Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, April 18, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 82/2016 ಕಲಂ. 279, 304(ಎ) ಐ.ಪಿ.ಸಿ. ಹಾಗೂ 187 ಐ.ಎಂ.ವಿ. ಕಾಯ್ದೆ.
ದಿ:18-04-2016 ರಂದು 00-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ ಹನುಮಂತಪ್ಪ ತಂದೆ ಮಲ್ಲಪ್ಪ ಹೊಸೂರು. ವಯಾ: 60 ವರ್ಷ, ಜಾ: ಉಪ್ಪಾರ, ಉ: ಒಕ್ಕಲುತನ, ಸಾ: ಗಿಣಿಗೇರಾ ತಾ:ಜಿ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ನನ್ನ ಮಗ ದ್ಯಾಮಣ್ಣ ವಯ: 26 ವರ್ಷ, ಇವನು ಮಾನಸಿಕ ಅಸ್ವಸ್ಥನಾಗಿದ್ದು, ಮತ್ತು ಮೂಕನಿದ್ದನು, ಇವನಿಗೆ ದಿ:17-04-2016 ರಂದು ರಾತ್ರಿ 09-30 ಗಂಟೆಯ ಸುಮಾರಿಗೆ ಕೊಪ್ಪಳ-ಹೊಸಪೇಟೆ ಎನ್.ಹೆಚ್-63 ರಸ್ತೆಯ ಗಿಣಿಗೇರಿ ಸಮೀಪದಲ್ಲಿ ಸೇತುವೆ ಹತ್ತಿರ ಭದ್ರಯ್ಯ ಕೋಳಿ ಫಾರ್ಮ ಹತ್ತಿರದಲ್ಲಿ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸಿಕೊಂಡು ಹೊರಟಿದ್ದಾಗ ಟಕ್ಕರ ಕೊಟ್ಟು ಅಪಘಾತ ಮಾಡಿ ತನ್ನ ವಾಹನವನ್ನು ನಿಲ್ಲಿಸದೇ ಹೋಗಿದ್ದರಿಂದ ಮಗ ದ್ಯಾಮಣ್ಣನಿಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಕಾರಣ ಅಪಘಾತ ಮಾಡಿದ ಯಾವುದೋ ಒಂದು ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಅವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 38/2016 ಕಲಂ. 279, 337, 338, 304(ಎ) ಐ.ಪಿ.ಸಿ. ಹಾಗೂ 187 ಐ.ಎಂ.ವಿ. ಕಾಯ್ದೆ.
ದಿನಾಂಕ: 17-04-2016 ರಂದು ಸಂಜೆ 6-00 ಗಂಟೆಗೆ ಸರಕಾರಿ ಆಸ್ಪತ್ರೆ ತಾವರಗೇರಾದಿಂದ ಎಂ.ಎಲ್.ಸಿ ಬಂದಿದ್ದು ಕೂಡಲೇ ಹೋಗಿ ಇಲಾಜು ಪಡೆಯುತ್ತಿದ್ದ ಗಾಯಾಳು ಫಿರ್ಯಾಧಿ ಶ್ರೀ ದುರುಗಪ್ಪ ತಂದೆ ಶಂಕ್ರಪ್ಪ ತಿಪ್ಪನಾಳ ವಯ: 35 ವರ್ಷ, ಜಾತಿ: ಮಾದಿಗ. : ಕೂಲಿಕೆಲಸ. ಸಾ: ಸುಳೇಕಲ್ ತಾ:ಗಂಗಾವತಿ. ರವರ ಹೇಳಿಕೆ ಫಿರ್ಯಾಧಿಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ ದಿನಾಂಕ: 17-04-2016 ರಂದು ತಾವು ಮತ್ತು ತಮ್ಮೂರಿನ ದಾವಲಸಾಬ ಮುಜಾವರ, ರಾಜಾವಲಿಸಾಬ ಲೆಕ್ಕಿಹಾಳ, ಹಾಗೂ ಕನಕಗಿರಿಯ ಬಾಬುಸಾಬ ಬಡಿಗೇರ, ಶ್ಯಾಮೀದಸಾಬ ಲಡ್ಡಿನ್ ಎಲ್ಲರೂ ಸೇರಿ ಕನಕಗಿರಿ ನೂರಸಾಬ ಗಡ್ಡಿಗಾಲ್ ರವರ ಸಿಮೆಂಟ್ ಇಟ್ಟಿಂಗಿ ಭಟ್ಟಿಯಲ್ಲಿ ನೂರಸಾಬ ರವರ ಮಹೀಂದ್ರಾ ಅರ್ಜುನ್ ಟ್ರ್ಯಾಕ್ಟರ್ ನಂ:ಕೆ.-37/ಟಿಬಿ3372 ನೇದ್ದರಲ್ಲಿ ಸಿಮೇಂಟ್ ಇಟ್ಟಿಂಗಿಯನ್ನು ಲೋಡ ಮಾಡಿಕೊಂಡು ಕಲ್ಮಂಗಿಗೆ ಇಳಿಸಿ ಬರಲು ಹೋರಟಿದ್ದು, ತಾವರಗೇರಾ-ಸಿಂಧನೂರು ಮುಖ್ಯರಸ್ತೆಯಲ್ಲಿ ತಾವರಗೇರಾ ದಾಟಿ ರಮೇಶ್ ಗುಂಡೂರು ಇವರ ಇಟ್ಟಂಗಿ ಭಟ್ಟಿ ಹತ್ತಿರ ಕಲ್ಮಂಗಿಗೆ ಹೋಗುತ್ತಿರುವಾಗ ಸಂಜೆ 5-30 ಗಂಟೆ ಸುಮಾರಿಗೆ ಟ್ರ್ಯಾಕ್ಟರ್ ನಡೆಸುತ್ತಿದ್ದ ಹಸನಸಾಬ ತಂದೆ ಶುಕ್ರಸಾಬ ಗುರಳ್ಳಿ ಈತನು ಟ್ರ್ಯಾಕ್ಟರ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಒಮ್ಮಿಂದೊಮೆಲೆ ಟ್ರ್ಯಾಕ್ಟರ್ನ್ನು ರಸ್ತೆಯ ಬಲಗಡೆ ತೆಗೆದುಕೊಂಡು ಹೋಗಿ ಅಲ್ಲಿದ್ದ ಕಲ್ಲುಗಳಿಗೆ ಟಕ್ಕರು ಮಾಡಿದ್ದರಿಂದ ಟ್ರ್ಯಾಕ್ಟರ್ ಟ್ರಾಲಿ ಬಲಗಡೆ ಮಗ್ಗಲಾಗಿ ಬಿದ್ದಿದ್ದು, ಅದರಲ್ಲಿ ಕುಳಿತಿದ್ದ ಶ್ಯಾಮೀದಸಾಬ ಲಡ್ಡಿನ್ ರವರಿಗೆ ಹಣೆಗೆ ಭಾರಿ ರಕ್ತಗಾಯ ಹಾಗೂ ಎದೆಗೆ ಒಳಪೆಟ್ಟು, ಎಡಗಾಲ ಪಾದದ ಹತ್ತಿರ ರಕ್ತಗಾಯಗಳಾಗಿದ್ದು, ಬಾಬುಸಾಬ ಬಡಿಗೇರ ಈತನಿಗೆ ಎಡಗಾಲ ಮೀನಖಂಡದ ಹತ್ತಿರ ಭಾರಿ ಒಳಪೆಟ್ಟು ಬಲಗಾಲ ಕಿರುಬೆರಳಿಗೆ ಹಾಗೂ ಎರಡು ಕೈಗಳಿಗೆ ತೆರಚಿದ ಗಾಯಗಳಾಗಿದ್ದು ಅಲ್ಲದೆ ಫಿರ್ಯಾಧಿದಾರರಿಗೂ ಹಾಗೂ ದಾವಲಸಾಬ ಮುಜಾವರ, ರಾಜಾವಲಿಸಾಬ ಲೆಕ್ಕಿಹಾಳ, ಇವರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಅಲ್ಲದೇ ಟ್ರ್ಯಾಕ್ಟರ್ ಚಾಲಕನು ಅಪಘಾತಪಡಿಸಿ ವಾಹನವನ್ನು ಬಿಟ್ಟು ಓಡಿ ಹೋಗಿದ್ದು ಕಾರಣ ಸದರಿಯವನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾಧಿಯನ್ನು ಪಡೆದುಕೊಂಡು ವಾಪಾಸು ಠಾಣೆಗೆ ಸಂಜೆ 7-00 ಗಂಟೆಗೆ ಬಂದು ಸದರಿ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ. ನಂತರ ಗಂಗಾವತಿಯಿಂದ ಪೋನ್ ಮುಖಾಂತರ ಮಾಹಿತಿ ಬಂದಿದ್ದು ಪ್ರಕರಣದಲ್ಲಿ ಗಾಯಾಳು ಶ್ಯಾಮೀದಸಾಬ ತಂದೆ ದಸ್ತಗಿರಿಸಾಬ ಲಡ್ಡಿನ್ ವಯ: 45 ವರ್ಷ, ಜಾತಿ:ಮುಸ್ಲಿಂ. ಕೂಲಿ ಕೆಲಸ. ಸಾ: ಕನಕಗಿರಿ ತಾ: ಗಂಗಾವತಿ. ಈತನನ್ನು ಹೆಚ್ಚಿನ ಇಲಾಜು ಕುರಿತು ಗಂಗಾವತಿ ಸರಕಾರಿ ಆಸ್ಪತ್ರೆ ಸೇರಿಕೆ ಮಾಡಿದ್ದು ಆತನು ಅಲ್ಲಿ ಇಲಾಜು ಪಡೆಯುತ್ತಿರುವಾಗ ಇಲಾಜು ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 67/2016 ಕಲಂ. 41 (1),109 Cr.P.C.
ದಿನಾಂಕ: 17-04-2016 ರಂದು ಮದ್ಯಾಹ್ನ 5-00 ಗಂಟೆಗೆ ಇಬ್ರಾಹಿಂ ಪಿಸಿ 70 ಕೊಪ್ಪಳ ನಗರ ಪೊಲೀಸ್ ಠಾಣೆರವರು ತಮ್ಮ ವರದಿಯೊಂದಿಗೆ ಒಬ್ಬ ವ್ಯಕ್ತಿಯನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ: 17-04-2016 ರಂದು ಮದ್ಯಾಹ್ನ 4-30 ಗಂಟೆಗೆ ತಾನು ಮತ್ತು ಬಕ್ಷಿದ್ಸಾಬ ಪಿಸಿ 172 ಇಬ್ಬರೂ ಕೂಡಿಕೊಂಡು ಮಾನ್ಯ ಪಿ. ಸಾಹೇಬರ ಆದೇಶದ ಮೆರೆಗೆ ನಗರದಲ್ಲಿ ಪ್ಯಾಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ನಗರದ ಗಂಜ್ ಸರ್ಕಲ್ ಹತ್ತಿರ ಸಂಶಯಾಸ್ಪದ ರೀತಿಯಲ್ಲಿ ಶರಣಪ್ಪ ತಂದೆ ವಿರುಪಾಕ್ಷಪ್ಪ ಚೌಡಿ ವಯಾ: 19 ವರ್ಷ ಜಾ: ಲಿಂಗಾಯತ : ಟ್ಯಾಕ್ಸಿ ಕ್ಲಿನರ್ ಸಾ: ಬಸಾಪಟ್ಟಣ ತಾ: ಗಂಗಾವತಿ ಜಿ: ಕೊಪ್ಪಳ ಸಿಕ್ಕಿದ್ದು ಸದರಿಯವರಿಗೆ ಸದರಿ ಸ್ಥಳದಲ್ಲಿ ಇದ್ದ ಬಗ್ಗೆ ವಿಚಾರಿಸಲಾಗಿ ಯಾವುದೇ ಸಮರ್ಪಕವಾದ ಉತ್ತರ ಕೊಡಲಿಲ್ಲಾ ಸದರಿಯವರನ್ನು ಹಾಗೆಯೇ ಬಿಟ್ಟಲ್ಲಿ ಗಂಜ್ ಸರ್ಕಲ್ ಹತ್ತಿರ ಯಾವುದಾದರು ಸ್ವತ್ತಿನ ಅಪರಾಧ ಮಾಡಬಹುದು ಎಂಬ ಬಲವಾದ ಸಂಶಯ ಬಂದಿದ್ದು, ಹಾಗೂ ಸ್ವತ್ತಿನ ಅಪರಾಧ ನಿಯಂತ್ರಣಕ್ಕಾಗಿ ಮತ್ತು ಮುಂಜಾಗ್ರತಾ ಕ್ರಮವಾಗಿ ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಇಂದು ದಿನಾಂಕ: 17-04-2016 ರಂದು ಮದ್ಯಾಹ್ನ 4-45 ಗಂಟೆಗೆ ಠಾಣೆಗೆ ಬಂದು, ಮದ್ಯಾಹ್ನ 5-00 ಗಂಟೆಗೆ ಫಿಯರ್ಾದಿಯನ್ನ ತಯಾರಿಸಿ ಆರೋಪಿತನ ಸಮೇತ ಹಾಜರಪಡಿಸಿದ್ದು, ಕಾರಣ ಸದರಿ ಆರೋಪಿತನ ಮೇಲೆ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಇರುವ ಫಿರ್ಯಾಧಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008