Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, June 27, 2016



1] ಗಂಗಾವತಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ: 16/2016 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ 26-06-2016 ರಂದು ಬೆಳಗ್ಗೆ 09-45 .ಗಂಟೆಗೆ ಸುಮಾರಿಗೆ ಫಿರ್ಯಾದಿದಾರನು ಮತ್ತು ಕಾಂಕ್ರಿಟ್ ಮಿಲ್ಲರ್ ಲಾರಿ ನಂ ಎಪಿ 28 ಟಿಬಿ 7335 ನೇದ್ದರ ಚಾಲಕನಾದ ಕುಲವೀರ್ಸಿಂಗ್ ತಂದೆ ಕಾಶ್ಮೀರ್ಸಿಂಗ್ :31 ಸಾ: ಗಂಗಾಪೂರ ಕಾಲ ತೇಹಾ ಬಿಲಸಪೂರ ಜಿಲ್ಲಾ: ರಾಂಪೂರ ರಾಜ್ಯ:ಉತ್ತರಪ್ರದೇಶ ಕೊಡಿಕೊಂಡು ಕಾಂಕ್ರಿಟ್ ತುಂಬಿದ ಲಾರಿಯನ್ನು ಜಿಕೆಸಿ ಕಂಪನಿಯ ವೆಂಕಟಗಿರಿ ಪ್ಲಾಂಟ್ ನಿಂದ ತೆಗೆದುಕೊಂಡು ಸಿಂಧನೂರಿಗೆ ಕಾಂಕ್ರಿಟ್ ಡೆಲವರಿ ಮಾಡಲು ಹೊರಟಿರುವಾಗ ರಸ್ತೆ ಮದ್ಯೆ ಅಂದರೆ ವಡ್ಡರಹಟ್ಟಿಯ ಬಸ್ನಿಲ್ದಾಣದ ಹತ್ತಿರ ನಮ್ಮ  ಕಾಂಕ್ರಿಟ್ ಮಿಲ್ಲರ್ ಲಾರಿ ನಂ ಎಪಿ 28 ಟಿಬಿ 7335 ನೇದ್ದರ ಚಾಲಕ ಅತಿ ಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಒಮ್ಮೇಲೆ ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿ  ನಮ್ಮ ಕಂಪನಿಯ ಕಾಂಕ್ರಿಟ್ ಮಿಲ್ಲರ್ ಲಾರಿ ರಸ್ತೆ ಬಲಗಡೆ ಹೊರಳಿ ಬಿದ್ದಿದು ಇದರಿಂದ ಫಿರ್ಯಾದಿ ಮತ್ತು ಲಾರಿ ಚಾಲಕ ಇಬ್ಬರು ಲಾರಿ ಸಮೇತ ಕೆಳಗಡೆ ಬಿದ್ದಿದು ಇದರಿಂದ ನನಗೆ ಬೆನ್ನಿಗೆ ಮತ್ತು ತೆಲೆಯ ಹಿಂಭಾಗದಲ್ಲಿ ಹಾಗೂ ಬಲಗೈ ಮತ್ತು ಎಡ ಚಪ್ಪಿಗೆ ಸಾದ ಮತ್ತು ಭಾರಿ ಸ್ವರೂಪದ ಗಾಯವಾಗಿದ್ದು ಮತ್ತು ಮಿಲ್ಲಾರ್ ಲಾರಿಯ ಚಾಲಕನಿಗೆ ಬಲಗೈ ಹೆಬ್ಬಟಿಗೆ ಸಾದಗಾಯವಾಗಿದ್ದು ಹಾಗೂ ಮಿಲ್ಲಾರ್ ಲಾರಿಯ ಮುಂದಿನ ಹೆಡ್ಗ್ಲಾಸ್, ಕ್ಯಾಬಿನ್, ಮಿಲ್ಲಾರ್ ಹಾಂಡಾ ಡೀಸಲ್ ಟ್ಯಾಂಕ್ ಸಂಪೂರ್ಣ ಡ್ಯಾಮೇಜ್ ಆಗಿದ್ದು ಇದರಿಂದ ಮಿಲ್ಲಾರ್ ಲಾರಿಯ ಅಂದಾಜ ಸುಮಾರು 2,00,000=00 ರೂಗಳ ಲುಕ್ಸಾನ್ ಆಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆಕೈಗೊಂಡೆನು.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 179/2016 ಕಲಂ: 341, 427, 504 ಐ.ಪಿ.ಸಿ.
ಫಿರ್ಯಾದಿದಾರರಾದ ವೆಂಕಟೇಶ ತಂದೆ ಗಂಗಾಧರ, ಸಿಂಧನೂರ-ಗಿಣಿಗೇರಾ ಮುಖ್ಯ ರಸ್ತೆಯ ಟೋಲ್ ಪ್ಲಾಜಾದಲ್ಲಿ ಶಿಫ್ಟ್ ಇನ್ ಚಾರ್ಜ ಅಂತಾ ಕೆಲಸ ಮಾಡಿಕೊಂಡಿರುತ್ತೇನೆ.  ಹೇಮಗುಡ್ಡ ಮತ್ತು ಮರಳಿ ಹತ್ತಿರ ನಮ್ಮ ಎರಡು ಟೋಲ್ ಪ್ಲಾಜಾಗಳು ಇರುತ್ತದೆ. ಮೊನ್ನೆ ದಿನಾಂಕ:   24-06-2016 ರಂದು ಸಂಜೆ 5:30 ರಿಂದ 6:00 ಗಂಟೆಯ ಸುಮಾರಿಗೆ ನಾನು ಮರಳಿ ಟೋಲ್ ಪ್ಲಾಜಾದಲ್ಲಿ ಕರ್ತವ್ಯದಲ್ಲಿದ್ದಾಗ ಲೈನ್ ನಂಬರ್: 4 ರಲ್ಲಿ ಗಂಗಾವತಿ ಕಡೆಯಿಂದ ಒಂದು ಮಾರುತಿ ಸುಜುಕಿ ಸ್ವಿಫ್ಟ್ ಕಾರ್ ನಂಬರ್: ಕೆ.ಎ-02/ ಎಂ.ಎಲ್-0974 ನೇದ್ದು ಬಂದಿದ್ದು, ಅವರಿಗೆ ಟೋಲ್ ಫೀಸ್ ನೀಡುವಂತೆ ಟೋಲ್ ಕಲೆಕ್ಟರ್ ಶಿವರಾಜ ಇವರು ಕೇಳಿದ್ದಕ್ಕೆ ಕಾರ್ ನಲ್ಲಿದ್ದ ಒಬ್ಬ ವ್ಯಕ್ತಿ ಕಾರಿನಿಂದ ಕೆಳಗೆ ಇಳಿದು ಬಂದು ಲೇ ಸೂಳೇ ಮಕ್ಕಳೇ ನಾವು ಲೋಕಲ್ ಇದ್ದೇವೆನಮಗೆ ಹಣ ಕೇಳುತ್ತೀರೇನಲೇ, ನಾವು ಯಾವುದೇ ಟೋಲ್ ಫೀಸ್ ಕೊಡುವುದಿಲ್ಲಾ, ನೀವೇನು ಮಾಡಿಕೊಳ್ಳುತ್ತೀರಾಅಂತಾ ಬಾಯಿಗೆ ಬಂದಂತೆ ಬೈಯುತ್ತಾ ಬೂತ್ ಗ್ಲಾಸ್ ಗೆ ಕೈಯಿಂದ ಗುದ್ದಿದನು.  ಆದರೆ ಯಾವುದೇ ಡ್ಯಾಮೇಜ್ ಆಗಲಿಲ್ಲಾ.  ನಂತರ ಅಲ್ಲಿದ್ದ ನಾನು ಮತ್ತು ಕೆ.ಕೆ. ರೆಡ್ಡಿ ಹಾಗೂ ಸೆಕ್ಯೂರಿಟಿ ರಾಮಸ್ವಾಮಿ, ಎಲೆಕ್ಟ್ರಿಷಿಯನ್ ಬಸವರಾಜ ಇವರುಗಳು ಹೋಗಿ ಆ ವ್ಯಕ್ತಿಗೆ ಈ ರೀತಿ ಗಲಾಟ್ ಮಾಡದಂತೆ ತಿಳುವಳಿಕೆ ಹೇಳಿದರೂ ಸಹ ಕೇಳದೇ ರಸ್ತೆ ಸಂಚಾರಕ್ಕೆ ಅಡ್ಡಿ ಮಾಡಿ ಟೋಲ್ ಬೂತ್ ನ ಬ್ಯಾರಿಯರ್ ನ್ನು ಕೈಯಿಂದ ಮುರಿದು ಹಾಕಿದನು. ಇದರಿಂದ ಬ್ಯಾರಿಯರ್ ನ ಎಲೆಕ್ಟ್ರಾನಿಕ್ ಸಿಸ್ಟಮ್ ಡ್ಯಾಮೇಜ್ ಆಗಿ ಸುಮಾರು ರೂ. 65,000-00 ಗಳಷ್ಟು ಲುಕ್ಷಾನ್ ಆಯಿತು.  ನಂತರ ಆ ವ್ಯಕ್ತಿಯು ಕಾರಿನಲ್ಲಿ ಕುಳಿತು ಅಲ್ಲಿಂದ ಹೊರಟು ಹೋದನು. ನಂತರ  ಈ ವಿಷಯವನ್ನು ನಮ್ಮ ಮ್ಯಾನೇಜರ್ ಶ್ರೀ ಕೆ. ವಂಶಿ ಚಂದ್ರಶೇಖರ ಇವರಿಗೆ ತಿಳಿಸಿದೆವು.  ಅವರು ಊರಲ್ಲಿ ಇರಲಿಲ್ಲಾ.  ಇಂದು ವಾಪಸ್ ಬಂದ ನಂತರ ಚರ್ಚಿಸಿ ತಡವಾಗಿ ದೂರು ನೀಡಿದ್ದು ಇರುತ್ತದೆ. ಪ್ರಕರಣ  ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 107/2016 ಕಲಂ: 394, 397, 307 ಐ.ಪಿ.ಸಿ.
ದಿನಾಂಕ: 26-06-2016 ರಂದು ಮದ್ಯಾಹ್ನ 01-00 ಗಂಟೆಗೆ ಫೀರ್ಯಾದಿದಾರರಾದ ಜೀತೇಂದ್ರ ಕುಮಾರ ತಾಲೇಡಾ ಸಾ ತಾಲೇಡಾ ಶೋ ರೂಂ ಹತ್ತಿರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ದಿ 26-06-2016 ರಂದು ಮಧ್ಯರಾತ್ರಿ 2-30 ಗಂಟೆಯ ಸುಮಾರಿಗೆ ಅರಣ್ಯ ಇಲಾಖೆಯ ಹಿಂದೆ ಇರುವ ತಮ್ಮ ಗೋಶಾಲೆಯಲ್ಲಿ ವಿನೋದ, ವಿಕಾಸ, ಮತ್ತು ರೂಬೀ ಹಾಗೂ ಇತರರು ಸೇರೆ ಅಕ್ರಮಣ ಪ್ರವೇಶ ಮಾಡಿ ಗೋಶಾಲೆಯಲ್ಲಿದ್ದ ಗವಿಸಿದ್ದಯ್ಯನಿಗೆ ಮಾರಣಾಂತಿಕ ಹಲ್ಲೇ ಮಾಢಿ ಗೋಶಾಲೆಯಲ್ಲಿದ್ದ ಎರಡು ಆಕಳುಗಳು, ಎರಡು ಹೋರಿಗಳು, ಮತ್ತು ಎರಡು ಕರುಗಳು ಎಲ್ಲಾ ಸೇರಿ ಒಟ್ಟು ಅಂಕಿರೂ 1,38,000-00 ಬೆಲೆಬಾಳುವುಗಳ ದನಕರುಗಳನ್ನು ಬಲವಂತಾಗಿ ತೆಗೆದುಕೊಂಡು ಹೋಗಿರುತ್ತಾರೆ, ಕಾರಣ ಸದರಿ ಮೂರು ಜನ ಹಾಗೂ ಇತರರುಗಳನ್ನು  ಪತ್ತೇ ಮಾಡಿ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೆಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

0 comments:

 
Will Smith Visitors
Since 01/02/2008