1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 197/2016 ಕಲಂ: 279, 338, 304(ಎ) ಐ.ಪಿ.ಸಿ:.
ದಿನಾಂಕ: 14-07-2016 ರಂದು ಬೆಳಗಿನ ಜಾವ 00:30 ಗಂಟೆಗೆ ಫಿರ್ಯಾದಿ ಶ್ರೀ ಪರಶುರಾಮ ತಂದೆ ಯಲ್ಲಪ್ಪ ಮೋಡಿಕಾರ 35 ವರ್ಷ ಜಾತಿ: ಹಂಡಿ ಜೋಗಿ ಉ: ಕೂಲಿಕೆಲಸ ಸಾ:
ಬಸಾಪೂರ ತಾ: ಕೊಪ್ಪಳ ಇವರು ಫಿರ್ಯಾದಿ ನೀಡಿದ್ದು “ನನ್ನ ಹೆಂಡತಿಯಾದ ಶ್ರೀಮತಿ
ಗಂಗಾ 30 ವರ್ಷ ಇವಳು ಈಗ್ಗೆ ಸುಮಾರು 20 ದಿವಸಗಳಿಂದ ನೀರಲ ಹಣ್ಣು ತಗೆದುಕೊಂಡು ಗಂಗಾವತಿ ಹಾಗೂ ಇತರೆ
ಕಡೆಗಳಲ್ಲಿ ಮಾರಾಟ ಮಾಡಲು ಹೋಗಿ ಬಂದು ಮಾಡುತ್ತಿದ್ದಳು. ಅದರಂತೆ ನಿನ್ನೆ ದಿ: 13-07-2016 ರಂದು
ಬೆಳಿಗ್ಗೆ 7 ಗಂಟೆಯ ಸುಮಾರಿಗೆ ನನ್ನ ಹೆಂಡತಿಯು ನೀರಲಹಣ್ಣನ್ನು ಮಾರಾಟಕ್ಕೆಂದು ಗಂಗಾವತಿಗೆ ಹೋಗಿ
ಬರುವದಾಗಿ ಹೇಳಿ ಬಂದಿದ್ದಳು. ನಂತರ ರಾತ್ರಿ 8:00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿರುವಾಗ ನಮ್ಮ
ಗ್ರಾಮದ ಮಾನ್ವಿ ನರಸಿಂಹಪ್ಪ ಎಂಬುವರು ಬಂದು “ ನಿನ್ನ ಹೆಂಡತಿ ಗಂಗಾ ಇವಳು ನಮ್ಮ ಗ್ರಾಮದ ಮಲ್ಲಪ್ಪ
ತಂದೆ ಶಂಕ್ರಪ್ಪ 32 ವರ್ಷ ಎಂಬುವನೊಂದಿಗೆ ಆತನ ಮೋಟಾರ ಸೈಕಲ ಹಿಂಭಾಗದಲ್ಲಿ ಕುಳಿತುಕೊಂಡು ಗಂಗಾವತಿಯಿಂದ
ಬಸಾಪೂರಕ್ಕೆ ಬರುತ್ತಿರುವಾಗ ಹನುಮನಹಳ್ಳಿ ಸೀಮಾದಲ್ಲಿ ಸಂಜೆ 7:30 ಗಂಟೆಯ ಸುಮಾರಿಗೆ ಮಲ್ಲಪ್ಪ ಈತನು
ಮೋಟಾರ ಸೈಕಲನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯನತದಿಂದ ನಡೆಯಿಸಿ ರಸ್ತೆಯಲ್ಲಿ ಒಂದು ತಗ್ಗು
ಬಿದ್ದಿರುವದನ್ನು ಒಮ್ಮಲೇ ನೋಡಿ ವೇಗವನ್ನು ನಿಯಂತ್ರಿಸಲು ಆಗದೇ ಸ್ಕಿಡ್ಡಾಗಿ ಬಿದ್ದು ಅಪಘಾತವಾಗಿದ್ದು
ಇದರಿಂದಾಗಿ ನಿನ್ನ ಹೆಂಡತಿಯ ತಲೆಗೆ ತೀವ್ರವಾದ ಒಳಪೆಟ್ಟಾಗಿ ಬಾಯಲ್ಲಿ ಮೂಗಿನಲ್ಲಿ ರಕ್ತ ಬಂದು ಸ್ಥಳದಲ್ಲಿಯೇ
ಮೃತಪಟ್ಟಿರುತ್ತಾಳೆ ಮತ್ತು ಮಲ್ಲಪ್ಪನು ಸಹ ತೀವ್ರವಾಗಿ ಗಾಯಗೊಂಡಿರುತ್ತಾನೆ ಆತನನ್ನು ಚಿಕಿತ್ಸೆ
ಕುರಿತು ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ 108 ವಾಹನದಲ್ಲಿ ಕರೆದುಕೊಂಡು ಹೋದರು. ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್
ಠಾಣೆ ಗುನ್ನೆ ನಂ. 200/2016 ಕಲಂ 279, 337, 338 ಮತ್ತು 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ:
13-05-2016 ರಂದು ಸಾಯಂಕಾಲ 3-30 ಗಂಟೆಗೆ ಫಿರ್ಯಾದಿದಾರರ ಅಣ್ಣನಾದ ಕಳಕಪ್ಪ ಇತನ ಹೆಂಡತಿಯಾದ ಶೇಖಮ್ಮ
ಈಕೆಗೆ ಮೈಯಲ್ಲಿ ಆರಾಮ ಇಲ್ಲದ ಕಾರಣ ಆಕೆಯನ್ನು ಗಜೇಂದ್ರಗಡದಲ್ಲಿ ತೋರಿಸಿಕೊಂಡು ಅವರ ತವರು ಮನೆಯಾದ
ಚಿಕ್ಕನಂದಿಹಾಳ ಗ್ರಾಮಕ್ಕೆ ಬಿಟ್ಟು ಬರುತ್ತೇನೆ ಅಂತಾ ಹೇಳಿ ಆತನ ಮಗನಾದ ಮಲ್ಲೆಶ ವಯಾ: 04 ವರ್ಷ
ಇತನನ್ನು ತನ್ನ ಮೋ.ಸೈ ನಂ: ಕೆ.ಎ-37/ಇಬಿ-0590 ನೇದ್ದನ್ನು ತೆಗೆದುಕೊಂಡು ಹೋಗಿ ಗಜೇಂಧ್ರಗಡದಲ್ಲಿ
ತೋರಿಸಿಕೊಂಡು ವಾಪಾಸ್ ಚಿಕ್ಕನಂದಿಹಾಳ ಗ್ರಾಮಕ್ಕೆ ಬರುತ್ತಿರುವಾಗ ಸಂಜೆ 6-00 ಗಂಟೆಯ ಸುಮಾರಿಗೆ
ಗಜೇಂದ್ರಗಡ ಕುಷ್ಟಗಿ ರಸ್ತೆಯ ಚಿಕ್ಕನಂದಿಹಾಳ ಕ್ರಾಸ್ ಹತ್ತಿರ ಟರ್ನ ಮಾಡುತ್ತಿರುವಾಗ ಎದುರುಗಡೆಯಿಂದ
ಟಾ ಟಾ ಎಸಿಇ ನಂ: ಕೆ.ಎ-19/ಬಿ-3140 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ
ನಡೆಸಿಕೊಂಡು ಬಂದು ಅಪಘಾತಪಡಿಸಿ ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಹೋಗಿದ್ದು ಕಳಕಪ್ಪ ಈತನಿಗೆ ಬಲ ಹುಬ್ಬಿನ ಮೇಲೆ ಮತ್ತು ಎಡತಲೆಗೆ ಭಾರಿ ರಕ್ತಗಾಯವಾಗಿ
ಕಿವಿ ಮತ್ತು ಮೂಗಿನಿಂದ ರಕ್ತ ಬಂದಿದ್ದು, ಬಲ ತೊಡೆಗೆ ಬಾರಿ ರಕ್ತಗಾಯವಾಗಿ ತೊಡೆಯ ಕೆಳಗೆ ತೆರೆಚಿದ
ಗಾಯಗಳಾಗಿ ಆತನು ಸ್ಥಳದಲ್ಲಿಯೇ ಮೃತಪಟ್ಟಿದ್ದು ಆತನ ಹೆಂಡತಿಯಾದ ಶೇಖಮ್ಮಳಿಗೆ ತಲೆಯ ಹಿಂದುಗಡೆ
ಭಾರಿ ರಕ್ತಗಾಯವಾಗಿ ಹಿಂದೆಲೆಯಿಂದ ಮತ್ತು ಬಾಯಿಯಿಂದ ರಕ್ತ ಬಂದಿದ್ದು ಮತ್ತು ಬಲಕಣ್ಣಿನ ಹತ್ತಿರ
ಭಾರಿ ರಕ್ತಗಾಯವಾಗಿ ಕಪಾಳ ಬಾವು ಬಂದಿದ್ದು ಬಲಗಾಲು ಮೊಣಕಾಲ ಹತ್ತಿರ ತೆರೆಚಿದ ಗಾಯಗಳಾಗಿದ್ದವು,
ಹಾಗೂ ಅವರ ಮಗನಾದ ಮಲ್ಲೇಶ ಇತನಿಗೆ ಹಿಂದೆಲೆಗೆ ಸ್ವಲ್ಪ ರಕ್ತಗಾಯ ಮತ್ತು ಬಲಸೊಂಟಕ್ಕೆ ತೆರೆಚಿದ ಗಾಯಗಳಾಗಿದ್ದು
ನಂತರ ಶೇಖಮ್ಮ ಹಾಗೂ ಮಗ ಮಲ್ಲೇಶನನ್ನು ಚಿಕಿತ್ಸೆ ಕುರಿತು 108 ಅಂಬುಲೆನ್ಸದಲ್ಲಿ ಚಿಕಿತ್ಸೆ ಕುರಿತು
ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಹೆಚ್ಚಿನ ಚಿಕಿತ್ಸೆ ಕುರಿತು
ಬಾಗಲಕೋಟೆಗೆ ಕಳುಹಿಸಿದ್ದು ಇರುತ್ತದೆ.
ಅಪಘಾತವಾಗಿದ್ದರಿಂದ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಾಗೂ ಶೇಖಮ್ಮ ಮತ್ತು ಆಕೆಯ
ಮಗನಾದ ಮಲ್ಲೇಶ ಇತನಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತವೆ. ಪ್ರಕರಣ
ದಾಖಲಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment