Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, June 3, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 156/2016 ಕಲಂ: 78(3) Karnataka Police Act.
ಶ್ರೀಮತಿ ಷಾನಾಜ ಬೇಗಂ, ಮ.ಎ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರು ಆರೋಪಿತನೊಂದಿಗೆ ಮೂಲ ಪಂಚನಾಮೆ, ಮುದ್ದೆಮಾಲು ಹಾಗೂ ವರದಿಯನ್ನು ಸಲ್ಲಿಸಿದ್ದು ದಿನಾಂಕ:- 02-06-2016 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕೇಸರಹಟ್ಟಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಒಂದು ಪಾನ್ ಶಾಪ್ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದಿದ್ದು, ಮಾನ್ಯ ಡಿ.ಎಸ್.ಪಿ ಸಾಹೇಬರು ಹಾಗೂ ಸಿಪಿಐ ಸಾಹೇಬರ ಮಾರ್ಗದರ್ಶನದ ಮೇರೆಗೆ ಪಿ.ಸಿ. 335, 323 ಎ.ಪಿ.ಸಿ. 77 ಕನಕಪ್ಪ ಹಾಗೂ ಇಬ್ಬರು ಪಂಚರು ಕೂಡಿಕೊಂಡು ಸರಕಾರಿ ಜೀಪ್ ನಂಬರ್: ಕೆ.ಎ-37/ ಜಿ-307 ನೇದ್ದರಲ್ಲಿ ಠಾಣೆಯಿಂದ ಸಂಜೆ 6:00 ಗಂಟೆಗೆ ಹೊರಟು ಕೇಸರಹಟ್ಟಿ ಗ್ರಾಮ ತಲುಪಿದಾಗ ಇದೇ ಮಟಕಾ ಜೂಜಾಟದ ಮಾಹಿತಿ ಪಡೆದುಕೊಂಡು ದಾಳಿ ಮಾಡಲು ಕೊಪ್ಪಳದಿಂದ ಬಂದಿದ್ದ ಶ್ರೀ ಜಿ.ಎಸ್. ಉಡಗಿ ಪಿ.ಐ. ಡಿಸಿಆರ್.ಬಿ. ಕೊಪ್ಪಳ, ಶ್ರೀ ನಾರಾಯಣ ದಂಡಿನ, ಪಿ.ಎಸ್.ಐ., ಡಿ.ಸಿ.ಐ.ಬಿ. ಹಾಗೂ ಅವರ ಸಿಬ್ಬಂದಿಯವರಾದ ಚೋಳಪ್ಪ ಎ.ಪಿ.ಸಿ. 72, ದುರ್ಗಾಪ್ರಸಾದ ಎ.ಪಿ.ಸಿ. 166, ಚಾಂದಪಾಷ ಎ.ಪಿ.ಸಿ. 109, ಚಂದ್ರಶೇಖರ ಎ.ಪಿ.ಸಿ. 95 ಇವರೆಲ್ಲರೂ ಕೂಡಿಕೊಂಡು ವಾಹನಗಳನ್ನು ಊರ ಮುಂದೆ ನಿಲ್ಲಿಸಿ ಎಲ್ಲರೂ ಮಾನ್ಯ ಪಿ.ಐ. ರವರ ನೇತೃತ್ವದಲ್ಲಿ ಹೊರಟು   ನೋಡಲಾಗಿ ನಮಗೆ ಮಾಹಿತಿ ಇದ್ದ ಪ್ರಕಾರ ಕೇಸರಹಟ್ಟಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಒಂದು ಪಾನ ಶಾಪ್ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಜನರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ, ಅದೃಷ್ಟದ ಮಟಕಾ ನಂಬರಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆದು, ಅವರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ವಿಚಾರಿಸಲಾಗಿ ಮಟಕಾ ಪಟ್ಟಿ ಬರೆದುಕೊಳ್ಳುತ್ತಿದ್ದವನು ತನ್ನ ಹೆಸರು ಬಸವರಾಜ ತಂದೆ ಮಲ್ಲಿಕಾರ್ಜುನ ದೇಸಾಯಿ, ವಯಸ್ಸು 35 ವರ್ಷ, ಜಾತಿ: ಲಿಂಗಾಯತ ಉ: ಪಾನ್ ಶಾಪ್ ಸಾ: ಕೇಸರಹಟ್ಟಿ. ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 2,500/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ ಪೆನ್ನು ಹಾಗೂ ಒಂದು ಸ್ಯಾಮಸಂಗ್ ಮತ್ತು ಎರಡು ನೋಕಿಯಾ ಮೊಬೈಲ್ ಗಳು ದೊರೆತಿದ್ದು ಇದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 151/2016 ಕಲಂ: 279, 337, 338 ಐ.ಪಿ.ಸಿ :.

ಗಾಯಾಳು ಶಾಂತಮ್ಮ ದಿನಾಂಕ: 02-06-2016 ರಂದು ಚಿಕ್ಕಮನ್ನಾಪೂರ ಗ್ರಾಮದಲ್ಲಿ  ನಮ್ಮ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮವಿದ್ದ ಕಾರಣ ಅಲ್ಲಿಗೆ ಹೋಗುವ ಸಲುವಾಗಿ ನಮ್ಮ ತಾಯಿಯಾದ ಶಾಂತಮ್ಮ ಮತ್ತು ಅತ್ತೆಯಾದ ದ್ಯಾಮಮ್ಮ ಇಬ್ಬರನ್ನು ಕುಷ್ಟಗಿಯಲ್ಲಿ ಒಂದು ಅಟೋದಲ್ಲಿ ಹೋಗುವಂತೆ ಹೇಳಿ ಅವರ ಹಿಂದೆ ಫಿರ್ಯಾದಿಯು ತನ್ನ ಮೋ.ಸೈ ಮೇಲೆ ಹೋಗುತ್ತಿರುವಾಗ ಸದರಿ ಟಂ ಟಂ ವಾಹನದ ಚಾಲಕನು  ಕುಷ್ಟಗಿ ಕಂದಕೂರು ರಸ್ತೆಯ ಮಾರುತಿ ನಗರ ದಾಟಿ ಎರೆ ಹಳ್ಳದ ಸಮೀಪ ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಅಟೋವನ್ನು  ನಡೆಸಿ ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ರಸ್ತೆಯ ಬಲಗಡೆಗೆ ಕೆಡವಿದ್ದು ಕೂಡಲೇ ನಾನು ಹಿಂದೆ ಹೋಗುತ್ತಿದ್ದವನು ನನ್ನ ಮೋಟರ್ ಸೈಕಲ್ ನ್ನು ನಿಲ್ಲಿಸಿ ನೋಡಲಾಗಿ ನನ್ನ ತಾಯಿಯಾದ ಶಾಂತಮ್ಮ ಮತ್ತು ಅತ್ತೆಯಾದ ದ್ಯಾಮಮ್ಮ ರಸ್ತೆಯ ಮೇಲೆ ಬಿದ್ದರು. ಆಗ ನೋಡಲಾಗಿ ನನ್ನ ತಾಯಿಯಾದ ಶಾಂತಮ್ಮ ಮತ್ತು ನನ್ನ ಅತ್ತೆಯಾದ ದ್ಯಾಮಮ್ಮ ಇವರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯವಾಗಿತ್ತು. ನಂತರ ಸದರಿ ಅಟೋವನ್ನು ನೋಡಲಾಗಿ ಕೆ.-36/2827 ಅಂತಾ ಇದ್ದು ಅದರ ಚಾಲಕನನ್ನು  ವಿಚಾರಿಸಲಾಗಿ ಆತನ ಹೆಸರು ರಮೇಶ ತಂದೆ ಗ್ಯಾನಪ್ಪ ಸುಂಕದಅಂತಾ ತಿಳಿಸಿದ್ದು ಆತನಿಗೂ ಗಾಯವಾಗಿದ್ದು ಇರುತ್ತದೆ. ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

0 comments:

 
Will Smith Visitors
Since 01/02/2008