1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 133/2016 ಕಲಂ: 78(3) Karnataka
Police Act.
ದಿನಾಂಕ 04-07-2016 ರಂದು ಸಾಯಂಕಾಲ
5-10 ಗಂಟೆಯ ಸುಮಾರಿಗೆ ಆರೋಪಿತರಾದ 1] ಮಹೆಬೂಬಸಾಬ
ತಂದೆ ಖಾಜಾಹುಸೇನ ವಯಾ: 70 ವರ್ಷ ಜಾ: ಪಿಂಜಾರ ಉ: ಕೂಲಿ ಕೆಲಸ ಸಾ: ಪಂಪಾನಗರ ,ಗಂಗಾವತಿ. 2] ರಾಘವೇಂದ್ರ
ತಂದೆ ಮಲ್ಲಿಕಾರ್ಜುನ ಶೆಡ್ಡಿ ವಯಾ: 30 ವರ್ಷ ಜಾ: ನೇಕಾರ ಉ: ಟೇಲರಿಂಗ್ ಕೆಲಸ ಸಾ: ಕಂದಗಲ್
ಮಸೀಧಿ ಹತ್ತಿರ , ಗಂಗಾವತಿ. 3] ಕಮಲ್ ಬಷೀರ @ ಬಷೀರ ತಂದೆ ಅಲ್ಲಾಸಾಬ ನದಾಪ್ ವಯಾ:
24 ವರ್ಷ ಜಾ: ಪಿಂಜಾರ ಉ: ಎಲೆಕ್ಟ್ರಿಕಲ್ ಕೆಲಸ ಸಾ: ಗುಂಡಮ್ಮ ಕ್ಯಾಂಪ, ಗಂಗಾವತಿ.4] ಮಾಬುಸಾಬ
ತಂದೆ ಬುಡ್ಡಿಮಿಯಾ ವಯಾ: 68 ವರ್ಷ ಜಾ: ಮುಸ್ಲಿಂ ಉ: ಬೀಡಿ ಅಂಗಡಿ ಕೆಲಸ ಸಾ: ಗದ್ವಾಲ್ ಕ್ಯಾಂಪ,
ಗಂಗಾವತಿ ಇವರು ಗಂಗಾವತಿ ನಗರದ ಪಂಪಾನಗರದ ಪಾರ್ಕಿನ ದಕ್ಷಿಣ ಭಾಗದಲ್ಲಿ ದುಂಡಗೆ ಕುಳಿತುಕೊಂಡು
ಸಾರ್ವಜನಿಕರನ್ನು ಕರೆದು 01
ರೂಪಾಯಿಗೆ 80
ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವರ ಮೇಲೆ ಶ್ರೀ ಈ.ಕಾಳಿಕೃಷ್ಣ
ಪಿ..ಐ. ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಸದರಿಯವರಿಗೆ
ಹಿಡಿದು ಸದರಿ
ನಾಲ್ಕು ಜನ ಆರೋಪಿತರಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ ಒಟ್ಟು 1000-00 ರೂ ನಗದು ಹಣ [02] ಎರಡು ಕಾರ್ಬನ್ ಮೊಬೈಲುಗಳನ್ನು .[03] ನಾಲ್ಕು
ಮಟ್ಕಾ ನಂಬರ ಬರೆದ ಪಟ್ಟಿಗಳು, (04) ನಾಲ್ಕು ಬಾಲ್ ಪೆನ್ನುಗಳನ್ನು ಜಪ್ತಿ ಪಡಿಸಿಕೊಂಡಿರುತ್ತಾರೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 145/2016 ಕಲಂ: 279, 337, 338 ಐ.ಪಿ.ಸಿ:.
ಫಿರ್ಯಾದಿದಾರ ಹನ್ಮಂತಪ್ಪ ಜಾತೋಟ. ಸಾ: ಕುಣಿಕೇರಿತಾಂಡಾ ತಮ್ಮ ಸಂಬಂಧಿಕರಾದ ರವಿ ನಾಯ್ಕ. ಸಾ:ಬಸರಕೋಡ
ತಾಂಡಾ ಇವರ ಮದುವೆಯ ಇದ್ದುದರಿಂದ ಅವರ ಸಂಗಡ ಮದುವೆ ಕಾರ್ಡ ಕೊಟ್ಟು ಬರಲು ಅಂತಾ ಸಂಜೆ ಕಲಿಕೇರಿ
ತಾಂಡಾಕ್ಕೆ ಹೋಗಿ ಅಲ್ಲಿಂದ ವಾಪಾಸ್ ಊರಿಗೆ ಬರಲು ಅಂತಾ ಇಂದು ದಿ:04-07-16 ರಂದು ಸಂಜೆ 6-00 ಗಂಟೆಗೆ ಕೊಪ್ಪಳ-ಕಿನ್ನಾಳ ರಸ್ತೆಯ ಚಿಲವಾಡಗಿ ದಾಟಿ ಪಂಪ ಹೌಸ್ ಹತ್ತಿರ ರವಿ ಇತನು ತನ್ನ
ಮೋಟಾರ ಸೈಕಲ್ ನಂ: ಕೆಎ-35/ಇಬಿ-6925 ನೇದ್ದರ ಹಿಂದೆ
ಫಿರ್ಯಾಧಿದಾರರಿಗೆ ಕೂಡ್ರಿಸಿಕೊಂಡು ಬರುತ್ತಿರುವಾಗ ಅದೇವೇಳೆಗೆ ಎದುರು ಕೊಪ್ಪಳ ಕಡೆಯಿಂದ ಮೋಟಾರ
ಸೈಕಲ್ ನಂ: ಕೆಎ-37/ಎಕ್ಸ-8918 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ
ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು
ರಾಂಗಸೈಡ ಬಂದವನೇ ಫಿರ್ಯಾದಿದಾರರ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು
ಇರುತ್ತದೆ. ಈ ಅಪಘಾತದಲ್ಲಿ ಅಪಘಾತ ಮಾಡಿದ ಮೋಟಾರ ಸೈಕಲ್ ಸವಾರ ಶರಣಪ್ಪ ಹರಿಜನ. ಸಾ: ನೆಲಜೇರಿ.
ಹಾಗೂ ಸದರಿ ಮೋಟಾರ ಸೈಕಲ್ ಹಿಂದೆ ಕುಳಿತು ಬಂದಿದ್ದ ಮೈಲಾರಿ ಎಂಬುವವರಿಗೆ ಭಾರಿಗಾಯಗಳಾಗಿದ್ದು
ಇರುತ್ತದೆ. ರವಿ ನಾಯ್ಕ ಇತನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ
ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment