ದಿನಾಂಕ:- 14-08-2016 ರಂದು ರಾತ್ರಿ 7:30 ಗಂಟೆಗೆ
ಫಿರ್ಯಾದಿದಾರರಾದ ರಾಘವೇಂದ್ರ ತಂದೆ ತಮ್ಮಣ್ಣೆಪ್ಪ, ವಯಸ್ಸು 30 ವರ್ಷ, ಸಾ: ಸಂಗಾಪೂರು ತಾ: ಗಂಗಾವತಿ ಫಿರ್ಯಾದಿಯನ್ನು ನೀಡಿದ್ದು, ಶ್ರಾವಣ ಮಾಸದ ನಿಮಿತ್ಯ ಇಂದು
ದಿನಾಂಕ:- 14-08-2016 ರಂದು ಮಧ್ಯಾಹ್ನ 4:15 ಗಂಟೆಯ ಸುಮಾರಿಗೆ ನಮ್ಮ ಗ್ರಾಮದಲ್ಲಿ
ಗಂಗಾವತಿ-ಆನೇಗುಂದಿ ಮುಖ್ಯ ರಸ್ತೆಯಲ್ಲಿ ಊರ ಮುಂದುಗಡೆ ಜನರು ಲಿಂಬೆ ಹಣ್ಣು ಎಸೆಯುವ ಆಟವನ್ನು
ಆಡುತ್ತಿದ್ದರು. ಅದನ್ನು ನಾನು ನೋಡಲು ಹೋಗಿದ್ದೆನು. ನನ್ನಂತೆ ನಮ್ಮ
ಗ್ರಾಮದ ದೇವೇಂದ್ರ ತಂದೆ ಹೇಮಲೆಪ್ಪ, ವಯಸ್ಸು 24 ವರ್ಷ, ಜಾತಿ: ಲಮಾಣಿ ಉ: ಟ್ರ್ಯಾಕ್ಟರ್ ಡ್ರೈವರ್ ಸಾ: ಸಂಗಾಪೂರು ಈತನು ಸಹ ಆಟವನ್ನು ನೋಡುತ್ತಾ
ರಸ್ತೆಯ ಎಡಗಡೆ ನಿಂತಿದ್ದನು. ಆಗ ಗಂಗಾವತಿ ಕಡೆಯಿಂದ ಬಂದ ಟ್ರ್ಯಾಕ್ಟರ್ ಚಾಲಕನು ತನ್ನ
ಟ್ರ್ಯಾಕ್ಟರನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದರಿಂದ
ವೇಗವನ್ನು ನಿಯಂತ್ರಿಸಲು ಆಗದೇ ದೇವೇಂದ್ರನಿಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿ ಎಳೆದುಕೊಂಡು
ರಸ್ತೆಯ ಎಡಗಡೆಯಿಂದ ಬಲಗಡೆ ಹೋದನು. ಕೂಡಲೇ ನಾವು ಓಡಿ ಹೋಗಿ ಹೊರಗಡೆ ಎಳೆದುಕೊಂಡು
ನೋಡಲಾಗಿ ಎಡಗಡೆ ತಲೆಗೆ ಭಾರೀ ಗಾಯವಾಗಿದ್ದು, ಎದೆಗೆ ಮತ್ತು ಹೊಟ್ಟೆಗೆ
ತೆರೆಚಿದ ಗಾಯಳಾಗಿದ್ದವು. ಮತ್ತು ಎಡಗಾಲ ಮೊಣಕಾಲ ಕೆಳ ಭಾಗದಲ್ಲಿ ಎಲುಬು ಮುರಿದು ತೀವ್ರ
ಪೆಟ್ಟಾಗಿದ್ದವು. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು
ಇರುತ್ತದೆ.
2] ಬೇವೂರ ಪೊಲೀಸ್ ಠಾಣೆ ಗುನ್ನೆ
ನಂ: 52/2016 ಕಲಂ: 279, 338 ಐ.ಪಿ.ಸಿ:.
ದಿನಾಂಕ : 14.08.2016 ರಂದು ಬೆಳಗಿನ ಜಾವ 05:00 ಗಂಟೆ ಸುಮಾರಿಗೆ ಹೊಸಪೇಟ್- ಕುಷ್ಟಗಿ ಎನ್ಹೆಚ್ 50 ರಸ್ತೆಯ ಮೇಲೆ ಉಪಲದಿನ್ನಿ ಸೀಮಾದಲ್ಲಿ ಆರೋಪಿತನು
ತಾನು ನೆಡೆಸುತ್ತಿದ್ದ ಲಾರಿ ನಂಬರ ಕಃ-29/ ಖ-9985 ನೇದ್ದನ್ನು ಹೊಸಪೇಟ ಕಡೆಯಿಂದ ಕುಷ್ಟಗಿ ಕಡೆಗೆ
ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವುಂಟಾಗುವ ರೀತಿಯಲ್ಲಿ ನೆಡೆಸಿಕೊಂಡು ಬಂದವನೇ
ಎನ್ಹೆಚ್ 50 ರಸ್ತೆಯ ಡಿವೈಡರ್ಗೆ ಟಕ್ಕರ್ ಮಾಡಿ ಸದರಿ ಲಾರಿ ಮೇಲೆ ನಿಯಂತ್ರಣ ಸಾಧಿಸದೆ ಕುಷ್ಟಗಿ
ಕಡೆಯಿಂದ ಹೊಸಪೇಟ ಕಡೆಗೆ ಹೊಗುವ ಪಕ್ಕದ ಎನ್ಹೆಚ್-50 ರಸ್ತೆಯನ್ನು ದಾಟಿ ಹೋಗಿ ರಸ್ತೆಯ ಬಲಬದಿಗೆ
ಲಾರಿಯನ್ನು ಎಡಮಗ್ಗಲಾಗಿ ಪಲ್ಟಿ ಮಾಡಿ ಅಪಘಾತ ಮಾಡಿದ್ದು ಇರುತ್ತದೆ ಸದರಿ ಅಪಘಾತದಲ್ಲಿ ಲಾರಿ ಕ್ಲೀನರ್
ಬಲಬೀರ್ಸಿಂಗ್ ಇವನಿಗೆ ಭಾರಿ ಸ್ವರೂಪದ ರಕ್ತಗಾಯಗಳಾಗಿದ್ದು ಇರುತ್ತದೆ, ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿದ್ದು ಇರುತ್ತದೆ.
0 comments:
Post a Comment