Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, August 16, 2016

1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 93/2016 ಕಲಂ: 341, 354 ಐ.ಪಿ.ಸಿ:.
ದಿನಾಂಕ:15-08-2016 ರಂದು ಮುಂಜಾನೆ 8-40 ಗಂಟೆಯ ಸುಮಾರು ಪಿರ್ಯಾದಿದಾರಳು ತಮ್ಮ ಹೊಲದ ಕೆಲಸ ಕುರಿತು ತಮ್ಮೂರ ಹುಚ್ಚೀರಪ್ಪ ಹಂಡಿ ಇವರ ಹೊಲದ ಹತ್ತಿರ ದಾರಿಯಲ್ಲಿ ಹೊರಟಾಗ ಜನ ಯಾರೂ ಇಲ್ಲದ್ದನ್ನು ನೋಡಿ ಹಂಚ್ಯಾಳಪ್ಪ ಕಲ್ಲೂರ ಸಾ :ಬೆಣಕಲ್ ಈತನು ಪಿರ್ಯಾದಿ  ಮುಂದೆ ಬಂದು ನಿಂತು ಮುಂದೆ ಹೋಗದಂತೆ ತಡೆದು ನಿಲ್ಲಿಸಿ,  ‘ನೀನು ನನಗೆ ಇಷ್ಟ ಆಗಿ,  ನೀನು ನನ್ನ ಜೊತೆ ಮಲಗಬೇಕು ‘ ಅಂತಾ ಅಂದಿದ್ದು, ಅದಕ್ಕೆ ಪಿರ್ಯಾದಿದಾರಳು ‘ ಅಂತಹ ಹೆಣ್ಣುಮಗಳಲ್ಲಾ ನಾನು ದಾರಿ ಬಿಡು ‘ ಅಂತಾ ಅಂದಾಗ, ಅವನು ಪಿರ್ಯಾದಿಗೆ ‘ ನೀನು ನನಗೆ ಬೇಕು, ನೀನು ಸುಮ್ಮನೆ ನನ್ನ ಜೊತೆ ಮಲಗು ‘ ಅಂತಾ ಅಂದವನೇ ಪಿರ್ಯಾದಿದಾರಳ ಮರ್ಯಾದೆ ಹೋಗುವ ಹಾಗೆ ಮೈ ಕೈ ಮುಟ್ಟಿ, ಜಗ್ಗಾಡಿ, ಕೊನೆಗೆ ಕೈ ಹಿಡಿದು ದಾರಿಯ ಬಾಜು ಇದ್ದ ಹುಚ್ಚೀರಪ್ಪ ಹಂಡಿ ಇವರ ಮೆಕ್ಕೆಜೋಳದ ಹೊಲದಲ್ಲಿ ಎಳೆದುಕೊಂಡು ಹೋದಾಗ ಪಿರ್ಯಾದಿ  ಕೈಬಿಡು ಕೈಬಿಡು’ ಅಂತಾ ಕೂಗಿಕೊಳ್ಳುತ್ತಿದ್ದನ್ನು ಮಂಜಪ್ಪ ಹಳ್ಳಿಕೇರಿ, ಶರಣಪ್ಪ ಬಳಗೇರಿ ಎನ್ನುವವರು ಕೇಳಿ ಓಡಿಬಂದಿದ್ದು, ಅವರನ್ನು ನೋಡಿ ಆರೋಪಿತನು ಪಿರ್ಯಾದಿಗೆ ಬಿಟ್ಟು ಓಡಿಹೋಗಿದ್ದು, ಕಾರಣ, ತನಗೆ ಮುಂದೆ ಹೋಗದಂತೆ ಅಡ್ಡಗಟ್ಟಿ ನಿಲ್ಲಿಸಿ, ಮೈ ಕೈ ಮುಟ್ಟಿ, ಮರ್ಯಾದೆ ಹೋಗುವ ಹಾಗೆ ಮಾಡಿ, ಕೈ ಹಿಡಿದು ಎಳೆದುಕೊಂಡು ಹೊಲದಲ್ಲಿ ಹೋದ ಆರೋಪಿತನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಮತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 85/2016 ಕಲಂ: 279, 337, 338 ಐ.ಪಿ.ಸಿ:.

ದಿನಾಂಕ: 15-08-2016 ರಂದು ಮುಂಜಾನೆ ಸುಮಾರಿಗೆ ಪಿರ್ಯಾದಿದಾರರು ತನ್ನ ಮೋಟಾರ ಸೈಕಲ ಮೇಲೆ ಮತ್ತು ಆತನ ಅಣ್ಣ ತಿಪ್ಪಣ್ಣ ಈತನು ತಮ್ಮೂರ ಶರಣಯ್ಯ ಕರಮುಡಿ ಇತನ ಮೋಟಾರ ಸೈಕಲ ನಂ ಕೆಎ-37/ಈಎ-3602 ನೇದ್ದರ ಹಿಂದುಗಡೆ ಕುಳಿತುಕೊಂಡು ಯಲಬುರ್ಗಾ ಪಟ್ಟಣದಲ್ಲಿ ಪಿರ್ಯಾದಿಯ ವ್ಯಯಕ್ತಿಕ ಕೆಲಸ ಇದ್ದ ಪ್ರಯುಕ್ತ ಎಲ್ಲರೂ ಯಲಬುರ್ಗಾ ಪಟ್ಟಣಕ್ಕೆ ಬಂದಿದ್ದು ನಂತರ ಯಲಬುರ್ಗಾ ಪಟ್ಟಣದಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ತಮ್ಮ ತಮ್ಮ ಮೋಟಾರ ಸೈಕಲ ಮೇಲೆ ಯಲಬುರ್ಗಾದಿಂದ ಬಸಬಹಂಚಿನಾಳ ಗ್ರಾಮಕ್ಕೆ ಮಧ್ಯಾನ್ಹ  3-30 ಗಂಟೆಯ  ಸುಮಾರಿಗೆ ಯಲಬುರ್ಗಾ- ಸಂಗನಾಳ  ರಸ್ತೆ ಮೇಲೆ ಕಲ್ಲೂರು ಸೀಮಾದಲ್ಲಿ ಬರುವ ದೇವಪ್ಪ ಮೇಟಿ ಇವರ ಹೊಲದ ಹತ್ತಿರ  ಆರೋಪಿ ಶರಣಯ್ಯ ಕರಮುಡಿ ಇತನು ತನ್ನ ಮೋಟಾರ ಸೈಕಲ ನಂ ಕೆಎ-37/ಈಎ- 3602 ನೇದ್ದರ ಹಿಂದುಗಡೆ ಪಿರ್ಯಾದಿಯ ಅಣ್ಣನ್ನು ಕುಳಿಸಿಕೊಂಡು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮೋಟಾರ ಸೈಕಲ ನಿಯಂತ್ರ ತಪ್ಪಿ ಮೋಟಾರ ಸೈಕಲ ಸಮೇತ ಇಬ್ಬರೂ ರಸ್ತೆ ಮೇಲೆ ಬಿದಿದ್ದು ಇದರಿಂದ ಪಿರ್ಯಾದಿಯ ಅಣ್ಣನಿಗೆ ಸಾದಾ ಮತ್ತು ಭಾರಿಸ್ವರೂಪದ ಗಾಯ, ಆರೋಪಿತನಿಗೆ ಸಾಧಾ ಸ್ವರೂಪದ ಗಾಯವಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008