ದಿನಾಂಕ 19-08-2016 ರಂದು ರಾತ್ರಿ 10-30 ಗಂಟೆಯಿಂದ ಕನಕಗಿರಿ
ಗ್ರಾಮದ 5 ನೇ ವಾರ್ಡ ಸ್ವಾಮಿ ರವರ ಮನೆಯ ಮುಂದೆ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕಾಲಂ ನಂ.9
ರಲ್ಲಿ ನಮೂದಿಸಿದ ಆರೋಪಿತರು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರನ್ನು ಬರ ಮಾಡಿಕೊಂಡು
ಅವರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತೇ ಬನ್ನಿ ಅಂತಾ ಕೂಗುತ್ತಾ ಅವರಿಂದ ಹಣ ಪಡೆದು ಅವರಿಗೆ ಮಟಕಾ
ನಂಬರಗಳನ್ನು ಬರೆದು ಕೊಡುತ್ತಾ ನಸೀಬದ ಓ.ಸಿ. ಮಟಕಾ ಜೂಜಾಟ ಆಡುತ್ತಿದ್ದಾಗ ಶ್ರೀ ಜಿ.ಎಸ್. ಉಡಗಿ,
ಪಿ.ಐ., ಡಿ.ಸಿ.ಆರ್.ಬಿ. ಘಟಕ ಮತ್ತು ಪಿ.ಎಸ್.ಐ. ಶ್ರೀ ಪುಲಕೇಶ ಎಂ. ನೀಲಗಾರ ರವರು ಮತ್ತು ಸಿಬ್ಬಂದಿಯವರೊಂದಿಗೆ
ದಾಳಿ ಮಾಡಲು ಸಾರ್ವಜನಿಕರಿಂದ ಮಟಕಾದ ಹಣವನ್ನು ಪಡೆಯುತ್ತಿದ್ದ
ಅರೋಪಿ ನಂ.2 ಇವರು ತನ್ನ ಕೈಯಲ್ಲಿದ್ದ ಹಣದ ಪ್ಲಾಸ್ಟಿಕ ಚೀಲವನ್ನು ಬಿಸಾಕಿ ಓಡಿ ಹೋಗಿದ್ದು, ಮಟಕಾ
ಪಟ್ಟಿಯನ್ನು ಬರೆದು ಕೊಡುತ್ತಿದ್ದ ಆರೋಪಿ ನಂ.1 ರವರು ಸಿಕ್ಕಿದ್ದು, ಅವನ ಹತ್ತಿರ ಅಂಗಜಡ್ತಿ ಮಾಡಲಾಗಿ,
ಅವನಿಂದ 1 ಮಟಕಾ ಪಟ್ಟಿ ಮತ್ತು 1 ಬಾಲ್ ಪೆನ್ನು ಸಿಕ್ಕಿದ್ದು, ನಂತರ ಬಿಸಾಕಿ ಹೋದ ಪ್ಲಾಸ್ಟಿಕ್ ಚೀಲದಲ್ಲಿ
ನಗದು ಹಣ ರೂ. 540/- ಗಳು ಇದ್ದು, ಅವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಈ ಬಗ್ಗೆ ವಿವರವಾದ
ದಾಳಿ ಪಂಚನಾಮೆಯನ್ನು ರಾತ್ರಿ 10-30 ಗಂಟೆಯಿಂದ 11-30 ಗಂಟೆಯವರೆಗೆ ಸ್ಥಳದಲ್ಲಿ ಪೂರೈಸಿದ್ದು ಇರುತ್ತದೆ.
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಬೇವೂರ ಪೊಲೀಸ್ ಠಾಣೆ ಗುನ್ನೆ
ನಂ: 54/2016 ಕಲಂ: 279, 338 ಐ.ಪಿ.ಸಿ:
ದಿನಾಂಕ: 08.08.2016 ರಂದು ರಾತ್ರಿ 8:00 ಗಂಟೆ ಸುಮಾರಿಗೆ ಎನ್ಹೆಚ್ 50 ರಸ್ತೆಯ ಕೊಳಿಹಾಳ ಸೀಮಾದಲ್ಲಿ ಆರೋಪಿತನು ತಾನು ನೆಡೆಸುತ್ತಿದ್ದ ಟಿ.ವಿ.ಎಸ್.ಮೋಟಾರ್ ಸೈಕಲ್ ನಂ: ಕೆ.ಎಮ
36 ಯು 7024 ನೇದ್ದರಲ್ಲಿ ತನ್ನ ಹೆಂಡತಿ ಈರಮ್ಮ ಇವಳನ್ನು ಕೂಡ್ರಿಸಿಕೊಂಡು ತಾಳಕನಕಾಪೂರ ಕಡೆಯಿಂದ ಹಿರೇವಂಕಲಕುಂಟಾ ಕಡೆಗೆ ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವುಂಟಾಗುವ ರೀತಿಯಲ್ಲಿ ನೆಡೆಸಿಕೊಂಡು ಹೋಗಿ ಮೋಟಾರ್ ಸೈಕಲ್ ಮೇಲೆ ನಿಯಂತ್ರಣ ಸಾದಿಸದೆ ರಸ್ತೆಯ ಎಡಬದಿಗೆ ಮೋಟಾರ್ ಸೈಕಲ್ ಸಮೆತ ಕೆಡವಿ ಅಪಘಾತ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಆರೋಪಿತನಿಗೆ ಹಾಗೂ ಇವನ ಹೆಂಡತಿ ಈರಮ್ಮಳಿಗೆ ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ, ಅಂತಾ ಇತ್ಯಾದಿ ಫರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment