬಂದಂತಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಂತರ ನನ್ನ ತಮ್ಮನಾದ ಕಳಕಪ್ಪನನ್ನು ನೋಡಲು ಈತನಿಗೆ ಹಣೆಗೆ ಭಾರಿ ರಕ್ತಗಾಯವಾಗಿ, ಬಲಗಡೆ ಮೂಗಿನ ಹತ್ತಿರ ರಕ್ತಗಾಯವಾಗಿ, ಬಲಗೈ ಮುಂಗೈ ಮುರಿದಂತಾಗಿದ್ದು. ಹಾಗೂ ಬಲಗಾಲು ತೊಡೆಯಿಂದ ಮೊಣಕಾಲಕೆಳಗಿನವರೆಗೆ ಮುರಿದು ಭಾರಿ ರಕ್ತಗಾಯವಾಗಿ ರಕ್ತ ಸೋರುತ್ತಿದ್ದು, ಅಪಘಾತಪಡಿಸಿ ವಾಹನ  ಟಾ ಟಾ ಎಸಿಇ ಕೆ.ಎ-37/ಎ-2802  ಇದ್ದು ನಂತರ ವಿಚಾರಿಸಲಾಗಿ ಅಪಘಾತಪಡಿಸಿದ ಟಾ ಟಾ ಎಸಿಇ ಕೆ.ಎ-37/ಎ-2802 ನೇದ್ದರ ಚಾಲಕನು  ತನ್ನ ಟಾ ಟಾ ಎಸಿಇ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಟಕ್ಕರ ಕೊಟ್ಟು ಅಪಘಾತಪಡಿಸಿ  ಸದರಿ ವಾಹನವನ್ನು ಅಲ್ಲಿಯೇ ನಿಲ್ಲಸಿ ಓಡಿ ಹೋಗಿರುತ್ತಾನೆ. ನಂತರ ನನ್ನ ತಮ್ಮನನ್ನು ಸರಕಾರಿ ಆಸ್ಪತ್ರೆ ಕುಷ್ಟಗಿಗೆ ಚಿಕಿತ್ಸೆಗಾಗಿ ಯಾವುದೋ ಒಂದು ವಾಹನದಲ್ಲಿ ಸೇರಿಕೆ ಮಾಡಿದ್ದು, ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಕುರಿತು ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ಆತನನ್ನು ಹುಬ್ಬಳ್ಳಿಯ ಕೆ.ಎಂ.ಸಿ ಆಸ್ಪತ್ರೆಗೆ ಅಂಬುಲೇನ್ಸನಲ್ಲಿ ಕರೆದುಕೊಂಡು ಹೋಗುತ್ತಿರುವಾಗ ಗಜೇಂದ್ರಗಡ ಹತ್ತಿರ ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ ರಾತ್ರಿ 09-00 ಗಂಟೆಯ ಸುಮಾರಿಗೆ ನನ್ನ ತಮ್ನನಾದ ಕಳಕಪ್ಪನು ಸಹ ಮೃತಟ್ಟಿದ್ದು ಇರುತ್ತದೆ. ನಂತರ ವಿಚಾರಿಸಲಾಗಿ ನನ್ನ ತಮ್ಮ ಕಳಕಪ್ಪ ಮತ್ತು ಸೊಸೆಯಾದ ಶಾಂತವ್ವ ಇವರು ತಮ್ಮ ಟಿ.ವಿ.ಎಸ್.ಎಕ್ಷ ಎಲ್ ಸೂಪರ್ ಮೋ.ಸೈ ನಂ: ಕೆ.ಎ-26/ಹೆಚ್-8855  ತೆಗೆದುಕೊಂಡು ಕುಷ್ಟಗಿ ಕಡೆಯಿಂದ ಹಿರೇನಂದಿಹಾಳ ಕಡೆಗೆ ಹೋಗುತ್ತಿರುವಾಗ ಗಜೇಂದ್ರಗಡ ಕಡೆಯಿಂದ ಕುಷ್ಟಗಿ ಕಡೆಗೆ ಬರುತ್ತಿದ್ದ ಟಾ ಟಾ ಎಸಿಇ ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನನ್ನ ತಮ್ಮನು ನಡೆಯಿಸುತ್ತಿದ್ದ  ಟಿ.ವಿ.ಎಸ್.ಎಕ್ಷ ಎಲ್ ಸೂಪರ್ ಮೋ.ಸೈ ನೇದ್ದಕ್ಕೆ ಟಕ್ಕರ ಮಾಡಿ ಅಪಘಾತಪಡಿಸಿದ ಚಾಲಕನ ವಿರುದ್ದ  ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 60/2016 ಕಲಂ: 279, 337, 338 ಐ.ಪಿ.ಸಿ  
ದಿ:06-03-16 ರಂದು ರಾತ್ರಿ 9-10 ಗಂಟೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ ಗಾಯಗೊಂಡವರು ಚಿಕಿತ್ಸಗೆ ದಾಖಲಾದ ಬಗ್ಗೆ ಎಮ್.ಎಲ್.ಸಿ ವಸೂಲಾಗಿದ್ದು ಆಸ್ಪತ್ರೆಗೆ ಭೇಟಿ ನೀಡಿ ಫಿರ್ಯಾದಿ ಯಮನೂರ ವಡ್ರ ಸಾ: ಕೊಪ್ಪಳ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ, ಇಂದು ದಿ:06-03-16 ರಂದು ರಾತ್ರಿ 7-00 ಗಂಟೆಗೆ ಫಿರ್ಯಾದಿದಾರರು ತಮ್ಮ ಸಂಬಂಧಿಕರಾದ ಶಿವರಾಜ ಇವರ ಮೋಟಾರ ಸೈಕಲ್ ನಂ: ಕೆಎ-26/ವಿ-5741 ನೇದ್ದರ ಹಿಂದೆ ಕುಳಿತುಕೊಂಡು ನೀರಲೂಟಿಯಿಂದ ಕೊಪ್ಪಳ ಕ್ಕೆ ಬರಲು ಅಂತಾ ಕೊಪ್ಪಳ-ಕುಷ್ಟಗಿ ರಸ್ತೆಯ ಕೊಡದಾಳ ಕ್ರಾಸ್ ಹತ್ತಿರ ಬರುತ್ತಿದ್ದಾಗ ಮೋಟಾರ ಸೈಕಲ್ ಸವಾರ ಶಿವರಾಜ ವಡ್ಡರ ಇತನು ತನ್ನ ಮೋಟಾರ ಸೈಕಲ್ ನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸುತ್ತಾ ಹೊರಟಿದ್ದು ಅದೇವೇಳೆಗೆ ಎದುರುಗಡೆ ಅಂದರೆ ಕೊಪ್ಪಳ ಕಡೆಯಿಂದ ಇನ್ನೊಂದು ಮೋಟಾರ ಸೈಕಲ್ ನಂ: ಕೆಎ-35/ಯು-1300 ನೇದ್ದರ ಚಾಲಕ ಹನುಮನಗೌಡ ಇತನು ಸಹ ತನ್ನ ವಾಹನವನ್ನು ಸಹ ಕೊಪ್ಪಳ ಕಡೆಯಿಂದ ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸಿಕೊಂಡು ಬಂದಿದ್ದರಿಂದ ಇಬ್ಬರ 02 ವಾಹನಗಳು ಮುಖಾಮುಖಿ ಢಿಕ್ಕಿಯಾಗಿ ಅಪಘಾತ ಮಾಡಿಕೊಂಡಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ 02 ಮೋಟಾರ ಸೈಕಲ್ ಸವಾರರಿಗೆ ಭಾರಿ ಸ್ವರೂಪದ ಮತ್ತು ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಮತ್ತು ಮೋಟಾರ ಸೈಕಲ್ ನಂ: ಕೆಎ-35/ಯು-1300 ನೇದ್ದರ ಹಿಂದೆ ಕುಳಿತು ಬಂದಿದ್ದ ವ್ಯಕ್ತಿ ಬಸನಗೌಡ ಮಾಲಿಪಾಟೀಲ. ಸಾ:ಸೋಮಸಾಗರ ಇವರಿಗೆ ಸಹ ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಕಾರಣ 02 ಮೋಟಾರ ಸೈಕಲ್ ಗಳ ಚಾಲಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ನೀಡಿದ ದೂರನ್ನು ಪಡೆದುಕೊಂಡು  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008