Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, May 28, 2016

Crimes of 27-05-2016

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 116/2016 ಕಲಂ: 78(6) Karnataka Police Act.
ದಿನಾಂಕ. 27-05-2016 ರಂದು 4-30 ಪಿ.ಎಂ.ಕ್ಕೆ ಫಿರ್ಯಾದಿದಾರರು ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಮುನಿರಾಬಾದ ಸೀಮಾ ಎನ್.ಹೆಚ್. 50 ರಸ್ತೆಯ ಪಕ್ಕದಲ್ಲಿ ಚಾಂದಸಾಬ ಇವರಿಗೆ ಸೇರಿದ ಶಡ್ಡಿನಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರೊಂದಿಗೆ ದಾಳಿ ಮಾಡಿ 21 ಜನ ಆರೋಪಿತರನ್ನು ತಾಬಾಕ್ಕೆ ತೆಗೆದುಕೊಂಡು ಆರೋಪಿತರಿಂದ ಜೂಜಾಟದ ಸಾಮಗ್ರಿಗಳಾದ 52 ಇಸ್ಪೇಟ ಎಲೆಗಳು, ಒಂದು ಜಮಖಾನ, ಜೂಜಾಟದ ನಗದು ಹಣ. 1,67,000=00 ರೂ. ಹಾಗೂ 16 ಮೋಟಾರ ಸೈಕಲಗಳು, ಒಂದು ಇಂಡಿಕಾ ಕಾರು ಜಪ್ತ ಮಾಡಿಕೊಂಡು ಠಾಣೆಗೆ ಬಂದು ಫಿರ್ಯಾದಿ ನೀಡಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 52/2016 ಕಲಂ: 87 Karnataka Police Act.
ದಿನಾಂಕ: 27-05-2016 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಚಿಕ್ಕಬನ್ನಿಗೋಳ ಗ್ರಾಮದಲ್ಲಿ ಬರುವ ಸರಕಾರಿ ಪ್ರಾಥಮಿಕ ಶಾಲೆ ಮುಂದುಗಡೆ  ಸಾರ್ವಜನಿಕ ಸ್ಥಳದಲ್ಲಿ  ಆರೋಪಿತರೆಲ್ಲರೂ ಕೂಡಿಕೊಂಡು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ಸಾಯಂಕಾಲ 6-05 ಗಂಟೆಗೆ ದಾಳಿ ಮಾಡಿ ಹಿಡಿದಿದ್ದು 7 ಜನರು ಸಿಕ್ಕಿ ಬಿದ್ದಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 3,720=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು ಪ್ಲಾಸ್ಟೀಕ ಚೀಲ  ಸಿಕ್ಕಿದ್ದು ಇರುತ್ತದೆ.  ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 149/2016 ಕಲಂ:  379 ಐ.ಪಿ.ಸಿ:.
ದಿನಾಂಕ:27-05-2016 ರಂದು ಸಂಜೆ 05-15 ಗಂಟೆಗೆ ಪಿರ್ಯಾದಿದಾರರಾದ ಮೈಲಾರಲಿಂಗೇಶ ತಂದಿ ಮಲ್ಲಿಕಾರ್ಜುನ ಕಲ್ಲಗೋನಾಳ ವಯಾ: 28 ವರ್ಷ ಜಾತಿ: ಕುರುಬರು ಉ: ಒಕ್ಕಲುತನ ಸಾ: ಶ್ಯಾಡಲಗೇರಿ ತಾ: ಕುಷ್ಟಗಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರನ್ನು ಸಲ್ಲಿಸಿದ್ದು ಸಾರಾಮಶವೆನೆಂದರೆ ಫಿರ್ಯಾದಿದಾರರು ತಮ್ಮ ವ್ಯಯಕ್ತಿಕ ಕೆಲಸದ ನಿಮಿತ್ಯ ಒಂದು ಹೊರೋ ಸ್ಪ್ಲೆಂಡರ್ ಎಲೆ ಹಸಿರು ಬಣ್ಣದ  ಮೋ.ಸೈ ನಂ: ಕೆ.ಎ-37/ಎಕ್ಸ-6064 ನೇದ್ದನ್ನು ಈಗ್ಗೆ ಸುಮಾರು 1 ½ ವರ್ಷದ ಹಿಂದೆ ಖರೀದಿ ಮಾಡಿದ್ದು ಸದರಿ ಮೋ.ಸೈ. ನ್ನು ಅವರು ದಿನಾಂಕ: 23-05-2016 ರಂದು ಬೆಳಿಗ್ಗೆ ಕುಷ್ಟಗಿಯ ತಹಶಿಲ್ ಕಾರ್ಯಾಲಯದಲ್ಲಿ ಕೆಲಸವಿದ್ದ ಕಾರಣ ಬೆಳಿಗ್ಗೆ 11-30 ಗಂಟೆಗೆ ತಹಶಿಲ ಕಛೇರಿಯ ಪಕ್ಕದಲ್ಲಿ ನಿಲ್ಲಿಸಿ ವಾಪಾಸ್ ಕೆಲಸ ಮುಗಿಸಿಕೊಂಡು ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ಬಂದು ನೋಡಲಾಗಿ ಸದರಿ ಮೋ.ಸೈ. ಇರಲಿಲ್ಲ. ನಂತರ ಅವರು ತಹಶಿಲ ಕಾರ್ಯಾಲಯದ ಆವರಣದ ಸುತ್ತಲೂ ನೋಡಲಾಗಿ ಎಲ್ಲಿಯೂ ಅವರ ವಾಹನ ಸಿಕ್ಕಿರುವದಿಲ್ಲ ನಂತರ ಅವರು ಎಲ್ಲಾ ಕಡೆಗಳಲ್ಲಿ ಹುಡುಕಾಡಲಾಗಿ ಎಲ್ಲಿಯೂ ಅವರ ವಾಹನ ಸಿಗಲಾರದ್ದಕ್ಕೆ ಇಂದು ದಿನಾಂಕ: 27-05-2016 ರಂದು ಅಲ್ಲಿ ಇಲ್ಲಿ ಹುಡುಕಾಡಿ ಈಗ ತಡವಾಗಿ ಬಂದು ಸುಮಾರು 38,000=00 ರೂ. ಕಿಮ್ಮತ್ತಿನ ನನ್ನ ಮೋ.ಸೈ. ನಂ: ಕೆ.ಎ-37/ಎಕ್ಸ-6064 ಇಂಜಿನ್ ನಂ: HA10ELEHG21327  ಮತ್ತು ಚೆಸ್ಸಿ ನಂ: MBLHA10A9EHG02918 ನೇದ್ದು ಕಳ್ಲತನವಾದ ಬಗ್ಗೆ ಬಂದು ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ   ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
4] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 109/2016 ಕಲಂ:  379 ಐ.ಪಿ.ಸಿ:.

ಫಿರ್ಯಾದಿದಾರರಾದ ನಾಗರಾಜ ತಂದೆ ರಾಮಚಂದ್ರಪ್ಪ ಚುಕ್ಕನಕಲ್ ಸಾ: ಮುದ್ದಾಬಳ್ಳಿ ಇವರು ಪೀರ್ಯಾದಿಯನ್ನು ನೀಡಿದ್ದು, ದಿ:08-05-2016 ರಂದು ರಾತ್ರಿ 10.00 ಗಂಟೆಯಿಂದ ದಿನಾಂಕ : 09-05-2016 ರಂದು ಬೆಳಗಿನ ಜಾವ 04.00 ಗಂಟೆಯ ಅವಧಿಯಲ್ಲಿ ಮುದ್ದಾಬಳ್ಳಿ ಸೀಮಾದಲ್ಲಿ ಪಿರ್ಯಾಧಿದಾರರ ಹೊಲದಲ್ಲಿಯ ರೂಮಿನ ಮುಂದೆ ಕಟ್ಟಿದ್ದ ಸುಮಾರು ರೂ, 32,000=00 ಬೆಲೆ ಬಾಳುವ 8 ಟಗರುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವು ಮಾಡಿದ ಕಳ್ಳರನ್ನು ಹಾಗೂ ಟಗರುಗಳನ್ನು ಪತ್ತೆ ಮಾಡಲು ಕೋರಿದ ವಗೈರಾ ಫಿರ್ಯಾದಿ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008