Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, June 4, 2016

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 119/2016 ಕಲಂ: 78(3) Karnataka Police Act.
ದಿನಾಂಕಃ- 03-06-2016 ರಂದು  ರಾತ್ರಿ 8-35 ಗಂಟೆಯ ಸುಮಾರಿಗೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಒಂದು ಮೂಲ ಪಂಚನಾಮೆಯೊಂದಿಗೆ ಒಂದು ವರದಿಯನ್ನು ಹಾಜರುಪಡಿಸಿದ್ದು ಇದರ ಸಾರಾಂಶವೆನಂದರೆ, ಇಂದು ದಿನಾಂಕ 03-06-2016 ರಂದು ಸಾಯಂಕಾಲ 7-45 ಗಂಟೆಯ ಸುಮಾರಿಗೆ ಸಿದ್ದಾಪೂರ ಗ್ರಾಮ ಜುಮ್ಮಾ ಮಸದಿ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದ  ಆರೋಪಿ  1) ನಬಿಸಾಬ ತಂದಿ ಅಮೀನಸಾಬ 2) ಬಸವನಗೌಡ ತಂದೆ ನಂದಪ್ಪ  ಸಾ. ಸಿದ್ದಾಪೂರ ರವರ ಮೇಲೆ ದಾಳಿ ಮಾಡಲು ಆರೋಪಿ ನಂ 2 ಈತನು ಓಡಿ ಹೋಗಿದ್ದು ಆರೋಪಿ ನಂ 1 ಈತನಿಗೆ ಹಿಡಿದುಕೊಂಡು ಈತನ ಕಡೆಯಿಂದ ನಗದು ಹಣ ರೂ,. 3755=00 ಗಳನ್ನು ಮತ್ತು ಮಟ್ಕಾ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಈತನು ಬರೆದ ಪಟ್ಟು ಮತ್ತು ಹಣವನ್ನು ಆರೋಪಿ ನಂ 3 ಸಿದ್ದಪ್ಪ ತಂದಿ ಹನುಮಂತಪ್ಪ ಉಪ್ಪಾರ ಸಾ. ಈಳಿಗನೂರು ಈತನಿಗೆ ಕೊಡುವುದಾಗಿ ತಿಳಿಸಿರುತ್ತಾನೆ. ಅಂತಾ ಮುಂತಾಗಿ ನೀಡದ ವರದಿಯ ಸಾರಾಂಶದ ಮೇಲಿಂದ  ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 121/2016 ಕಲಂ: 279, 304(ಎ) ಐ.ಪಿ.ಸಿ :.
ದಿನಾಂಕ 03-06-2016 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ಆರೋಪಿತನು ತನ್ನ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ಸಂ. ಕೆ.ಎ.37 ಡಬ್ಲ್ಯೂ 2183 ನೇದ್ದನ್ನು ಚಲಾಯಿಸಿಕೊಂಡು ಕನಕಗಿರಿಯಿಂದ ಕಲ್ಕೇರಿಯ ಕಡೆಗೆ ಹೋಗುವ ರಸ್ತೆಯ ಮೇಲೆ ಅತೀ ಜೋರಾಗಿ ಮತ್ತು ಅಲಕ್ಷತನದಿಂದ ಮೋಟಾರ್ ಸೈಕಲನ್ನು ನಡೆಯಿಸಿ ರೋಡ್ ಬ್ರೆಕ್ ತಪ್ಪಿಸಲು ಹೋಗಿ ಮೋಟಾರಸೈಕಲನ್ನು ನಿಯಂತ್ರಿಸಲಾಗದೇ ಕಲ್ಲಿಗೆ ಟಕ್ಕರ್ ಕೊಟ್ಟಿದ್ದು ಇದರಿಂದ ಆರೋಪಿತನಿಗೆ ತಲೆಗೆ ಭಾರಿ ರಕ್ತಗಾಯವಾಗಿ, ಸ್ಥಳದಲ್ಲಿಯೇ ಆರೋಪಿತನು ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 118/2016 ಕಲಂ: 379 ಐ.ಪಿ.ಸಿ :.
ದಿನಾಂಕ: 03-06-2016 ರಂದು 7-30 ಪಿ.ಎಂ.ಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿದ ಪಿರ್ಯಾದಿಯನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೇನಂದರೆ, ಪಿರ್ಯಾದಿದಾರರ ಮಾಲೀಕತ್ವದ ಮೋಟರ ಸೈಕಲ್ ನಂ. ಕೆಎ-34/ಎಕ್ಸ್-1784 ಅಂ.ಕಿ 10,000-00 ರೂ. ನೇದ್ದನ್ನು ದಿನಾಂಕ: 23-05-2015 ರಂದು 00-45 ಎ.ಎಂ. ರಿಂದ 7-00 ಎ.ಎಂ. ಅವಧಿಯಲ್ಲಿ ಹಳೇ ನಿಂಗಾಪೂರ ಗ್ರಾಮದ ತಮ್ಮ ಮನೆಯ ಕಂಪೌಂಡನಲ್ಲಿ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 153/2016 ಕಲಂ: 379 ಐ.ಪಿ.ಸಿ :.

ದಿನಾಂಕ 03-06-2016 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಂಜುನಾಥ ತಂದೆ ವೀರಣ್ಣ ಉಪ್ಪಾರ ವಯಾ: 38 ವರ್ಷ ಜಾತಿ: ಉಪ್ಪಾರ ಉಮೇಲ್ವಿಚಾರಕರು ಪ್ರಭಾರ  ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕಾರ್ಯ ಮತ್ತು ಪಾಲನೆ ಶಾಖೆ ಗು.ವಿ..ಕಂ.ನಿ. ಕುಷ್ಟಗಿ ಸಾ: ಮುನಿರಾಬಾದ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ ನೀಡಿದ್ದು ಅದರ ಸಾರಾಂಶವೇನೆಂದರೆ ಮದಲಗಟ್ಟಿ ಗ್ರಾಮದ ಶ್ರೀಮತಿ ಅಂಬುಜಾ ಜಗನ್ನಾಥ ಗೋತಗಿ ಇವರ ತೋಟದಲ್ಲಿ  ಪಂಪಶೆಟ್ಟಗೆ ಅಳವಡಿಸಿದ 63 ಕೆವಿಎ ಪರಿವರ್ತಕ(ಟಿಸಿ) ಅಂದಾಜು ಕಿಮ್ಮತ್ತು 49,000=00 ರೂ. ಬೆಲೆ ಬಾಳುವದನ್ನು ದಿನಾಂಕ: 08-05-2016 ರಂದು ರಾತ್ರಿ 9-00 ಗಂಟೆಯಿಂದ ಬೆಳಗಿನ 6-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಸದರಿ ಪರಿವರ್ತಕವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕ್ರಮ ಕೈಕೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008