1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 149/2016 ಕಲಂ: 279, 304(ಎ) ಐ.ಪಿ.ಸಿ:
ದಿ:08-07-2016
ರಂದು ರಾತ್ರಿ 8-30 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಸರೋಜಾ ಗಂಡ ಬಸವರಾಜ ಗವಾರಿ. ಸಾ:ಜಂತ್ಲಿ ಶಿರೂರ. ಹಾವ:ಎನ್.ಜಿ.ಓ ಕಾಲೋನಿ ಕೊಪ್ಪಳ ಇವರು
ಫಿರ್ಯಾದಿಯನ್ನು ನೀಡಿದ್ದು ದಿ:08-07-16 ರಂದು ಮದ್ಯಾಹ್ನ 2-15 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ಗಂಡ ಬಸವರಾಜ ಗವಾರಿ ಎಪಿಸಿ ಇವರು ಸರ್ಕಾರಿ ಕರ್ತವ್ಯದ
ಟಪಾಲ್ ಕರ್ತವ್ಯದ ಮೇಲೆ ಕುಕನೂರಿಗೆ ಹೋಗಿ ವಾಪಾಸ್ ತಮ್ಮ ಮೋಟಾರ ಸೈಕಲ್ ನಂ: ಕೆಎ-37/ಎಸ್-844 ನೇದ್ದನ್ನು ಓಡಿಸಿಕೊಂಡು ಮಾರ್ಗದ ಕೊಪ್ಪಳ-ಗದಗ ಎನ್.ಹೆಚ್-63 ರಸ್ತೆಯ ಹಲಿಗೇರಿ ದಾಟಿ ಕೊಪ್ಪಳ ಕಡೆಗೆ ಬರುವಾಗ ಎದುರುಗಡೆ ಕೊಪ್ಪಳ
ಕಡೆಯಿಂದ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ
ಓಡಿಸಿಕೊಂಡು ಬಂದು ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ತನ್ನ ವಾಹನವನ್ನು ನಿಲ್ಲಿಸದೇ
ಹೋಗಿದ್ದರಿಂದ ಮೋಟಾರ ಸೈಕಲ್ ಸವಾರ ಬಸವರಾಜ ತಂದೆ ವೀರಪ್ಪ ಗವಾರಿ. ವಯ;48 ವರ್ಷ, ಜಾ: ಕುರುಬರ, ಉ:ಎಪಿಸಿ-226 ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ ಪಡೆ, ಕೊಪ್ಪಳ ಸಾ: ಜಂತ್ಲಿ ಶಿರೂರ ಹಾವ: ಎನ್.ಜಿ.ಓ ಕಾಲೋನಿ ಕೊಪ್ಪಳ
ಇವರಿಗೆ ಅಪಘಾತದಲ್ಲಿ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ.
ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 150/2016 ಕಲಂ: 279, 338 ಐ.ಪಿ.ಸಿ:
ದಿ: 08.07.2016 ರಂದು ರಾತ್ರಿ 9-30
ಗಂಟೆಗೆ ಫಿರ್ಯಾದಿದಾರರಾದ ಶ್ರೀ ದೇವಪ್ಪ ತಂದೆ ಮಲ್ಲಪ್ಪ ಕುಂಬಾರ ಸಾ:
ಕಾಮನೂರ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ,
ನಿನ್ನೆ ದಿ: 07.07.-16 ರಂದು ಫಿರ್ಯಾದಿ ತಂದೆ ಮಲ್ಲಪ್ಪ ಕುಂಬಾರ ಇವರು ವೈಯಕ್ತಿಕ ಕೆಲಸದ ನಿಮಿತ್ಯ ಕೊಪ್ಪಳಕ್ಕೆ
ಬಂದು ಮರಳಿ ಊರಿಗೆಂದು ಅಪೇ ಅಟೋ ನಂ-ಕೆ.ಎ-37-9185 ನೇದ್ದರಲ್ಲಿ ಕುಳಿತುಕೊಂಡು ಕೊಪ್ಪಳದಿಂದ ಕಾಮನೂರಿಗೆಂದು ಹೋಗುತ್ತಿರುವಾಗ ಅಟೋ ಚಾಲಕ
ಮಲ್ಲೇಶ ತಂದೆ ಬಾಳಪ್ಪ ಬನ್ನಿಕಟ್ಟೆ ಸಾ: ಕಿನ್ನಾಳ ತನು ಅಟೋವನ್ನು ಕೊಪ್ಪಳ-ಕುಷ್ಟಗಿ
ರಸ್ತೆಯಲ್ಲಿ ಟನಕನಕಲ್ಲ ಹತ್ತಿರ ಅತೀ ಜೋರಾಗಿ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ
ರೀತಿಯಲ್ಲಿ ನಡೆಸುತ್ತಾ ಒಮ್ಮಿಂದೊಮ್ಮೆಲೇ ಬ್ರೇಕ್ ಹಾಕಿದ್ದರಿಂದ ಅಟೋದಲ್ಲಿ ಕುಳಿತಿದ್ದ
ಮಲ್ಲಪ್ಪ ಕುಂಬಾರ ಈತನು ಪುಟಿದು ನೆಲಕ್ಕೆ ಬಿದ್ದಿದ್ದು ಈ ಅಪಘಾತದಲ್ಲಿ ಮಲ್ಲಪ್ಪ ಕುಂಬಾರ ಇವರ ಮೂಗಿನ ಮೇಲೆ, ಹಣೆಗೆ, ಎಡಗಣ್ಣಿನ ಹತ್ತಿರ ರಕ್ತಗಾಯ
ಹಾಗೂ ಎರಡೂ ಮೊಣ ಕಾಲಿಗೂ ತೆರಚಿದ ರಕ್ತಗಾಯಗಳಾಗಿರುತ್ತವೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ:
143/2016 ಕಲಂ: 143, 147, 341, 323, 324, 504, 506 ಐ.ಪಿ.ಸಿ ಸಹಿತ 3(1)(10) ಎಸ.ಸಿ./ಎಸ್.ಟಿ.
ಕಾಯ್ದೆ:
ದಿನಾಂಕ:08-07-2016
ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಮಂಜುನಾಥ ತಂದಿ ಗದ್ದೆಪ್ಪ ಚಾಮಲಾಪೂರ ವಯಾ-26 ವರ್ಷ ಜಾ-ನಾಯಕ ಸಾ-ಜೆ.ಪಿ. ನಗರ ಕಾರಟಗಿ ತಾ- ಗಂಗಾವತಿ ಇವರು ಫಿರ್ಯಾದಿಯನ್ನು ಕೊಟ್ಟಿದ್ದು ದಿನಾಂಕ :
8-7-2016 ರಂದು ಬೆಳಗ್ಗೆ 11-00 ಗಂಟೆಯ ಸುಮಾರಿಗೆ ಜೆ.ಪಿ. ನಗರದಲ್ಲಿ ಮಿಸ್ಬಾ ಎಂಬ ಹುಡಗಿಗೆ ಅಪಘಾತ ಮಾಡಿದ ವಿಷಯದಲ್ಲಿ ಬಾಯಿ ಮಾಡುತ್ತಿರುವಾಗ್ಗೆ ನಾನು ಮತ್ತು ರಾಜೂ ಹೂಗಾರ ಹೊಗಿ ವಿಚಾರಿಸುತ್ತಿರುವಾಗ್ಗೆ ಮುಸ್ಲಿಂ ಜನಾಂಗದ ಅಮೃಲ್ ತಂದಿ ವಲಿಸಾಬ ಇವರು ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದಾಡಿ ಕಟ್ಟಿಗೆಯಿಂದ ಎದೆಗೆ ಬಡಿದಿದ್ದು ನೂರಸಾಬ ತಂದಿ ವಲಿಸಾಬ ಇವರು ನನಗೆ ಬೆನ್ನಿಗೆ ಕೈಗೆ ಬುಜಕ್ಕೆ ಕೈಯಿಂದ ಹೊಡೆದಿದ್ದು,ವಲಿಸಾಬ ತಂದಿ ಬುಡನಸಾಬ ಇವರು ನನ್ನ ಕಾಲಿಗೆ ಹೊಡೆದಿದ್ದಲ್ಲದೆ ನಾಯಕ ಲಂಗಾ ಸೂಳೇಮಕ್ಕಳು ಅಂತಾ ಅವಾಚ್ಯ ಶಬ್ದಗಳಿಂದ ಬೈದು ಅಸ್ಲಾಮ ತಂದಿ ಮೀರಸಾಬ ಇವರು ನನ್ನ ಎದೆಗೆ ಕೈಯಿಂದ ಗುದ್ದಿದ್ದು ಮತ್ತು ಗೌಸ್ ಇವರು ನಿನ್ನನ್ನು ಜೀವಂತ ಬಿಡುವದಿಲ್ಲ ವೆಂದು ಜೀವ ಬೇದರಿಕೆ ಹಾಕಿದ್ದು, ರಿಯಾಜ್ ಅವರು ನಿನ್ನನ್ನು ಊರಲ್ಲಿ ಇರುವದಕ್ಕೆ ಬಿಡುವದಿಲ್ಲವೆಂದು ಜೀವ ಬೇದರಿಕೆ ಹಾಕಿದ್ದಾರೆ, ಅಸ್ಲಾಮ್ ತಂದೆ ಮೀರಸಾಬ ಇವರು ನನಗೆ ಎದೆಗೆ ಹೊಡೆದಿದಾರೆ.ಜಿಲಾನಸಾಬ ತಂದಿ ಖಾದರಸಾಬ ಮತ್ತು ಮಹ್ಮಹುಸೇನಲಿ ಬೇಪಾರಿ ತಂದಿ ಮಹ್ಮದ ಅಲಿ ಇವರೆಲ್ಲರೂ ಸೇರಿಕೊಂಡು ಅಕ್ರಮ ಕೂಟ ರಚಿಸಿಕೊಂಡು ಸಮಾನ ಉದ್ದೇಶದಿಂದ ಬೆಳಗ್ಗೆ 11-00 ಗಂಟೆಯ ಸುಮಾರಿಗೆ ಅಪಘಾತದ ನೆಪ ಮಾಡಿಕೊಂಡು ಬಂದು ನಮಗೆ ತಡೆದು ನಿಲ್ಲಿಸಿ ನಾಯಕ ಸೂಳೇಮಕ್ಕಳೆ ಎಂದು ಜಾತಿ ನಿಂಧನೆ ಮಾಡಿ ಜೀವ ಭಯ ಹಾಕುತ್ತಿರುವಾಗ್ಗೆ ಅಲ್ಲಿಯೇ ಇದ್ದ ವಿನಯ ತಂದಿ ರುದ್ರಪ್ಪ ಹಂಚಿನಾಳ 2) ವೆಂಕೋಬ ತಂದಿ ದುರಗಪ್ಪ ಇವರು ಇದ್ದು ಇವರು ನೋಡಿ ಜಗಳಾ ಬಿಡಿಸಿರುತ್ತಾರೆ. ಅವರು ಅಷ್ಟಕ್ಕೆ ಸುಮ್ಮನೆ ಬಿಡದೆ ಈ ನಾಯಕ ಸೂಳೇಮಕ್ಕಳನ್ನು ಸುಮ್ಮನೆ ಬಿಡುವದಿಲ್ಲವೆಂದು ಜೀವ ಭಯ ಹಾಕಿರುತ್ತಾರೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment