1] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ:
134/2016 ಕಲಂ: 78(3) Karnataka Police Act.
ದಿನಾಂಕ 05-07-2016 ರಂದು ಸಂಜೆ 7-00 ಗಂಟೆಯ ಸುಮಾರಿಗೆ ಪೆಟ್ರೋಲಿಂಗ್
ಹಾಗೂ ಗ್ರಾಮ ಬೇಟಿ ಮಾಡುವ ಸಮಯದಲ್ಲಿ ವಡಕಿ ಗ್ರಾಮದ ಅಗಸಿ ಮುಂದೆ ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ
ಸ್ಥಳದಲ್ಲಿ ಓ.ಸಿ.ಮಟಕಾ ನಡೆದಿದೆ ಅಂತಾ ಭಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ
ಇಂದು ದಿನಾಂಕ 05-07-2016 ರಂದು ಸಂಜೆ 7-30 ಗಂಟೆಗೆ ಅಗಸಿ ಮುಂದೆ ಇರುವ ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಹೋಗಿ ನೋಡಲಾಗಿ, ಸಾರ್ವಜನಿಕ ಸ್ಥಳದಲ್ಲಿ
ಕಾಲಂ ನಂ.9 ರಲ್ಲಿ ನಮೂದಿಸಿದ ಆರೋಪಿ ನಂ.1 ಈತನು ಸಾರ್ವಜನಿಕರನ್ನು ಬರ ಮಾಡಿಕೊಂಡು ಅವರಿಗೆ 1 ರೂಪಾಯಿಗೆ
80 ರೂಪಾಯಿ ಬರುತ್ತದೇ ಬನ್ನೀ ನಸೀಬ ಜೂಜಾಟದ ಅಂತಾ ಕೂಗುತ್ತಾ ಸಾರ್ವಜನಿಕರನ್ನು ಬರ ಮಾಡಿಕೊಂಡು ಅವರಿಂದ
ಹಣ ಪಡೆದು ಅವರಿಗೆ ಓ.ಸಿ. ನಂಬರಗಳನ್ನು ಬರೆದು ಕೊಡುತ್ತಿದ್ದಾಗ ಪಂಚರೊಂದಿಗೆ ದಾಳಿ ಮಾಡಲು ಆರೋಪಿತನಿಂದ
01 ಮಟಕಾ ಬರೆದ ಪಟ್ಟಿ, 1 ಬಾಲ್ ಪೆನ್ನು ನಗದು ಹಣ ರೂ. 230=00 ಸಿಕ್ಕಿದ್ದು, ಮಟಕಾ ಸಾಮಾಗ್ರಿಗಳನ್ನು
ಮತ್ತು ನಗದು ಹಣವನ್ನು ಪಂಚರ ಸಮಕ್ಷಮ ಜಪ್ತ ಮಾಡಿದ್ದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ:
139/2016 ಕಲಂ: 341, 323, 355, 504, 506 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ.
ಕಾಯ್ದೆ:.
ಫಿರ್ಯಾದಿದಾರರಾದ ಶ್ರೀ ವಿರೇಶ ತಂದಿ ಅಂಜನಪ್ಪ ನಾಯಕ ವಯಾ- 29ವರ್ಷ ಕಿಂದಿಕ್ಯಾಂಪಿನ ಅಮ್ಮಿರಾಜು ಕಮ್ಮಾ ಇತನ ಕಡೆಯಿಂದ ನಾನು
ಸಾಲದ ರೂಪದಲ್ಲಿ 20,000=00 ರೂ.ಗಳನ್ನು ಈ ಹಿಂದೆ 3 ವರ್ಷಗಳ ಹಿಂದೆ ಪಡೆದುಕೊಂಡು ನಾನು ಅವರ ಮನೆಯಲ್ಲಿ
ಸಂಭಳದಾಳಾಗಿ ಟ್ರ್ಯಾಕ್ಟರ ಚಾಲಕನಾಗಿ ಹಾಗೂ ಕೂಲಿ ಕೆಲಸ ಮಾಡಿಕೊಂಡಿಕೊಂಡು ನಾನು ಅವರ
ಹತ್ತಿರ ದುಡಿದು ನಾನು ಅವರ ಹಣದ ಪೈಕಿ 18,000=00 ರೂ.ಗಳನ್ನು ಮುಟ್ಟಿಸಿರುತ್ತೇನೆ.
ಈಗ ನಾನು ಅವರ ಹತ್ತಿರ ಉಳಿದ 2,000=00 ರೂ.ಗಳನ್ನು ಕೊಡುವದು ಭಾಕಿ ಇದ್ದು ಇನ್ನೂ
ಉಳಿದ 2,000=00 ರೂ. ಬಾಕಿ ಹಣವನ್ನು ಕಟ್ಟುವ ಸಲುವಾಗಿ ಸ್ವಲ್ಪ ದಿನಗಳ ಕಾಲಾವಕಾಶ ಕೆಳಿಕೊಂಡಿದ್ದೇನು.
ಆದರೆ ಇಂದು ದಿನಾಂಕ 05-07-2016 ರಂದು ಸುಮಾರು ಸಾಯಂಕಾಲ 7-30 ರ ಸಮಯಕ್ಕೆ
ನಾನು ಮತ್ತು ನಮ್ಮ ಸಂಭಂದಿಕ ಶರಣಪ್ಪ ನಮ್ಮ ಮನೆಯ ಹತ್ತಿರ ಬಂದು ಮಾತನಾಡುತ್ತಾ ನಿಂತುಕೊಂಡಿದ್ದಾಗ,
ಅದೇ ಸಮಯಕ್ಕೆ ಅಮ್ಮಿರಾಜು ಸಾ- ಕಿಂದಿಕ್ಯಾಂಪ್ ಈತನು ಬಂದು ಏನಲೇ ವೀರ ಸೂಳೇಮಗನೆ ನೀನು ನನಗೆ
ಕೊಡಬೇಕಾದ 2000=00 ಹಣ ಯಾವಾಗ ಕೊಡುತ್ತಿಯಲೆ ಬ್ಯಾಡ ಸೂಳೇಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು
ಆಗ ನಾನು ಈಗಾಗಲೇ ಸ್ವಲ್ಪದಿನಗಳವರೆಗೆ ಕಾಲಾವಕಾಶ ತೆಗೆದುಕೊಂಡಿದ್ದು ಈಗ ಕೂಡಲೇ ಬಂದು ನನ್ನನ್ನು
ಹಣ ಕೆಳಿದರೆ ಎಲ್ಲಿಂದ ತರೆಲೆಂದು ಅಂದಿದ್ದಕ್ಕೆ ಹಮ್ಮಿರಾಜ ಈತನು ನನಗೆ ಎದರಾಡುವ ಮಟ್ಟಿಗೆ
ಬಂದಿಯನಲೇ ಅಂತಾ ಅಂದು ತನ್ನ ಪಾದರಕ್ಷೆಗಳಿಂದ ಒಡೆದು ವಸ್ತ್ರಗಳನ್ನು
ಎಳೆದಾಡಿ ನನ್ನ ಎಡ ತೋಳಿನ ಹತ್ತಿರ ಹೊಡೆದು ನನ್ನನ್ನು ನಿಂದಿಸಿ ಹೊಡೆಯುತ್ತಿರುವಾಗ್ಗೆ ಅಳುವದು
ಮತ್ತು ಚೀರಾಡುವದು ಮಾಡುತ್ತಿರುವಾಗ್ಗೆ ಅಲ್ಲೆ ಪಕ್ಕದಲ್ಲಿದ್ದ ಶರಣಪ್ಪ ಹಾಗೂ ನನ್ನ ಹೆಂಡತಿ
ಬಂದರು ಆತನು ಅಷ್ಟಕ್ಕೆ ಸುಮ್ಮನಾಗದೆ ನನ್ನ ಮೈಮೇಲಿನ ವಸ್ತ್ರವನ್ನು ಹರಿದು
ನೀನು ನನಗೆ ಕೊಡಬೇಕಾದ 2000=00 ರೂ.ಗಳನ್ನು ಕೊಡದಿದ್ದರೆ ಈ ಊರಲ್ಲಿ ನೀನು
ಹೇಗೆ ಬಾಳೂವೆ ಮಾಡುತ್ತಿಯಾ ಅಂತಾ ಜೀವ ಬೇದರಿಕೆ ಹಾಕಿದ. ಗುನ್ನೆ ದಾಖಲು
ಮಾಡಿಕೊಂಡು ತನಿಖೆಯ ಕೈಗೊಂಡಿದ್ದು ಇರುತ್ತದೆ.
0 comments:
Post a Comment