1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ:
100/2016 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ : 14-07-2016 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಕಾರಟಗಿ ಸರಕಾರಿ ಆಸ್ಪತ್ರೆಯಿಂದ
ಎಮ್.ಎಲ್.ಸಿ ಮಾಹಿತಿ ಬಂದ ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ಪ್ರತ್ಯಕ್ಷ ಸಾಕ್ಷಿದಾರರಾದ ವೆಂಕಟೇಶ್ವರಲು ತಂದಿ ಸುಬ್ಬರಾವ್ ಲಂಕೆ ವಯು-64 ವರ್ಷ, ಜಾ. ರಾಜು
ಉ- ಕರೆಂಟ್ ಕೆಲಸ ಸಾ. 10/2 ಎನ್.ಟಿ.ಆರ್ ಕಾಲೋನಿ ಪೆದನಂದಿಪಾಡು ಮಂಡಲ್: ಗುಂಟೂರು ಆಂದ್ರಪ್ರದೇಶ ಇವರನ್ನು ವಿಚಾರಿಸಿ ಇವರು ಬರೆಯಿಸಿಕೊಟ್ಟ ಲಿಖಿತ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಅದರ
ಸಾರಾಂಶವೆನೆಂದರೆ, ಫಿರ್ಯಾದಿ ಹಾಗೂ ಫಿರ್ಯಾದಿಯೊಂದಿಗೆ ಕೆಲಸ ಮಾಡುವ ಗಾಯಾಳು ಸುಬ್ಬರಾವ್
ಇಬ್ಬರೂ ಕೂಡಿಕೊಂಡು ಈ ದಿನ ದಿನಾಂಕ 14-07-2016 ರಂದು ರಾತ್ರಿ 7-30 ಗಂಟೆಗೆ ಗಂಗಾವತಿ-ಕಾರಟಗಿ
ಮುಖ್ಯ ರಸ್ತೆಯ ಮೇಲೆ ಮರ್ಲಾನಹಳ್ಲಿಯ ಸಾಯಿಬಾಬ ಗುಡಿಯ ರಸ್ತೆಯ ಎಡಗಡೆ ಗ್ರಾಮದ ಎಕ್ಸಸ್ ಬ್ಯಾಂಕ್
ಹತ್ತಿರ ಲೈಟಿಂಗ್ ಕೆಲಸ ಮಡುತ್ತಿದ್ದಾಗ ನಮುದು ಮಾಡಿದ ಅರೋಪಿತನು ತಾನು ನಡೆಸುತಿದ್ದ ಮೋಟಾರ್ ಸೈಕಲ್
ನಂ ಕೀ-36/ಇಇ-6974 ನೇದ್ದನ್ನು ಅತೀ ವೇಗವಾಗಿ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಸುಬ್ಬರಾವ್ ಈತನಿಗೆ
ಠಕ್ಕರ್ ಮಾಡಿ ಅಪಘಾತಪಡಿಸಿದ್ದು ಅಲ್ಲದೆ ತಾನು ಸಹಿತ ವಾಹನ ಸಮೇತ ಕೆಳಗೆ ಬಿದ್ದುದ್ದರಿಂದ ಇಬ್ಬರಿಗು
ಸಾದಾ ಹಾಗೂ ತೀವ್ರ ಸ್ವರೂಪದ ಗಾಯಪೆಟ್ಟುಗಳಾಗಿದ್ದು ನಂತರ ಗಾಯಗೊಂಡು ಇಬ್ಬರನು 108 ಅಂಬುಲೆಸ್ನ್ದಲ್ಲಿ
ಕಾರಟಗಿಗೆ ಕರುಕೊಂಡು ಬಂದಿದ್ದು ಅಲ್ಲದೆ ವೈದ್ಯರು ಹೆಚ್ಚಿನ ಇಲಾಜಕ್ಕಾಗಿ ಗಂಗಾವತಿಗೆ ಹೋಗಲು ತಿಳಿಸಿದ್ದೈಂದ
ಸದರಿ ಸುಬ್ಬರಾವ್ ಈತನನ್ನು ಗಂಗಾವತಿಗೆ ಕಳುಹಿಸಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment