Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, June 13, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 167/2016 ಕಲಂ: 87 Karnataka Police Act.
ದಿನಾಂಕ:   12-06-2016 ರಂದು ಮಧ್ಯಾಹ್ನ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ದಾಸನಾಳ ಗ್ರಾಮದಲ್ಲಿ ಶ್ರೀ ಹನುಮಂತ ದೇವರ ಗುಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಮೇರೆಗೆ ಮಾನ್ಯ ಸಿಪಿಐ ಸಾಹೇಬರವರ ಮಾರ್ಗದರ್ಶನದಲ್ಲಿ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಸಿಬ್ಬಂದಿಯವರಾದ ಪಿ.ಸಿ. 160, 129, 323, 110, 354, 358, 277, 363, 386, 38 ಜೀಪ ಚಾಲಕ ಎ.ಪಿ.ಸಿ.77 ಕನಕಪ್ಪ ರವರು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು  ಹೋಗಿ ನಮಗೆ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲು ಶ್ರೀ ಹನುಮಂತ ದೇವರ ಗುಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು,  ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 7 ಜನರು ಸಿಕ್ಕಿ ಬಿದ್ದಿದ್ದು, ಸಿಕ್ಕವರ ಹೆಸರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ಭೀಮಪ್ಪ ತಂದೆ ಸಿದ್ದಪ್ಪ ಚನ್ನಳ್ಳಿ, ವಯಸ್ಸು 38 ವರ್ಷ, ಜಾತಿ: ನಾಯಕ ಉ: ಕೂಲಿ ಕೆಲಸ ಸಾ: ದಾಸನಾಳ (2) ನಿಂಗಪ್ಪ ತಂದೆ ಮಂಗಳೆಪ್ಪ ತಿಪ್ಪನಾಳ, ವಯಸ್ಸು 54 ವರ್ಷ, ಜಾತಿ: ಲಿಂಗಾಯತ ಉ: ಕೂಲಿ ಕೆಲಸ ಸಾ: ದಾಸನಾಳ (3) ಯಲ್ಲಪ್ಪ ತಂದೆ ದುರಗಪ್ಪ ಡಂಬರ್, 45 ವರ್ಷ, ಕೂಲಿ ಕೆಲಸ ಸಾ: ದಾಸನಾಳ (4) ಶರಣಪ್ಪ ತಂದೆ ಮಲ್ಲಿಕಾರ್ಜುನ ಯರಗೇರಿ, ವಯಸ್ಸು 45 ವರ್ಷ, ಲಿಂಗಾಯತ ಉ: ಕೂಲಿ ಕೆಲಸ ಸಾ: ದಾಸನಾಳ (5) ಶೇಖಸಾಬ ತಂದೆ ಬಡೇಸಾಬ, ಪಿಂಜಾರ, 30 ವರ್ಷ, ಕೂಲಿ ಕೆಲಸ ಸಾ: ದಾಸನಾಳ (6) ಈರಪ್ಪ ತಂದೆ ಹನುಮಪ್ಪ, 35 ವರ್ಷ, ಜಾತಿ: ಉಪ್ಪಾರ, ಕೂಲಿ ಕೆಲಸ ಸಾ: ಬೇವೂರು ಹಾಲಿವಸ್ತಿ: ದಾಸನಾಳ (7) ಯಲ್ಲಪ್ಪ ತಂದೆ ಫಕೀರಪ್ಪ ಚಳಗೇರಿ, 35 ವರ್ಷ, ಉಪ್ಪಾರ, ಕೂಲಿ ಕೆಲಸ ಸಾ: ದಾಸನಾಳ ಅಂತಾ ತಿಳಿಸಿದ್ದು ಅವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ 3,220/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಬರಕಾ ಸಿಕ್ಕಿರುತ್ತದೆ.  ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 168/2016 ಕಲಂ: 87 Karnataka Police Act.
ದಿನಾಂಕ:-12-06-2016 ರಂದು ಸಂಜೆ 6:30 ಗಂಟೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ರವರು ಮೂಲ ವರದಿಯೊಂದಿಗೆ ಮೂಲ ಪಂಚನಾಮೆ, ಇಸ್ಪೀಟ್ ಜೂಜಾಟಕ್ಕೆ ಸಂಭಂದಿಸಿದಂತಹ ಮುದ್ದೆಮಾಲು ಹಾಗೂ ಆರೋಪಿತರನ್ನು ಹಾಜರಪಡಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ.      ಇಂದು
ದಿನಾಂಕ: 12-06-2016 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಗುಡ್ಡದ ಕ್ಯಾಂಪ್ನ ಗುಡ್ಡದ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಮೇರೆಗೆ ಮಾನ್ಯ ಸಿಪಿಐ ಸಾಹೇಬರವರ ಮಾರ್ಗದರ್ಶನದಲ್ಲಿ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಸಿಬ್ಬಂದಿಯವರಾದ ಪಿ.ಸಿ. 160, 129, 323, 110, 354, 358, 277, 363, 386, 38, 335 ಜೀಪ ಚಾಲಕ ಎ.ಪಿ.ಸಿ.77 ಕನಕಪ್ಪ ರವರು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಹೋಗಿ ನಮಗೆ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲು ಗುಡ್ಡದ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು,  ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 10 ಜನರು ಸಿಕ್ಕಿ ಬಿದ್ದಿದ್ದು, ಸಿಕ್ಕವರ ಹೆಸರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ಶಿವಪ್ಪ ತಂದೆ ಶಿವಪ್ಪ ಕಂಬಳಿ, 55 ವರ್ಷ, ಕುರುಬರು, ವ್ಯವಸಾಯ ಸಾ: 1ನೇ ವಾರ್ಡ-ವಡ್ಡರಹಟ್ಟಿ (2) ರಾಜಾ ಮೋಹಿನುದ್ದೀನ್ ತಂದೆ ಹುಸೇನ್ ಸಾಬ ಕಮಲಾಪೂರು, 36 ವರ್ಷ, ಮುಸ್ಲೀಂ, ಮೆಕಾನಿಕ್ ಸಾ: 7ನೇ ವಾರ್ಡ, ಅಗಡಿ ಸಂಗಣ್ಣ ಕ್ಯಾಂಪ್ ಗಂಗಾವತಿ (3) ಶ್ರೀನಿವಾಸ ತಂದೆ ಯಂಕಪ್ಪ, 38 ವರ್ಷ, ಬೋವಿ, ಮೇಸನ್ ಕೆಲಸ ಸಾ: 7ನೇ ವಾರ್ಡ, ಅಗಡಿ ಸಂಗಣ್ಣ ಕ್ಯಾಂಪ್ ಗಂಗಾವತಿ (4) ಮಹಿಬೂಬ ಸಾಬ ತಂದೆ ಅಬ್ದುಲ್ ರಹೆಮಾನ್ ಸಾಬ, ಮುಸ್ಲೀಂ, 45 ವರ್ಷ, ಗೌಂಡಿ ಕೆಲಸ ಸಾ: 13ನೇ ವಾರ್ಡ-ಇಸ್ಲಾಂಪೂರು, ಗಂಗಾವತಿ (5) ಹಂಪಣ್ಣ ತಂದೆ ಈರಪ್ಪ ಕಂಬಳಿ, 30 ವರ್ಷ, ಕುರುಬರು, ವ್ಯವಸಾಯ ಸಾ: 2ನೇ ವಾರ್ಡ-ಬಸಾಪಟ್ಟಣ (6) ಶರಣಪ್ಪ ತಂದೆ ಸಣ್ಣ ಲಿಂಗಪ್ಪ ಕಂಬಳಿ, 35 ವರ್ಷ, ಕುರುಬರು, ವ್ಯವಸಾಯ ಸಾ: 1ನೇ ವಾರ್ಡ-ಬಸಾಪಟ್ಟಣ (7) ರೇಣು ಕುಮಾರ ತಂದೆ ದೇವಪ್ಪ, 32 ವರ್ಷ, ಲಿಂಗಾಯತ, ಗುಮಾಸ್ತ್ತ ಸಾ: 8ನೇ ವಾರ್ಡ-ಪ್ರಶಾಂತ ನಗರ, ಗಂಗಾವತಿ (8) ಗುರು ತಂದೆ ಶಿವಪ್ಪ, 33 ವರ್ಷ, ಲಿಂಗಾಯತ, ಗುಮಾಸ್ತ ಸಾ: 8ನೇ ವಾರ್ಡ-ಪ್ರಶಾಂತ ನಗರ, ಗಂಗಾವತಿ (9) ಮಂಜುನಾಥ ತಂದೆ ವಿರುಪಣ್ಣ ಗುಡದೂರು, 38 ವರ್ಷ, ಲಿಂಗಾಯತ, ಗುಮಾಸ್ತ ಸಾ: ಬಸ್ ನಿಲ್ದಾಣದ ಹಿಂಭಾಗ, 27ನೇ ವಾರ್ಡ-ಗಂಗಾವತಿ (10) ಶಿವಪುತ್ರಪ್ಪ ತಂದೆ ಸಣ್ಣ ನಿಂಗಪ್ಪ, 31 ವರ್ಷ, ಲಿಂಗಾಯತ, ಉ: ವ್ಯವಸಾಯ ಸಾ: ಗುಡ್ಡದ ಕ್ಯಾಂಪ್ ತಾ: ಗಂಗಾವತಿ. ಅಂತಾ ತಿಳಿಸಿದ್ದು ಅವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ 4,390/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಬರಕಾ ಸಿಕ್ಕಿರುತ್ತದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 73/2016 ಕಲಂ: 379 ಐ.ಪಿ.ಸಿ.
ದಿನಾಂಕ: 12-06-2016 ರಂದು ರಾತ್ರಿ 8-30 ಗಂಟೆಗೆ ಫಿರ್ಯಾಧಿದಾರರಾದ ಶೇಖಪ್ಪ ತಂದೆ ಯಂಕಪ್ಪ ಕಮತರ ವಯ: 42 ವರ್ಷ  ಜಾತಿ: ಒಕ್ಕಲಿಗ ಉ: ಒಕ್ಕಲುತನ ಸಾ: ಕವಲೂರು ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಿಕೀಕರಣ ಮಾಡಿಸಿದ ಫಿಯರ್ಾದಿ ನೀಡಿದ್ದು, ಅದರ ಸಾರಾಂಶವೆನಂದರೆ, ಕವಲೂರು ಸೀಮಾದಲ್ಲಿರುವ ಫಿರ್ಯಾಧಿದಾರರ ತೋಟದ ಹೊಲದಲ್ಲಿರುವ ಪಂಪಸೇಟ್ಗೆ ಹಾಕಿದ್ದ, 200 ಪೀಟ್ ಉದ್ದದ, ಒಟ್ಟು ಅಂದಾಜು ಕಿಮ್ಮತ್ತು 3000=00 ರೂಪಾಯಿ ಬೆಲೆಯುಳ್ಳ ಕೇಬಲ್ ವೈಯರನ್ನು ದಿನಾಂಕ: 09-06-2016 ರಂದು ಸಾಯಂಕಾಲ 5-00 ಗಂಟೆಯಿಂದ ದಿನಾಂಕ:10-06-2016 ಬೆಳಿಗ್ಗೆ 08-00 ಗಂಟೆಯ ನಡುವಿನ ಅವಧಿಯಲ್ಲಿ ಹಾಗೂ ಇತರೆ ಜನರ ಹೊಲದಲ್ಲಿಯ ಪಂಪಸೆಟ್ಗೆ ಹಾಕಿದ್ದ ಕೇಬಲ್ ವೈಯರನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳ್ಳತನವಾದ ತಮ್ಮ ವೈಯರನ್ನು ಹಾಗೂ ಆರೋಪಿತರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಸಲ್ಲಿಸಿ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 41/2016 ಕಲಂ: 498(ಎ), 504, 326, 506  ಐ.ಪಿ.ಸಿ:.

ಫಿರ್ಯಾದಿದಾರಳು ಈಗ್ಗೆ ಸುಮಾರು 6 ವರ್ಷಗಳ ಹಿಂದೆ ಆರೋಪಿ ಹನುಮಂತ ಇವನನ್ನು ಮದುವೆ ಆಗಿದ್ದು  ಆರೋಪಿತನು ಫಿರ್ಯಾದಿದಾರಳೊಂದಿಗೆ ಈ ಮೊದಲು ಚೆನ್ನಾಗಿ ಸಂಸಾರ ಮಾಡಿಕೊಂಡಿಕೊಂಡು ಹೋಗಿದ್ದು  ನಂತರದ ದಿನಗಳಲ್ಲಿ ಆರೋಪಿತನು ಫಿರ್ಯಾದಿದಾರಳೊಂದಿಗೆ ವಿನಾ:ಕಾರಣ ಜಗಳ ಮಾಡುತ್ತಿದ್ದರಿಂದ ಇವರಿಬ್ಬರಲ್ಲಿ ವೈಮನಸ್ಸಾಗಿದ್ದರಿಂದ ಫಿರ್ಯಾದಿದಾರಳು ಈಗ್ಗೆ ಸುಮಾರು 2 ವರ್ಷಗಳಿಂದ ತನ್ನ ಮಕ್ಕಳೊಂದಿಗೆ ತನ್ನ ತವರುಮನೆಯಾದ ಮುರುಡಿ ಗ್ರಾಮಕ್ಕೆ ಬಂದು ತನ್ನ ತಂದೆ ತಾಯಿಯವರ ಮನೆಯಲ್ಲಿ ವಾಸವಾಗಿದ್ದು ಆದಾಗ್ಯೂ ಕೂಡಾ ಆರೋಪಿತನು ಆಗಾಗ ಮುರುಡಿ ಗ್ರಾಮದ ಫಿರ್ಯಾದಿದಾರಳ ಮನೆಗೆ ಬಂದು ಫಿರ್ಯಾದಿದಾರಳಿಗೆ ನೀನು ಗಂಡನನ್ನು ಬಿಟ್ಟು ಬಂದು ಇಲ್ಲಿ ಯಾರ ಜೋತೆಗೆ ಸಂಸಾರ ಮಾಡುತ್ತಿ ಇಲ್ಲಿ ನೀನು ಅವರಿವರ ಜೋತೆಗೆ ಮಾತನಾಡುತ್ತಿ ನಿನ್ನ ನಡತೆ ಸರಿ ಇಲ್ಲಾ ನೀನು ಹೊಲಸು ಸೂಳೆ ಅದಿದಿ ಅಂತಾ ಅವಳ ಶೀಲದ ಬಗ್ಗೆ ಶಂಕಿಸುತ್ತಾ ಕೈಯಿಂದ ಹೋಡಿ ಬಡಿ ಮಾಡುತ್ತಾ ಅವಳಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿದ್ದು ಇರುತ್ತದೆ, ನಂತರ ದಿನಾಂಕ: 12.06.2016 ರಂದು ಸಾಯಂಕಲ 4:30 ಗಂಟೆ ಸುಮಾರಿಗೆ ಫಿರ್ಯಾದಿದಾರಳು ಹಾಗೂ ಇವಳ ತಂದೆ ನಾಗಪ್ಪ ಇಬ್ಬರೂ ತಮ್ಮ ಮನೆಯ ಮುಂದೆ ಇದ್ದಾಗ ಅದೇ ವೇಳೆಗೆ ಆರೋಪಿತನು ಫಿರ್ಯಾದಿದಾರಳು ಇದ್ದ ಮನೆಗೆ ಬಂದವನೇ ವಿನಾ:ಕಾರಣ ಫಿರ್ಯಾದಿದಾರಳೊಂದಿಗೆ ಜಗಳ ತೆಗೆದು ಏನಲೇ ಸೂಳೇ ರಂಡೆ ನೀನು  ಗಂಡನನ್ನು ಬಿಟ್ಟು ಬಂದು ಇಲ್ಲೇ ಸೇರಿದಿ ಎಷ್ಟು ಹೇಳಿದರು ನೀನು ನನ್ನ ಮಾತು ಕೇಳುವುದಿಲ್ಲಾ ಅಂತಾ ಅಂದವನೇ ಒಮ್ಮಿಂದೊಮ್ಮಲೆ ಸಿಟ್ಟಿಗೆದು ಅಲ್ಲೆ ಇದ್ದ  ಒಂದು ಬಡಿಗೆಯನ್ನು ತೆಗೆದುಕೊಂಡು  ಫಿರ್ಯಾದಿದಾರಳ ತಲೆಗೆ ಬಲವಾಗಿ ಹೋಡೆದು ಭಾರಿ ರಕ್ತಗಾಯ ಮಾಡಿದ್ದು ಅಲ್ಲದೆ ಫಿರ್ಯಾದಿದಾರಳಿಗೆ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ, ಅಂತಾ ಇತ್ಯಾದಿ ಫಿರ್ಯಾಧಿ ಸಾರಾಂಶದ ಮೆಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008