1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ:
74/2016 ಕಲಂ: 87 Karnataka Police Act.
ಇಂದು ಜೂಜಾಟದ
ಮಾಹಿತಿ ಬಂದ ಪ್ರಕಾರ ಪಿ.ಎಸ್.ಐ. ಕುಕನೂರ ರವರು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 4-50
ಪಿಎಂಕ್ಕೆ ಶಿರೂರು ಗ್ರಾಮದ ಹನುಮಂತ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದವರ
ಮೇಲೆ ದಾಳಿ ಮಾಡಿ, 9 ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಐದು ಜನರು ಓಡಿಹೋಗಿದ್ದು, ಸಿಕ್ಕಿಬಿದ್ದವರಿಂದ
ಹಾಗೂ ಜೂಜಾಟದ ಕಣದಿಂದ ಒಂದು ಪ್ಲಾಸ್ಟಿಕ್ ಬರಕಾ, 52 ಇಸ್ಪೀಟ್
ಎಲೆಗಳು ಹಾಗೂ ಜೂಜಾಟದ ನಗದು ಹಣ 7,500/- ರೂ. ಮತ್ತು ಮೂರು
ಮೋಟಾರ್ ಸೈಕಲ್ ಹಾಗೂ ನಾಲ್ಕು ಮೊಬೈಲ್ ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ
ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 137/2016 ಕಲಂ: 143, 147, 148,
323, 324, 354, 504, 506 ಸಹಿತ 149 ಐ.ಪಿ.ಸಿ:
ದಿನಾಂಕ 09-07-2016 ರಂದು ಶ್ರೀ ಯಮನೂರ ತಂದೆ ಹನುಮಂತಪ್ಪ,
ವಯಸ್ಸು 26 ವರ್ಷ, ಸಾ: 15ನೇ ವಾರ್ಡ, ಇಂದಿರಾನಗರ, ಗಂಗಾವತಿ ರವರು ಫಿರ್ಯಾದಿ ನೀಡಿದ್ದು ಬೆಳಿಗ್ಗೆ ತಮ್ಮ ಮನೆಯ ಮುಂದೆ
ಓಡಾಡಬಾರದೆಂದು ಯಮನೂರ ಇವನು ನನ್ನ ತಮ್ಮನೊಂದಿಗೆ ಬಾಯಿ ಮಾತಿನ ಜಗಳಾ ಮಾಡಿಕೊಂಡಿದ್ದು, ನಂತರ
ಇದೇ ವಿಷಯವಾಗಿ ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನಾನು ಅವರ ಮನೆಯ ಹತ್ತಿರ ಹಾಯ್ದು ಕೆಲಸಕ್ಕೆಂದು
ಹೋಗುವಾಗ ಅಲ್ಲಿದ್ದ ಯಮನೂರ, ದೊಡ್ಡರಾಜಪ್ಪ ಹಾಗೂ ಸಣ್ಣರಾಜಪ್ಪ ಎಲ್ಲರೂ ಸೇರಿ “ಲೇ ಸೂಳೇಮಗನೇ ನಿಮ್ಮ
ತಮ್ಮ ಅಲ್ಲದ ನೀನು ಬರುತ್ತೀಯೇನಲೇ, ನಮ್ ಮನೀ ಮುಂದ ಬರಬ್ಯಾಡ ಹೋಗಲೇ” ಅಂತಾ ಅಂದರು. ಅದಕ್ಕೆ
ನಾನು ದಾರಿಯಲ್ಲಿ ಹೊರಟಿನಿ ಅಂತಾ ಅಂದಾಗ ಯಮನೂರನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನನಗೆ ಎಡಗಾಲಿಗೆ
ಹೊಡೆದಿದ್ದು, ದೊಡ್ಡರಾಜಪ್ಪ “ಹಾಕ್ ಸೂಳೇಮಗ್ಗ ಬಿಡಬ್ಯಾಡ” ಅಂತಾ ಅನ್ನುತ್ತಾ ತನ್ನ ಕೈಯಲ್ಲಿದ್ದ
ಇಟ್ಟಂಗಿಯಿಂದ ಹೊಟ್ಟೆಗೆ ಹೊಡೆದನು. ಸಣ್ಣರಾಜಪ್ಪನು “ಇವರೌವನ್ ಬಿಡಬ್ಯಾಡ ಹಾಕ್ರಿ”
ಅಂತಾ ಅನ್ನುತ್ತಾ ಕೈಯಿಂದ ನನ್ನ ಎದೆಗೆ ಹೊಡೆದನು. ಆಗ ನನ್ನ ತಾಯಿ ಶ್ಯಾಮವ್ವ,
ನಮ್ಮಕ್ಕ ದೊಡ್ಡಹುಲಿಗೆಮ್ಮ ಹಾಗೂ ನನ್ನ ತಂಗಿ ಸಣ್ಣಹುಲಿಗೆಮ್ಮ ಇವರು ಬಿಡಿಸಿಕೊಳ್ಳಲು ಬಂದಿದ್ದು,
ಲಕ್ಷ್ಮವ್ವ ಗಂಡ ದೊಡ್ಡರಾಜಪ್ಪ, ದುರುಗವ್ವ ಗಂಡ ಸಣ್ಣರಾಜಪ್ಪ ಹಾಗೂ ಅವರ ಮಕ್ಕಳಾದ ಹನುಮವ್ವ, ದುರುಗಮ್ಮ
ಮತ್ತು ಯಮನೂರಿ ಗಂಡ ಬಾಷಾ ಇವರೆಲ್ಲರೂ ಯಾಕ್ರಲೇ ಭೋಸುಡಿ ಸೂಳೇರ ಅಂತಾ ಅವಾಚ್ಯವಾಗಿ ಬೈದು ಕೈಯಿಂದ
ಹೊಡೆಬಡೆ ಮಾಡಿದ್ದು, ಸಣ್ಣರಾಜಪ್ಪ ಇವನು ನಮ್ಮ ತಾಯಿ, ಅಕ್ಕ-ತಂಗಿಯರನ್ನು ಹಿಡಿದು ದೂಕಿರುತ್ತಾನೆ.
ಅಲ್ಲದೇ ಎಲ್ಲರೂ ಸೇರಿ “ಲೇ ನಿಮ್ಮೌರ್ ತಾಯಿ ಮಕ್ಕಳನ್ ಜೀವಂತ ಉಳಸಂಗಿಲ್ಲ ಹುಷಾರ್ ಇರ್ರಿ” ಅಂತಾ
ಜೀವದ ಬೆದರಿಕೆ ಹಾಕಿದರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment