ದಿನಾಂಕ: 13-08-2016 ರಂದು ಮಧ್ಯಾಹ್ನ ಗಂಗಾವತಿ
ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಆಗೋಲಿ ಗ್ರಾಮದ ಹಳ್ಳದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ
ಅಂದಾರ ಬಹಾರ ಎಂಬ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಮೇರೆಗೆ ಶ್ರೀ
ಪ್ರಕಾಶ ಮಾಳಿ, ಪಿ.ಎಸ್.ಐ. ಮತ್ತು ಸಿಬ್ಬಂದಿಯವರಾದ 429, 363, 120, 323, 335, 180 ಹೆಚ್.ಸಿ. 68 ಜೀಪ ಚಾಲಕ ಎ.ಪಿ.ಸಿ. 77 ಕನಕಪ್ಪ ರವರು ಮತ್ತು ಇಬ್ಬರು
ಪಂಚರನ್ನು ಬರಮಾಡಿಕೊಂಡು ಆಗೋಲಿ ಗ್ರಾಮದ ಊರ ಮುಂದೆ ವಾಹನಗಳನ್ನು ನಿಲ್ಲಿಸಿ ಎಲ್ಲರೂ
ನಡೆದುಕೊಂಡು ಹೋಗಿ ನಮಗೆ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲು ಆಗೋಲಿ
ಗ್ರಾಮದ ಹಳ್ಳದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ
ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್
ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಆಗ ಸಮಯ ಮಧ್ಯಾಹ್ನ 3:00 ಗಂಟೆಯಾಗಿತ್ತು. ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 8 ಜನರು ಸಿಕ್ಕಿಬಿದ್ದಿದ್ದು. ಸಿಕ್ಕವರ ಹೆಸರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು
(1) ಕನಕಪ್ಪ ತಂದೆ ಶರಣಪ್ಪ ಕಟಿಗಿಹಳ್ಳಿ, ವಯಸ್ಸು 23 ವರ್ಷ, ಜಾತಿ: ನಾಯಕ, ಉ: ಪಾನ್ ಶಾಪ್ ಸಾ: ಆಗೋಲಿ (2) ಶಿವಪ್ಪ ತಂದೆ ಹೊನ್ನೂರಪ್ಪ
ಉಪ್ಪಾರಹಳ್ಳಿ, ವಯಸ್ಸು 22 ವರ್ಷ, ಜಾತಿ: ನಾಯಕ ಉ: ಆಟೋ ಚಾಲಕ ಸಾ: ಆಗೋಲಿ (3) ನಿಂಗಪ್ಪ ತಂದೆ ಬಸಪ್ಪ
ಕರಡೋಣಿ, ವಯಸ್ಸು 30 ವರ್ಷ, ಜಾತಿ: ನಾಯಕ ಉ: ಕೂಲಿ ಕೆಲಸ ಸಾ: ಆಗೋಲಿ (4) ಅಂಬರೇಶ ತಂದೆ ಗಿಡ್ಡಪ್ಪ
ಹಂಪಾಸದುರ್ಗ, ವಯಸ್ಸು 25 ವರ್ಷ, ಜಾತಿ: ನಾಯಕ ಉ: ಕೂಲಿ ಕೆಲಸ ಸಾ: ಆಗೋಲಿ (5) ಶರಣಪ್ಪ ತಂದೆ ಹನುಮಂತಪ್ಪ
ಹಂಪಾಸದುರ್ಗ, ವಯಸ್ಸು 55 ವರ್ಷ, ಜಾತಿ: ನಾಯಕ ಉ: ಕಾರ್ಪೆಂಟರ್ ಸಾ: ಆಗೋಲಿ (6) ರಮೇಶ ತಂದೆ ಹನುಮಂತ
ಹಂಪಾಸದುರ್ಗ, ವಯಸ್ಸು 28 ವರ್ಷ ಜಾತಿ: ನಾಯಕ ಉ: ಕೂಲಿ ಕೆಲಸ ಸಾ: ಆಗೋಲಿ (7) ವೀರೇಶ ತಂದೆ ಬಸಪ್ಪ ಕರಡೋಣಿ, ವಯಸ್ಸು 25 ವರ್ಷ, ಜಾತಿ: ನಾಯಕ ಉ: ಕೂಲಿ ಕೆಲಸ ಸಾ: ಆಗೋಲಿ (8) ಇಂದ್ರೇಶ ತಂದೆ ಪಂಪಣ್ಣ
ಕಜ್ಜೇರ, ವಯಸ್ಸು 35 ವರ್ಷ, ಜಾತಿ: ಕುರುಬರು ಉ: ಕುರಿ ಕಾಯುವುದು ಸಾ: ಆಗೋಲಿ ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ
ಸ್ಥಳದಿಂದ ಜೂಜಾಟದ ನಗದು ಹಣ ರೂ. 1,290/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ
ಒಂದು ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು, ಈ ಬಗ್ಗೆ ಪ್ರಕರಣ ದಾಖಲು
ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಯಲಬರ್ಗಾ ಪೊಲೀಸ್ ಠಾಣೆ ಗುನ್ನೆ
ನಂ: 84/2016 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ: 11-08-2016 ರಂದು ಸಂಜೆ 4 ಗಂಟೆಯ ಸುಮಾರಿಗೆ ಪಿರ್ಯಾದಿದಾರ ಮತ್ತು ಆರೋಪಿತ ಇಬ್ಬರೂ ಕೂಡಿ ಮೋಟಾರ
ಸೈಕಲ ನಂ: ಕೆ.ಎ-28/ಈ.ಎ-1904 ನೇದ್ದರ ಮೇಲೆ ಚಿಕ್ಕಮ್ಯಾಗೇರಿ ಸೀಮಾದಲ್ಲಿಯ ತೋಟಕ್ಕೆ ಹೋಗಿದ್ದು, ನಂತರ ಸಂಜೆ 7-00 ಗಂಟೆ
ಸುಮಾರಿಗೆ ಆರೋಪಿತನು ಸದರಿ ಮೋಟಾರ್ ಸೈಕಲ್ ಹಿಂದುಗಡೆ ಪಿರ್ಯಾದಿದಾರನನ್ನು ಕೂಡಿಸಿಕೊಂಡು
ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಮರಳಿ ಗ್ರಾಮಕ್ಕೆ ಬರುತಿದ್ದಾಗ
ಚಿಕ್ಕಮ್ಯಾಗೇರಿ ಬಸ್ ನಿಲ್ದಾಣದ ಹತ್ತಿರ ಬೇವೂರು-ಚಿಕ್ಕಮ್ಯಾಗೇರಿ ರಸ್ತೆಯ ಮೇಲೆ ಒಮ್ಮೇಲೆ ನಾಯಿ
ಅಡ್ಡ ಬಂದಿದ್ದು, ಅದನ್ನು ತಪ್ಪಿಸಲು ಹೋಗಿ ರಸ್ತೆಯ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾ
ನಿಂತಿದ್ದ ಮಲ್ಲಪ್ಪನಿಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿರುತ್ತಾನೆ. ಇದರಿಂದಾಗಿ ಮಲ್ಲಪ್ಪನಿಗೆ
ಭಾರಿ ಸ್ವರೂಪದ ಗಾಯಗಳಾಗಿದ್ದು, ಪಿರ್ಯಾದಿದಾರನಿಗೆ ಹಾಗೂ ಆರೋಪಿತನಿಗೆ ಸಾದಾ ಸ್ವರೂಪದ
ಗಾಯಗಳಾಗಿದ್ದು, ಪ್ರಕರಣ ದಾಖಲಿಸಿ ತನಿಖೆ
ಕೈಗೊಂಡಿದ್ದು ಇರುತ್ತದೆ.
0 comments:
Post a Comment