1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ:
72/2016 ಕಲಂ: 87 Karnataka Police Act.
ದಿನಾಂಕ: 03-07-2016 ರಂದು 6-30 ಪಿಎಂಕ್ಕೆ ಪಿ.ಎಸ್.ಐ. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 4 ಜನ ಆರೋಪಿತರನ್ನು ಹಾಜರಪಡಿಸಿ ವರದಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಜೂಜಾಟದ ಮಾಹಿತಿ ಬಂದ ಪ್ರಕಾರ ತಾವು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ
4-50 ಪಿಎಂಕ್ಕೆ ಮಸಬಹಂಚಿನಾಳ ಗ್ರಾಮದ ಕಲ್ಲಿನಾಥೇಶ್ವರ ಗುಡಿಯ ಮುಂದೆ
ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಇನ್ನಿಬ್ಬರು ಓಡಿಹೋಗಿದ್ದು,
ಸಿಕ್ಕಿಬಿದ್ದವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಸಣ್ಣ ತಾಡಪತ್ರಿ, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 2,100/- ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ನೀಡಿದ ದೂರಿನ
ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ:
186/2016 ಕಲಂ: 87 Karnataka Police Act.
ದಿನಾಂಕ 03-07-2016
ರಂದು ಸಂಜೆ 7-00 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಒಂದು
ವರದಿ ಮತ್ತು ಪಂಚನಾಮೆಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ಕುಷ್ಟಗಿ ಕೆ.ಇ.ಬಿ.ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ
ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಮತ್ತು ಸಿಬ್ಬಂದಿಯವರು
ಸರಕಾರಿ ಜೀಪ ನಂ: ಕೆ.ಎ-37-ಜಿ-292 ನೇದ್ದರಲ್ಲಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್
ಮಾಡಿ 08
ಜನ ಆರೋಪಿತರು ಸಿಕ್ಕಿದ್ದು ಇರುತ್ತದೆ. ಸಿಕ್ಕ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 13,680=00
ರೂ, ಹಾಗೂ 52
ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆಯ ನ್ಯೂಸ್ ಪೇಪರ್
ಮತ್ತು 10 ಮೊಬೈಲ್ ಇವುಗಳನ್ನು ಪಂಚನಾಮೆ ಕಾಲಕ್ಕೆ
ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 144/2016
ಕಲಂ: 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:03-07-2016 ರಂದು ರಾತ್ರಿ 7-30
ಗಂಟೆಗೆ ಹೊಸಪೇಟೆಯಲ್ಲಿ ಗಾಯಾಳು ಎನ್. ಈಶ್ವರ ಸಾ: ಟಿ.ಬಿ.
ಡ್ಯಾಂ ಹೊಸಪೇಟೆ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೇ, ಫಿರ್ಯಾದಿದಾರರು ತನ್ನ ಸಂಗಡ ಮಲ್ಲೇಶ ಸಾ: ಹೊಸಪೇಟೆ ಇಬ್ಬರೂ
ಕೂಡಿ ಅಶೋಕ ಲೈಲ್ಯಾಂಡ್ ಮಿನಿ ಲಾರಿ ನಂ: ಕೆಎ-35/ಎ-3925 ನೇದ್ದರಲ್ಲಿ ಆಳಂದ ದಿಂದಾ ಹಂದಿಗಳನ್ನು ಲೋಡ ಮಾಡಿಕೊಂಡು
ಟಿ.ಬಿ ಡ್ಯಾಂ ಗೆ ಅಂತಾ ಬರುವಾಗ ಕುಷ್ಟಗಿ-ಹೊಸಪೇಟೆ ಎನ್.ಹೆಚ್-50 ರಸ್ತೆಯ
ಮೆತಗಲ್ ಕ್ರಾಸ್ ಹತ್ತಿರ ಇಂದು ದಿ:03-07-16
ರಂದು ಬೆಳಗಿನಜಾವ 03-30 ಗಂಟೆಯ
ಸುಮಾರಿಗೆ ತಮ್ಮ ವಾಹನದ ಚಾಲಕ ರವಿ ತಂದೆ ಗುರುರಾಜ ಸಾ: ಹೊಸಪೇಟೆ ಇತನು ತನ್ನ ವಾಹನವನ್ನು
ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಅಡ್ಡಾದಿಡ್ಡಿಯಾಗಿ ಮುಂದೆ ಹೊರಟಿದ್ದ ವಾಹನಗಳ ನಿಗದಿತ
ಅಂತರ ಕಾಪಾಡದೇ ಹೋಗಿ ಯಾವುದೋ ಒಂದು ವಾಹನಕ್ಕೆ ಹಿಂದಿನಿಂದ ಹಾಯಿಸಿ ಅಪಘಾತ ಮಾಡಿದ್ದರಿಂದ ಸದರಿ
ವಾಹನದ ಕ್ಯಾಬಿನ್ ಜಖಂ ಆಗಿ [ಫಿರ್ಯಾದಿ] ತನಗೆ ಮತ್ತು ಮಲ್ಲೇಶನಿಗೆ ಸಾದಾ ಪೆಟ್ಟುಗಳಾಗಿದ್ದು
ಅಲ್ಲದೇ ಚಾಲಕ ರವಿ ಇತನಿಗೆ ಹೊಟ್ಟೆಗೆ ಮತ್ತು ಎಡಗೈಗೆ ಭಾರಿ ಒಳಪೆಟ್ಟಾಗಿರುತ್ತವೆ. ಅಂತಾ
ಮುಂತಾಗಿ ತಡವಾಗಿ ಸಲ್ಲಿಸಿದ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿ
ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment