Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, March 24, 2016

ಸುಲಿಗೆ ಪ್ರಕರಣ ಪತ್ತೆ.

ದಿನಾಂಕ: 24-03-2016 ರಂದು 4-30 .ಎಂ.ಕ್ಕೆ. ಪಿರ್ಯಾದಿದಾರ ಶ್ರೀ. ಮುಸ್ತಾಕ ರವರು ಪಿರ್ಯಾದಿಯನ್ನು ಸಲ್ಲಿಸಿದ್ದು, ದಿನಾಂಕ: 24-03-2016 ರಂದು ಬೆಳಗಿನ ಜಾವ ಸುಮಾರು 3-30 ಗಂಟೆಗೆ ಮುನಿರಾಬಾದನ ಪಿ.ಲಿಂಗಯ್ಯ ಶಾಲೆಯ ಹತ್ತಿರ ಇರುವ ಎಸ್.ಬಿ.. .ಟಿ.ಎಂ. ಶಾಖೆಯಲ್ಲಿ ಸೆಕ್ಯೂರಿಟಿ ಗಾರ್ಡ ಕರ್ತವ್ಯ ನಿರ್ವಹಿಸುತ್ತಿರುವಾಗ ಯಾರೋ ಮೂರು ಜನರು ಏಕಾಏಕಿ .ಟಿ.ಎಂ. ಒಳಗೆ ಬಂದು ಪಿರ್ಯಾದಿದಾರರಿಗೆ ಕೈಯಿಂದ ಹೊಡಿ-ಬಡಿ ಮಾಡಿ ಕೈಯಲ್ಲಿ ಕತ್ತಿ ಹಿಡಿದುಕೊಂಡು ಹೆದರಿಸಿ ಅವರ ಜೇಬಿನಲ್ಲಿದ್ದ 2000-00 ನಗದು ಹಣ ಮತ್ತು ಅವರ ಸೆಕ್ಯೂರಿಟಿ .ಡಿ. ಕಾರ್ಡ ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 70/2016 ಕಲಂ 394 .ಪಿ.ಸಿ. ರಿತ್ಯ ಪ್ರಕರಣ ದಾಖಲು ಮಾಡಿಕೊಂಡು ತಕ್ಷಣವೇ ಪಿ.ಎಸ್.ಐ ಮುನಿರಾಬಾದ ಠಾಣೆರವರು ರಾತ್ರಿ ಗಸ್ತುವಿನಲ್ಲಿದ್ದ ಸಿಬ್ಬಂದಿಗಳನ್ನು ಸಂಶಯಾಸ್ಪದ ವ್ಯಕ್ತಿಗಳನ್ನು ಪರೀಶಿಲಿಸಲು ಸೂಚಿಸಿದ್ದು ಸಿಬ್ಬಂದಿಗಳು 3 ಜನ ಆರೋಪಿತರನ್ನು ಕರೆದುಕೊಂಡು ಠಾಣೆಗೆ ಕರೆತಂದು ವಿಚಾರಿಸಲು ಅಪರಾಧವನ್ನು ಒಪ್ಪಿಕೊಂಡಿದ್ದು ಅಪರಾಧಿಗಳಿಂದ ಸುಲಿಗೆ ಮಾಡಿದ ಹಣ ವಶಪಡಿಸಿಕೊಂಡಿದ್ದು ಇರುತ್ತದೆ. ಆರೋಪಿತರಾದ 1. ಶರಣಪ್ಪ ಕಾಟ್ರಳ್ಳಿ ತಂದೆ ಹನುಮಪ್ಪ 2. ಕರಿಯಪ್ಪ ತಂದೆ ಭೀಮಪ್ಪ 3. ಸುರೇಶ ತಂದೆ ಪರಮೇಶ ಇವರನ್ನು ದಸ್ತಗಿರಿಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಇರುತ್ತದೆ. ಸಿಬ್ಬಂದಿ ಮತ್ತು ಅಧೀಕಾರಿಗಳಿಗೆ ಎಸ್.ಪಿ. ಕೊಪ್ಪಳ ರವರು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.

0 comments:

 
Will Smith Visitors
Since 01/02/2008